ಗುರುವಾರ, ಅಕ್ಟೋಬರ್ 30, 2014

Press Note as on 31-10-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 31-10-2014
ಪತ್ರಿಕಾ ಪ್ರಕಟಣೆ 

1) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಅಗ್ನಿಶಾಮಕ ಠಾಣೆಯ ಹತ್ತಿರ ಮೋಟಾರ್ ಸೈಕಲ್ ಹಾಗು ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಮೋಟಾರ್ ಸೈಕಲ್ ಸವಾರನ ಸಾವು.  

       ದಿನಾಂಕ 31-10-14 ರಂದು ಬೆಳಗಿನ ಜಾವ 00-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಬಂದು ಕೊಟ್ಟ ಹೇಳಿಕೆ ದೂರಿನ ಸಾರಾಂಶವೇನೆಂದರೆ, ದಿನಾಂಕ 30-10-14 ರಂದು ಸಂಜೆ 6-45 ಗಂಟೆಗೆ ಪಿರ್ಯಾದಿದಾರರ ಮಗನಾದ ಪಿ.ಎಂ.ಸಂತೋಷಕುಮಾರ, 25 ವರ್ಷ, ವಾ: ಹೆಚ್.ಬಿ.ಹಳ್ಳಿ ಈತನು ಹ.ಬೊ.ಹಳ್ಳಿ-ಹರಪನಹಳ್ಳಿ ತಾರ್ ರಸ್ತೆಯ ಮೇಲೆ ಅಗ್ನಿಶಾಮಕ ಠಾಣೆಯ ಹತ್ತಿರ ತನ್ನ ಹಿರೊಹೊಂಡಾ ಪ್ಯಾಶನ್ ಪ್ರೊ ಮೋಟರ್ ಸೈಕಲ್ ನಂ ಕೆ.ಎ.17/ಇಎಫ್-3466 ನೇದ್ದರಲ್ಲಿ ಹ.ಬೊ.ಹಳ್ಳಿ ಕಡೆಯಿಂದ ಹರಪನಹಳ್ಳಿ ಕಡೆಗೆ ಹೋಗುತ್ತಿರುವಾಗ ಹರಪನಹಳ್ಳಿ ಕಡೆಯಿಂದ ಹ.ಬೊ.ಹಳ್ಳಿ ಕಡೆಗೆ ಹೋಗಲು ಯಾವುದೊ ಒಂದು ಟ್ಯ್ರಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಗ ಸಂತೋಷಕುಮಾರನ ಮೋಟರ್ ಸೈಕಲ್‍ಗೆ ಡಿಕ್ಕಿಹೊಡೆಸಿ ತನ್ನ ಟ್ರ್ಯಾಕ್ಟರ್‍ನೊಂದಿಗೆ ಪರಾರಿಯಾದ ಪರಿಣಾಮವಾಗಿ ಸಂತೋಷಕುಮಾರನಿಗೆ ಹಣೆಯ ಬಲಬಾಗದಲ್ಲಿ ಭಾರಿ ರಕ್ತಗಾಯ ಮತ್ತು ಬಲಭುಜದ ಹತ್ತಿರ, ಬಲಪಾದದ ಹತ್ತಿರ ತೆರೆಚಿದ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು 108 ಆಂಬೂಲೆನ್ಸ್‍ನಲ್ಲಿ ಚಿಕಿತ್ಸೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರಗೆ ತರುವ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದಾಗಿ, ಅಪಘಾತ ಪಡಿಸಿ ಪರಾರಿಯಾದ ಟ್ರ್ಯಾಕ್ಟರ್ ಚಾಲಕ ಮತ್ತು ಟ್ರ್ಯಾಕ್ಟರ್‍ನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಇದ್ದ ಮೇರೆಗೆ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                  ಪೊಲೀಸ್ ಸೂಪರಿಂಟೆಂಡೆಂಟ್,  
                                                         ಬಳ್ಳಾರಿ.                 

ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
 ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

PRESS NOTE AS ON 30/10/2014



                                      ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 30-10-2014
ಪತ್ರಿಕಾ ಪ್ರಕಟಣೆ 

1) ಎಂ.ಎಂ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ದೇವೇಂದ್ರಪ್ಪನ ಡಾಬಾದ ಹತ್ತಿರ ಕಳ್ಳತನದಿಂದ ಅಪಾರ ಪ್ರಮಾಣದ ಬೆಲೆಯುಳ್ಳ ರಕ್ತ ಚಂದನ ಸಾಗಿಸುತ್ತಿರುವಾಗ್ಗೆ ಹಿಡಿದು ಆರೋಪಿಯನ್ನು ಬಂಧಿಸಿ ರಕ್ತ ಚಂದನ ಜಪ್ತು ಪಡಿಸಿಕೊಂಡ ಬಗ್ಗೆ. 

