ಬುಧವಾರ, ಜನವರಿ 21, 2015

BALLARI DISTRICT PRESS NOTE AS ON 21-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿದಿನಾಂಕ: 21-01-2015

ಪತ್ರಿಕಾ ಪ್ರಕಟಣೆ

1)            ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದಿನ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಅಕ್ರಮ ಸಂಬಂಧದಹಿನ್ನೆಲೆಯಲ್ಲಿ ಯುವಕನ ಕೊಲೆ ಒಬ್ಬ ಮಹಿಳೆಗೆ ಗಾಯ.
 
         ದಿನಾಂಕ 21/01/2015 ರಂದು ಬೆಳಗಿನ ಜಾವ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಯಶೋದಮ್ಮಗಂಡ ರಾಂಪುರ ಬಸವರಾಜ : 30 ವರ್ಷವಾಲ್ಮೀಕಿ ಜನಾಂಗಕೂಲಿ ಕೆಲಸವಾಸ: 2 ನೇ ವಾರ್ಡ್,  ಮ್ಯಾಗಳಗೇರಿಎತ್ತಿನಬೂದಿಹಾಳ್  ಗ್ರಾಮ,  ಬಳ್ಳಾರಿ ತಾಲ್ಲೂಕು ರವರು ದೂರು ನೀಡಿದ್ದೇನೆಂದರೆತನ್ನ ಗಂಡ ರಾಂಪುರ ಬಸವರಾಜ ತಂದೆಲೇಟ್ ಕೆಂಚಪ್ಪ : 35 ವರ್ಷವಾಲ್ಮೀಕಿ ಜನಾಂಗ,  ಕೂಲಿ ಕೆಲಸ,  ವಾಸಎತ್ತಿನಬೂದಿಹಾಳ್  ಗ್ರಾಮ  ಇವರು ತಮ್ಮ ಗ್ರಾಮದ ಗೊರ್ಲ ಅಂಜಿನೇಯನ ಮಗಳು ಜಯಮ್ಮಳ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ದ್ವೇಷದಿಂದ ದಿನಾಂಕ 20/01/2015 ರಂದು ರಾತ್ರಿ 9-00 ಗಂಟೆಗೆ ಗೊರ್ಲ ಅಂಜಿನೇಯ,  ಗೊರ್ಲ  ಅಂಜಿನೇಯನ ಮಗ ಗೊರ್ಲಬಸಯ್ಯಗೊರ್ಲ ಬಸವರಾಜಗೊರ್ಲ ಬಸವರಾಜನ ಹೆಂಡತಿ ಜಯಮ್ಮ ರವರು ಕೊಲೆ ಮಾಡುವ ಉದ್ದೇಶದಿಂದ ತಮ್ಮಮನೆಯಲ್ಲಿ ಆಕ್ರಮ ಪ್ರವೇಶ ಮಾಡಿಯಾವುದೇ ರೀತಿಯ ಮಾತನಾಡದೇ ಏಕಾಏಕಿ ತನ್ನ ಗಂಡನಿಗೆ ಮಾರಕಾಸ್ತ್ರಗಳಿಂದಹೊಡೆದು ಕೊಲೆ ಮಾಡಿಜಯಮ್ಮಳ ಮೇಲೆ ಕೊಲೆ ಪ್ರಯತ್ನ ಮಾಡಿಬಿಡಿಸಲು ಹೋದ ತನಗೆ  ಪ್ರಾಣ  ಬೆದರಿಕೆಹಾಕಿರುತ್ತಾರೆಂದು ತನ್ನ  ಮನೆಯ ಬಾಗಿಲಿಗೆ ಕೊಡ್ಲಿಯಿಂದ ಹೊಡೆದು ಜಖಂ ಮಾಡಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆದಿದೆ.

                                                ಪೊಲೀಸ್ ಸೂಪರಿಂಟೆಂಡೆಂಟ್,   
                                                                                                                                                                                     ಬಳ್ಳಾರಿ.                                                                                                               
ಇವರಿಗೆ,      
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀಮಹಮ್ಮದ್ ಗಯಾಸ್.ಎಸ್. ಮೊಬೈಲ್ ನಂ. 9845484100 ಹಾಗು                           ಜಿಸುಬ್ರಮಣ್ಯಂಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಮಂಗಳವಾರ, ಜನವರಿ 20, 2015

PRESS NOTE AS ON 21-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 21-01-2015

ಪತ್ರಿಕಾ ಪ್ರಕಟಣೆ

1)            ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದಿನ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಯುವಕನ ಕೊಲೆ ಒಬ್ಬ ಮಹಿಳೆಗೆ ಗಾಯ.
 
         ದಿನಾಂಕ 21/01/2015 ರಂದು ಬೆಳಗಿನ ಜಾವ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಯಶೋದಮ್ಮ ಗಂಡ ರಾಂಪುರ ಬಸವರಾಜ : 30 ವರ್ಷ, ವಾಲ್ಮೀಕಿ ಜನಾಂಗ, ಕೂಲಿ ಕೆಲಸ, ವಾಸ: 2 ನೇ ವಾರ್ಡ್, ಮ್ಯಾಗಳಗೇರಿ, ಎತ್ತಿನಬೂದಿಹಾಳ್ ಗ್ರಾಮ, ಬಳ್ಳಾರಿ ತಾಲ್ಲೂಕು ರವರು ದೂರು ನೀಡಿದ್ದೇನೆಂದರೆ, ತನ್ನ ಗಂಡ ರಾಂಪುರ ಬಸವರಾಜ ತಂದೆ ಲೇಟ್ ಕೆಂಚಪ್ಪ : 35 ವರ್ಷ, ವಾಲ್ಮೀಕಿ ಜನಾಂಗ, ಕೂಲಿ ಕೆಲಸ, ವಾಸ: ಎತ್ತಿನಬೂದಿಹಾಳ್ ಗ್ರಾಮ ಇವರು ತಮ್ಮ ಗ್ರಾಮದ ಗೊರ್ಲ ಅಂಜಿನೇಯನ ಮಗಳು ಜಯಮ್ಮಳ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ದ್ವೇಷದಿಂದ ದಿನಾಂಕ 20/01/2015 ರಂದು ರಾತ್ರಿ 9-00 ಗಂಟೆಗೆ ಗೊರ್ಲ ಅಂಜಿನೇಯ, ಗೊರ್ಲ ಅಂಜಿನೇಯನ ಮಗ ಗೊರ್ಲ ಬಸಯ್ಯ, ಗೊರ್ಲ ಬಸವರಾಜ, ಗೊರ್ಲ ಬಸವರಾಜನ ಹೆಂಡತಿ ಜಯಮ್ಮ ರವರು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ, ಯಾವುದೇ ರೀತಿಯ ಮಾತನಾಡದೇ ಏಕಾಏಕಿ ತನ್ನ ಗಂಡನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ, ಜಯಮ್ಮಳ ಮೇಲೆ ಕೊಲೆ ಪ್ರಯತ್ನ ಮಾಡಿ, ಬಿಡಿಸಲು ಹೋದ ತನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ತನ್ನ ಮನೆಯ ಬಾಗಿಲಿಗೆ ಕೊಡ್ಲಿಯಿಂದ ಹೊಡೆದು ಜಖಂ ಮಾಡಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆದಿದೆ.

                                                ಪೊಲೀಸ್ ಸೂಪರಿಂಟೆಂಡೆಂಟ್,   
                                                                                                                               ಬಳ್ಳಾರಿ.                                                                                                                 
ಇವರಿಗೆ,      
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, .ಎಸ್. ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ಜನವರಿ 18, 2015

PRESS NOTE AS ON 19-01-2015


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 19-01-2015

ಪತ್ರಿಕಾ ಪ್ರಕಟಣೆ 

1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಕಂಪ್ಲಿ-ಕುರುಗೋಡು ರಸ್ತೆಯ ಗುರುಸಿದ್ದನಗೌಡರ ಹೊಲದ ಹತ್ತಿರ ಆಟೋ ಮತ್ತು ಮೋಟಾರ್ ಸೈಕಲ್ ನಡುವೆ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು. 
       
