ಗುರುವಾರ, ಆಗಸ್ಟ್ 27, 2015

press note of 27082015

Sl. No
FIR No
FIR Date
Crime Group - Crime Head
Stage of case
Bellary Rural PS
Cr.No:0352/2015
(IPC 1860 U/s 506,34,504 )
26/08/2015
Under Investigation
 1
CRIMINAL INTIMIDATION - Criminal Intimidation
Brief Facts :
ಫಿರ್ಯಾಧಿದಾರರಾದ ಶ್ರೀಮತಿ ಎಸ್.ವೀರಮ್ಮ ಗಂಡ ಲೇಟ್. ಎಸ್.ವೀರಾರೆಡ್ಡಿ ವಾಸ: ಕೊಳಗಲ್ಲು ಗ್ರಾಮ, ಬಳ್ಳಾರಿ ತಾಲೂಕು ರವರು ಡಿ. ಕೇಶವ ರೆಡ್ಡಿ, ಎನ್.ಟಿ.ತಿಮ್ಮಾರೆಡ್ಡಿ ಮತ್ತು ಡಿ. ವೀಣಾ ಇತರರ ವಿರುದ್ದ ಆಸ್ತಿ ಪಾಲು ವಿಭಾಗಕ್ಕಾಗಿ ಘನ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, .ಎಸ್. ನಂ: 48/2014 ರಲ್ಲಿ ವಿಚಾರಣೆಯಲ್ಲಿದ್ದು, ಸದರಿ ದಾವೆ ಆಸ್ತಿಗಳ ಬಗ್ಗೆ ವಿವಾದ ಇರುವುದರಿಂದ ಮೇಲ್ಕಂಡ ವ್ಯಕ್ತಿಗಳು ಫಿರ್ಯಾಧಿದಾರರಿಗೆ ಮತ್ತು ಫಿರ್ಯಾಧಿದಾರರ ಕುಟುಂಬದವರಿಗೆ ವಿನಾಃಕಾರಣ ತೊಂದರೆ ನೀಡುತ್ತಿದ್ದು, ಸದರಿ ವ್ಯಕ್ತಿಗಳು ರಾಜಕೀಯ ಪ್ರಭಾವಿಗಳು ಮತ್ತು ಹಣಬಲ ತೋಲ್ಬಳದಿಂದ ತಮ್ಮ ಅನುಚರರನ್ನು ಫಿರ್ಯಾಧಿದಾರರ ಮನೆಗೆ ಕಳುಹಿಸಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಹಿಂಪಡೆಯುವಂತೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಲು ಪ್ರಯತ್ನಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಇವರ ಮೇಲೆ ಕ್ರಮ ಜರುಗಿಸಲು ಕೋರಿದ ಮೇರೆಗೆ ದಿನಾಂಕ 20-08-2015 ರಂದು ಠಾಣೆಯ ಡಿ.ಪಿ. ನಂ:716/15 ರಲ್ಲಿ ನೊಂದಾಯಿಸಿಕೊಂಡಿದ್ದು, ಇದು ಅಸಂಜ್ಞೆಯ
ಅಪರಾಧವಾಗಿದ್ದರಿಂದ ಕಲಂ:504-506 ಐಪಿಸಿ ಅಡಿಯಲ್ಲಿ ಎಫ್..ಅರ್. ದಾಖಲು ಮಾಡಿ ತನಿಖೆ ಕೈಗೊಳ್ಳಲು ಅದೇಶ ನೀಡಲು ಘನ ನ್ಯಾಯಾಲಯದ ಪರವಾನಿಗೆ ಪಡೆದು ಗುನ್ನೆ ದಾಖಲಿಸಿದೆ.