         ದಿ: 25-10-14 ರಂದು ತಿಮ್ಮಲಾಪುರ ಗ್ರಾಮದಲ್ಲಿ ವರದಿಯಾದ ಕೊಲೆ ಪ್ರಕರಣದಲ್ಲಿ ತನಿಖೆಯ ಸಲುವಾಗಿ ದಿನಾಂಕ:28-10-14 ರಂದು ಸಂಜೆ 5-00 ಗಂಟೆಗೆ ತಿಮ್ಮಲಾಪುರ ಗ್ರಾಮ ಭೇಟಿಗಾಗಿ ಪಿ.ಎಸ್.ಐ ಎಂ.ಎಂ.ಹಳ್ಳಿ, ಪಿ.ಐ. ಸಂಡೂರು ಶ್ರೀ. ರಮೇಶರಾವ್ ರವರ ಸಂಗಡ ಹೋಗುತ್ತಿರುವಾಗ್ಗೆ ಸಂಜೆ 5-30 ಗಂಟೆ ಸುಮಾರಿಗೆ ದೇವೇಂದ್ರಪ್ಪನ ಡಾಬದ ಬಳಿ ಲಾರಿಗಳು ಟ್ರಾಫಿಕ್ ಜಾಮ್ ಆಗಿ ನಿಂತಿದ್ದವು. ಅದನ್ನು ಲೆಕ್ಕಿಸದೆ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಸಂದುಗಳಲ್ಲಿ ತೂರಿಕೊಂಡು ಬರ ತೊಡಗಿದ್ದು ನಮ್ಮ ಸಿ.ಪಿ.ಐ. ಸಂಡೂರು ರವರ ಸೂಚನೆಯಂತೆ ಅದನ್ನು ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚನೆ ನೀಡಿದರು ಸಹಾ ಹಾಗೆ ತನ್ನ ಲಾರಿಯನ್ನು ಚಲಿಸಿಕೊಂಡು ಹೋಗ ತೊಡಗಿದನು. ಕೂಡಲೆ  ಜೀಪಿನ ಸಹಾಯದಿಂದ ಬೆನ್ನತ್ತಿ ಲಾರಿಯನ್ನು ತಡೆದು ನಿಲ್ಲಿಸಿ ಲಾರಿ ಚಾಲಕನಿಗೆ ಕೆಳಗೆ ಇಳಿಸಿ ಆತನ ಹೆಸರು ಮತ್ತು ವಿಳಾಸ ಕೇಳಲು ತನ್ನ ಹೆಸರು ಮಂಜೂರು ಅಲಿ ತಂದೆ ಮಹ್ಮದ್ ತಾಲೀಮ್ ವ: 24 ವರ್ಷ ಮುಸ್ಲಿಂ ಜನಾಂಗ ಹೆಚ್.ಆರ್. 74/ಎ.1183 (10 ಗಾಲಿ) ಲಾರಿ ಚಾಲಕ ವಾಸ: ಪಹಡ ಹತ್ತಿರ ರೋಡಾವಾಲಿ ಗಲ್ಲಿ ಪಹಡ (ಪೊಲೀಸ್ ಠಾಣಾ ಸರಹದ್ದು) ನೋಹು (ಮೇವಾಥ) (ಜಿಲ್ಲೆ) ಹರಿಯಾಣ (ರಾಜ್ಯ) ಎಂದು ತಿಳಿಸಿದ್ದು ಲಾರಿಯಲ್ಲಿ ಏನು ಇದೆ ಎಂದು ವಿಚಾರಿಸಲು ಹಿಂದಿ ಬಾಷೆಯಲ್ಲಿ ತೆಂಗಿನ ಕಾಯಿ ಲೋಡ್ ಇದೆ ತುಮಕೂರಿನಲ್ಲಿ ಲೋಡಾಯಿತು ದೆಹಲಿಗೆ ಹೋಗಬೇಕು ಎಂದು ತಿಳಿದನು. ಲಾರಿಯಲ್ಲಿ ಏನು ಇದೆ ಎಂದು ಚೆಕ್ ಮಾಡಿ ನೋಡಲು, ಆರಂಭದಲ್ಲಿ ತೆಂಗಿನ ಕಾಯಿ ಮೂಟೆ ಇದ್ದು ನಂತರ ಕಟ್ಟಿಗೆ ದಿಂಡುಗಳು ಇದ್ದವು. ಇವುಗಳ ಬಗ್ಗೆ ಲಾರಿ ಚಾಲಕ ಮಂಜೂರು ಅಲಿಗೆ ವಿಚಾರಿಸಲು ಕಟ್ಟಿಗೆ ದಿಂಡುಗಳ ಬಗ್ಗೆ ನನಗೇನು ಗೊತ್ತಿಲ್ಲ ತುಮಕೂರಿನಲ್ಲಿ ತೆಂಗಿನ ಕಾಯಿ ಲೋಡಾಗಿದ್ದು ಡೆಲ್ಲಿಗೆ ಅನ್ ಲೋಡ್ ಮಾಡಲು ಹೋಗುವುದಾಗಿ ತಿಳಿಸಿದನು. ಸದರಿ ಕಟ್ಟಿಗೆಗಳು ಯಾವು ಎಂದು ದೃಡಪಡಿಸಿಕೊಳ್ಳಲು ಕೂಡಲೆ ಆರ್.ಎಫ್.ಓ. ಹೊಸಪೇಟೆ ಶ್ರೀ. ಶ್ರೀಧರ್ ರವರನ್ನು ಮತ್ತು ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಸಂಜೆ 6-00 ಗಂಟೆಗೆ ಅಲ್ಲಿದ್ದ ಗ್ರಾಮದ ಜನರ ಸಹಾಯದಿಂದ ಹೆಚ್.ಆರ್. 74/ಎ.1183 (10) ಲಾರಿಯಲ್ಲಿದ್ದ ತೆಂಗಿನ ಕಾಯಿ ಮೂಟೆಗಳನ್ನು ಕೆಳಗೆ ಇಳಿಸಿ ಲಾರಿಯಲ್ಲಿದ್ದ ಕಟ್ಟಿಗೆಗಳನ್ನು ಆರ್.ಎಫ್.ಓ. ರವರ ಸಮಕ್ಷಮದಲ್ಲಿ ನೋಡಲು, ಆರ್.ಎಫ್.ಓ. ರವರು ಸದರಿ ಕಟ್ಟಿಗೆಗಳು ರಕ್ತಚಂದನ ಲಾಗ್ಸ್ (ಐಔಉS) ಮತ್ತು ಇವು “ಬಿ” ಗ್ರೇಡಿನವುಗಳು ಇದ್ದು ಸಾರ್ವತ್ರಿಕ ಹರಾಜಿನಲ್ಲಿ ಪ್ರತಿ ಒಂದು ಮೆ.ಟನ್‍ಗೆ 8,00,000-00 ರೂಗಳು ಆಗುವುದಾಗಿ ತಿಳಿಸಿದರು. ಕೂಡಲೆ ಸೇರಿದ ಜನರು ಮತ್ತು ಪಂಚರ ಸಹಾಯದಿಂದ ಸದರಿ ರಕ್ತಚಂದನ ಲಾಗ್ಸ್ (ಐಔಉS) ಗಳನ್ನು ಒಂದೊಂದಾಗಿ ಪರಿಶೀಲಿಸಿ ನೋಡಲು. ಸುಮಾರು ಐದೂವರೆ ಅಡಿಯಿಂದ ಆರೂವರೆ ಅಡಿ ಉದ್ದನೇಯ ಮತ್ತು ಸುಮಾರು 8 ರಿಂದ 10 ಇಂಚು ಸುತ್ತಳೆತೆಯ ತೊಗಟೆ ಕೆತ್ತಿದ ಹಾಗು ಕೆಂಪು ಬಣ್ಣದಿಂದ ಕೂಡಿದ ಲಾಗ್ಸ್ (ಐಔಉS) ಕಟ್ಟಿಗೆಗಳು ಇರುತ್ತವೆ. ಇವುಗಳನ್ನು ತುಂಬಿಕೊಂಡು ಬಂದ ಲಾರಿಯನ್ನು ಪರಿಶೀಲಿಸಿ ನೋಡಲು, ಹೆಚ್.ಆರ್. 74/ ಎ. 1183 ನಂಬರಿನ (10 ಗಾಲಿ) ಲಾರಿ ಇದ್ದು ಮೇಲ್ಬಾಗವೆಲ್ಲ ತಾಡ್ ಪಾಲಿನಿಂದ ಹೊದಿಕೆ ಮಾಡಿರುತ್ತದೆ. ಸದರಿ ಲಾರಿ ತುಮಕೂರಿನಲ್ಲಿ ಲೋಡಾಗಿ ದೆಹಲಿಯಲ್ಲಿ ಅನ್ ಲೋಡ್ ಆಗುವುದಾಗಿ ಚಾಲಕನಿಂದ ಮಾಹಿತಿ ತಿಳಿದಿರುತ್ತದೆ. ಲಾಗ್ಸ್ (ಐಔಉS) ಕಟ್ಟಿಗೆಗಳ ನಿಖರ ತೂಕ ನೋಡಲು, ಒಟ್ಟು ನಿವ್ವಳ ತೂಕ 14,840 ಕೆ.ಜಿ. ತೂಕ ಬಂದಿರುತ್ತದೆ. ನಂತರ ಕಟ್ಟಿಗೆಗಳನ್ನು ಕೆಳಗೆ ಇಳಿಸಿ ಖಾಲಿ ಲಾರಿಯನ್ನು ತೂಕ ಮಾಡಿ ನೋಡಲು. ಖಾಲಿ ಲಾರಿ 9,380 ಕೆ.ಜಿ. ಬಂದಿರುತ್ತದೆ. ಅಂದರೆ, ಲಾಗ್ಸ್ (ಐಔಉS) ಕಟ್ಟಿಗೆಗಳ ತೂಕ 5,460 ಕೆ.ಜಿ. ಇದ್ದು ಅಂದಾಜು ಬೆಲೆ 43,68,000-00 ರೂಗಳು ಅಗಬಹುದಾಗಿ ಸ್ಥಳದಲ್ಲಿದ್ದ ಆರ್.ಎಫ್.ಓ. ರವರು ತಿಳಿಸಿರುತ್ತಾರೆ. ಲಾಗ್ಸ್ (ಐಔಉS) ಕಟ್ಟಿಗೆಗಳನ್ನು ಲೋಡ್ ಮಾಡಿದ ಸ್ಥಳ ಅಂದರೆ, ತುಮಕೂರಿನಲ್ಲಿನ ದುಷ್ಕರ್ಮಿಗಳು ಸದರಿ ಕಟ್ಟಿಗೆಗಳನ್ನು ಕಾಳ ಸಂತೆಯಿಂದ ಖರೀದಿ ಮಾಡಿಯೋ ಅಥವಾ ಅರಣ್ಯದಲ್ಲಿ ಬೆಳೆದು ನಿಂತ (ಐಔಉS) ಮರಗಳನ್ನು ಕಳ್ಳತನದಿಂದ   ಕತ್ತಿರಿಸಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ದೆಹಲಿಗೆ ಹೆಚ್.ಆರ್. 74/ ಎ. 1183  ಲಾರಿಯಲ್ಲಿ  ಸಾಗಿಸುತ್ತಿದ್ದಾಗಿ ತಿಳಿದು ಬಂದಿದ್ದು  ಈ ಕೃತ್ಯದ ಹಿಂದೆ  ಇನ್ನು ಕೆಲವು ದುಷ್ಕರ್ಮಿಗಳು ಇದ್ದು ಆ ಬಗ್ಗೆ ಸಹಾ ಇನ್ನು ಮಾಹಿತಿ ತಿಳಿಯಬೇಕಾಗಿರುತ್ತದೆ. 5,460 ಕೆ.ಜಿ. ಲಾಗ್ಸ್ ಕಟ್ಟಿಗೆಗಳನ್ನು ಮತ್ತು ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 50,000-00 ರೂಗಳು ಬೆಲೆ ಬಾಳುವ 100 ತೆಂಗಿನ ಕಾಯಿ ಮೂಟೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಹೆಚ್.ಆರ್. 74/ ಎ. 1183  ಲಾರಿಯನ್ನು ಜಪ್ತುಪಡಿಸಿಕೊಂಡಿದ್ದು, ಈ ಬಗ್ಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