       ಫಿರ್ಯಾದಿದಾರರಾದ ಶ್ರೀ. ಕುಮಾರಸ್ವಾಮಿ, 38 ವರ್ಷ, ವಾ: ಕುರುಗೋಡು ರವರು ದೂರು ನೀಡಿದ್ದೇನೆಂದರೆ, ದಿ: 17/01/2015 ರಂದು ಮಧ್ಯಾಹ್ನ 03:30 ಗಂಟೆಗೆ ನನ್ನ ಬಾಮೈನಾದ ಶ್ರೀ.ಶರಣಪ್ಪ, 33 ವರ್ಷ, ವಾ:ರಾಮನಗರ, ಬಳ್ಳಾರಿ ಈತನು ತನ್ನ ಟಿವಿಎಸ್ ಮೋಟರ್ ಸೈಕಲ್ ನಂಬರ್ ಕೆ.ಎ.34/ಎಕ್ಸ್.5637 ರಲ್ಲಿ ಕಂಪ್ಲಿ-ಕುರುಗೋಡು ರಸ್ತೆಯಲ್ಲಿ ಗುರುಸಿಧ್ದನಗೌಡನ ಹೊಲದ ಬಳಿ ಬರುತ್ತಿದ್ದಾಗ ಕುರುಗೋಡು ಕಡೆಯಿಂದ ಆಟೋ ನಂಬರ್ ಕೆ.ಎ.34/ಎ.5495 ನೇದ್ದನ್ನು ಅದರ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಶರಣಪ್ಪನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಶರಣಪ್ಪನಿಗೆ ಎಡಗಾಲು, ಎಡಗೈಗೆ ತೆಲೆಗೆ  ಭಾರೀಗಾಯವಾಗಿದ್ದು, ನಂತರ ಶರಣಪ್ಪನನ್ನು ಚಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾದಗೆ ರಾತ್ರಿ 10:15 ಗಂಟೆಗೆ ಶರಣಪ್ಪನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ಆಟೋ ಚಲಕ ಅಪಘಾತ ಮಾಡಿ ಪರಾರಿಯಾಗಿರುತ್ತಾನೆ. ಕಾರಣ ಅಪಘಾತ ಮಾಡಿ ಪರಾರಿಯಾದ ಅಟೋ ಚಾಲಕನ ವಿರುಧ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ದೂರಿನ ಮೇರೆಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಹೊಸಪೇಟೆ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಬಳ್ಳಾರಿ ರಸ್ತೆಯ ಎನ್.ಹೆಚ್.-63 ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ರಸ್ತೆಯ ಪಕ್ಕದಲ್ಲಿ ನಿಂತಿದ್ದ ವೃದ್ದ ಮಹಿಳೆಗೆ ಡಿಕ್ಕಿ ಮಹಿಳೆಯು ಸ್ಥಳದಲ್ಲೇ ಸಾವು. 

       ಫಿರ್ಯಾದಿದಾರರಾ ಮಹಬ್ಭಾಷ, 35 ವರ್ಷ, ವಾ: ಹೊಸಪೇಟೆ ಇವರು ದೂರು ನೀಡಿದ್ದೇನೆಂದರೆ, ದಿನಾಂಕ: 18-01-2015 ರಂದು ರಾತ್ರಿ 8-00 ಗಂಟೆಗೆ ಹೊಸಪೇಟೆ ಪಟ್ಟಣದ ಎನ್.ಹೆಚ್.-63 ರಸ್ತೆಯಲ್ಲಿನ ಬಳ್ಳಾರಿ ರಸ್ತೆ ಸರ್ಕಲ್‍ನ ತಾರ್ ರಸ್ತೆಯ ಮೇಲೆ ಫಿರ್ಯಾದಿ ಮತ್ತು ಆತನ ತಾಯಿಯಾದ ಗೂಡುಮಾಬಿ, 68 ವರ್ಷ, ವಾ: ಹೊಸಪೇಟೆ ಇವರು ಕೂಡಿ ಇಬ್ಬರೂ ಸಿರಸನಕಲ್ಲಿನಿಂದ ಆಟೋದಲ್ಲಿ ಬಂದು ಸರ್ಕಲ್‍ನಲ್ಲಿ ಇಳಿದು ನಿಂತುಕೊಂಡಿದ್ದಾಗ ಅದೇ ವೇಳೆಗೆ ಬಳ್ಳರಿ ಕಡೆಯಿಂದ ಹೊಸಪೇಟೆ ಡಿಪೋ ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-37 ಎಫ್. 409 ನೇದ್ದನ್ನು ಅದರ ಡ್ರೈವರನು ಅತಿವೇಗ ಹಾಗು ನಿರ್ಲಕ್ಷಣದಿಂದ ಚಲಾಯಿಸಿಕೊಂಡು ಬರುತ್ತಾ ಏಕಾಏಕಿ ರಸ್ತೆಯ ಮೇಲೆ ನಿಂತಿದ್ದ ಫಿರ್ಯದಿ ತಾಯಿಗೆ ಡಿಕ್ಕಿ ಹೊಡೆಸಿ ಅಫಘಾತ ಮಾಡಿ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದು, ಸದರಿ ಅಫಘಾತದಿಂ ಗಾಯಗೊಮಡ ಗೂಡುಮಾಬಿಯು ಸ್ಥಳದಲ್ಲೇ ಮೃತಪಟ್ಟಿದ್ದು, ಸದರಿ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

3) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಗೌತಮ್‍ನಗರ, ಬಳ್ಳಾರಿಯಿಂದ 22 ವರ್ಷ, ಮಹಿಳೆ ಕಾಣೆಯಾದ ಬಗ್ಗೆ. 

       ದಿನಾಂಕ: 18-1-2015 ರಂದು ರಾತ್ರಿ 8-45 ಗಂಟೆಗೆ ಶ್ರೀ. ಕೆ. ನಾಗೇಶ್, ವಾಸ: ಗೌತಮ್ ನಗರ, ಬಳ್ಳಾರಿ ರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ದಿನಾಂಕ: 17-1-2015 ರಂದು ಸಂಜೆ 5-30 ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಗೌತಮ್ ನಗರದಲ್ಲಿರುವ ತನ್ನ ಮನೆಯಿಂದ ತನ್ನ ಹೆಂಡತಿ ಶ್ರೀಮತಿ. ಬಿ. ಆಶ್ವಿನಿ, 22 ವರ್ಷ, ಇವರು ಕಸಪೊರಕೆ ತರುತ್ತೇನೆಂದು ತನ್ನ ಮನೆಯ ಪಕ್ಕದ ವಾಸಿ ಶ್ರೀಮತಿ. ರೇಣುಕರವರಿಗೆ ಹೇಳಿ ತನ್ನ ಮಕ್ಕಳನ್ನು ಅವರ ಮನೆಯ ಮುಂದೆ ಬಿಟ್ಟು ಹೋದವಳು ಬಂದಿಲ್ಲವೆಂದು ತನ್ನ ಹೆಂಡತಿಯು ಹೊಸಪೇಟೆಯಲ್ಲಿರುವ ಅವಳ ತಂಗಿ ಕು: ಚೈತ್ರಾಳ ಪೋನ್‍ಗೆ ಕರೆ ಮಾಡಿ ತಾಯಿಗೆ ಮಾತನಾಡಬೇಕು ಎಂದು ಹೇಳಿ ಪೋನ್ ಕಟ್ ಮಾಡಿದ್ದು ತನ್ನ ಹೆಂಡತಿಯ ತಾಯಿಯು ಪುನ: ತನ್ನ ಹೆಂಡತಿಗೆ ಪೋನ್ ಮಾಡಿದಾಗ ಪೋನ್ ಸ್ವೀಚ್ ಅಫ್ ಬಂದಿರುತ್ತದೆಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ಕೋರಿದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.


4) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಠಾಣೆ ಸರಹದ್ದಿನ  ಅಂದ್ರಾಳ್ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ನಗದು ಹಣ ವಶ ಆರೋಪಿತರ ಬಂಧನ. 

