Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0068/2015 (KARNATAKA MINOR MINERAL CONSISTENT RULE 1994 U/s 42,43,44 ; IPC 1860 U/s 379 ) |
28/08/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ: 28-7-2015 ರಂದು ಬಳ್ಳಾರಿ ಎ.ಪಿ.ಎಂ.ಸಿ ಯಾರ್ಡ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ. ವೈ.ಎಸ್.ಹನುಮಂತಪ್ಪ ರವರಿಗೆ ಕೆಲವು ಜನರು ಹಗರಿ ನದಿಯಿಂದ ಟ್ರಾಕ್ಟರ್ ಟ್ರಾಲಿಗಳಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬಳ್ಳಾರಿ ನಗರದ ಕಡೆಗೆ ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಪಿ.ಸಿ-854-831 ರವರನ್ನು ಕರೆದುಕೊಂಡು ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-172 ರಲ್ಲಿ ಚಾಲಕ ಎ.ಹೆಚ್.ಸಿ-13 ರವರೊಂದಿಗೆ ಅನಂತಪುರ ಬೆಂಗಳೂರು ಹೊಸಬೈಪಾಸ್ ರಸ್ತೆಯಲ್ಲಿ ಕಾಕರ್ಲತೋಟ ಕ್ರಾಸಿನಲ್ಲಿ ಹೋಗಿ ಕಾಯುತ್ತಿದ್ದಾಗ ಬೆಳಿಗ್ಗೆ 9-30 ಗಂಟೆಗೆ ಬೈಪಾಸ್ ರಸ್ತೆಯಲ್ಲಿ ಅನಂತಪುರ ರಸ್ತೆ ಕಡೆಯಿಂದ ಬಂದ ಟ್ರಾಕ್ಟರ್ ನಂಬರ್ ಎ.ಪಿ-02-ಡಬ್ಲು-3741 ಅದಕ್ಕೆ ಜೋಡಿಸಿದ ಟ್ರಾಲಿ ನಂಬರ್ ಎಪಿ-02-ಡಬ್ಲು-3742 ರಲ್ಲಿ 2 ಮೆಟ್ರಿಕ್ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಸಾಗಾಣಿಕೆ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಚಾಲಕನಿಗೆ ನಿಲ್ಲಿಸಿದಲು ಸೂಚಿಸುತ್ತಿದ್ದಂತೆ ಚಾಲಕ ಟ್ರಾಕ್ಟರ್ ಟ್ರಾಲಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆಂದು ಸದರಿ ವ್ಯಕ್ತಿ ಟ್ರಾಕ್ಟರ ಟ್ರಾಲಿಯ ಮಾಲೀಕ/ಚಾಲಕ ಸುಧಾಕರ ತಂದೆ ಬ್ರಹ್ಮಯ್ಯ ವಯಸ್ಸು 35 ವರ್ಷ, ವಾಸ. ದೇವಿನಗರ, ಶಿವಲಿಂಗನಗರ, ಬಳ್ಳಾರಿ ಎಂದು ತಿಳಿದು ಬಂದಿದ್ದಾಗಿ ಸುಧಾಕರನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಳುವಿನಿಂದ ಸಾದಾ ಮರಳನ್ನು ತನ್ನ ಟ್ರಾಕ್ಟರ್ನಲ್ಲಿ ತುಂಬಿಕೊಂಡು ಸಾಗಣೆ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಟ್ರಾಕ್ಟರ್, ಟ್ರಾಲಿ, ಟ್ರಾಲಿಯಲ್ಲಿನ ಮರಳು ಮತ್ತು ಸ್ಯಾಂಪಲ್ ಮರಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಬಂದಿದ್ದು ಪರಾರಿಯಾದ ಟ್ರಾಕ್ಟರ್ ಟ್ರಾಲಿಯ ಚಾಲಕ/ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು ಇದ್ದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ. | |||||||||||||||
Bellary Rural PS | ||||||||||||||||
2 | Cr.No:0358/2015 (INDIAN MOTOR VEHICLES ACT, 1988 U/s 187 ; IPC 1860 U/s 279,337 ) |
28/08/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ದಿನಾಂಕ 28-08-2015 ರಂದು ಬೆಳಗಿನ ಜಾವ 00-30 ಗಂಟೆಗೆ ಹನುಮಂತ ವಾಸ: ವಕ್ರಾಣಿಕ್ಯಾಂಪ್, ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸಾರಾಂಶ: ದಿನಾಂಕ 27-08-2015 ರಂದು ರಾತ್ರಿ 8-30 ಗಂಟೆಗೆ ವಕ್ರಾಣಿ ಕ್ಯಾಂಪ್ ನಲ್ಲಿರುವ ತನ್ನ ಮನೆಯ ಮುಂದೆ ತನ್ನ ತಂದೆ ತಿಮ್ಮಪ್ಪ ರವರು ಬಳ್ಳಾರಿ-ಸಿರುಗುಪ್ಪ ರಸ್ತೆಯನ್ನು ದಾಟುವಾಗ ಬಳ್ಳಾರಿ ಕಡೆಯಿಂದ ಸ್ಕಾರ್ಪಿಯೋ ಜಿಪ್ ನಂಬರ್ ಕೆಎ-34-ಎಂ-3072 ನ್ನು ಚಾಲಕ ಮಂಜುನಾಥನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ತನ್ನ ತಂದೆಗೆ ಡಿಕ್ಕಿ ಹೊಡೆದಿದ್ದರಿಂದ ಕೆಳಗಡೆ ಬಿದ್ದು, ತಲೆಗೆ, ಮೂಗಿಗೆ ಇತರೆ ಕಡೆ ಗಾಯಗಳಾಗಿದ್ದರಿಂದ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿ ಈ ಬಗ್ಗೆ ಅಪಘಾತ ಮಾಡಿದ ಸ್ಕಾಫರ್ಿಯೋ ಜೀಪ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
3 | Cr.No:0359/2015 (KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND |
28/08/2015 | Under Investigation | |||||||||||||
MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 ) | ||||||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ: 28-8-2015 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀ. ಕೆ. ಹೊಸಕೇರಪ್ಪ, ಪಿ.ಎಸ್.ಐ., ಗ್ರಾಮೀಣ ಪೊಲೀಸ್ ಠಾಣೆ, ಬಳ್ಳಾರಿ. ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 28-8-2015 ರಂದು ಬೆಳಿಗ್ಗೆ ತಾನು, ತಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 384-43 ರವರೊಂದಿಗೆ ಪೊಲೀಸ್ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಹಾಗೂ ಪಂಚರೊಂದಿಗೆ ಸಂಗನಕಲ್ಲು ಗ್ರಾಮಕ್ಕೆ ಹೋಗಿ ಸಂಗನಕಲ್ಲು ಗ್ರಾಮದ ಬಸ್ಸ್ಸ್ಟಾಂಡ್ನಲ್ಲಿ ನಿಂತಿದ್ದಾಗ ಬೆಳಿಗ್ಗೆ 10-30 ಗಂಟೆಗೆ ಮೋಕಾ ಗ್ರಾಮದ ಕಡೆಯಿಂದ ಬಂದ ಒಂದು ಲಾರಿ ನಂ: ಕೆಎ:35/5324 ರನ್ನು ನಿಲ್ಲಿಸಿ ಪರಿಶೀಲಿಸಲು ಲಾರಿಯ ಬಾಡಿಯಲ್ಲಿ ಅಂದಾಜು ರೂ. 5000/- ಬೆಲೆಯ 5 ಮೆಟ್ರಿಕ್ ಟನ್ ಮರಳು ಲೋಡ್ ಇರುತ್ತದೆ. ಈ ಲಾರಿ ಚಾಲಕ ಬಸವರಾಜನಿಗೆ ವಶಕ್ಕೆ ತೆಗೆದುಕೊಂಡು ವಿಚಾರಿಸಲು ಲಾರಿ ಮಾಲಿಕ ರಾಜಗೋಪಾಲ್ ಎನ್ನುವವರು ಲೋಡ್ ಮಾಡಿಸಿರುತ್ತಾರೆಂದು ಲಾರಿ ಚಾಲಕ ಮತ್ತು ಮಾಲಿಕ ಯಾವುದೇ ಪರವಾನಿಗೆ ಅನಧಿಕೃತವಾಗಿ ಮರಳನ್ನು ಕಳುವು ಮಾಡಿ ಸಾಗಾಣಿಕೆ ಮಾಡುತ್ತಿದ್ದರಿಂದ ಪಂಚರ ಸಮಕ್ಷಮದಲ್ಲಿ ಲಾರಿ ಜಪ್ತು ಮಾಡಿಕೊಂಡು ಚಾಲಕನೊಂದಿಗೆ ಠಾಣೆಗೆ ಬಂದಿದ್ದಾಗಿ ಲಾರಿ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ. | |||||||||||||||
Brucepet PS | ||||||||||||||||
4 | Cr.No:0168/2015 (KARNATAKA POLICE ACT, 1963 U/s 78(III) ) |
28/08/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕಃ26-8-15 ರಂದು ರಾತ್ರಿ 8-00 ಗಂಟೆಗೆ ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ಜಂಡಾಕಟ್ಟೆಯ ಹತ್ತಿರದ ಗಾದಿಲಿಂಗಪ್ಪ ರವರ ಅಂಗಡಿ ಮುಂದುಗಡೆಯ ಸಾರ್ವಜನಿಕ ಸ್ಥಳದಲ್ಲಿ ಆಪಾದಿತ 1 ರಿಂದ 3 ರವರು ಮಟಕಾ ನಸೀಬಿನ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಐ. ಬ್ರೂಸ್ ಪೇಟೆ ರವರು ಸಿಬ್ಬಂದಿಯವರಾದ ಪಿ.ಸಿ.489-139-579 ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆಪಾದಿತರಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ ರೂ.4550/-, 1 ಬಾಲ್ ಪೆನ್ , 5 ಮಟಕಾ ಪಟ್ಟಿಗಳೊಂದಿಗೆ ಸಿಕ್ಕಿ ಬಿದ್ದಿದ್ದು , ಸದರಿ ಆಪಾದಿತರಿಗೆ ಮಟಕಾ ಪಟ್ಟಿಗಳ ಬಗ್ಗೆ ವಿಚಾರಿಸಲಾಗಿ ಮಟಕಾ ಪಟ್ಟಿಗಳನ್ನು ಮೌನೇಶ್ ರವರಿಗೆ ಕೊಡುವುದಾಗಿ ಅಂತಾ ತಿಳಿಸಿದ್ದು, ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ ಠಾಣೆಯ ಎನ್.