Cr.No:0353/2015
(CODE OF CRIMINAL PROCEDURE, 1973 U/s 107 )
26/08/2015
Under Investigation
 2
CrPC - Security For Good Behaviour (Sec 107 )
Brief Facts :
ದಿನಾಂಕಃ 26-8-2015 ರಂದು ಬೆಳಿಗ್ಗೆ 11-30 ಗಂಟೆಗೆ ನಾನು ಹೆಚ್ ಸಿ-43 ರವರೊಂದಿಗೆ ಕೊಳಗಲ್ಲು ಗ್ರಾಮಕ್ಕೆ ಹೋದಾಗ ಅಲ್ಲಿ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, ಠಾಣೆಯ ಗುನ್ನೆ ನಂ: 352/2015 ಮತ್ತು ಅರ್ಜಿಗಳಲ್ಲಿಯ ಫಿರ್ಯಾದಿಯ ಮತ್ತು ಅವರ ಕಡೆಯವರ ಮೇಲೆ ಪ್ರತಿವಾದಿಳಾದ 1]. ಕೇಶವರೆಡ್ಡಿ 2]. ನಾಗಮ್ಮ 3]. ತಿಮ್ಮಾರೆಡ್ಡಿ4]. ಲೀಲಾವತಿ 5]. ಡಿ. ವೀಣಾ 6]. ತಿಪ್ಪೆಸ್ವಾಮಿ 7]. ಪಂಪಾಪತಿ 8]. ಮಲ್ಲಿಕಾರ್ಜುನ 9]. ತಿಪ್ಪೆಸ್ವಾಮಿ 10]. ಮಾನಪ್ಪ 11]. ನೀಲಪ್ಪ 12]. ಬಾಬು 13]. ಶಿವರಾಮ 14]. ರುದ್ರಪ್ಪ 15]. ಚನ್ನಪ್ಪ 16]. ಮಲ್ಲಯ್ಯ  ಎಲ್ಲಾರು ವಾಸ: ಕೊಳಗಲ್ಲು ಗ್ರಾಮ ವೈಷಮ್ಯ ಇಟ್ಟುಕೊಂಡಿದ್ದು ಇವರು ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡಿ ಅಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡುವ, ಪ್ರಾಣಹಾನಿಗಳು ಆಗುವ, ಪ್ರಕ್ಷುಬ್ದ ವಾತಾವರಣ ಉಂಟಾಗುವ ಸಾದ್ಯತೆಗಳು ಅದ್ದರಿಂದ ಠಾಣೆಗೆ ಮರಳಿ ಬಂದು ಮದ್ಯಾಹ್ನ 1-05 ಗಂಟೆಗೆ ಮೇಲ್ಕಂಡ ಪ್ರತಿವಾದಿಗಳ ಮೇಲೆ ಮುಂಜಾಗ್ರತೆ ಕ್ರಮವಾಗಿ ಠಾಣೆ ಗುನ್ನೆ ನಂ 353/2015 ಕಲಂ 107 ಸಿಅರ್ ಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ.
Cr.No:0354/2015
(CODE OF CRIMINAL PROCEDURE, 1973 U/s 107 )
26/08/2015
Under Investigation
 3
CrPC - Security For Good Behaviour (Sec 107 )
Brief Facts :
ದಿನಾಂಕಃ 26-8-2015 ರಂದು ಬೆಳಿಗ್ಗೆ 11-30 ಗಂಟೆಗೆ ನಾನು ಹೆಚ್ ಸಿ-43 ರವರೊಂದಿಗೆ ಕೊಳಗಲ್ಲು ಗ್ರಾಮಕ್ಕೆ ಹೋದಾಗ ಅಲ್ಲಿ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, ಠಾಣೆಯ ಮೇಲ್ಕಂಡ ಅರ್ಜಿಗಳಲ್ಲಿಯ ಫಿರ್ಯಾಧಿಯ ಮತ್ತು ಅವರ ಕಡೆಯವರ ಮೇಲೆ ಮೇಲ್ಕಂಡ ಪ್ರತಿವಾದಿಗಳಾದ 1]. ಉಪ್ಪಾರ ಈರಣ್ಣ 2]. ಎಸ್. ವೀರಮ್ಮ 3]. ಎಸ್. ಯಲ್ಲಾರೆಡ್ಡಿ 4]. ಎಸ್. ಕೃಷ್ಣಾರೆಡ್ಡಿ 5]. ಎಸ್. ತಿಮ್ಮಾರೆಡ್ಡಿ ಎಲ್ಲಾರು ವಾಸ: ಕೊಳಗಲ್ಲು ಗ್ರಾಮ ರವರು  ವೈಷಮ್ಯ ಇಟ್ಟುಕೊಂಡಿದ್ದು ಇವರು ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡಿ ಅಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡುವ, ಪ್ರಾಣಹಾನಿಗಳು ಆಗುವ, ಪ್ರಕ್ಷುಬ್ದ ವಾತಾವರಣ ಉಂಟಾಗುವ ಸಾದ್ಯತೆಗಳು ಇರುತ್ತವೆಂದು ತಿಳಿದು ಬಂದಿತು. ಅದ್ದರಿಂದ ಠಾಣೆಗೆ ಮರಳಿ ಬಂದು ಮದ್ಯಾಹ್ನ 1-32 ಗಂಟೆಗೆ ಮೇಲ್ಕಂಡ ಪ್ರತಿವಾದಿಗಳ ಮೇಲೆ ಮುಂಜಾಗ್ರತೆ ಕ್ರಮವಾಗಿ ಠಾಣೆ ಗುನ್ನೆ ನಂ 354/2015 ಕಲಂ 107 ಸಿಅರ್ ಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ.
Cr.No:0355/2015
(KARNATAKA MINOR MINERAL CONSISTENT
26/08/2015
Under Investigation
 4



Sl. No
FIR No
FIR Date
Crime Group - Crime Head
Stage of case
RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
KARNATAKA STATE LOCAL ACTS - Karnataka Minor Mineral Consistent Rule 1994
Brief Facts :
ದಿನಾಂಕ 26-08-15 ರಂದು ಮದ್ಯಾಹ್ನ 2-30 ಗಂಟೆಗೆ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದು, ಕಮ್ಮರಚೇಡು ಗ್ರಾಮದ ಹಗರಿ ಹಳ್ಳದಲ್ಲಿ ಅಕ್ರಮವಾಗಿ ಎರಡು ಟ್ರಾಕ್ಟರ್-ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಳ್ಳುತ್ತಿದ್ದಾಗ ಶ್ರೀ ಎಸ್.ಕೆ ಇಳಕಲ್ ಪಿಎಸ್ಐ ಹಾಗು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ದಾಳಿ ಮಾಡಲು ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು, ಅಲ್ಲಿದ್ದ ಜನರು ಓಡಿ ಹೋದ ಚಾಲಕರ ಹೆಸರು 1] ಕಟ್ಟೆಬಸವ 2] ಚೌಡೆಪ್ಪ ಇರುತ್ತಾರೆಂದು 1] ಟ್ರಾಕ್ಟರ್ ನೊಂದಾಣಿ ಸಂಖ್ಯೆ: ಕೆಎ-34--7642 ಟ್ರಾಲಿ ನಂ: ಕೆಎ-34--7643 2] ಟ್ರಾಕ್ಟರ್ ನೊಂದಾಣಿ ಸಂಖ್ಯೆ:ಕೆಎ-34-ಟಿಎ-1576 ಟ್ರಾಲಿ ನಂ: ಇರುವುದಿಲ್ಲ. ಚಾಸ್ಸಿ ನಂ BFE/38/2011 ಇದ್ದು, ಟ್ರಾಲಿಯಲ್ಲಿದ್ದ 4 ಮೆಟ್ರಿಕ್ ಟನ್ ಮರಳು, ಟ್ರಾಕ್ಟರ್ ಟ್ರಾಲಿಯನ್ನು,ಸ್ಯಾಂಪಲ್ ಮರಳನ್ನು ಜಫ್ತುಪಡಿಸಿಕೊಂಡು ಬಂದಿರುವುದಾಗಿ ಮೇಲ್ಕಂಡ ಟ್ರಾಕ್ಟರ್ ಚಾಲಕರು ಮತ್ತು ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿದೆ.
