ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 25-03-2015
ಪತ್ರಿಕಾ ಪ್ರಕಟಣೆ
ದಿನಾಂಕ 24.03.2015 ರಂದು ಮದ್ಯಾಹ್ನ 03.45 ಗಂಟೆಗೆ ಪಿರ್ಯಾದಿದಾರರಾದ ಕೆ. ಮಲ್ಲಪ್ಪ ತಂದೆ ಬಸಪ್ಪ ತಾತ ವಯಸ್ಸು 60 ವರ್ಷ ವಾಸ ಕೋಳೂರು, ಇವರು ಕುರುಗೋಡು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು ದೂರಿನಲ್ಲಿ ತಮ್ಮ ಮಗಳಾದ ಶಿವಲಿಂಗಮ್ಮಳನ್ನು ಹಿಗ್ಗೆ 5 ವರ್ಷಗಳ ಹಿಂದೆ ಆಂದ್ರದ ಗೂಳ್ಯಂ ಗ್ರಾಮದ ಮಹಾಲಿಂಗಪ್ಪನ ಮಗನಾದ ಮಲ್ಲಿಕಾರ್ಜುನನನಿಗೆ ಮದುವೆ ನಿಶ್ಚಯ ಮಾಡಿ ವರದಕ್ಷಿಣೆ 1 ಲಕ್ಷ ಮತ್ತು 1 ತೊಲೆ ಬಂಗಾರ ಕೊಡಬೇಕೆಂದು ಕೇಳಿದ್ದನು, ಮದುವೆಯ ಸಮಯದಲ್ಲಿ 50 ಸಾವಿರ ರೂಪಾಯಿ ಮತ್ತು 1 ತೊಲೆ ಬಂಗಾರವನ್ನು ಕೊಟ್ಟು ಗುಳ್ಯಂ ಗ್ರಾಮದ ಗಾದಿಲಿಂಗಪ್ಪ ತಾತನ ಗುಡಿಯ ಮುಂದೆ ಮದುವೆ ಮಾಡಲಾಗಿತ್ತು ಈಗ್ಗೆ 6 ತಿಂಗಳಿನಿಂದ ಗಂಡ ಮಲ್ಲಿಕಾರ್ಜುನ ಅತ್ತೆ ಅಂಬಮ್ಮ ಮೈದುನ ಬಸವ, ಮಾರೆಪ್ಪ, ಸಿದ್ದ, ದತ್ತ ಇವರೆಲ್ಲರು ಸೇರಿ ಉಳಿದ ವರದಕ್ಷಿಣೆ ಹಣ ತರುವಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೊಡೆಬಡೆ ಮಾಡುತ್ತಿದ್ದರು ಮತ್ತು ಹೆಚ್ಚಿನ ವರದಕ್ಷಿಣೆ ಹಣವನ್ನು ತೆಗೆದುಕೊಂಡ ಬಾರದಿದ್ದರೇ ನಿನನ್ನು ಉರುಲು ಹಾಕಿ ಸಾಯಿಸುತ್ತವೆಂದು ಪ್ರಾಣ ಬೆದರಿಕೆ ಹಾಕಿದ್ದರು, ಈ ವಿಷಯವನ್ನು ಮಗಳು ಹಬ್ಬಕ್ಕೆ ಬಂದಾಗ ತಂದೆ ತಾಯಿಗೆ ವಿಚಾರವನ್ನು ತಿಳಿಸಿದ್ದಳು ಪುನಃ ಬೆಣಕಲ್ಲು ಗ್ರಾಮದ ಮಲ್ಲಿಕಾರ್ಜುನ ರವರ ಕುಮ್ಮಕ್ಕಿನಿಂದ ವರದಕ್ಷಿಣೆ ಹಣ 50,000=00 ಗಳನ್ನು ತರುವಂತೆ ಮೇಲ್ಕಂಡವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದಲ್ಲದೆ ಹೊಡೆ ಬಡೆ ಮಾಡುವುದರಿಂದ ನನ್ನ ಗಂಡನ ಮನೆಯವರು ನನಗೆ ಉರುಲು ಹಾಕಿ ಸಾಯಿಸುತ್ತಾರೆಂದು ತಿಳಿದು ಮನಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟಗಾಯಗಳಿಂದ ಗುಣಪಡದೆ ಮೃತಪಟ್ಟಿರುತ್ತಾಳೆಂದು ದೂರು ನೀಡಿದ್ದು ದೂರನ್ನು ದಾಖಲಿಸಿ ತನಿಖೆ ಕೈಗೊಂಡಿದೆ.
ಪೊಲೀಸ್ ಸೂಪರಿಂಟೆಂಡೆಂಟ್, ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