ಗುರುವಾರ, ಮಾರ್ಚ್ 5, 2015

PRESS NOTE OF 05-03-2015



                                              ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 05-03-2015

ಪತ್ರಿಕಾ ಪ್ರಕಟಣೆ 

1) 6 ವರ್ಷದ ಶಾಲಾ ವಿಧ್ಯಾರ್ಥಿ ಮೇಲೆ ಟ್ರ್ಯಾಕ್ಸಿ ಡಿಕ್ಕಿ ಶಾಲ ಬಾಲಕನ ಸಾವು.
 
         ದಿನಾಂಕ: 04/03/2015 ರಂದು ಸಂಜೆ 4.30 ಗಂಟೆಗೆ ಎಲಿಗಾರ ನೂರ್ ಭಾಷ ತಂದೆ ಪೀರಾಸಾಬ್ 39ವರ್ಷ ಮುಸ್ಲಿಂ ಜನಾಂಗ  ಮದೀನ ಸಪ್ಲೈಯರ್ಸ  ವಾಸ- ಕಂಪ್ಲಿ ಇವರು ಕೊಟ್ಟ ದೂರು ಏನೆಂದರೆ, ಮೃತ ಅನಾಸ್ ತಂದೆ ನಜೀರ್ ಅಹಮದ್ 6 ವರ್ಷ 01ನೇ ತರಗತಿ ವಿದ್ಯಾರ್ಥಿ ಸಾಹಿತಿ ವಿದ್ಯಾಲಯ ಕಂಪ್ಲಿ ಈತನು ಶಾಲೆ ಬಿಟ್ಟ ನಂತರ ಮನೆಗೆ ಬರಲೆಂದು ಕಂಪ್ಲಿ ಸಾಹಿತಿ ವಿದ್ಯಾಲಯದ ಮುಂದೆ ಗೇಟ್‍ನ ಹತ್ತಿರ  ರಸ್ತೆಯಲ್ಲಿ  ಟ್ರಾಕ್ಸ್ ನಂ ಎಪಿ 02/ವಿ 5014 ನೇದ್ದರಲ್ಲಿ  ಹತ್ತಲು  ನಿಂತಿದ್ದು ಮೇಲ್ಕಂಡ ಟ್ರಾಕ್ಸ್ ಚಾಲಕ ರವಿ ತಾಯಿ ಷಣ್ಮುಖಮ್ಮ  ಟ್ರಾಕ್ಸ್ ನಂ ಎಪಿ 02/ವಿ 5014 ನೇದ್ದರ ಚಾಲಕ ವಾ: ಎಮ್ಮಿಗನೂರು ಈತನು ಮೇಲ್ಕಂಡ ಶಾಲೆಯ ಮಕ್ಕಳು  ಹತ್ತಲು ನಿಂತಿದ್ದನ್ನು ಕಂಡೂ ಮೇಲ್ಕಂಡ ವಾಹನವನ್ನು ವೇಗವಾಗಿ & ನಿರ್ಲಕ್ಷತನದಿಂದ ಏಕಾಏಕಿ ರಿವರ್ಸ್ ತೆಗೆದುಕೊಂಡಿದ್ದರಿಂದ ಟ್ರಾಕ್ಸ್  ತಗುಲಿದ್ದು ಇದರಿಂದ ಅನಾಸನು ಟ್ರಾಕ್ಸ್ ಮುಂಭಾಗದ ಎಡ ಚಕ್ರದ ಬಳಿ ಬಿದ್ದಿದ್ದು ಟ್ರಾಕ್ಸ್ ಅನಾಸನ ತಲೆಯ ಮೇಲೆ ಹತ್ತಿದ್ದು ತಲೆ ಅಪ್ಪಚ್ಚಿಯಾಗಿರುತ್ತದೆ. ಅನಾಸನು ಚಿಕಿತ್ಸೆಯಿಂದ ಗುಣವಾಗದೇ ಸಂಜೆ 5 ಗಂಟೆಗೆ ಕಂಪ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅನಾಸನ ಸಾವಿಗೆ ಮೇಲ್ಕಂಡ ಟ್ರಾಕ್ಸ್ ಚಾಲಕನ ನಿರ್ಲಕ್ಷತನವೇ ಕಾರಣವಾಗಿದ್ದು ಸದ್ರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ಕಂಪ್ಲಿ ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ದೂರನ್ನು ಪಡೆದು ಆರೋಪಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                      ಪೊಲೀಸ್ ಸೂಪರಿಂಟೆಂಡೆಂಟ್,                                                                            
                                                                                                                            ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                                     ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