                                                                                                               ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                              ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                            ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ಅಕ್ಟೋಬರ್ 29, 2014

PRESS NOTE ON 29102014


  ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 29-10-2014

ಪತ್ರಿಕಾ ಪ್ರಕಟಣೆ
1) ಸಿರುಗುಪ್ಪ ಪೊಲೀಸ್ ಠಾಣೆ ಸರಹದ್ದಿನ ಸಿರುಗುಪ್ಪ ಪಟ್ಟಣದ ಪಲ್ಲವಿ ಗಂಡ ವಿಜಯಕುಮಾರ್ ಕೆಲಸಕ್ಕೆಂದು    
   ಹೋದವರು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.
      ಪಿಯರ್ಾದಿದಾರರ ಗಂಡ ವಿಜಯಕುಮಾರ್ ವ: 36 ವರ್ಷ, ಸಾ: 15 ನೇ ವಾಡರ್್, ಸಿರುಗುಪ್ಪ ಇವರು ಆರ್.ಎ.ಪಿ ಕೆಲಸ ಮಾಡುತ್ತಿದ್ದು, ದಿನಾಲೂ ಸಿರುಗುಪ್ಪದಿಂದ ಗಜಗಿನಾಳ್, ಕಚರ್ಿಗನೂರು ಮತ್ತು ನಾಗಲಾಪುರ ಗ್ರಾಮಗಳಿಗೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದು ಪುನ ಹೋಗಿ ರಾತ್ರಿ 9 ಗಂಟೆಗೆ ಮನೆಗೆ ಬರುತ್ತಿದ್ದರು. ದಿ: 26/10/14 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಮನೆಗೆ ಬಂದು 3.30 ಗಂಟೆಗೆ ನಾಗಲಾಪುರ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೆ ಇದ್ದು ಮೊಬೈಲ್ ಪೋನ್ಗೆ ಪೋನ್ ಮಾಡಲು ಸ್ವಿಚ್ ಆಪ್ ಆಗಿದ್ದು, ಅಲ್ಲಲ್ಲಿ ಹುಡುಕಾಡಿದ್ದು ತನ್ನ ಗಂಡ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಲು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

2)  ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಹೊಸಪೇಟೆ ನಗರದ ಪಟೇಲ್ ನಗರದಲ್ಲಿಯ ಮನಷೇ  
    ಎಂಬ 20 ವರ್ಷದ ಹುಡುಗ ಮನೆಯಿಂದ ಸಾಮಾನು ತರಲೆಂದು ಹೋದವನು ತಿರುಗಿ ಬಾರದೇ 
   ಕಾಣೆಯಾಗಿರುತ್ತಾನೆ.
 ಕಾಣೆಯಾದ ಹುಡುಗ ಮನಷೇ ತಂದೆ ಪಾಲ್, ವಯಸ್ಸು: 20 ವರ್ಷ, ವಾಸ: ಪಟೇಲ್ ನಗರ, ಹೊಸಪೇಟೆ ಈತನು ದಿನಾಂಕ: 26-10-14 ರಂದು ಮಧ್ಯಾಹ್ನ 03-30 ಗಂಟೆಗೆ ಮನೆಯಿಂದ ಸಾಮಾನು ತರಲೆಂದು ಹೊರಗೆ ಹೋದವನು ತಿರುಗಿ ಬಂದಿಲ್ಲವೆಂದು ಈ ಬಗ್ಗೆ ಅಲ್ಲಲ್ಲಿ ತನ್ನ ಸಂಬಂಧಿಕರ ಮನೆಗಳನ್ನು ಹಾಗು ಹುಡುಗನ ಸ್ನೇಹಿತರಲ್ಲಿ ವಿಚಾರಿಸಲು ಮಾಹಿತಿ ತಿಳಿದಿಲ್ಲವೆಂದು ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಕೇಸಿನ ಫಿಯರ್ಾದಿ ಶ್ರೀಮತಿ ಲಿಡಿಯಾ ಗಂಡ ಪಾಲ್, ವಯಸ್ಸು: 40 ವರ್ಷ, ವಾಸ: ಪಟೇಲ್ ನಗರ, 2 ನೇ ಮುಖ್ಯ ರಸ್ತೆ ಹೊಸಪೇಟೆ ಇವರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

                                          ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                         ಬಳ್ಳಾರಿ.                                                                                                                 
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.
 

ಮಂಗಳವಾರ, ಅಕ್ಟೋಬರ್ 28, 2014

Press Note As on 28-10-2014


                                                                                                                 ಜಿಲ್ಲಾ ಪೊಲೀಸ್ ಕಾರ್ಯಲಯ
                                                                                                                ಬಳ್ಳಾರಿ, ದಿನಾಂಕ: 28-10-2014
                                                                  ಪತ್ರಿಕಾ ಪ್ರಕಟಣೆ

1) ತೋರಣಗಲ್ಲು ಪೊಲೀಸ್ ಠಾಣೆ ಸರಹದ್ದಿನ  ಓವರ್ ಬ್ರಿಡ್ಜ ಹತ್ತಿರ ಎನ್.ಹೆಚ್.63 ರಸ್ತೆಯಲ್ಲಿ ಆಟೋ ಪಲ್ಟಿ ಒಬ್ಬ ಮಹಿಳೆ ಸಾವು ಹಲವರಿಗೆ ಗಾಯ 
       ದಿನಾಂಕ: 27-10-2014 ರಂದು ಮದ್ಯಾಹ್ನ 2-45 ಗಂಟೆ ಸುಮಾರಿಗೆ ಶ್ರೀಮತಿ. ರಾಮಾಂಜಿನಮ್ಮ ಇವರು ತನ್ನ ಮಕ್ಕಳಾದ ಬಸವರಾಜ ಮತ್ತು ಕುಸುಮಾವತಿ ಇವರೊಂದಿಗೆ ಬಸಾಪುರ ಗ್ರಾಮದಿಂದ ತೋರಣಗಲ್ಲು ಆರ್.ಎಸ್.ಗೆ ಬಂದಿದ್ದು, ಕೆಲಸ ಮುಗಿದ ನಂತರ ತೋರಣಗಲ್ಲು ಆರ್.ಎಸ್.ನಿಂದ ಬಸಾಪುರ ಗ್ರಾಮಕ್ಕೆ ಹೋಗಲು ಬಸಾಪುರ ಗ್ರಾಮದ ಜಂಬಣ್ಣ ಇವರು ತನ್ನ ಆಟೋ ನಂ. ಕೆ.ಎ-19-ಬಿ-7637 ರಲ್ಲಿ ಇತರೆ ಪ್ರಯಾಣಿಕರೊಂದಿಗೆ ಬರುತ್ತಿರುವಾಗ್ಗೆ ತೋರಣಗಲ್ ಆರ್.ಎಸ್.ನ ಓವರ್ ಬ್ರಿಡ್ಜ್ ಹತ್ತಿರ ಎನ್.ಹೆಚ್-63 ರಸ್ತೆಯಲ್ಲಿ ಚಾಲಕನು ತನ್ನ ಆಟೋವನ್ನು ಅತೀ ವೇಗವಾಗಿ ಮತ್ತು ಅಜಾಗೂರಕತೆಯಿಂದ ನಡೆದಿಕೊಂಡು ಬರುತ್ತಿದ್ದವನು ಇದ್ದಕ್ಕಿದ್ದಂತೆ ರಸ್ತೆಯ ಬಲಕ್ಕೆ ಹೋಗಿ ಆಟೋವನ್ನು ನಿಯಂತ್ರಣ ಮಾಡಿಕೊಳ್ಳಲಾಗಿದೇ ರಸ್ತೆಯ ಬಲಗಡೆ ತಗ್ಗಿಗೆ ಕೆಡವಿರುತ್ತಾನೆ. ಆಗ ಆಟೋ ಪಲ್ಟಿಯಾಗಿದ್ದು, ಆಟೋದಲ್ಲಿದ್ದ  ಕುಸುಮಾವತಿಗೆ ತಲೆಯ ಹಿಂಬಾಗದಲ್ಲಿ ಬಲವಾದ ಪೆಟ್ಟು ಬಿದ್ದಿದ್ದು, ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರೂ ತೋರಣಗಲ್ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದು, ಕುಸುಮಾವತಿ- 15 ವರ್ಷ, ಇವಳನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕರೆದೊಯ್ಯುತ್ತಿರುವಾಗ್ಗೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆಂದು ಇದ್ದ ದೂರಿನ ಮೇರೆಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.  