     ದಿನಾಂಕ 18-01-2015 ರಂದು ಸಾಯಂಕಾಲ 5-45 ಗಂಟೆಗೆ ಶ್ರೀ. ನಿರಂಜನ್, ಪಿ.ಎಸ್.ಐ. ಎ.ಪಿ.ಎಂ.ಸಿ ಯಾರ್ಡ ಪೊಲೀಸ್ ಠಾಣೆ ರವರಿಗೆ ಅಂದ್ರಾಳ್ ಗ್ರಾಮದ ಬಾಲಾಜಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬದ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿ ಮೇಲ್ಕಂಡ ಸ್ಥಳಕ್ಕೆ ಧಾಳಿ ಮಾಡಿ ಮಹಾದೇವ ಹಾಗು ಇತರೆ 6 ಜನರು ಎಲ್ಲರೂ ವಾ: ರಾಣಿತೋಟ, ಬಳ್ಳಾರಿ ಇವರನ್ನು ದಸ್ತಗಿರಿ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ ರೂ. 15,065/- ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡಿದದ್ದು, ಈ ಬಗ್ಗೆ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

                                                                                                                  ಪೊಲೀಸ್ ಸೂಪರಿಂಟೆಂಡೆಂಟ್,                                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ಜನವರಿ 14, 2015

PRESS NOTE AS ON 15-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 15-01-2015

ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಗುಗ್ಗರಹಟ್ಟಿಯಲ್ಲಿ ಅಪ್ರಾಪ್ತ 15 ವರ್ಷದ 8ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ. 
       
         ದಿನಾಂಕ: 14-1-2015 ರಂದು ಮದ್ಯಾಹ್ನ 3-30 ಗಂಟೆಗೆ ನೊಂದ ಹುಡುಗಿಯು ಬಂದು ದೂರು ನೀಡಿದ್ದು ಸಾರಾಂಶ ಏನೆಂದರೆ ಗುಗ್ಗರಹಟ್ಟಿ ಗ್ರಾಮದ ವಾಸಿಯಾದ ಮರಾಠಿ ಜನಾಂಗದ ಪಿ. ವಿ. ರಾಘವೇಂದ್ರರಾವು ವಾಸ: ಗುಗ್ಗರಹಟ್ಟಿ ಈತನು ತನ್ನ ತಾಯಿಗೆ ಪರಿಚಯವಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದರಿಂದ ತನಗೆ ಸಹ ಇವರ ಪರಿಚಯ ವಿದ್ದು ಇತನಿಗೆ ಮದುವೆ ಆಗಿ ಒಂದು ಹೆಣ್ಣು ಮಗು ಇರುತ್ತದೆ. ತನ್ನ ತಾಯಿ ಪಿ. ಪೀರಾಬಿಯು ತನಗೆ ಪಿ.ವಿ. ರಾಘವೇಂದ್ರರಾವು ಚೆನ್ನಾಗಿದ್ದಾನೆ ಆತನಿಗೆ ಮದುವೆ ಆಗು ಎಂದು ಹೇಳುತ್ತಿದ್ದಳು, ಪಿ.ವಿ. ರಾಘವೇಂದ್ರರಾವು ಸಹ ತನಗೆ ಮದುವೆ ಮಾಡಿಕೊಳ್ಳುತ್ತೇನೆಂದು ತಮ್ಮ ಮನೆಗೆ ಬಂದಾಗಲೆಲ್ಲಾ ಹೇಳುತ್ತಿದ್ದರಿಂದ ತಾನು ತನಗೆ ಇನ್ನು ವಯಸ್ಸು ಕಡಿಮೆ ಇದೆ, ಪಿ.ವಿ. ರಾಘವೇಂದ್ರರಾವುಗೆ ಮದುವೆ ಸಹ ಆಗಿದೆ ಎಂದು ಹೇಳಿದರೂ ಕೇಳದೇ ತನ್ನ ತಾಯಿ ಮತ್ತು ಪಿ.ವಿ. ರಾಘವೇಂದ್ರರವರು ಸೇರಿಕೊಂಡು ಗುಗ್ಗರಹಟ್ಟಿಯಲ್ಲಿರುವ ಪಿ.ವಿ. ರಾಘವೇಂದ್ರ ರವರ ಮನೆಯಲ್ಲಿ ಖಾಜಿಗೆ ಕರೆಯಿಸಿ ದಿ : 18-10-2014 ರಂದು ಬೆಳಿಗ್ಗೆ 11-00 ಗಂಟೆಗೆ ತನಗೆ ಮತ್ತು ಪಿ.ವಿ. ರಾಘವೇಂದ್ರ ರಾವು ರವರಿಗೆ ಮುಸ್ಲಿಂ ಪದ್ಧತಿಯಂತೆ ಮದುವೆ ಮಾಡಿದ್ದು, ದಿನಾಂಕ :   19-10-2014 ರಂದು ರಾತ್ರಿ ತನಗೆ ಮತ್ತು ಪಿ.ವಿ. ರಾಘವೇಂದ್ರರಾವುರವರಿಗೆ ಮಿಲ್ಲಾರಪೇಟೆಯಲ್ಲಿರುವ ಪಿ.ವಿ. ರಾಘವೇಂದ್ರ ರಾವು ರವರ ತಾಯಿ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ತನ್ನ ಇಚ್ಚೆಗೆ ವಿರುದ್ದವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆಂದು ಅಲ್ಲಿಂದ ಇತನು ತನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡುತ್ತಿರುತ್ತಾನೆಂದು ತನ್ನ ತಾಯಿ ಪಿ. ಪೀರಾಬೀ ಮತ್ತು ಪಿ.ವಿ. ರಾಘವೇಂದ್ರರಾವು ರವರು ಸೇರಿಕೊಂಡು ಅಪ್ರಾಪ್ತ 15 ವರ್ಷ ವಯಸ್ಸಿನ ಬಾಲಿಕಿಗೆ ಪಿ.ವಿ. ರಾಘವೇಂದ್ರರಾವುನು ಲಗ್ನ ಮಾಡಿಕೊಂಡು ಇತನು ಸತತವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆಂದು ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಬಳ್ಳಾರಿ ನಗರದ ಅಂದ್ರಾಳ್ ಗ್ರಾಮದಿಂದ 40 ವರ್ಷದ ಮನುಷ್ಯ ಕಾಣೆಯಾಗಿರುವ ಬಗ್ಗೆ.     

       ದಿನಾಂಕ: 14/01/2015 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ. ಕಾಮಾಕ್ಷಿ ಗಂಡ ಅಂದ್ರಾಳಪ್ಪ, 35 ವರ್ಷ, ಕುರುಬರು, ವ್ಯವಸಾಯ, ವಾಸ: ಬೈ-ಪಾಸ್ ಪಕ್ಕದಲ್ಲಿ, ಬಿ.ಗೋನಾಳ್ ಗ್ರಾಮ, ಬಳ್ಳಾರಿ. ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಂಶವೇನೆಂದರೆ ದಿನಾಂಕ:09/01/2015 ರಂದು ಸಂಜೆ  5-00 ಗಂಟೆಗೆ ಪಿರ್ಯಾದಿದಾರರ ಗಂಡ ಅಂದ್ರಾಳಪ್ಪನು 40, ವರ್ಷ ಈತನು ಬಳ್ಳಾರಿಗೆ ಹೋಗಿ ಬರುತ್ತೇನೆಂದು ಹೇಳಿ ಬಸ್ಸು ಹತ್ತಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲವೆಂದು ತನ್ನ ಗಂಡ ಮನೆಗೆ ಬರದೇ ಇದ್ದುದ್ದರಿಂದ ಎಲ್ಲಾ ಕಡೆ ಹುಡುಕಾಡಿ ನೋಡಲು ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಎ.ಪಿ.ಎಂ.ಸಿ. ಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                                      ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                                 ಬಳ್ಳಾರಿ.                                                                                                              
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                              ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಮಂಗಳವಾರ, ಜನವರಿ 13, 2015

PRESS NOTE AS ON 14-01-2015


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 14-01-2015.

ಪತ್ರಿಕಾ ಪ್ರಕಟಣೆ 

1) ಕೊಟ್ಟೂರು ಪೊಲೀಸ್ ಠಾಣೆ ಸರಹದ್ದಿನ ಕೂಡ್ಲಿಗಿ-ಕೊಟ್ಟೂರು ರಸ್ತೆಯ ಕುಮಾರೆಪ್ಪನ ಹೊಲದ ಹತ್ತಿರ ಮೋಟಾರ್ ಸೈಕಲ್ ಮತ್ತು ಲಾರಿ ನಡುವೆ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು. 
       
