ಮಂಗಳವಾರ, ಜನವರಿ 20, 2015

PRESS NOTE AS ON 21-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 21-01-2015

ಪತ್ರಿಕಾ ಪ್ರಕಟಣೆ

1)            ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದಿನ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಯುವಕನ ಕೊಲೆ ಒಬ್ಬ ಮಹಿಳೆಗೆ ಗಾಯ.
 
         ದಿನಾಂಕ 21/01/2015 ರಂದು ಬೆಳಗಿನ ಜಾವ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಯಶೋದಮ್ಮ ಗಂಡ ರಾಂಪುರ ಬಸವರಾಜ : 30 ವರ್ಷ, ವಾಲ್ಮೀಕಿ ಜನಾಂಗ, ಕೂಲಿ ಕೆಲಸ, ವಾಸ: 2 ನೇ ವಾರ್ಡ್, ಮ್ಯಾಗಳಗೇರಿ, ಎತ್ತಿನಬೂದಿಹಾಳ್ ಗ್ರಾಮ, ಬಳ್ಳಾರಿ ತಾಲ್ಲೂಕು ರವರು ದೂರು ನೀಡಿದ್ದೇನೆಂದರೆ, ತನ್ನ ಗಂಡ ರಾಂಪುರ ಬಸವರಾಜ ತಂದೆ ಲೇಟ್ ಕೆಂಚಪ್ಪ : 35 ವರ್ಷ, ವಾಲ್ಮೀಕಿ ಜನಾಂಗ, ಕೂಲಿ ಕೆಲಸ, ವಾಸ: ಎತ್ತಿನಬೂದಿಹಾಳ್ ಗ್ರಾಮ ಇವರು ತಮ್ಮ ಗ್ರಾಮದ ಗೊರ್ಲ ಅಂಜಿನೇಯನ ಮಗಳು ಜಯಮ್ಮಳ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ದ್ವೇಷದಿಂದ ದಿನಾಂಕ 20/01/2015 ರಂದು ರಾತ್ರಿ 9-00 ಗಂಟೆಗೆ ಗೊರ್ಲ ಅಂಜಿನೇಯ, ಗೊರ್ಲ ಅಂಜಿನೇಯನ ಮಗ ಗೊರ್ಲ ಬಸಯ್ಯ, ಗೊರ್ಲ ಬಸವರಾಜ, ಗೊರ್ಲ ಬಸವರಾಜನ ಹೆಂಡತಿ ಜಯಮ್ಮ ರವರು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ, ಯಾವುದೇ ರೀತಿಯ ಮಾತನಾಡದೇ ಏಕಾಏಕಿ ತನ್ನ ಗಂಡನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ, ಜಯಮ್ಮಳ ಮೇಲೆ ಕೊಲೆ ಪ್ರಯತ್ನ ಮಾಡಿ, ಬಿಡಿಸಲು ಹೋದ ತನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ತನ್ನ ಮನೆಯ ಬಾಗಿಲಿಗೆ ಕೊಡ್ಲಿಯಿಂದ ಹೊಡೆದು ಜಖಂ ಮಾಡಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆದಿದೆ.

                                                ಪೊಲೀಸ್ ಸೂಪರಿಂಟೆಂಡೆಂಟ್,   
                                                                                                                               ಬಳ್ಳಾರಿ.                                                                                                                 
ಇವರಿಗೆ,      
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, .ಎಸ್. ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