2) ಗಾಂಧಿನಗರ ಠಾಣೆ ಸರಹದ್ದಿನ ಪಾರ್ವತಿನಗರದ ಟಿ.ವಿ.ಎಸ್. ಶೋ ರೂಂ ಹತ್ತಿರ ಯಾರೋ ಕಳ್ಳರಿಂದ ಮನೆ ಬಾಗಿಲಿನ ಚಿಲಕ ಮುರಿದು ಮನೆ ಕಳ್ಳತನ ಬಂಗಾರ, ಬೆಳ್ಳಿ ಮತ್ತು ನಗದು ಹಣ ಕಳವು. 

       ಫಿಯರ್ಾಧಿದಾರಳಾದ ಶ್ರೀಮತಿ. ಶಾಂತಕುಮಾರಿ ಗಂಡ ಎನ. ನಿರಂಜನ್, 40 ವರ್ಷ, ಜಂಗಮ ಜಾತಿ, ಮನೆಕಲಸ, ಸಾ: ಹೌ ನಂ. 6, ಪಾರ್ವತಿನಗರ, ಮುಖ್ಯ ರಸ್ತೆ, ಟಿ.ವಿ.ಎಸ್. ಶೋ ರೂಮ್ ಹತ್ತಿರ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ದಿ: 26-10-14 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರು ತನ್ನ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಮಗಳೊಂದಿಗೆ ತನ್ನ ಅಕ್ಕನ ಮನೆಗೆ ಹೋಗಿ ಅಲ್ಲಿಂದ ತನ್ನ ಅಕ್ಕನೊಂದಿಗೆ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯುತ್ತಿದ್ದ ಹಾಸ್ಯ ಕಾರ್ಯಕ್ರಮವನ್ನು ನೋಡಿ ಹೋಗಿ ಕಾರ್ಯಕ್ರಮ ಮುಗಿದ ನಂತರ ರಾತ್ರಿ 8-30 ಗಂಟೆಗೆ ಮನೆಗೆ ಬಂದು ಬಾಗಿಲ ಬೀಗ ತೆರೆಯಲು ಹೋದಾಗ ಅದಾಗಲೇ ತೆರದಿತ್ತು. ಬಾಗಿಲು ತೆಗೆದು ಒಳಗಡೆ ಹೋಗಿ ನೋಡಲು ಕಬ್ಬಿಣದ ಬೀರುವಾವನ್ನು ತೆರೆದು ಅದರಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ವಸ್ತುಗಳು ಹಾಗೂ ನಗದು ಹಣ ಒಟ್ಟು 1,65,100/- ರೂ ಬಾಳುವುದನ್ನು ಯಾರೋ ಕಳ್ಳರು ನಖಲಿ ಬೀಗಗಳನ್ನು ಉಪಯೋಗಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇದ್ದ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                  ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                 ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                               ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.

ಸೋಮವಾರ, ಅಕ್ಟೋಬರ್ 27, 2014

Press Note as on 27-10-2014



ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 27-10-2014
ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ನಗರದ  ಕೌಲ್‍ಪೇಟೆಯಲ್ಲಿ ಕಳ್ಳರಿಂದ ಮನೆ ಕಳ್ಳತನ ಅಪಾರ ಆಭರಣ ಹಾಗು ನಗದು ಹಣ ಕಳವು. 
     
      ಫಿರ್ಯಾದುದಾರರಾದ ಶ್ರೀ ಕೆ. ಈರಣ್ಣ ತಂದೆ ವೀರಭದ್ರಪ್ಪ, ವಾಸ: ಕೌಲ್‍ಪೇಟೆ ಹೊಸಪೇಟೆ ಇವರು ತನ್ನ ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಮನೆಗೆ ಬೀಗ ಹಾಕಿಕೊಂಡು ದಿನಾಂಕ: 17-10-14 ರಂದು ಹೋಗಿದ್ದಾಗ ದಿನಾಂಕ: 26-10-14 ರಂದು ಬೆಳಿಗ್ಗೆ 08-15 ಗಂಟೆಗೆ ಫೋನ್ ಮಾಡಿ ನಮ್ಮ ಮನೆಗೆ ಹಾಕಿದ ಬೀಗ ಮುರಿದಿದೆ ಬಾಗಿಲು ತೆಗೆದಿರುತ್ತದೆಂದು ತಿಳಿಸಿದ್ದು ಅದರಂತೆ ದಿನಾಂಕ: 26-10-14 ರಂದು ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದು ನೋಡಲು ಬಾಗಿಲು ತೆರೆದಿತ್ತು. ದಿನಾಂಕ:  25-10-14 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 26-10-14 ರಂದು ಬೆಳಿಗನ ಜಾವ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿಟ್ಟಿದ್ದ ಒಟ್ಟು 85 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗು 10 ಸಾವಿರ ನಗದು ಹಣವನ್ನು ಒಟ್ಟು ಬೆಲೆ ರೂ. 2,22,500/- ಬೆಲೆ ಬಾಳುವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ಇದ್ದ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                                 ಪೊಲೀಸ್ ಸೂಪರಿಂಟೆಂಡೆಂಟ್,         
                                                         ಬಳ್ಳಾರಿ.                         


ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ಅಕ್ಟೋಬರ್ 26, 2014

PRESS NOTE ON 26/10/2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 26-10-2014
ಪತ್ರಿಕಾ ಪ್ರಕಟಣೆ
1)  ಸಂಡೂರು ಠಾಣೆ ಸರಹದ್ದಿನ ತಾರಾನಗರ ಗ್ರಾಮದ ಬಳಿ ಇರುವ ಗಜಲಕ್ಷ್ಮಿ ದೇವಸ್ಥಾನದ ಹತ್ತಿರ ಎರೆಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಕ್ಲೀನರ್‍ನ ಸಾವು.
      