       ದಿನಾಂಕ 13-01-2015 ರಂದು ಸಂಜೆ 6-00 ಗಂಟೆಯಿಂದ ಸಂಜೆ 6-30 ಪಿ.ಎಂ ಗಂಟೆಯ ವರೆಗೆ ಕೊಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ ಶ್ರೀ. ಎಸ್. ಸಂಘರ್ಷ ತಂದೆ ಎಸ್. ಸುಂಕಪ್ಪ, 15 ವರ್ಷ, ಕೊರಚರು ಜನಾಂಗ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿ, ವಾಸ: ಭತ್ತನಹಳ್ಳಿ ಗ್ರಾಮ, ಕೂಡ್ಲಿಗಿ ತಾಲ್ಲೂಕು ದೂರು ನೀಡಿದ್ದು, ದಿನಾಂಕ: 13-01-2015 ರಂದು ಸಂಜೆ 5-30 ಗಂಟೆ ಸುಮಾರಿಗೆ ಫಿರ್ಯಾದಿಯು  ಭತ್ತನಹಳ್ಳಿಯಿಂದ ತನ್ನ ಮಾವ ವೆಂಕಟೇಶ ಇವರು ನೆಡೆಸುತ್ತಿದ್ದ ಬಜಾಜ್ ಪಲ್ಸರ್ ಮೊಟಾರ್ ಸೈಕಲ್ (ನಂಬರ್ ಇರುವುದಿಲ್ಲ) ನಲ್ಲಿ ಕೊಟ್ಟೂರಿಗೆ ಬರುವಾಗ ಕೂಡ್ಲೀಗಿ-ಕೊಟ್ಟೂರು ರಸ್ತೆ ಕುಮಾರೆಪ್ಪನ ಹೊಲದ ಹತ್ತಿರ ಮುಂದೆ ಹೋಗುತ್ತಿದ್ದ ಲಾರಿಗೆ ಓವರ್ ಟೇಕ್ ಮಾಡಿ ಅತಿವೇಗ ಮತ್ತು ಅಜಾಗರುಕತೆಯಿಂದ ಮುಂದೆ ಹೋಗುವಾಗ ಎದುರಿಗೆ ಬರುತ್ತಿದ್ದ ಡಿಸ್ಕವರ್ ಬೈಕ್ ನಂ. ಕೆ.ಎ-37 ಆರ್.7634 ನೇದ್ದಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ಪಕ್ಕದಲ್ಲಿ ಹೋಗುತ್ತಿದ್ದ ಲಾರಿ ನಂ. ಟಿ.ಎನ್ 21 ಎಕ್ಸ (ಟಿಎಂಪಿ) / 1205 ನೇದ್ದರ ಬಲಗಡೆಯ ಹಿಂದಿನ ಚಕ್ರಕ್ಕೆ ನಮ್ಮ ವೆಂಕಟೇಶ ಬಿದ್ದು ಬಲಕಾಲು ಸಂಪೂರ್ಣ ಸೊಂಟದವರಗೆ ಮತ್ತು ಮರ್ಮಾಂಗಕ್ಕೆ ತುಂಬಾ ರಕ್ತಗಾವಗಿ ನನಗೆ ಕೈಕಾಲುಗಳಿಗೆ ಸೊಂಟಕ್ಕೆ ಬೆನ್ನಿಗೆ ರಕ್ತಗಾಯಗಳು ಆಗಿದ್ದು ಎದುರಿಗೆ ಬರುತ್ತಿದ್ದ ಮೊಟಾರ್ ಸೈಕಲ್‍ನಲ್ಲಿ ಹಿಂದೆ ಕುಳಿತಿದ್ದ ಮಹಂತೇಶ ತಂದೆ ಹುಲುಗಪ್ಪನಿಗೆ ಬಲಕಾಲಿನ ಪಾದಕ್ಕೆ ಗಾಯವಾಗಿದ್ದು ಮೊಟಾರ್ ಸೈಕಲ್ ನೆಡೆಸುತ್ತಿದ್ದ ವೆಂಕಟೇಶ ತಂದೆ ಹನುಮಂತಪ್ಪ ಇವರಿಗೂ ಬಲಕೈಬೆರಳುಗಳಿಗೆ  ತುಂಬಾ ರಕ್ತಗಾಯಗಳಾಗಿದ್ದು ಲಾರಿ ಡ್ರೈವರ್ ಓಡಿಹೋದ. 108 ಅಂಬುಲೆನ್ಸನಲ್ಲಿ ಗಾಯಗೊಂಡ ನಾವೆಲ್ಲರು ಅಂಬುಲೆನ್ಸನಲ್ಲಿ ಬರುವಾಗ ಅಪಘಾತದಲ್ಲಿ ಆದ ಗಾಯಗಳಿಂದ ವೆಂಕಟೇಶ್ ತಂದೆ ಕಪ್ಪತ್ತಪ್ಪ, 32 ವರ್ಷ, ಕೊರಚರು ಜನಾಂಗ, ವ್ಯವಸಾಯ, ವಾಸ: ಭತ್ತನಹಳ್ಳಿ ಗ್ರಾಮ ಈತನು ದಾರಿಯ ಮದ್ಯದಲ್ಲಿ 6-00 ಗಂಟೆಗೆ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

2) ಸಿರಿಗೆರೆ ಪೊಲೀಸ್ ಠಾಣೆ ಸರಹದ್ದಿನ ಎಂ. ಸೂಗೂರು ಗ್ರಾಮದಲ್ಲಿ ಕೋಳಿ ಪಂದ್ಯ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ. 

      ದಿನಾಂಕ: 13-01-2015 ರಂದು ಮದ್ಯಾಹ್ನ 1-00 ಗಂಟೆಗೆ ಶ್ರೀ. ವಿ.ಆರ್. ಏಳಗಿ, ಸಿ.ಪಿ.ಐ. ತೆಕ್ಕಲಕೋಟೆ ರವರಿಗೆ ಎಂ. ಸೂಗೂರು ಗ್ರಾಮದ ಮಡೆ ನಾಗರಾಜ್ ರವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಜೂಜಾಟ ನಡೆಯುತ್ತಿದೆ ಅಂತ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 2-00 ಗಂಟೆಗೆ ಹೋಗಿ ವೀಕ್ಷಿಸಿದ್ದು ಮೇಲ್ಕಂಡ ಸ್ಥಳದಲ್ಲಿ ಜನರು ಗುಂಪಾಗಿ ನಿಂತುಕೊಂಡು ಎರೆಡು ಕೋಳಿ ಜಗಳಕ್ಕೆ ಬಿಟು ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿತರಾದ ಸೀತರಾಮ ರಾಜು ಹಾಗು ಇತರೆ 15 ಜನರು ಎಲ್ಲರೂ ವಾ: ಎಂ. ಸೂಗೂರು ಗ್ರಾಮ ಇವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ್ದ ನಗದು ಹಣ ರೂ. 37,620/- ಗಳನ್ನು ಹಾಗು ಜೂಜಾಟಕ್ಕೆ ಬಳಸಿದ್ದ ಎರಡು ಕೋಳಿಗಳು, 5 ಮೋಟಾರ್ ಸೈಕಲ್‍ಗಳು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                              ಪೊಲೀಸ್ ಸೂಪರಿಂಟೆಂಡೆಂಟ್,                                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

PRESS NOTE 13-01-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 13-01-2015
ಪತ್ರಿಕಾ ಪ್ರಕಟಣೆ  

ಕುಡುತಿನಿ ಪೊಲೀಸರಿಂದ ಇಬ್ಬರು ಆರೋಪಿತರ ಬಂಧನ, 18 ಮೋಟಾರ್ ಸೈಕಲ್‍ಗಳ ವಶ


                                         

