ಶನಿವಾರ, ಫೆಬ್ರವರಿ 7, 2015

PRESS NOTE AS ON 08-02-2015


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 08-02-2015

ಪತ್ರಿಕಾ ಪ್ರಕಟಣೆ 

1) ಎಂ.ಎಂ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಎನ್.ಹೆಚ್-13 ರಸ್ತೆಯ ಹಾರೋವನಹಳ್ಳಿ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಮೋಟಾರ್ ಸೈಕಲ್ ನಡುವೆ ರಸ್ತೆ ಅಫಘಾತ, ಮೋಟಾರ್ ಸೈಕಲ್‍ನಲ್ಲಿ ಪ್ರಯಾ¨ಣಿಸುತ್ತಿದ್ದ 3 ಜನರ ಸಾವು. 
 
       ಫಿರ್ಯಾದಿದಾರರಾದ ಶ್ರೀ.ಸಣ್ಣ ಬೋಸಪ್ಪ ತಂದೆ ಗುಡ್ಯನ ಒಬಪ್ಪ, ವ.31 ವರ್ಷ, ವಾಲ್ಮೀಕಿ ಜಾತಿ, ಬೇಸಾಯ ವಾಸ- ಚಿಲಕನಹಟ್ಟಿ ಗ್ರಾಮ ಇವರು ದೂರು ನೀಡಿದ್ದೇನೆಂದರೆ, ದಿ:7-01-15 ರಂದು ಸಾಯಂಕಾಲ 5.15 ಗಂಟೆ ಗಂಟೆ ಸುಮಾರಿಗೆ ಹಾರೋವನಹಳ್ಳಿ ಹತ್ತಿರ ಎನ್.ಹೆಚ್.13 ರಸ್ತೆಯ ವೆಂಕಪ್ಪ ಇವರ ಹೊಲದ ಹತ್ತಿರ ಜಿ.ದುರುಗಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ- ಕೆ.ಎ.33/ಹೆಚ್.455  ನೇದ್ದರಲ್ಲಿ ಕೆ.ಮಂಜುನಾಥ ಮತ್ತು ಮಾರ್ಗದಪ್ಪನಿಗೆ ಕೂಡಿಸಿಕೊಂಡು ಮರಿಯಮ್ಮನಹಳ್ಳಿ ಆಸ್ಪತ್ರೆಗೆ ಹೋಗುವಾಗ ಕೆ.ಎಸ್.ಆರ್.ಟಿ.ಸಿ ಬಸ್ಸು ನಂ- ಕೆ.ಎ.17/ಎಫ್.1502 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಒವರ್ ಟೇಕ್ ಮಾಡುತ್ತಾ ಬಂದು ದುರುಗಪ್ಪನ ಮೋಟಾರ್ ಸೈಕಲ್‍ಗೆ ಡಿಕ್ಕಿ ಹೊಡೆಸಿ ಅಪಗಾತಪಡಿಸಿದ್ದರಿಂದ 1) ಈ. ಸಣ್ಣ ದುರುಗಪ್ಪ @ ತಿಪ್ಪಣ್ಣ ತಂದೆ ಗೋವಿಂದಪ್ಪ ವ. 31 ವರ್ಷ ವಾಲ್ಮೀಖಿ ಬೇಸಾಯ  2) ಕೆ.ಮಂಜುನಾಥ ತಂದೆ ಸಣ್ಣದುರುಗಪ್ಪ ವ.30 ವರ್ಷ ವಾಲ್ಮಿಕಿ, 3) ಕೆ. ಮಾರ್ಗದಪ್ಪ  ತಾಯಿ ದುರುಗಮ್ಮ ವ.50 ವರ್ಷ ವಾಲ್ಮೀಕಿ ಎಲ್ಲರೂ ವಾಸ- ಚಿಲಕನಹಟ್ಟಿ ಗ್ರಾಮ ಇವರಿಗೆ ಭಾರೀ ರಕ್ತ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತರೆ. ಬಸ್ಸು ಚಾಲಕ ಅಪಘಾತದ ನಂತರ ಓಡಿ ಹೋಗಿರುತ್ತಾನೆಂದು ದೂರಿನ ಮೇರೆಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                ಪೊಲೀಸ್ ಸೂಪರಿಂಟೆಂಡೆಂಟ್,                                                                                                                                            ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಶುಕ್ರವಾರ, ಫೆಬ್ರವರಿ 6, 2015

PRESS NOTE AS ON 07-02-2015

                                       ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಾರ್ಯಾಲಯ, ಬಳ್ಳಾರಿ.



      ಪತ್ರಿಕಾ ಪ್ರಕಟಣೆ. 

                                                                                                                                   ದಿನಾಂಕ: 07/02/2015

ಇವರಿಗೆ,

ಜಿಲ್ಲೆಯ ಎಲ್ಲಾ ಪತ್ರಿಕಾ ಪ್ರತಿನಿಧಿಗಳಿಗೆ,

                                              ವಿಷಯ:- ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಕುರಿತು.