      ದಿನಾಂಕ 24/10/2014 ರಂದು ಸಾಯಂಕಾಲ ಸುಬ್ರಾಯನಹಳ್ಳಿ ಬಳಿ ಇರುವ ಎಂ.ಎಂ.ಎಲ್. ಮೈನ್ಸನಲ್ಲಿ ಟಿಪ್ಪರ್ ಲಾರಿ ನಂಬರ್ ಕೆ.ಎ.35-7625 ರಲ್ಲಿ ಮೈನ್ಸ್‍ನ್ನು ಲೋಡು ಮಾಡಿಕೊಂಡು ಅದನ್ನು ಜಿಂದಾಲ್ ಪ್ಯಾಕ್ಟರಿಯಲ್ಲಿ ಅನ್‍ಲೋಡು ಮಾಡಲು ಪಿರ್ಯಾದಿದಾರರಾದ ಶ್ರೀ. ಜಿ.ಶಿವಮೂರ್ತಿ ತಂದೆ ಡ್ರೈವರ್ ರಾಮಪ್ಪ ವಯಸ್ಸು 30 ವರ್ಷ, ಲಾರಿ ನಂಬರ್ ಕೆ.ಎ.35-7625 ನೇದ್ದರ ಚಾಲಕ, ವಾಸಃ- ಚೋರ್‍ನೂರು ಗ್ರಾಮ, ಸಂಡೂರು (ತಾ) ಈತನು ನಡೆಸಿಕೊಂಡು ಹೋಗುವಾಗ್ಗೆ ಸಂಡೂರು- ತೋರಣಗಲ್ ಮೇನ್‍ರಸ್ತೆ ತಾರನಗರ ಬಳಿ ಇರುವ ಗಜಲಕ್ಷ್ಮಿ ದೇವಸ್ಥಾನದ ಬಳಿ ರಾತ್ರಿ 9-00 ಗಂಟೆಗೆ ಅಪ್‍ನಲ್ಲಿ ಹೋಗುವಾಗ್ಗೆ ಎದುರುಗಡೆಯಿಂದ ಅಂದರೆ ತಾರನಗರ ಕಡೆಯಿಂದ ಸಂಡೂರು ಕಡೆಗೆ ಹೋಗಲು ಇಳಿಜಾರ್‍ನಲ್ಲಿ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತಿ ಜೋರಾಗಿ ನಿರ್ಲಕ್ಷ್ಯತನದಿಂದ ತನ್ನ ಮುಂದುಗಡೆ ಹೋಗುತ್ತಿದ್ದ ಯಾವುದೋ ಒಂದು ವಾಹನವನ್ನು ಓವರ್‍ಟೇಕ್ ಮಾಡಿ ನಡೆಸಿಕೊಂಡು ಬಂದು ಅವರ ಲಾರಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ರಸ್ತೆಯ ಬಲಪಕ್ಕಕ್ಕೆ ಇರುವ ನಾರಿಹಳ್ಳ ಡ್ಯಾಂ ತಗ್ಗಿನಲ್ಲಿ ಲಾರಿಯನ್ನು ಬೀಳಿಸಿ ಪಲ್ಟಿ ಹೊಡೆಸಿ ಅಪಗಾತ ಮಾಡಿದ್ದರಿಂದ  ಅವರಿಗೆ ಬಲತೋಳಿಗೆ, ಬಲಪಕ್ಕೆಗೆ, ಒಳಪೆಟ್ಟಾಗಿ ಲಾರಿ ಜಖಂ ಆಗಿದ್ದು ಅದರಲ್ಲಿದ್ದ ಕ್ಲೀನರ್‍ನನ್ನು ನೋಡಲಾಗಿ ಕತ್ತಲಾಗಿದ್ದರಿಂದ ಆತನು ಕಾಣಲಿಲ್ಲ. ಅಪಘಾತ ಮಾಡಿದ ಲಾರಿ ನಂಬರ್ ಕೆ.ಎ.35-7836 ಕ್ಲೀನರ್ ಜಿ.ವಿರುಪಾಕ್ಷಿ ತಂದೆ ಜಿ.ಪೆನ್ನಪ್ಪ 28 ವರ್ಷ, ವಾಸಃ-ಯಶವಂತನಗರ ಗ್ರಾಮ, ಸಂಡೂರು ತಾಲ್ಲೂಕು ಈತನು ದಿನಾಂಕ 25/10/2014 ರಂದು ಬೆಳಿಗ್ಗೆ 7-00 ಗಂಟೆಗೆ ನೋಡಲಾಗಿ ಅಪಘಾತ ಮಾಡಿದ ಲಾರಿಯಲ್ಲಿ ಅದರ ಕ್ಲೀನರ್ ವಿರುಪಾಕ್ಷಿಯು ಲಾರಿಯಡಿಯಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದನು. ಆರೋಪಿ ಲಾರಿ ಚಾಲಕನಾದ ಕುಮಾರಪ್ಪ @ ಕುಮಾರ್ ಸ್ವಾಮಿ ತಂದೆ ತಿಪ್ಪಣ್ಣ ಟಿಪ್ಪರ್ ಲಾರಿ ನಂಬರ್ ಕೆ.ಎ.35/7836 ನೇದ್ದರ ಚಾಲಕ ವಾ ಸಃ-ಯಶವಂತನಗರ ಸಂಡೂರು(ತಾ) ರವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
                                          
ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                         ಬಳ್ಳಾರಿ.                                                                                                                 
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಶನಿವಾರ, ಅಕ್ಟೋಬರ್ 25, 2014

Press Note as on 25-10-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 25-10-2014
ಪತ್ರಿಕಾ ಪ್ರಕಟಣೆ

1)      ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮನೆಯಲ್ಲಿ ಕಳ್ಳತನ, ಕಂಪ್ಯೂಟರ್ ಸಲಕರಣಗಳ ಕಳವು.

       ಫಿರ್ಯಾದಿದಾರರಾದ ಶ್ರೀ. ಡಾ: ಮಲ್ಲಿಕಾರ್ಜುನ ರೆಡ್ಡಿ ತಂದೆ ಡಾ: ಎಲ್. ನಾಗಿರೆಡ್ಡಿ, : 39 ವರ್ಷ, ಆರ್ಯುವೇದ ವೈದ್ಯರು, ವಾಸ: ಮನೆ ನಂ: 54, ವಾರ್ಡ ನಂ: 25, ವಿಜಯನಗರ ಕಾಲೋನಿ, ಕಂಟೋನ್ಮೆಂಟ್, ಬಳ್ಳಾರಿ ಇವರು ದೂರು ನೀಡಿದ್ದೇನೆಂದರೆ, ದಿನಾಂಕ:  15-10-2014 ರಂದು ಸಂಜೆ 6-00 ಗಂಟೆಯಿಂದ ದಿ: 16-10-2014 ರಂದು ಬೆಳಿಗ್ಗೆ 8-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬಳ್ಳಾರಿ-ಬೆಂಗಳೂರು ರಸ್ತೆ ಇಂಡಸ್ಟ್ರೀಯಲ್ ಏರಿಯ 2 ನೇ ಹಂತದಲ್ಲಿರುವ ತನ್ನ ಚೈತನ್ಯ ಆಯುರ್ ಫಾರ್ಮಲೇಷನ್ ಪ್ಯಾಕ್ಟರಿಯ ದಕ್ಷಿಣ ಭಾಗದ ಗೋಡೆಯ ಕಿಟಕಿಯನ್ನು ಮುರಿದು ಪ್ಯಾಕ್ಟರಿಯ ಒಳಗೆ ಬಂದು ಪ್ಯಾಕ್ಟರಿಯ ಅಫೀಸ್ ರೂಂನಲ್ಲಿದ್ದ ಅಂದಾಜು ರೂ: 80,000/- ಬೆಲೆಯ ಒಂದು ಕಂಪ್ಯೂಟರ್ ಮಾನಿಟರ್, ಒಂದು ಸಿಪಿಯು, ಒಂದು ಲ್ಯಾಪ್ ಟಾಪ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು  Àಮ್ಮ ವಸ್ತುಗಳನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.


2)      ಪಿ.ಡಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಚೆಳಗುರ್ಕಿ ಗ್ರಾಮದ ಹತ್ತಿರ ಎಪಿಎಸ್ಆರ್ಟಿಸಿ ಬಸ್ ಮತ್ತು ಮೋಟಾರ್ ಸೈಕಲ್ ನಡುವ ರಸ್ತೆ ಅಫಘಾತ, ಮೋಟಾರ್ ಸೈಕಲ್ ಸವಾರನ ಸಾವು, ಒಬ್ಬ ವ್ಯಕ್ತಿಗೆ ಗಾಯ.

