ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 20-10-2014
ಪತ್ರಿಕಾ ಪ್ರಕಟಣೆ
1) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಠಾಣೆ ಸರಹದ್ದಿನ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ.
ದಿನಾಂಕ:19/10/2014 ರಂದು ಮಧ್ಯಾಹ್ನ 10-15 ಗಂಟೆಗೆ ಎ.ಪಿ.ಎಂ.ಸಿ. ಯಾಡರ್್ ಠಾಣೆ ಸರಹದ್ದಿನಲ್ಲಿರುವ ಎಪಿಎಂಸಿ ಯಾಡರ್್ನಲ್ಲಿರುವ ತರಕಾರಿ ಮಾರುಕಟ್ಟೆ ಹಿಂದುಗಡೆ ಇರುವ ಹಮಾಲಿ ಸಂಘದ ರೂಮಿನ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೆಟ್ ಜೂಜಾಟ ನೆಡೆಯುತ್ತದೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅಂದರ್-ಬಾಹರ್ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ್ದ 1].ಸುಧಾಕರ ತಂದೆ ಯರ್ರಿಸ್ವಾಮಿ 2].ನಾಗಪ್ಪ ತಂದೆ ಮಾರೆಪ್ಪ 3].ರಾಜು ತಂದೆ ಆಂಜಿನೇಯ 4].ಕೆ.ಶ್ರೀರಾಮುಲು ತಂದೆ ಕೆ.ಚಿನ್ನ ಸುಂಕಣ್ಣ 5].ಹರಿಶ್ಚಂದ್ರ ತಂದೆ ಅಂಜಿನಪ್ಪ, 6].ವೀರೇಶ ತಂದೆ ಹೊನ್ನೂರಪ್ಪ 7].ಬಿ.ಸುರೇಶ ತಂದೆ ಬಿ.ಈಶ್ವರಯ್ಯ 8].ಆನಂದ ತಂದೆ ಆಂಜಿನೇಯಲು 9].ಕೆ.ಸುಧಾಕರ ತಂದೆ ಬಂಡಯ್ಯ 10].ಉಮಾಪತಿ ತಂದೆ ಹುಲುಗಪ್ಪ, 11].ರಾಮು ತಂದೆ ಲೇಟ್ ಕಿಷ್ಟಪ್ಪ 12].ಹೆಚ್.ಮಲ್ಲಿಕಾಜರ್ುನ ತಾಯಿ ಮಾರೆಕ್ಕ 13].ಎಸ್.ಈರಣ್ಣ ತಂದೆ ಲೇಟ್ ಸುಂಕಣ್ಣ 14].ಪಿ.ರಾಘವೇಂದ್ರ ತಂದೆ ರಾಮಾಂಜಿನೇಯಲು 15].ಶೆಕ್ಷಾವಲಿ ತಂದೆ ಲೇಟ್ ಅಹಮ್ಮದ್ ಹುಸೇನೆ 16].ಎ.ರಾಮು ತಂದೆ ಗೋವಿಂದ 17].ಸಿ.ರವಿ ತಂದೆ ಮಲ್ಲಿಕಾಜರ್ುನ 18].ಎಂ.ಗಾಧಿಲಿಂಗ ತಂದೆ ಹುಲುಗಪ್ಪ 19].ಎಂ.ಕ್ರಿಷ್ಣ ತಂದೆ ರಾಮಾಂಜಿನೇಯಲು 20].ವೈ.ರಾಜೇಶ್ ತಂದೆ ವೈ.ಯರ್ರಿಸ್ವಾಮಿ ಎಲ್ಲರ ವಾಸ: ಬಳ್ಳಾರಿ. ಆರೋಪಿತರನ್ನು ಮತ್ತು 1] ರೂ. 32,290 /- ರೂಗಳು, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಇಟ್ಟಗಿ ಪೊಲೀಸ್ ಠಾಣೆ ಸರಹದ್ದಿನ ಮೊರಗೆರೆ ಗ್ರಾಮದ ಹತ್ತಿ ಟ್ರಾಕ್ಟ್ರ್ ರಸ್ತೆ ಅಫಘಾತ ಒಬ್ಬ ವ್ಯಕ್ತಿಯ ಸಾವು ನ3 ಜನರಿಗೆ ಗಾಯ.