Cr.No:0356/2015
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
26/08/2015
Under Investigation
 5
KARNATAKA STATE LOCAL ACTS - Karnataka Minor Mineral Consistent Rule 1994
Brief Facts :
ದಿನಾಂಕ: 26-8-2015 ರಂದು ರಾತ್ರಿ 9-10 ಗಂಟೆಗೆ ಶ್ರೀ. ಎಸ್. ಕೆ. ಇಲಕಲ್, ಪಿ.ಎಸ್.. [ಅಪರಾಧ] ಗ್ರಾಮೀಣ ಪೊಲೀಸ್ ಠಾಣೆ, ಬಳ್ಳಾರಿ. ದೂರು ನೀಡಿದ್ದು ಸಾರಾಂಶ: ದಿನ ದಿನಾಂಕ: 26-8-2015 ರಂದು ಸಂಜೆ ತಾನು, ತಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 43, ಪಿ.ಸಿ. 404 ರವರೊಂದಿಗೆ ಪೊಲೀಸ್ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಹಾಗೂ ಪಂಚರೊಂದಿಗೆ ಚರಕುಂಟ ಗ್ರಾಮಕ್ಕೆ ಹೋಗಿ ಪೊಲೀಸ್ ಜೀಪ್  ಮರೆಯಲ್ಲಿ ನಿಲ್ಲಿಸಿ ನಿಂತಿದ್ದಾಗ ಸಂಜೆ 6-00 ಗಂಟೆಗೆ ಬೊಮ್ಮನಹಾಳು ಗ್ರಾಮದ ಕಡೆಯಿಂದ ಬಂದ ಲಾರಿ ನಂ: ಎಪಿ: 16/ಟಿಎ/3042 ರನ್ನು ನಿಲ್ಲಿಸಿ ಪರಿಶೀಲಿಸಲು ಲಾರಿಯ ಬಾಡಿಯಲ್ಲಿ ಕಲ್ಲಿನ ಪೌಡರ್ ಹಾಕಿದ್ದು ಕಲ್ಲಿನ ಪೌಡರ್ ಸರಿಸಿ ನೋಡಲು ಲಾರಿಯಲ್ಲಿ ಮರಳು ಲೋಡ್ ಇದ್ದಿತು. ಲಾರಿ ಚಾಲಕ ಮಂಜುನಾಥನಿಗೆ ವಿಚಾರಿಸಲು ಮರಳು ಕಾಣದಂತೆ ಮರಳಿನ ಮೇಲೆ ಕಲ್ಲಿನ ಪೌಡರ್ ಚಿಮ್ಮಿಸಿರುತ್ತೇವೆಂದು ತಿಳಿಸಿದನು. ಮರಳನ್ನು ಪ್ರತಾಪ್ ರವರು ಲೋಡ್ ಮಾಡಿಸಿರುತ್ತಾರೆಂದು ತಿಳಿಸಿದನು. ಲಾರಿಯಲ್ಲಿ ಅಂದಾಜು ರೂ. 12000/- ಬೆಲೆಯ 12 ಮೆಟ್ರಿಕ್ ಟನ್ ಮರಳು ಲೋಡ್ ಇರುತ್ತದೆ. ಲಾರಿಯನ್ನು ಮರಳು ಸಮೇತ ಜಪ್ತು ಮಾಡಿಕೊಂಡು, ಮಂಜುನಾಥನನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು, ಚಾಲಕ ಮಂಜುನಾಥ, ಮರಳು ಲೋಡ್ ಮಾಡಿಸಿದ ಪ್ರತಾಪ್, ಮತ್ತು ಲಾರಿ ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