        ದಿನಾಂಕ: 12.01.2015 ರಂದು ಬೆಳಿಗ್ಗೆ ಶ್ರೀ ಲಕ್ಷ್ಮಿಕಾಂತಯ್ಯ ಸಿ.ಪಿ.ಐ. ಕುರುಗೋಡು, ಶ್ರೀ ಕೆ.ಬಿ. ವಾಸುಕುಮಾರ್ ಪಿ.ಎಸ್.ಐ ಕುಡುತಿನಿ ಠಾಣೆ ಮತ್ತು ಸಿಬ್ಬಂದಿ ಕೆ. ರಮೇಶ ಪಿಸಿ  832, ಮತ್ತು ಗಪೂರ್‍ಸಾಬ್ ಪಿ.ಸಿ.166 ರವರೊಂದಿಗೆ ಇಲಾಖೆ ಜೀಪ್‍ನಲ್ಲಿ ಕುಡತಿನಿಯಲ್ಲಿ ಪೆಟ್ರೋಲಿಂಗ್ ಮಾಡುವಾಗ ಕುಡತಿನಿ ಬಸ್ ನಿಲ್ದಾಣದ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅನಿಲ್‍ಕುಮಾರ್ ಹಿಡಿದು ವಿಚಾರಿಸಿದಾಗ, ಈಗ್ಗೆ ಸುಮಾರು ಒಂದುವರೆ ವರ್ಷದ ಹಿಂದಿನಿಂದಲೂ ಆರೋಪಿ ಅನಿಲ್‍ಕುಮಾರ್  ಮತ್ತು ತನ್ನ ಅಣ್ಣ ಸಂಜಯ್ ಕೂಡಿ 18 ಮೋಟರ್ ಸೈಕಲ್‍ಗಳನ್ನು ಹಾಗೂ ಹಳೇದರೋಜಿ ಗ್ರಾಮದಲ್ಲಿ ಮೋಬೈಲ್ ಟವರ್‍ಗೆ ಆಳವಡಿಸಿದ 21 ಬ್ಯಾಟರಿಗಳನ್ನು ಕಳ್ಳತನ ಮಾಡಿ, ಮೋಟರ್ ಸೈಕಲ್‍ಗಳನ್ನು ಹುಬ್ಬಳ್ಳಿ ಪ್ರವೀಣನಿಗೆ ಮತ್ತು ಬ್ಯಾಟರಿಗಳನ್ನು  ಬಳ್ಳಾರಿಯ ಮಧುಶೆಟ್ಟಿ ಎಂಬುವವರಿಗೆ 15 ಬ್ಯಾಟರಿಗಳನ್ನು ಮಾರಾಟ ಮಾಡಿರುತ್ತೇನೆಂದು ತಿಳಿಸಿದ್ದರಿಂದ ಆತನನ್ನು ದಸ್ತಗಿರಿ ಮಾಡಿ ಶ್ರೀ. ಎನ್. ರುದ್ರಮುನಿ, ಡಿ.ಎಸ್.ಪಿ. ಬಳ್ಳಾರಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆಸಿ ಮತ್ತೊಬ್ಬ ಆರೋಪಿ ಪ್ರವೀಣ್ ವಾ: ಹುಬ್ಬಳ್ಳಿ ಇವನನ್ನು ದಸ್ತಗಿರಿ ಮಾಡಿ ಈ ಕೆಳಕಂಡಂತೆ ಮೋಟಾರ್ ಸೈಕಲ್‍ಗಳನ್ನು, ಮೊಬೈಲ್ ಟವರ್ ಬ್ಯಾಟರಿಗಳನ್ನು ವಶಪಡಿಸಿಕೊಂಡಿರುತ್ತಾರೆ.   

1) 6 ಬುಲೆಟ್ ಮೋಟರ್ ಸೈಕಲ್‍ಗಳು,
2) 2 ಪಲ್ಸರ್ ಮೋಟರ್ ಸೈಕಲ್‍ಗಳು,
3) 1 ಕರಶ್ಮ ಮೋಟರ್ ಸೈಕಲ್‍ಗಳು,
4) 1 ಅಪಾಚಿ ಮೋಟರ್ ಸೈಕಲ್‍ಗಳು,
5) 7 ಹಿರೋಹೋಂಡಾ ಮೋಟರ್ ಸೈಕಲ್‍ಗಳು,
6) 1 ಹೋಂಡಾ ಆಕ್ಟಿವಾ ಮೋಟರ್ ಸೈಕಲ್‍ಗಳು,
7) 15 ಮೊಬೈಲ್ ಟವರ್ ಬ್ಯಾಟರಿಗಳು

       ಮೇಲ್ಕಂಡ ಮೋಟಾರ್ ಸೈಕಲ್‍ಗಳು ಮತ್ತು ಮೊಬೈಲ್ ಟವರ್ ಬ್ಯಾಟರಿಗಳ ಒಟ್ಟು ಮೌಲ್ಯ ರೂ. 12,40,000-00 ಇರುತ್ತದೆ. ಸದರಿ ಮೋಟರ್ ಸೈಕಲ್‍ಗಳನ್ನು ಬಳ್ಳಾರಿಯ ಗಾಂದಿನಗರ ಮತ್ತು ಕೌಲ್‍ಬಜಾರ್ ಏರಿಯಾಗಳಲ್ಲಿ ಕಳ್ಳತನ ಮಾಡಿರುವ್ಯದಾಗಿ ತಿಳಿದು ಬಂದಿರುತ್ತದೆ. 

        ಈ ಮೇಲ್ಕಂಡ ಪತ್ತೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ರೀ ಚೇತನ್ ಸಿಂಗ್ ರಾಥೋರ್ ಎಸ್.ಪಿ. ಸಾಹೇಬರು ಬಳ್ಳಾರಿ, ರವರು ಶ್ಲ್ಲಾಗಿಸಿ ಬಹುಮಾನವನ್ನು ಘೋಸಿಸಿರುತ್ತಾರೆ. 


                                                                                                                   ಪೊಲೀಸ್ ಸೂಪರಿಂಟೆಂಡೆಂಟ್,                                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಭಾನುವಾರ, ಜನವರಿ 11, 2015

PRESS NOTE AS ON 12-01-2015

                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 12-01-2015

ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಅನಂತಶಯನಗುಡಿ ಹೊಸ ಬೈಪಾಸ್ ರಸ್ತೆಯ ರೈಲ್ವೆ ಕ್ವಾಟ್ರಸ್ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು ಇಬ್ಬರಿಗೆ ಗಾಯ. 
     
       ದಿನಾಂಕ: 11-01-2015 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಹೊಸಪೇಟೆ ಹೊರ ವಲಯದ ಅನಂತಶಯನಗುಡಿ ಹೊಸ ಬೈಪಾಸ್ ರಸ್ತೆಯಲ್ಲಿನ ರೈಲ್ವೆ ಕ್ವಾಟ್ರಸ್ ಹತ್ತಿರ ತಾರ್ ರಸ್ತೆಯಲ್ಲಿ ಆರೋಪಿಯಾದ ಇ. ಮಹೇಶ್ ಹಾಗು ಆತನ ಸ್ನೇಹಿತರಾದ ಬಿ.ಎಂ. ಚೆನ್ನಯ್ಯಸ್ವಾಮಿ ಹಾಗು ಇರ್ಶಾದ್ ಮೂವರು ಸೇರಿ ಮಹೇಳಸನ ಬುಲೆಟ್ ಮೋಟಾರ್ ಸೈಕಲ್ ನಂ. ಕೆಎ-35 ಇ.ಎ-0767 ನೇದ್ದರಲ್ಲಿ ಕುಳಿತು ಹೊಸಪೇಟೆಯಿಂದ ಹಂಪಿ ಉತ್ಸವಕ್ಕೆಂದು  ಹೋಗುವಾಗ್ಗೆ ಮೋಟಾರ್ ಸೈಕಲ್ ಸವಾರನಾದ ಮಹೇಶನು ಮದ್ಯಸೇವನೆ ಮಾಡಿ ಅತಿವೇಗ ಹಾಗು ನಿರ್ಲಕ್ಷತನದಿಂದ ಬುಲೆಟ್‍ನ್ನು ಚಲಾಯಿಸಿ ಸ್ಕಿಡ್ ಆಗಿ ಬೀಳಿಸಿದ್ದರಿಂದ ಮೂವರು ಮೋಟಾರ್ ಸೈಕಲ್ ಮೇಲಿಂದ ಬಿದ್ದು ಬೈಕ್ ಚಲಾಯಿಸುತ್ತಿದ್ದ ಮಹೇಶನಿಗೆ ಸೊಂಟ ಹಾಗು ಎಡಗಾಲಿಗೆ ಒಳಪೆಟ್ಟಾಗಿದ್ದು, ಹಿಂದೆ ಕುಳಿತಿದ್ದ ಬಿ.ಎಂ. ಚನ್ನಯ್ಯಸ್ವಾಮಿ, 25 ವರ್ಷ ವಾ: ಹೊಸಪೇಟೆ ಈತನಿಗೆ ತಲೆಗೆ ಪೆಟ್ಟಾಗಿ ತಲೆ ಹಾಗು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಹಿಂಬದಿ ಸವಾರನಾದ ಇರ್ಶಾದ್‍ನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತವೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಸಿರುಗುಪ್ಪ ಪೊಲೀಸ್ ಠಾಣೆ ಸರಹದ್ದಿನ  ಇಬ್ರಾಹಿಂ ಪುರ ಗ್ರಾಮದ ಜಂಬನಗೌಡ ರವರ ರೈಸ್ ಮಿಲ್ ಪಕ್ಕದಲ್ಲಿ ಮೋಟಾರ್ ಸೈಕಲ್ ರಸ್ತೆ ಮೇಲೆ ಬಿದ್ದು ಮೋಟಾರ್ ಸೈಕಲ್ ಸವಾರನ ಸಾವು ಒಬ್ಬರಿಗೆ ಗಾಯ. 