ದಿನಾಂಕ 19-10-14 ರಂದು ಹೊಳಗುಂದಿ ಗ್ರಾಮದ ಜಿ. ಈಶ್ವರಗೌಡ ತಂದೆ ರುದ್ರಗೌಡರವರು ಕಳಿಸಿದ ಕೆಂಪು ಬಣ್ಣದ ಮಹೀಂದ್ರ ಕಂಪನಿಯ ಇಂಜಿನ್ ಮತ್ತು ಟ್ರಾಲಿ ( ನಂಬರ್ ಬರೆಸಿರುವುದಿಲ್ಲ ) ಯಲ್ಲಿ ಹಮಾಲಿಗಳಾದ ಫಿಯರ್ಾದಿ ಹರಪನಹಳ್ಳಿ ಹನುಮಂತಪ್ಪ, ಬಡಪ್ನರ ಅಂಜಿನೆಪ್ಪ ಮತ್ತು ಲಕ್ಷ್ಮಪ್ಪ ಮೂವರೂ ಸೇರಿ ಚಾಲಕನಾದ ಕುಣಿಕೆರೆ ರವಿ ಕುಮಾರ ರವರ ಜೊತೆಗೆ ಟ್ರ್ಯಾಕ್ಟರ್ ಮಾಲಿಕನ ಸಂಬಂದಿಯಾದ ಮೋರಿಗೆರಿ ಗ್ರಾಮದ ವಿರುಪಾಕ್ಷಗೌಡನವರ ಹೊಲದಲ್ಲಿಯ ಶೇಂಗಾ ಚೀಲಗಳನ್ನು, ಅವರ ಕಣಕ್ಕೆ ಇಳಿಸಿ, ಮೋರಿಗೆರೆಯಿಂದ ಹೊಳಗುಂದಿಗೆ ವಾಪಸ್ಸಾಗುತ್ತಿದ್ದಾಗ ಮೋರಿಗೆರೆ-ಹೊಳಗುಂದಿ ಟಾರ್ ರಸ್ತೆಯಲ್ಲಿ, ಮೋರಿಗೆರಿಯಿಂದ ಅಂದಾಜು 1 ಕಿ.ಮೀ ದೂರದಲ್ಲಿಯ ನೀಲನಗೌಡ್ರ ನಿಂಗನಗೌಡ ರವರ ಹೊಲದ ಹತ್ತಿರದ ತಿರುವಿನ ಟಾರ್ ರಸ್ತೆಯಲ್ಲಿ ಮೇಲ್ಕಂಡ ಟ್ರ್ಯಾಕ್ಟರನ್ನು ಚಾಲಕನಾದ ಕುಣಿಕೆರೆ ರವಿ ಕುಮಾರನು ಅತಿಜೋರಾಗಿ ಮತ್ತು ಅಜಾಗರೂಕತೆಯಿಂದ ನೆಡೆಸುತ್ತಾ ಟಾರ್ ರಸ್ತೆಯ ಎಡ ಭಾಗದಲ್ಲಿಯ ಅಂದಾಜು 5 ಅಡಿ ಆಳದ ತೆಗ್ಗಿಗೆ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಚಲಾಯಿಸಿದ್ದರಿಂದ, ಘಟನಾ ಸ್ಥಳದಿಂದ ತೆಗ್ಗಿನಲ್ಲಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಹಿಗ್ಗಾ ಮುಗ್ಗಾ ಜಂಪಾಗಿ ಸ್ವಲ್ಪ ದೂರದಲ್ಲಿ ಹೋಗುತ್ತಿರುವಾಗ ಇಂಜಿನ್ನ ಎಡ ಬಾಗದ ಹಿಂದಿನ ಗಾಲಿಯ ಮೇಲಿನ ಮಡ್ಗಾಡರ್್ನ ಮೇಲೆ ಕುಳಿತಿದ್ದ ಬಡಪ್ನರ ಅಂಜಿನೆಪ್ಪನು ಮುಗ್ಗರಿಸಿ ಮುಂದಕ್ಕೆ ಬಿದ್ದ ಕೂಡಲೇ ಇಂಜಿನ್ನ ಎಡ ಬಾಗದ ಹಿಂದಿನ ಗಾಲಿಯು ಆತನ ಮೇಲೆ ಹತ್ತಿ ಇಳಿದಿದ್ದು, ಉಳಿದಂತೆ ಟ್ರ್ಯಾಕ್ಟರಿನ ಚಾಲಕ ಹಾಗೂ ಇಂಜಿನ್ನ ಬಲ ಬಾಗದ ಹಿಂದಿನ ಗಾಲಿಯ ಮೇಲಿನ ಮಡ್ಗಾಡರ್್ನ ಮೇಲೆ ಕುಳಿತಿದ್ದ ಲಕ್ಷ್ಮಪ್ಪನವರೂ ಸಹಾ ಮುಗ್ಗರಿಸಿಕೊಂಡು ಟ್ರ್ಯಾಕ್ಟರಿನ ಬಲಭಾಗದಲ್ಲಿ ಬಿದ್ದಿದ್ದು, ಅವರಿಗೆ ಸಹಾ ಟ್ರ್ಯಾಕ್ಟರ್ ತಾಗಿ ತಲೆಗೆ, ಮೈ-ಕೈಗಳ ಮೇಲೆ ರಕ್ತಗಾಯಗಳಾಗಿದ್ದು, ಟ್ರ್ಯಾಲಿಯಲ್ಲಿದ್ದ ಫಿಯರ್ಾದಿಗೆ ಟ್ರ್ಯಾಲಿಯ ಬಾಡಿ ಬಡಿದು ಎಡಗಾಲಿನ ಪಾದದಿಂದ ಸ್ವಲ್ಪ ಮೇಲೆ ಒಳಟ್ಟಾಗಿದ್ದು. ಕೂಡಲೇ ಫಿಯರ್ಾದಿ ಹಾಗೂ ಗಾಯಗೊಂಡಿದ್ದ ಲಕ್ಷ್ಮಪ್ಪ ಮತ್ತು ಚಾಲಕ ಕುಣಿಕೆರೆ ರವಿ ಕುಮಾರ ಮತ್ತು ಅಲ್ಲಿಯೇ ರಸ್ತೆಯಲ್ಲಿ ಬರುತ್ತಿದ್ದ ಭಾವಿ ವಿಜಯಾನಂದ ತಂದೆ ನಿಂಗಪ್ಪ ರವರು ಸೇರಿ ಟ್ರ್ಯಾಕ್ಟರ್ನ ಇಂಜಿನ್ ಮತ್ತು ಟ್ರ್ಯಾಲಿಯ ಮಧ್ಯ ನರಳುತ್ತಾ ಬಿದ್ದಿದ್ದ ಬಡಪ್ನರ ಅಂಜಿನೆಪ್ಪ, 30 ವರ್ಷ ಈತನನ್ನು ಹೊರ ತೆಗೆದು ಉಪಚರಿಸುವಷ್ಟರಲ್ಲಿ 5-00 ಪಿ.ಎಂ ಸುಮಾರಿಗೆ ಮೃತಪಟ್ಟಿರುತ್ತಾನೆಂದು ಇದ್ದ ದೂರಿನ ಮೇರೆಗೆ ಇಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.