        ಫಿರ್ಯಾದಿದಾರರಾದ ಶ್ರೀ. ಜಿ. ಶ್ರೀನಿವಾಸ ತಂದೆ ರಾಮಣ್ಣ, : 43 ವರ್ಷ, ಗೊಲ್ಲರು, ಸಾ: ಉರವಕೊಂಡ ಆಂದ್ರ ಪ್ರದೇಶ್ ಇವರು ಕೊಟ್ಟ ದೂರು ಏನೆಂದರೆ, ದಿ: 24/10/14 ರಂದು ರಂಗಸ್ವಾಮಿ ಮತ್ತು ರಾಮಾಂಜೀನಿಯಲು ರವರು ಮೊ/ಸೈ ನಂ ಎಪಿ-02/ಎಕ್ಯೂ-0856 ರಲ್ಲಿ ಚೆಳ್ಳಗುರ್ಕಿ ಕ್ರಾಸ್ ಹತ್ತಿರ ಹೋಗುವಾಗ ಆರೋಪಿತನಾದ ಬಾಷವಲಿ, ಎನ್. : 54 ವರ್ಷ, ಉರವಕೊಂಡ ಈತನು ತನ್ನ ಎಪಿಎಸ್ಆರ್ಟಿಸಿ ಬಸ್ ನಂ ಎಪಿ-02.ಜಡ್-0241 ನ್ನು ಅತಿವೇಗ ಮತ್ತು ಅಜಾಗ್ರತೆಯಿಂದ ನಡೆಸಿ ಮೊ/ಸೈ ಗೆ ಡಿಕ್ಕಿ ಹೊಡೆಸಿದ ಕಾರಣ ರಂಗಸ್ವಾಮಿ, 30 ವಾ: ಚೆಳ್ಳಗುರ್ಕಿ ಈತನು ಮೃತಪಟ್ಟಿದ್ದು, ರಾಮಾಂಜೀನೇಯಲು ಗೆ ಗಾಯಗಳಾಗಿರುವುದಾಗಿ ಇದ್ದ ದೂರಿನ ಮೇರೆಗೆ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ
      
                                                ಪೊಲೀಸ್ ಸೂಪರಿಂಟೆಂಡೆಂಟ್,    
 ಬಳ್ಳಾರಿ.                     
ಇವರಿಗೆ
ಎಲ್ಲಾ ಪತ್ರಿಕಾ ವರದಿಗಾರರಿಗೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, .ಎಸ್. ಮೊಬೈಲ್ ನಂ. 9845484100 ಹಾಗು             
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.


ಮಂಗಳವಾರ, ಅಕ್ಟೋಬರ್ 21, 2014

Press Note as on 21-10-2014

 f¯Áè ¥ÉÆ°Ã¸ï PÁAiÀÄð®AiÀÄ
                                             §¼Áîj, ¢£ÁAPÀ: 21-10-2014
¥ÀwæPÁ ¥ÀæPÀluÉ

§¼Áîj f¯ÉèAiÀÄ°è ¥ÉÆ°Ã¸ï ºÀÄvÁvÀägÀ ¢£ÁZÀgÀuÉ DZÀj¹zÀ §UÉÎ

         ¢£ÁAPÀ: 21-10-2014 gÀAzÀÄ ¨É½UÉÎ 08-00 UÀAmÉUÉ §¼Áîj f¯Áè ¥ÉÆ°Ã¸ï PÀªÁ¬ÄvÀÄ ªÉÄÊzÁ£ÀzÀ°è ¥ÉÆ°Ã¸ï ºÀÄvÁvÀägÀ ¢£ÁZÀgÀuÉ DZÀj¸À¯Á¬ÄvÀÄ.  ¸ÀzÀj PÁAiÀÄðPÀæªÀÄPÉÌ ²æÃ. ªÉƺÀªÀÄäzï ¸À¯ÁªÀÅ¢Þ£ï, L.J.J¸ï., ªÀÄÄRå PÁAiÀÄ𠤪ÁðºÀPÀ C¢üPÁjUÀ¼ÀÄ, f¯Áè ¥ÀAZÁ¬Äw, §¼Áîj gÀªÀgÀÄ ªÀÄÄRå CwyUÀ¼ÁV DUÀ«Ä¹ ¸ÁägÀPÀPÉÌ ¥ÀĵÀàUÀÄZÀÑ Ej¹ UËgÀ ¸À°è¹zÀgÀÄ. PÁAiÀÄðPÀæªÀÄzÀ°è ¤ªÀÈvÀÛ J.r.f.¦. ²æÃ. PÉ.J. ºÀ¦üÃeï,gÀªÀgÀÄ ºÁUÀÄ §¼Áîj £ÀUÀgÀzÀ £ÁUÀjÃPÀgÀÄ ¨sÁUÀªÀ»¹zÀÝgÀÄ. f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ, ¥Éưøï C¢üPÁjUÀ¼ÀÄ ªÀÄvÀÄÛ ¹§âA¢ ªÀUÀðzÀªÀgÀÄ PÁAiÀÄðPÀæªÀĪÀ£ÀÄß AiÀıÀ¹éAiÀiÁV DZÀj¸À®Ä ¸ÀºÀPÀj¹gÀÄvÁÛgÉ.

§¼Áîj £ÀUÀgÀzÀ ¥sÉÊgï ¸ÉÖõÀ£ï ºÀwÛgÀ EgÀĪÀ «ÃgÀ£ÀUËqÀ PÁ¯ÉÆÃ¤AiÀİè E§âgÀÄ C¥ÀjavÀ ªÀåQÛUÀ¼ÀÄ ªÉÆÃmÁgï ¸ÉÊPÀ¯ï£À°è §AzÀÄ ªÀÄ»¼ÉAiÀÄ PÉÆgÀ¼À §AUÁgÀzÀ ZÉÊ£ï ¸ÀgÀ QvÀÄÛPÉÆAqÀÄ ¥ÀgÁj.
         ¦üAiÀiÁð¢üzÁgÀgÁzÀ ²æÃªÀÄw «£ÉÆÃzÀ PÀÄ®PÀtÂð UÀAqÀ J¯ï.Dgï.PÀÄ®PÀtÂð ªÀ:65 ªÀµÀ, §¼Áîj. gÀªÀgÀÄ oÁuÉUÉ ºÁdgÁV ¤ÃrzÀ zÀÆgÀÄ K£ÉAzÀgÉ, ¢£ÁAPÀ: 20/10/14 gÀAzÀÄ ¨É½UÉÎ 7:20 UÀAmÉUÉ ¦üAiÀiÁð¢zÁgÀgÀÄ ¥sÉÊgï ¸ÉÖõÀ£ï ºÀwÛgÀ EgÀĪÀ PÀĪÀiÁgÀ¸Áé«Ä UÀÄrUÉ ºÉÆÃV ªÀÄ£ÉUÉ ºÉÆÃUÀ®Ä «ÃgÀ£ÀUËqÀ gÀ¸ÉÛAiÀİè CA§jñÀgÀªÀgÀ ªÀÄ£É ªÀÄÄAzÉ ªÀÄgÀzÀ ºÀwÛgÀ ºÉÆÃUÀĪÁUÀ AiÀiÁgÉÆÃ E§âgÀÄ C¥ÀjavÀ ªÀåQÛUÀ¼ÀÄ ¸ÀİUÉ ªÀiÁqÀĪÀ GzÉÝñÀ¢AzÀ ªÉÆÃmÁgï ¸ÉÊPÀ¯ï£À°è §AzÀÄ ¦üAiÀiÁð¢üAiÀÄ »AzÉ §AzÀÄ vÀ½î PÉÆgÀ¼À°zÀÝ ¸ÀĪÀiÁgÀÄ gÀÆ 70,000/- gÀÆ UÀ¼À ¨É¯É ¨Á¼ÀĪÀ §AUÁgÀzÀ ¸ÀgÀªÀ£ÀÄß §®ªÀAvÀ¢AzÀ QvÀÄÛPÉÆAqÀÄ ºÉÆÃVgÀÄvÁÛgÉAzÀÄ zÀÆgÀÄ EzÀÝ ªÉÄÃgÉUÉ P˯ï§eÁgï ¥ÉÆ°Ã¸ï oÁuÉAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÀÛzÉ.
                                                ¥ÉÆ°Ã¸ï ¸ÀÆ¥ÀjAmÉAqÉAmï,                                                                               
                                                         §¼Áîj.                                                                                                                 
EªÀjUÉ,       
J¯Áè ¥ÀwæPÁ ªÀgÀ¢UÁgÀjUÉ