      ಪಿರ್ಯಾದಿದಾರಳಾದ ಶ್ರೀಮತಿ. ಕೆ.ಎಂ. ಕಾವೇರಿ ವಾ: ಇಬ್ರಾಹಿಂಪುರ ಗ್ರಾಮ, ಸಿರುಗುಪ್ಪ ತಾಲ್ಲೂಕು ಇವರು ಕೊಟ್ಟ ದೂರು ಏನೆಂದರೆ, ದಿ:10-01-15 ರಂದು ಊಟ ತೆಗೆದುಕೊಂಡು ಇಬ್ರಾಹಿಂಪುರ ಗ್ರಾಮದಿಂದ ತಮ್ಮ ಚಿಕ್ಕಪ್ಪನ ಮಗನಾದ ಅಂಜಿನಿಯೊಂದಿಗೆ ಹೀರೋ ಸ್ಪೇಂಡರ್ ಪ್ರೋ ಮೋಟರ್ ಸೈಕಲ್ ನಂ:ಕೆಎ-34/ಇಸಿ/1338 ನೇದ್ದರಲ್ಲಿ ರಾತ್ರಿ ಸಿರುಗುಪ್ಪ ಸರ್ಕಾರಿ ಅಸ್ಪತ್ರೆಗೆ ಬಂದು ಪಿರ್ಯಾದಿಯು ತಮ್ಮ ಅಕ್ಕನಾದ ಶ್ರೀಮತಿ ಮೌಲಮ್ಮಳಿಗೆ ಊಟ ಕೊಟ್ಟು ನಂತರ ಮರಳಿ ತಮ್ಮ ಗ್ರಾಮಕ್ಕೆ ತಮ್ಮ ಅಣ್ಣನಾದ ಅಂಜಿನಿಯೊಂದಿಗೆ ಸದರಿ ಮೋಟರ್ ಸೈಕಲ್ ಮೇಲೆ ರಾತ್ರಿ 08-45 ಗಂಟೆ ಸುಮಾರಿಗೆ ಇಬ್ರಾಹಿಂಪುರ ಗ್ರಾಮದ ಜಂಭನಗೌಡ ರವರ ರೈಸ್ ಮಿಲ್ ಪಕ್ಕ ರಾಜ್ಯ ಹೆದ್ದಾರಿ-19 ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ ವಾಹನವನ್ನು ಅದರ ಚಾಲಕನು ಏಕಾಏಕಿಯಾಗಿ ರಸ್ತೆಯ ಬಲಕ್ಕೆ ಬಂದಿದ್ದರಿಂದ ಅಗುವ ಅಪಘಾತವನ್ನು ತಪ್ಪಿಸಲು ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್‍ನ್ನು ರಸ್ತೆಯ ಬಲಕ್ಕೆ ತೆಗೆದುಕೊಂಡ ಪರಿಣಾಮ ಸದರಿ ಮೋಟರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮೋಟರ್ ಸೈಕಲ್ ಸಮೇತ ಬಿದ್ದ ಪರಿಣಾಮ ಮೋಟರ್ ಸೈಕಲ್ ಸವಾರನಾದ ಅಂಜಿನಿ, 19 ವರ್ಷ, ವಾ: ಇಬ್ರಾಹಿಂಪುರ ಗ್ರಾಮ ಈತನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಪಿರ್ಯಾದಿಗೆ ಎಡಮೋಣಕಾಲಿಗೆ ಹಾಗೂ ಎಡ ಕೈ ಬೆರಳುಗಳಿಗೆ ತೆರಚಿದ ಗಾಯಗಳಾಗಿದ್ದು. ಅಪಘಾತದಲ್ಲಿ ಸದರಿ ಮೋಟರ್ ಸೈಕಲ್ ಜಖಂಗೊಂಡಿದ್ದು. ಗಾಯಗೊಂಡ ಪಿರ್ಯಾದಿಯನ್ನು ಅಂಬಣ್ಣ ಮತ್ತು ವಿರೇಶ್ ರವರು ಚಿಕಿತ್ಸೆಗಾಗಿ ಸಿರುಗುಪ್ಪ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು. ಮೋಟರ್ ಸೈಕಲ್ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರ ಅಂಜಿನಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 


3) ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆ ಸರಹದ್ದಿನ ಎನ್.ಸಿ. ಕಾಲೋನಿ ನಿವಾಸಿಯಾದ ಶ್ರೀಮತಿ. ಸ್ವಾತಿ ಇವಳು ಎ.ಪಿ.ಎಂ.ಸಿ. ಮಾರ್ಕೆಟೆನಿಂ ಕಾಣಿಯಾಗಿರುವ ಬಗ್ಗೆ. 

       ದಿನಾಂಕ 11-1-2015 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಶ್ರೀನಿವಾಸ ಮೂರ್ತಿ, ವಾ: ಹೊಸಪೇಟೆ ಇರವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ತಾನು ತನ್ನ ಸ್ವಂತ ಕೆಲಸದ ಮೇಲೆ ವಿಜಯವಾಡಕ್ಕೆ ಹೋಗಿದ್ದು, ತಮ್ಮ ಮನೆಯಲ್ಲಿ ತನ್ನ ತಂದೆ ತಾಯಿ ಮತ್ತು ತನ್ನ ಹೆಂಡತಿ ಶ್ರೀಮತಿ ಸ್ವಾತಿ ಮೂರ್ತಿ, 29 ವರ್ಷ, ವಾ: ಹೊಸಪೇಟೆ ಇವಲು ಇದ್ದು,  ದಿ 10-1-2015 ರಂದು ಬೆಳಿಗ್ಗೆ 8-15 ಗಂಟೆಗೆ ಎ.ಪಿ.ಎಂ.ಸಿ. ಮಾರ್ಕೇಟ್‍ನಿಂದ ತರಕಾರಿ ತರಲೆಂದು ತಮ್ಮ ಮನೆಯಿಂದ ತಮ್ಮ ಸ್ಕೂಟಿ ನಂ. ಕೆ.ಎ.35/ಡಬ್ಲೂ-8199 ನೇದ್ದರಲ್ಲಿ ಹೋಗಿ ಎ.ಪಿ.ಎಂ.ಸಿ. ಮಾರ್ಕೇಟ್‍ನ ಹತ್ತಿರ ಇರುವ ಪೆಟ್ರೋಲ್ ಬಂಕಿನ ಮುಂದೆ ನಿಲ್ಲಿಸಿ ಹೋದವಳು ಬೆಳಿಗ್ಗೆ 11-30 ಗಂಟೆಯಾದರೂ ಮನೆಗೆ ವಾಪಾಸ್ ಬಾರದೇ ಕಾಣೆಯಾಗಿದ್ದು,  ಕಾಣೆಯಾದವಳನ್ನು ಎಲ್ಲಾರೂ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿರುವಿದಿಲ್ಲ. ಫಿರ್ಯಾದಿದಾರರು ವಾಪಾಸು ವಿಜಯವಾಡದಿಂದ ಹೊಸಪೇಟೆಗೆ ಬಂದು ತನ್ನ ಹೆಂಡತಿಯನ್ನು ಹುಡುಕಾಡಿ ಸಿಗದೇ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು  ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ಕೋರಿ ಕೊಟ್ಟ ದೂರಿನ ಮೇರೆಗೆ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದೆ.