ಸಿ.ನಂ:33/15 ನೇದ್ದನ್ನು ದಾಖಲಿಸಿಕೊಂಡು ನಂತರ ಈದಿನ ಘನ ನ್ಯಾಯಾಲಯದಿಂದ ಪ್ರ.ವ.ವರದಿಯನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Cowlbazar PS | ||||||||||||||||
5 | Cr.No:0255/2015 (KARNATAKA POLICE ACT, 1963 U/s 78(3) ; IPC 1860 U/s 420 ) |
28/08/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ಈ ದಿನ ದಿನಾಂಕ: 28/08/2015 ರಂದು ಮದ್ಯಾಹ್ನ 12-30 ಗಂಟೆಗೆ ಪಿ.ಐ. ಸಿಬಿಪಿಎಸ್, ಬಳ್ಳಾರಿ ರವರು ಸಿಬ್ಬಂಧಿಯವರಾದ ಪಿಸಿ-1241-601-49 ರವರೊಂದಿಗೆ ಬಸವನಕುಂಟೆಯಲ್ಲಿ ಹಗಲು ಗಸ್ತಿನಲ್ಲಿರುವಾಗ ಕೌಲ್ ಬಜಾರ್ ಪೊಲೀಸ್ ಠಾಣಾ ಸರಹದ್ದಿನ ಕೋಟೆ ಆಂಜಿನೇಯ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮೋಸ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾನೆಂದು ಮಾಹಿತಿ ಬಂದ ಮೇರೆಗೆ ಪಿ.ಐ. ರವರು ಪಂಚರು ಮತ್ತು ಸಿಬ್ಬಂಧಿಯೊಂದಿಗೆ ವರ್ತಮಾನ ಸ್ಥಳಕ್ಕೆ ಹೋಗಿ ನೋಡಿದಾಗ ವರ್ತಮಾನ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರನ್ನು ಸೇರಿಸಿಕೊಂಡು ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಇದು ನಸೀಬಿನ ಮಟ್ಕಾ ಜೂಜಾಟ, ಯಾವುದೇ ಒಂದು ನಂಬರ್ ಮೇಲೆ 1 ರೂ ಕಟ್ಟಿದರೆ, ಅದೇ ನಂಬರ್ ಬಂದರೆ 80 ರೂ.ಗಳನ್ನು ಕೊಡುವುದಾಗಿ, ಜನರಿಗೆ ನಂಬುವಂತೆ ಕೂಗಿ ಕರೆಯುತ್ತಾ ಬಂದಂತಹ ಸಾರ್ವಜನಿಕರಿಂದ ಹಣವನ್ನು ಪಡೆದು, ಬದಲಾಗಿ ಮಟಕಾ ನಂಬರ್ಗಳನ್ನು ಬರೆದು ಕೊಡುತ್ತಿದ್ದನ್ನು ನೋಡಿ, ಪಿ.ಐ. ರವರು ಪಂಚರ ಸಮಕ್ಷಮ ದಾಳಿ ಮಾಡಿ, ಆತನ ಕಡೆಯಿಂದ ಜನರಿಗೆ ವಂಚಿಸಿ, ನಸೀಬಿನ ಮಟಕಾ ಜೂಜಾಟದ ಹೆಸರಿನಲ್ಲಿ ಸಂಗ್ರಹಿಸಿದ ನಗದು ಹಣ 1230/- ರೂ. 2 ಮಟಕಾ ಪಟ್ಟಿ, 1 ಬಾಲ್ ಪೆನ್ನುಗಳನ್ನು ಜಪ್ತು ಪಡಿಸಿಕೊಂಡು ಠಾಣೆಗೆ ಮದ್ಯಾಹ್ನ 2-05 ಗಂಟೆಗೆ ಬಂದು, ಜನರಿಗೆ ಮೋಸ ಮಾಡಿ ನಸೀಬಿನ ಮಟಕಾ ಜೂಜಾಟವನ್ನು ನಡೆಸಿದ್ದರಿಂದ ಇವನ ವಿರುದ್ದ ಕಲಂ: 78(3) ಕೆ.ಪಿ ಕಾಯ್ದೆ, ಹಾಗು 420 ಐಪಿಸಿ ರೀತ್ಯಾ ಕ್ರಮ ಜರುಗಿಸಲು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Kuduthini PS | ||||||||||||||||