ºÉaÑ£À ªÀiÁ»wUÁV ²æÃ. ªÀĺÀªÀÄäzï UÀAiÀiÁ¸ï, J.J¸ï.L ªÉƨÉÊ¯ï £ÀA. 9845484100 ºÁUÀÄ             f. ¸ÀħæªÀÄtåA, ºÉZï.¹-175, ªÉÆÃ¨ÉÊ¯ï ¸ÀA: 9448202005 gÀªÀgÀ£ÀÄß ¸ÀA¥ÀQð¸À®Ä «£ÀAw.

ಸೋಮವಾರ, ಅಕ್ಟೋಬರ್ 20, 2014

Press Note as on 20-10-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 20-10-2014
ಪತ್ರಿಕಾ ಪ್ರಕಟಣೆ

1) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಠಾಣೆ ಸರಹದ್ದಿನ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ.
      ದಿನಾಂಕ:19/10/2014 ರಂದು ಮಧ್ಯಾಹ್ನ 10-15 ಗಂಟೆಗೆ ಎ.ಪಿ.ಎಂ.ಸಿ. ಯಾಡರ್್ ಠಾಣೆ  ಸರಹದ್ದಿನಲ್ಲಿರುವ ಎಪಿಎಂಸಿ ಯಾಡರ್್ನಲ್ಲಿರುವ ತರಕಾರಿ ಮಾರುಕಟ್ಟೆ ಹಿಂದುಗಡೆ ಇರುವ ಹಮಾಲಿ ಸಂಘದ ರೂಮಿನ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೆಟ್ ಜೂಜಾಟ ನೆಡೆಯುತ್ತದೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅಂದರ್-ಬಾಹರ್ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ್ದ 1].ಸುಧಾಕರ ತಂದೆ ಯರ್ರಿಸ್ವಾಮಿ  2].ನಾಗಪ್ಪ ತಂದೆ ಮಾರೆಪ್ಪ 3].ರಾಜು ತಂದೆ ಆಂಜಿನೇಯ  4].ಕೆ.ಶ್ರೀರಾಮುಲು ತಂದೆ ಕೆ.ಚಿನ್ನ ಸುಂಕಣ್ಣ 5].ಹರಿಶ್ಚಂದ್ರ ತಂದೆ ಅಂಜಿನಪ್ಪ, 6].ವೀರೇಶ ತಂದೆ ಹೊನ್ನೂರಪ್ಪ 7].ಬಿ.ಸುರೇಶ ತಂದೆ ಬಿ.ಈಶ್ವರಯ್ಯ  8].ಆನಂದ ತಂದೆ ಆಂಜಿನೇಯಲು 9].ಕೆ.ಸುಧಾಕರ ತಂದೆ ಬಂಡಯ್ಯ 10].ಉಮಾಪತಿ ತಂದೆ ಹುಲುಗಪ್ಪ, 11].ರಾಮು ತಂದೆ ಲೇಟ್ ಕಿಷ್ಟಪ್ಪ 12].ಹೆಚ್.ಮಲ್ಲಿಕಾಜರ್ುನ ತಾಯಿ ಮಾರೆಕ್ಕ  13].ಎಸ್.ಈರಣ್ಣ ತಂದೆ ಲೇಟ್ ಸುಂಕಣ್ಣ 14].ಪಿ.ರಾಘವೇಂದ್ರ ತಂದೆ ರಾಮಾಂಜಿನೇಯಲು  15].ಶೆಕ್ಷಾವಲಿ ತಂದೆ ಲೇಟ್ ಅಹಮ್ಮದ್ ಹುಸೇನೆ  16].ಎ.ರಾಮು ತಂದೆ ಗೋವಿಂದ 17].ಸಿ.ರವಿ ತಂದೆ ಮಲ್ಲಿಕಾಜರ್ುನ  18].ಎಂ.ಗಾಧಿಲಿಂಗ ತಂದೆ ಹುಲುಗಪ್ಪ 19].ಎಂ.ಕ್ರಿಷ್ಣ ತಂದೆ ರಾಮಾಂಜಿನೇಯಲು 20].ವೈ.ರಾಜೇಶ್ ತಂದೆ ವೈ.ಯರ್ರಿಸ್ವಾಮಿ ಎಲ್ಲರ ವಾಸ: ಬಳ್ಳಾರಿ. ಆರೋಪಿತರನ್ನು ಮತ್ತು 1] ರೂ. 32,290 /- ರೂಗಳು, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಇಟ್ಟಗಿ ಪೊಲೀಸ್ ಠಾಣೆ ಸರಹದ್ದಿನ ಮೊರಗೆರೆ ಗ್ರಾಮದ ಹತ್ತಿ ಟ್ರಾಕ್ಟ್ರ್ ರಸ್ತೆ ಅಫಘಾತ  ಒಬ್ಬ ವ್ಯಕ್ತಿಯ ಸಾವು ನ3 ಜನರಿಗೆ ಗಾಯ.
        ದಿನಾಂಕ 19-10-14 ರಂದು ಹೊಳಗುಂದಿ ಗ್ರಾಮದ ಜಿ. ಈಶ್ವರಗೌಡ ತಂದೆ ರುದ್ರಗೌಡರವರು ಕಳಿಸಿದ ಕೆಂಪು ಬಣ್ಣದ ಮಹೀಂದ್ರ ಕಂಪನಿಯ ಇಂಜಿನ್ ಮತ್ತು ಟ್ರಾಲಿ ( ನಂಬರ್ ಬರೆಸಿರುವುದಿಲ್ಲ ) ಯಲ್ಲಿ ಹಮಾಲಿಗಳಾದ ಫಿಯರ್ಾದಿ ಹರಪನಹಳ್ಳಿ ಹನುಮಂತಪ್ಪ, ಬಡಪ್ನರ ಅಂಜಿನೆಪ್ಪ ಮತ್ತು ಲಕ್ಷ್ಮಪ್ಪ ಮೂವರೂ ಸೇರಿ ಚಾಲಕನಾದ ಕುಣಿಕೆರೆ ರವಿ ಕುಮಾರ ರವರ ಜೊತೆಗೆ ಟ್ರ್ಯಾಕ್ಟರ್ ಮಾಲಿಕನ ಸಂಬಂದಿಯಾದ ಮೋರಿಗೆರಿ ಗ್ರಾಮದ ವಿರುಪಾಕ್ಷಗೌಡನವರ ಹೊಲದಲ್ಲಿಯ ಶೇಂಗಾ ಚೀಲಗಳನ್ನು, ಅವರ ಕಣಕ್ಕೆ ಇಳಿಸಿ, ಮೋರಿಗೆರೆಯಿಂದ ಹೊಳಗುಂದಿಗೆ ವಾಪಸ್ಸಾಗುತ್ತಿದ್ದಾಗ ಮೋರಿಗೆರೆ-ಹೊಳಗುಂದಿ ಟಾರ್ ರಸ್ತೆಯಲ್ಲಿ, ಮೋರಿಗೆರಿಯಿಂದ ಅಂದಾಜು 1 ಕಿ.ಮೀ ದೂರದಲ್ಲಿಯ ನೀಲನಗೌಡ್ರ ನಿಂಗನಗೌಡ ರವರ ಹೊಲದ ಹತ್ತಿರದ ತಿರುವಿನ ಟಾರ್ ರಸ್ತೆಯಲ್ಲಿ ಮೇಲ್ಕಂಡ ಟ್ರ್ಯಾಕ್ಟರನ್ನು ಚಾಲಕನಾದ ಕುಣಿಕೆರೆ ರವಿ ಕುಮಾರನು ಅತಿಜೋರಾಗಿ ಮತ್ತು ಅಜಾಗರೂಕತೆಯಿಂದ ನೆಡೆಸುತ್ತಾ ಟಾರ್ ರಸ್ತೆಯ ಎಡ ಭಾಗದಲ್ಲಿಯ ಅಂದಾಜು 5 ಅಡಿ ಆಳದ ತೆಗ್ಗಿಗೆ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಚಲಾಯಿಸಿದ್ದರಿಂದ, ಘಟನಾ ಸ್ಥಳದಿಂದ ತೆಗ್ಗಿನಲ್ಲಿ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಹಿಗ್ಗಾ ಮುಗ್ಗಾ ಜಂಪಾಗಿ ಸ್ವಲ್ಪ ದೂರದಲ್ಲಿ ಹೋಗುತ್ತಿರುವಾಗ ಇಂಜಿನ್ನ ಎಡ ಬಾಗದ ಹಿಂದಿನ ಗಾಲಿಯ ಮೇಲಿನ ಮಡ್ಗಾಡರ್್ನ ಮೇಲೆ ಕುಳಿತಿದ್ದ ಬಡಪ್ನರ ಅಂಜಿನೆಪ್ಪನು ಮುಗ್ಗರಿಸಿ ಮುಂದಕ್ಕೆ ಬಿದ್ದ ಕೂಡಲೇ ಇಂಜಿನ್ನ ಎಡ ಬಾಗದ ಹಿಂದಿನ ಗಾಲಿಯು ಆತನ ಮೇಲೆ ಹತ್ತಿ ಇಳಿದಿದ್ದು, ಉಳಿದಂತೆ ಟ್ರ್ಯಾಕ್ಟರಿನ ಚಾಲಕ ಹಾಗೂ ಇಂಜಿನ್ನ ಬಲ ಬಾಗದ ಹಿಂದಿನ ಗಾಲಿಯ ಮೇಲಿನ ಮಡ್ಗಾಡರ್್ನ ಮೇಲೆ ಕುಳಿತಿದ್ದ ಲಕ್ಷ್ಮಪ್ಪನವರೂ ಸಹಾ ಮುಗ್ಗರಿಸಿಕೊಂಡು ಟ್ರ್ಯಾಕ್ಟರಿನ ಬಲಭಾಗದಲ್ಲಿ ಬಿದ್ದಿದ್ದು, ಅವರಿಗೆ ಸಹಾ ಟ್ರ್ಯಾಕ್ಟರ್ ತಾಗಿ ತಲೆಗೆ, ಮೈ-ಕೈಗಳ ಮೇಲೆ ರಕ್ತಗಾಯಗಳಾಗಿದ್ದು, ಟ್ರ್ಯಾಲಿಯಲ್ಲಿದ್ದ ಫಿಯರ್ಾದಿಗೆ ಟ್ರ್ಯಾಲಿಯ ಬಾಡಿ ಬಡಿದು ಎಡಗಾಲಿನ ಪಾದದಿಂದ ಸ್ವಲ್ಪ ಮೇಲೆ ಒಳಟ್ಟಾಗಿದ್ದು. ಕೂಡಲೇ ಫಿಯರ್ಾದಿ ಹಾಗೂ ಗಾಯಗೊಂಡಿದ್ದ ಲಕ್ಷ್ಮಪ್ಪ ಮತ್ತು ಚಾಲಕ ಕುಣಿಕೆರೆ ರವಿ ಕುಮಾರ ಮತ್ತು ಅಲ್ಲಿಯೇ ರಸ್ತೆಯಲ್ಲಿ ಬರುತ್ತಿದ್ದ ಭಾವಿ ವಿಜಯಾನಂದ ತಂದೆ ನಿಂಗಪ್ಪ ರವರು ಸೇರಿ ಟ್ರ್ಯಾಕ್ಟರ್ನ ಇಂಜಿನ್ ಮತ್ತು ಟ್ರ್ಯಾಲಿಯ ಮಧ್ಯ ನರಳುತ್ತಾ ಬಿದ್ದಿದ್ದ ಬಡಪ್ನರ ಅಂಜಿನೆಪ್ಪ, 30 ವರ್ಷ ಈತನನ್ನು ಹೊರ ತೆಗೆದು ಉಪಚರಿಸುವಷ್ಟರಲ್ಲಿ 5-00 ಪಿ.ಎಂ ಸುಮಾರಿಗೆ ಮೃತಪಟ್ಟಿರುತ್ತಾನೆಂದು ಇದ್ದ ದೂರಿನ ಮೇರೆಗೆ ಇಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                                  ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.