                                                                                                          ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                    ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ಜನವರಿ 4, 2015

Press Note as on 05-01-2015

                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 05-01-2015
ಪತ್ರಿಕಾ ಪ್ರಕಟಣೆ 

1) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಅಡವಿ ಆನಂದ ದೇವನಹಳ್ಳಿ ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ಒಬ್ಬ ವ್ಯಕ್ತಿಯ ಕೊಲೆ 

       ದಿ:-01/01/2015 ರಂದು ರಾತ್ರಿ 7-35 ಗಂಟೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ದೂರವಾಣಿ ಕರೆ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ ಶ್ರೀವ್ಮತಿ. ಹಾಲಮ್ಮ, ಗಂಡ ಕಲ್ಲನಗೌಡ, 56 ವರ್ಷ, ವಾ: ಅಡವಿ ಆನಂದ ದೇವನಹಳ್ಳಿ ಗ್ರಾಮ, ಹೆಚ್.ಬಿ.ಹಳ್ಳಿ ತಾಲ್ಲೂಕು ಇವರ ಹೇಳಿಕೆ ಪಡೆಯಲಾಗಿ ಆರೋಪಿಯಾದ ಕಲ್ಲಮ್ಮನವರ ನಿಂಗಪ್ಪ ಈತನು  ಪಿರ್ಯಾದಿ ಗಂಡನ ತಂಗಿಯನ್ನು ಮದುವೆಯಾಗಿದ್ದು ಪಿರ್ಯಾದಿಯ ಗಂಡನ ತಂಗಿ ಈಗ್ಗೆ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದು ಆಗ ಶವ ಸಂಸ್ಕಾರಕ್ಕೆ ಹೋಗಿಲ್ಲವೆಂಬ ಹಳೇ ದ್ವೇಷದಿಂದ ದಿ:-01/01/2015 ರಂದು ಸಂಜೆ 6  ಗಂಟೆಗೆ ಆರೋಪಿತರ ಮನೆಯ ಮುಂದೆ ದಾರಿಯಲ್ಲಿ ಪಿರ್ಯಾದಿಯ ಮಕ್ಕಳು ಓಡಾಡದಂತೆ ಅಡ್ಡಲಾಗಿ ಕಟ್ಟಿಗೆಯನ್ನು ಹಾಕಿದ್ದು ಇದನ್ನು ನೋಡಿದ ಪಿರ್ಯಾದಿಯ ಗಂಡ ಕಾಳನಗೌಡ ಈತನು ಬೇರೆ ದಾರಿಯಲ್ಲಿ ಬನ್ನಿರಿ ಅಂತಾ ಹೇಳಿ ಈ ಬಗ್ಗೆ ಊರಲ್ಲಿ ದೊಡ್ಡವರಿಗೆ ತಿಳಿಸಿ ನಾಳೆ ಪಂಚಾಯತಿ ಮಾಡೋಣ ಅಂತಾ ಅಂದಿದ್ದಕ್ಕೆ ಆರೋಪಿ ಕಲ್ಲಮ್ಮನವರ ನಿಂಗಪ್ಪ ಈತನು ಕಾಳನಗೌಡನಿಗೆ ಲೇ ಸೂಳೆ ಮಗನೇ ಅದನ್ನೇನು ಪಂಚಾಯತಿ ಮಾಡುತ್ತೀ ನಿನ್ನ ತಂಗಿ ಸತ್ತಾಗ ಮಣ್ಣಿಗೆ ಬಾರದೇ ನನ್ನ ಹೊಟ್ಟೆ ಉರಿಸಿರುವೆ. ಅಂತಾ ಅವಾಚ್ಯ ಶಬ್ದಗಳಿಂದ ಬ್ಶೆದಿದ್ದು. ಆರೋಪಿಯಾದ ಕೊಟ್ರಪ್ಪ ಮತ್ತು ಅಡಿವೆಪ್ಪ ರವರು ಕೈಕಾಲುಗಳಿಂದ ಮೈಮೇಲೆ ಹೊಡೆದು ಅವಾಚ್ಯ ಬ್ಶೆದು ಆರೋಪಿ ಕೊಟ್ರಪ್ಪ ಎಲ್ಲರೂ ವಾ: ಅಡವಿ ಆನಚಿದ ದೇವನಹಳ್ಳಿ ಇವರು ಅಲ್ಲೇ ಬಿದಿದ್ದ ಕಟ್ಟಿಗೆಯಿಂದ ಪಿರ್ಯಾದಿಯ ಗಂಡನಾದ ಶ್ರೀ. ಕಲ್ಲನಗೌಡ, 65 ವರ್ಷ, ವಾ: ಅಡವಿ ಆನಂದ ದೇವನಹಳ್ಳಿ ಗ್ರಾಮ ಈತನಿಗೆ ಎದೆಗೆ ಮತ್ತು ಬಾಯಿಗೆ  ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಮಾಡಿದ್ದಾಗಿ, 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾಗಿ ಇರುತ್ತದೆ. 
      ಸದರಿ ಪ್ರಕರಣದಲ್ಲಿನ ಗಾಯಾಳು ಶ್ರೀ.ಕಾಳನಗೌಡ ಇವರಿಗೆ  ದಿನಾಂಕ:- 02/01/2015 ರಂದು ಬೆಳಗಿನ ಜಾವ 1-55 ಗಂಟೆ ಸುಮಾರಿಗೆ ಚಿಕಿತ್ಸೆಗಾಗಿ ದಾವಣಗೇರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:-04/01/2015 ರಂದು ಸಂಜೆ 6-55 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಎಂದು ಮಾಹಿತಿ ಬಂದ ನಂತರ ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  

2) ಎಂ.ಎಂ.ಹಳ್ಳಿ ಠಾಣೆ ಸರಹದ್ದಿನ ಲೋಕಪ್ಪನ ಹೊಲದ ಹತ್ತಿರ ಆಟೋ ಕಲಿಯಲೆಂದು ಆಟೋ ಚಾಲನೆ ಮಾಡುತ್ತಿದ್ದಾಗ ಆಟೋ ಪಲ್ಟಿಯಾಗಿದ್ದು, ಈ ಅಫಘಾತದಲ್ಲಿ ಒಬ್ಬ ವ್ಯಕ್ತಿಯ ಸಾವು. 