                                                                             *****

     ಸರ್ಕಾರಿ ಅದೇಶ ಸಂ:ಹೆಚ್‍ಡಿ/59/ಪೊಸಇ/2009 ಬೆಂಗಳೂರು ದಿನಾಂಕ: 03/12/2009 ರ ಅದೇಶದಲ್ಲಿ ಘನ ಸರ್ವೋಚ್ಛ ನ್ಯಾಯಾಲಯದ ನಿರ್ಧೇಶನದಂತೆ, ಪೊಲೀಸ್ ಉಪಾಧೀಕ್ಷಕರ ದರ್ಜೆವರೆಗಿನ ಪೊಲೀಸ್ ಅಧಿಕಾರಿಗಳ ವಿರುದ್ದ ದೂರುಗಳನ್ನು ಪರಿಶೀಲಿಸಲು, ಪೊಲೀಸ್ ಕಸ್ಟಡಿಯಲ್ಲಿ ಉಂಟಾದ ಮರಣ, ಗಂಭೀರ ಗಾಯ ಅಥವಾ ಅತ್ಯಾಚಾರ ಕೃತ್ಯಗಳು ಒಳಗೊಂಡಂತೆ ಪೊಲೀಸರಿಂದ ಎಸಗಿರುವ ಗಂಭೀರ ಸ್ವರೂಪದ ದುರ್ವರ್ತನೆಗಳ ಅರೋಪಗಳ ಬಗ್ಗೆ ಮಾತ್ರ ವಿಚಾರಣೆ ನಡೆಸುವ ಸಲುವಾಗಿ ಮತ್ತು ಸುಲಿಗೆ, ಭೂಮಿ/ಮನೆಯನ್ನು ಬಲವಂತವಾಗಿ ಕಿತ್ತುಕೊಂಡಿರುವ ಅರೋಪಗಳ ಬಗ್ಗೆ ಅಥವಾ ಗಂಭೀರ ಸ್ವರೂಪದ ಅಧಿಕಾರ ದುರುಪಯೋಗವನ್ನು ಒಳಗೊಂಡಿರುವ ಯಾವುದೇ ಘಟನೆ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚನೆ ಮಾಡಲಾಗಿರುತ್ತದೆ. 


ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಪದಾಧಿಕಾರಿಗಳು:


ಅಧ್ಯಕ್ಷರು:-  ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಪ್ರಾದೇಶಿಕ ಆಯುಕ್ತರ ಕಾರ್ಯಾಲಯ,  

         ಕಲಬುರಗಿ. (ದೂರವಾಣಿ:08472-278811 email: rcofficegulbarga@gmail.com))

ಸದಸ್ಯ ಕಾರ್ಯದರ್ಶಿ :-  ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ, ದುರುಗಮ್ಮ ಗುಡಿಯ ಹತ್ತಿರ, ಬಳ್ಳಾರಿ.

                                     (ದೂರವಾಣಿ:08392-258300/258400. spbellary@ksp.gov.in)

ಸದಸ್ಯರು :-  ಶ್ರೀ ಎಸ್.ಜಿ.ವಾಲಿ, ನಿವೃತ್ತ ಆಯ್ಕೆ ಶ್ರೇಣಿ ಕೆ.ಎ.ಎಸ್. ಅಧಿಕಾರಿಗಳು, ತಂದೆ ಗುಂಡಪ್ಪ ವಾಲಿ,

                     ಸ್ವಂತ, ಕಲಬುರಗಿ ತಾಲೂಕು ಮತ್ತು ಜಿಲ್ಲೆ.

ನಾಗರೀಕ ಸದಸ್ಯರು:- ಪ್ರೊ. ಪಿ.ಸತ್ಯನಾರಾಯಣ ರಾವ್, ಕಪ್ಪಗಲ್ ರಸ್ತೆ, ಭರತ್ ಕುಮಾರ್ ಆಸ್ಪತ್ರೆ

                                    ಹತ್ತಿರ, ಬಳ್ಳಾರಿ.


           ಸಾರ್ವಜನಿಕರು ಬಳ್ಳಾರಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಂಬಂಧಿಸಿದ ದೂರುಗಳನ್ನು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಮೇಲ್ಕಂಡ ಕಛೇರಿಯ ವಿಳಾಸಕ್ಕೆ ಸಲ್ಲಿಸಬಹುದಾಗಿರುತ್ತದೆ.  


                                                                                                                 ಪೊಲೀಸ್ ಅಧೀಕ್ಷಕರು,

                                                                                                                ಬಳ್ಳಾರಿ ಜಿಲ್ಲೆ, ಬಳ್ಳಾರಿ ಮತ್ತು

                                                                                                                  ಸದಸ್ಯ ಕಾರ್ಯದರ್ಶಿಗಳು,

                                                                                                           ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ,

                                                                                                                  ಜಿಲ್ಲಾ ಪೊಲೀಸ್ ಕಛೇರಿ, ಬಳ್ಳಾರಿ.