ಶುಕ್ರವಾರ, ಅಕ್ಟೋಬರ್ 17, 2014

PRESS NOTE AS ON 17-10-2014



                                             ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 17-10-2014

ಪತ್ರಿಕಾ ಪ್ರಕಟಣೆ

1) ಬಳ್ಳಾರಿ ನಗರ ಗಾಂಧಿನಗರ ಠಾಣೆ ಸರಹದ್ದಿನ ಬಾಲಾ ರಿಜೆನ್ಸಿ ಲಾಡ್ಜ್ನ ರೂಂ. ನಂ. 303 ರಲ್ಲಿ ನಡೆಯುತ್ತಿದ್ದ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿತರ ಬಂಧನ.

         ಶ್ರೀ ಪ್ರಸಾದ್ ಗೋಕುಲೆ, ಪಿ ಐ. ಡಿಸಿಆರ್ಬಿ ಬಳ್ಳಾರಿ ರವರಿಗೆ ದಿನಾಂಕ; 16-10-2014 ರಂದು ರಾತ್ರಿ 10-00 ಗಂಟೆಗೆ ಬಳ್ಳಾರಿ ನಗರದ ಪಾರ್ವತಿ ನಗರ ಮುಖ್ಯ ರಸ್ತೆಯಲ್ಲಿರುವ ಬಾಲಾ ರಜೆನ್ಸಿರ ರೂಮ್ ನಂ.303 ರಲ್ಲಿ ಅಂದರ್-ಬಾಹರ್ ಎನ್ನುವ ನಸೀಬಿನಾ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬಂದ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ರವರು ಡಿ,ವೈ,ಎಸ್,ಪಿ ಬಳ್ಳಾರಿ ನಗರ ಉಪವಿಭಾಗ ರವರು ಹಾಗು  ಸಿಬ್ಬಂದಿಯೊಂದಿಗೆ ರಾತ್ರಿ 10-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ಆರೋಪಿತರಾದ 1) ಪಾಂಡುರಂಗ 2) ಶರಣಬಸವ. 3) ವಿಜಯ್ ಕುರುಬ್, 4) ಪನಿ ಭೂಷಣ್. 5) ಕೆ ಟಿ ಕುಮಾರ್/ ಕಮ್ಮಾ.  6) ಬಿ ಪುರುಷೋತ್ತಮ. 7) ಡಿ ನಾಗರಾಜ. 8) ಕೃಷ್ಣಬಾಬು. 9) ಶಿವಪ್ರಸಾದ್. 10) ಶ್ರೀಕಾಂತ್. 11) ಸೋಮಶೇಖರ್ ರೆಡ್ಡಿ, 12) ಜಿ ಗಿರಿಯಪ್ಪ. 13) ರಾಜು ಎಸ್. 14) ರವಿಕುಮಾರ್ ಇವರನ್ನು ಹಿಡಿದು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು ನಗದು ಹಣ ರೂ. 81,900/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತು ಮಾಡಿಕೊಂಡಿದ್ದು, ಈ ಬಗ್ಗೆ ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

                                                                             ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                      ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.