        ದಿ:04-01-15 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಮರಿಯಮ್ಮನಹಳ್ಳಿಯ ಪ್ರಿಯಾಂಕನಗರದ ಮೃತ ಬರ್ನಪಿಂಗ್‍ನು ತಾನು ವಾಸವಿರುವ ಬಾಡಿಗೆ ಮನೆಯ ಮುಂದೆ ನಿಲ್ಲಸಿದ್ದ ಕೆ.ಎ.35/ಎ. 8409 ಅಪ್ಪಿ ಆಟೋವನ್ನು ಡ್ರೈವಿಂಗ್ ಕಲಿಯಲೆಂದು ತಾನೆ ಖುದ್ದಾಗಿ ಚಾಲು ಮಾಡಿಕೊಂಡು ಅದರಲ್ಲಿ ತನ್ನ ಸಂಗಡ ವಾಸವಿರುವ ದನಿನಾಯ್ಕ ಮತ್ತು ಜಗ್ ಕುವಾರ್ ರವರನ್ನು ಕೂಡಿಸಿಕೊಂಡು ಆಟೋವನ್ನು ಅಯ್ಯನಹಳ್ಳಿ ಮತ್ತು ಲೋಕಪ್ಪನಹೊಲ ಗ್ರಾಮದ ಮಾರ್ಗವಾಗಿ ಆಟೋವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಅಡ್ಡ ದಿಡ್ಡಿಯಾಗಿ ನಡೆಸಿಕೊಂಡು ಹೋಗಿ ರಸ್ತೆಯ ಎಡ ತೆಗ್ಗಿನಲ್ಲಿ ಬೀಳಿಸಿದ್ದರಿಂದ ಆಟೋ ಚಾಲನೆ ಮಾಡುತ್ತಿದ್ದ ಬರ್ನಪಿಂಗ್ ತಂದೆ ಸಂಕೇರ್ತನ್, 28 ವರ್ಷ, ವಾ: ಸಾಂಬಾಲ್‍ಪುರ ಗ್ರಾಮ ಓರಿಸ್ಸಾ ರಾಜ್ಯ ಈತನು ಆಟೋ ಕೆಳಗೆ ಸಿಕ್ಕಿಕೊಂಡು ತಲೆಗೆ ಬಾರಿ ಪೆಟ್ಟು ಬಿದ್ದು ಕೂಡಲೆ ಸೇರಿದ ಜನರು 108 ಅಂಬುಲೆನ್ಸ್‍ನಲ್ಲಿ ಹಾಕಿಕೊಂಡು ಹೊಸಪೆಟೆ 100 ಬೆಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು, ಸದರಿ ಚಿಕಿತ್ಸೆಯಲ್ಲಿ ಗುಣ ಮುಖನಾಗದೆ ಬೆಳಿಗ್ಗೆ 9-15 ಗಂಟೆಗೆ ಮೃತಪಟ್ಟಿರುತ್ತಾನೆ ಕೊಟ್ಟ ದೂರಿನ ಮೇರೆಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣರ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ
                                                ಪೊಲೀಸ್ ಸೂಪರಿಂಟೆಂಡೆಂಟ್,    
                                                        ಬಳ್ಳಾರಿ.                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

Press Note as on 04-01-2015



                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 04-01-2015
ಪತ್ರಿಕಾ ಪ್ರಕಟಣೆ 
1) ಗಾದಿಗನೂರು ಪೊಲೀಸ್ ಠಾಣೆ ಸರಹದ್ದಿನ ತಾಳೂರು ಗ್ರಾಮದ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು ಒಬ್ಬರಿಗೆ ಗಾಯ.

          ದಿನಾಂಕ: 02.01.2015 ರಂದು ಸಂಜೆ.07:00 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ. ಅಯ್ಯಪ್ಪ, 43 ವರ್ಷ, ವಾ; ತಾಳೂರು ಗ್ರಾಮ ಸಂಡೂರು ತಾಲ್ಲೂಕು ಇವರು ವೈಯಕ್ತಿಕ ಕೆಲಸದ ಸಲುವಾಗಿ ತನ್ನ ಮೋಟಾರ್ ಸೈಕಲ್‍ನಲ್ಲಿ ಜೋಗ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಸಂಡೂರು ತಾಲ್ಲೂಕು ತಾಳೂರು ಗ್ರಾಮದ ಸಮೀಪ ತಾಳೂರು-ಜೋಗ ಮಧ್ಯದಲ್ಲಿರುವ ತಾಳೂರು ಡ್ರೈವರ್‍ಸಾಬ್‍ನ ಹೊಲದ ಬಳಿ ಫಿರ್ಯಾದಿಯ ಮೋಟಾರ್ ಸೈಕಲ್‍ನ್ನು ಓವರ್ ಟೆಕ್ ಮಾಡಿದ ಕೆಎ.35/ಎಕ್ಸ್.4884 ನೇದ್ದರ ಸವಾರರು ತಮ್ಮ ಮೋಟಾರ್ ಸೈಕಲ್‍ನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷೆತೆಯಿಂದ ನಡೆಸಿಕೊಂಡು ಮುಂದೆ ಹೋಗಿ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ ತಗ್ಗಿನಲ್ಲಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದರು, ಫಿರ್ಯಾದಿಯು ಕೆಳಗೆ ಬಿದ್ದ ಸವಾರರನ್ನು ಅಲ್ಲಿ ಸೇರಿದ್ದ ಜನರ ಸಹಾಯದಿಂದ ಉಪಚರಿಸಿ, 108 ಅಂಬುಲೇನ್ಸ್ ಗೆ ಫೊನ್ ಮಾಡಿ ಕರೆಸಿ, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳಿಸಿ, ಅಫಘಾತವನ್ನುವುಂಟು ಮಾಡಿದ ರಾಜೇಶ ಕುಮಾರ್‍ನ ವಿರುದ್ದ ದೂರು ನೀಡಿಲು ಠಾಣೆಗೆ ಬಂದಾಗ ತೀವ್ರ ರಕ್ತಗಾಯಗೊಂಡ ರಾಜೇಶ ಕುಮಾರ್ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-01-2013 ರಂದು ರಾತ್ರಿ.10:20 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ಈ ಅಪಘಾತವನ್ನುವುಂಟು ಮಾಡಿದ ಮೃತ ರಾಜೇಶನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತದೆ.

2) ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಎನ್.ಹೆಚ್.-13 ರಸ್ತೆಯ ಪರಶುರಾಮ ಡಾಬಾದ ಹತ್ತಿರ ಯಾವುದೋ ಲಾರಿ ಮೋಟಾರ್ ಸೈಕಲ್‍ಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದು, ಮೋಟಾರ್ ಸೈಕಲ್ ಸವಾರನ ಸಾವು. 


      ಫಿರ್ಯಾದಿದಾರರಾದ ಶ್ರೀ. ಕೆ. ಭೀಮಣ್ಣ, 50 ವರ್ಷ, ವಾ: ಡಣಾಪುರ ಗ್ರಾಮ ಹೊಸಪೇಟೆ ತಾಲ್ಲೂಕು ಇವರು ದೂರು ನೀಡಿದ್ದೇನೆಂದರೆ, ದಿ: 02-01-15 ರಂದು ಸಂಜೆ 7-45 ಗಂಟೆ ಸುಮಾರಿಗೆ ಮೃತನಾದ ಕೆ. ಸಂತೋಷ್ ಕುಮಾರ್ ತಂದೆ ಕೆ. ರಾಮಪ್ಪ, 25 ವರ್ಷ, ವಾ; ಚಿತ್ತವಾಡಗಿ, ಹೊಸಪೇಟೆ ಈತನು  ತನ್ನ ಕೆ.ಎ.35/ವೈ. 0087 ಫಲ್ಸ್‍ರ್ ಬೈಕ್‍ನಲ್ಲಿ ಮರಿಯಮ್ಮನಹಳ್ಳಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಬಿ.ಎಂ.ಎಂ. ಪ್ಯಾಕ್ಟ್ರಿಗೆ ಹೋಗುವ ಕಾಲಕ್ಕೆ ಎನ್.ಹೆಚ್. 13 ರಸ್ತೆ ನ್ಯೂ ಪರಶುರಾಮ ಡಾಬಾದ ಬಳಿ ಹೋಗುವಾಗ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿರ್ಲಕಷತನದಿಂದ ನಡೆಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಬೈಕ್ ಸವಾರಕ ಸಂತೋಷಕುಮಾರನಿಗೆ ತೆಲೆಗೆ ಮತ್ತು ಬಲ ಕಾಲಿಗೆ ಭಾರಿ ಒಳಪೆಟ್ಟು ಗಾಯಗಳು ಆಗಿ ಹೊಸಪೇಟೆ ಮತ್ತು ಬಳ್ಳಾರಿ ವಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಾ  ದಿ: 03-01-15 ರಂದು ಬೆಳಿಗಿನ ಜಾವ 1-45 ಗಂಟೆಗೆ ಮೃತ ಪಟ್ಟಿರುತ್ತಾನೆಂದು ಅಪಘಾತಪಡಿಸಿ ಪರಾರಿಯಾದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ಇದ್ದ ದೂರಿನ ಮೇರೆಗೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                                 ಪೊಲೀಸ್ ಸೂಪರಿಂಟೆಂಡೆಂಟ್,   
                                                        ಬಳ್ಳಾರಿ.                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.