ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 03-03-2015
ಪತ್ರಿಕಾ ಪ್ರಕಟಣೆ
ದಿನಾಂಕ 02-03-2015 ರಂದು 06-30 ಎ.ಎಂ ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಜಿ.ಭೋಜಪ್ಪ ತಂದೆ ಲೇಟ್ ಕರಿಯಪ್ಪ, ವಯಸ್ಸು 66ವರ್ಷ, ಬಾರಿಕರ ಜನಾಂಗ, ರಿಟೈರ್ ಟೀಚರ್, ವಾಸ: ರಾಮಸ್ವಾಮಿ ಪ್ಲಾಟ್ ಹೂವಿನ ಹಡಗಲಿ ಪಟ್ಟಣ ಇವರು ದೂರು ನೀಡಿದ್ದೇನೆಂದರೆ ತನ್ನ ಹೆಂಡತಿಯಾದ ಶ್ರೀಮತಿ ಗೌರಮ್ಮ ಗಂಡ ಜಿ.ಭೋಜಪ್ಪ, ವಯಸ್ಸು 55ವರ್ಷ, ಮುಖ್ಯ ಶಿಕ್ಷಕಿ ವೃತ್ತಿ, ಬಾರಿಕಿರ ಜನಾಂಗ, ವಾಸ: ವಿಜಯನಗರ ಬಡಾವಣೆ/ ರಾಮಸ್ವಾಮಿ ಪ್ಲಾಟ್, ಹೂವಿನ ಹಡಗಲಿ ಪಟ್ಟಣ ಇವರು ಕೆ.ಇ.ಬಿ. ಮತ್ತು ಎ.ಪಿ.ಎಂ,ಸಿ ಸರ್ಕಲ್ ಮುಖ್ಯ ರಸ್ತೆಯಲ್ಲಿ ವೇ ಬ್ರಿಡ್ಜ ಹತ್ತಿರ ಎ.ಪಿ.ಎಂ.ಸಿ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತಮ್ಮ ಎದುರಿಗೆ ಬಿಳಿಯ ಬಣ್ಣದ ಟಾ.ಟಾ.ಎಸಿ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಆಜಾಗರು ಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಹೆಂಡತಿ ಗೌರಮ್ಮಳಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ತನ್ನ ಹೆಂಡತಿಗೆ ಬಲಗಡೆಯ ಹಣೆಯ ಮೇಲೆ ಭಾರಿ ಒಳಪೆಟ್ಟಾಗಿ ಬಾವು ಬಂದು ಮೂಗಿನಿಂದ ರಕ್ತ ಬರುತ್ತಿತ್ತು, ಬಲಗಡೆಯ ಮೊಣಕಾಲು ಕೆಳಗೆ ಭಾರಿ ಪೆಟ್ಟಾಗಿ ರಕ್ತ ಬರುತ್ತಿತ್ತು, ಹಾಗೂ ಎಡಗಡೆ ಪಾದಕ್ಕೆ ತೆರೆಚಿದ ರಕ್ತಗಾಯವಾಗಿದ್ದು, ಹಡಗಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವೈಧ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರಿಗೆ ಹೋಗಲು ತಿಳಿಸಿದರು, ನಂತರ ತನ್ನ ಹೆಂಡತಿಯನ್ನು ದಾವಣಗೇರಿಗೆ ಅಂಬುಲೇನ್ಸನಲ್ಲಿ ದಾವಣಗೇರಿ ಸಿ.ಜೆ ಆಸ್ಪತ್ರೆಯಲ್ಲಿ ದಿ: 03-03-2015 ರಂದು ಬೆಳಿಗ್ಗೆ 10-35 ಗಂಟೆಯ ಸುಮಾರಿಗೆ ಚಿಕಿತ್ಸೆಗೆ ದಾಖಲಿಸಿದ್ದು, ತನ್ನ ಹೆಂಡತಿ ಅಪಘಾತದಲ್ಲಿ ಆದಂತಹ ಗಾಯಾಗಳಿಂದ ಚೇತರಿಸಿಕೊಳ್ಳದೆ ಹಾಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಎಂದು ಹಾಗೂ ವಾಹನ ಮತ್ತು ಚಾಲಕನನ್ನು ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ, ಟಾಟಾ ಎಸಿ ವಾಹನ ಮತ್ತು ಚಾಲಕನನ್ನು ಪತ್ತೆ ಹಚ್ಚಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