ಗುರುವಾರ, ಫೆಬ್ರವರಿ 5, 2015

PRESS NOTE AS ON 06-02-2015

  ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 06-02-2015

ಪತ್ರಿಕಾ ಪ್ರಕಟಣೆ 

ಮೈಲಾರ ಲಿಂಗೇಶ್ವರ ಜಾತ್ರೆ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಕಾಣೆಯಾದ 190 ಜನರನ್ನು ಪೊಲೀಸರು ಪುನ: ಅವರ ಪೋಷಕರು / ಸಂಬಂಧಿಕರಿಗೆ ಒಪ್ಪಿಸಿದರು.



                                     
      ದಿನಾಂಕ: 03-02-2015 ರಿಂದ 05-02-2015 ರ ವರೆಗೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹಿರೇ ಹಡಗಲಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮೈಲಾರ ಗ್ರಾಮದಲ್ಲಿ “ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಮತ್ತು ಜಾತ್ರೆ ” ವಿಜೃಂಭಣೆಯಿಂದ ಆಚರಿಸಲಾಗಿರುತ್ತದೆ. ಈ ಜಾತ್ರೆಯಲ್ಲಿ ಸುಮಾರು 8 ಲಕ್ಷ ಭಕ್ತಾಧಿಗಳು ಭಾಗವಹಿಸಿದ್ದರು.  ಕಾರ್ಣಿಕೋತ್ಸವ ಮತ್ತು ಜಾತ್ರೆ ಸಂಧರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡು ಜನರ ಬೆಲೆ ಬಾಳುವ ವಸ್ತುಗಳು, ಆಭರಣಗಳ ಕಳವು ಇತ್ಯಾದಿ ತಡೆಗಟ್ಟಲು, ಸಂಚಾರ ವ್ಯವಸ್ಥೇ ಸುಗಮಗೊಳಿಸಲು ಸುಮಾರು 1,500 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.  ಈ 3 ದಿನಗಳ ಅವಧಿಯಲ್ಲಿ ಮೈಲಾರ ಜಾತ್ರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಸಿಬ್ಬಂದಿಯವರು 190 ಕಾಣೆಯಾದ ವ್ಯಕ್ತಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆ ವ್ಯಕ್ತಿಗಳನ್ನು ಅವರವರ ಕುಟುಂಬದ ಸದಸ್ಯರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ. 190 ವ್ಯಕ್ತಿಗಳ ಪೈಕಿ 125 ಮಕ್ಕಳು ಮತ್ತು 65 ಜನ ವಯಸ್ಕರು ಕಾಣೆಯಾಗಿ ತಮ್ಮ ಕುಟುಂಬದ ಸದಸ್ಯರಿಂದ ದೂರವಾಗಿದ್ದರು.  ಕಾಣೆಯಾದ ವ್ಯಕ್ತಿಗಳನ್ನು ಪತ್ತೆ ಮಾಡಿದ ನಂತರ ಅವರಿಗೆ ಅವರ ಸಂಬಂಧಿಕರು ಸಿಗುವ ತನಕ ಜಾತ್ರಾ ಪೊಲೀಸ್ ಠಾಣೆಯಲ್ಲಿ ಸೂಕ್ತ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಮಕ್ಕಳು ಭಯ ಭೀತರಾಗದೇ ಅವರಲ್ಲಿ ಉತ್ತಮ ವಾತಾವರಣ ಮೂಡಿಸಲು ಸೂಕ್ತ ಅಲ್ಪ ಉಪಹಾರ, ಚಾಕ್‍ಲೇಟ್, ಬಿಸ್ಕಟ್ ಮತ್ತು ಆಟಿಕೆಗಳನ್ನು ಕೊಟ್ಟು ಅವರಲ್ಲಿ ಭಯವನ್ನು ದೂರ ಮಾಡಲಾಗಿತ್ತು. ಮಕ್ಕಳ ಕಾಳಜಿ ವಹಿಸಲು ಪ್ರತ್ಯೇಕವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು.  

        ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು, ಪೋಷಕರು ತಮ್ಮ ಕಾಣೆಯಾದ ಮಕ್ಕಳನ್ನು ಮತ್ತು ಸಂಬಂಧಿಕರನ್ನು ಪೊಲೀಸರು ಹುಡುಕಿ ತಮ್ಮಲ್ಲಿ ಇರಿಸಿಕೊಂಡು ಅವರಿಗೆ ಸೂಕ್ತ ಊಟದ ವ್ಯವಸ್ಥೆ, ಮಕ್ಕಳಿಗಾಗಿ ಮಾಡಿದ ಉತ್ತಮವಾದ ವ್ಯವಸ್ಥೆಯನ್ನು ಕಂಡು ಅವರ ಕಣ್ಣಿನಲ್ಲಿ  ಹರ್ಷ ವ್ಯಕ್ತಪಡಿಸಿರುತ್ತಾರೆ.  

       ಜಾತ್ರಾ ವೇಳೆಯಲ್ಲಿ ಯಶಸ್ವಿಯಾಗಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ವಿಶೇಷವಾಗಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಿದ್ದ ಮಹಿಳಾ ಸಿಬ್ಬಂದಿ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿರುತ್ತಾರೆ.   
                                                     

                                                                                                               ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                                ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

Press Note