6 | Cr.No:0111/2015 | 28/08/2015 | Under | |||||||||||||
(IPC 1860 U/s 287,337 ) | Investigation | |||||||||||||||
NEGLIGENT ACT - Other - Related | ||||||||||||||||
Brief Facts : | ದಿನಾಂಕ: 28-08-15 ರಂದು ಬೆಳಿಗ್ಗೆ 11 ಗಂಟೆಗೆ ಜಿಂದಾಲ್ ಸಂಜೀವಿನ ಆಸ್ಪತ್ರೆಯಿಂದ ಬಂದ ಪೋನ್ ಮಾಹಿತಿ ಮೇರೆಗೆ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಂತೋಷ್ ಕುಮಾರ್ ಆರ್. ಇವರ ಹೇಳಿಕೆಯನ್ನು ಪಡೆದುಕೊಳ್ಳಲು ಸಾರಾಂಶವೆಂದರೆ ದಿನಾಂಕ: 27-08-15 ರಂದು ಪಿರ್ಯಾದಿ ಮತ್ತು ಆತನ ಸಂಗಡಿಗರಾದ ಬಸವರಾಜ್, ಸೋಮ ಶೇಖರ 3 ಜನರು ಕೆಪಿಸಿಎಲ್ ನಲ್ಲಿರುವ ಇನೋರ್ಗೋ ಇಂಜಿನಿಯರಿಂಗ್ ವಕ್ಸ ಪ್ರಾಜಕ್ಟ ಲಿ. ನಲ್ಲಿ ಮಾನಿಟರಿಂಗ್ ಕೆಲಸ ಮಾಡಲು ಪಿರ್ಯಾದಿ ಬಿಸಿಎನ್-13 ರ ಕನ್ವೇಯರ್ ಬೆಲ್ಟ ಹತ್ತಿರ ಕೆಲಸ ಮಾಡಿ ಕೆಳಗಡೆ ಇಳಿದು ಬರುತ್ತಿರುವಾಗ ಸುಮಾರು 5-6 ಎತ್ತರದಿಂದ ಇಳಿಯುತ್ತಿರುವಾಗ ನಿನ್ನೆ ದಿನ ಬೆಳಿಗ್ಗೆ ಸುಮಾರು: 11-30 ಘಂಟೆಗೆ ಮೇಲುಗಡೆಯಿಂದ ಕಾಲು ಜಾರಿ ಕೆಳಗಡೆ ಬಿದ್ದು ಎಡ ಮುಂಗೈ ಮೇಲುಗಡೆ ಒಳಪಟ್ಟಾಗಿದ್ದು ಸದರಿ ಘಟನಗೆ EEPL ನ ಸೈಟ್ ಇನ್ ಚಾರ್ಜ, ರಾಘವೇಂದ್ರ ಕುಮಾರ್ ಮತ್ತು ಸೂಪರ್ ವೈಸರ ಆಂಟೋನಿ ಇವರುಗಳು ಮುಂಜಾಗ್ರಾತ ಕ್ರಮವಾಗಿ ಕೆಲಸ ಮಾಡುವ ಕಾಲಕ್ಕೆ ಕೆಲಸಗಾರರಿಗೆ ಯಾವುದೇ ಸುರಕ್ಷತಾ ಸಾಮಾಗ್ರಿಗಳನ್ನು ನೀಡದೆ ನಿರ್ಲಕ್ಷತನ ವಹಿಸಿದ್ದರಿಂದ ಉಂಟಾಗಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಮನವಿ. ಅಂತಾ ಸಾರಾಂಶವುಳ್ಳದ್ದನ್ನು ಪಡೆದುಕೊಂಡು ವಾಪಾಸ್ ಠಾಣೆಗೆ 1 ಪಿ.ಎಂ ಗಂಟೆಗೆ ಬಂದು ಪ್ರಕರಣ ಧಾಖಲು ಮಾಡಲಾಗಿದೆ. ( ಪಿರ್ಯಾದಿ ದೂರಿನ ಮೂಲ ಪ್ರತಿಯನ್ನು ಲಗತ್ತು ಮಾಡಲಾಗಿದೆ.) | |||||||||||||||
ಶುಕ್ರವಾರ, ಆಗಸ್ಟ್ 28, 2015
PRESS NOTE OF 28/08/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