ಬುಧವಾರ, ಡಿಸೆಂಬರ್ 23, 2015

PRESS NOTE OF 23/12/2015

Crime Key Report From   To   
Sl. No. FIR No FIR Date Crime Group - Crime Head Stage of case
APMC Yard PS
1 Cr.No:0109/2015
(CODE OF CRIMINAL PROCEDURE, 1973 U/s 110 )
23/12/2015 Under Investigation
CrPC - Security For Good Behaviour (Sec 110)
Brief Facts :  ದಿನಾಂಕಃ 23-12-2015 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಆಪಾದಿತನು ಬಳ್ಲಾರಿ ಬೈಪಾಸ್ ರಸ್ತೆಯ ಬೃಂಧಾವನ ಡಾಬಾದ ಕಂಪೌಂಡ್ ಗೋಡೆಯ ಪಕ್ಕದಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ನಂತರ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ವಿಚಾರಣೆ ಮಾಡಿದಾಗ ಮೊದಲು ತನ್ನ ಹೆಸರು ಹೇಳಲು ತಡವರಿಸಿ, ನಂತರ ಮತ್ತೆ ಮತ್ತೆ ವಿಚಾರಣೆ ಮಾಡಿದಾಗ ತನ್ನ ಹೆಸರು ವಿಳಾಸ ತಿಳಿಸಿದ್ದು, ಆ ವೇಳೆಯಲ್ಲಿ ಆ ಸ್ಥಳದಲ್ಲಿದ್ದ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಠಾಣೆಗೆ ಕರೆತಂದು ದಾಖಲಾತಿಗಳನ್ನು ಪರಿಶೀಲಿಸದಾಗ ಈತನು ಈ ಹಿಂದೆ ಬಳ್ಳಾರಿ ನಗರದ ವಿವಿಧ ಠಾಣೆಗಳಲ್ಲಿ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಈತನು ಚಾಳಿಬಿದ್ದ ಅಪರಾಧಿಯಾಗಿರುತ್ತಾನೆ. ಆದ್ದರಿಂದ ಈತನು ಪುನಃ ಇಂತಹುದೇ ಸ್ವತ್ತಿನ ಅಪರಾಧ ಮಾಡುವ ಸಾಧ್ಯತೆ ಇರುವುದರಿಂದ ಈತನ ವಿರುದ್ದ ಮುಂಜಾಗ್ರತೆಗಾಗಿ ಪ್ರಕರಣ ದಾಖಲಿಸಿಕೊಂಡಿದೆ
Bellary Rural PS
2 Cr.No:0547/2015
(IPC 1860 U/s 380,457 )
23/12/2015 Under Investigation
BURGLARY - NIGHT - Temple Theft
Brief Facts :  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ : 22/12/2015 ರಂದು ಸಂಜೆ 6-00 ಗಂಟೆಗೆ ತಮ್ಮ ಗ್ರಾಮದ ಆಂಜಿನೇಯ ದೇವಸ್ಥಾನದ ಪೂಜಾರಿ ರಮೇಶ್ ರವರು ಎಂದಿನಂತೆ ಪೂಜೆಯನ್ನು ಮುಗಿಸಿ ಮನೆಗೆ ಹೋಗಿ ಮರುದಿನ ದಿನಾಂಕ 23-12-2015 ರಂದು ಬೆಳಿಗ್ಗೆ 5-30 ಗಂಟೆಗೆ ದೇವಸ್ಥಾನದ ಪೂಜೆಮಾಡಲು ಹೋದಾಗ ದೇವಸ್ಥಾನದ ಲಾಕ್ ಮುರಿದಿದ್ದು ನೋಡಿ ಪೂಜಾರಿ ಗಾಬರಿಯಾಗಿ ವಿಷಯವನ್ನು ತನಗೆ ತಿಳಿಸಿದ್ದು ತಾನು ಮತ್ತು ಪೂಜಾರಿ, ಹೋಗಿ ನೋಡಲು ಯಾರೋ ಕಳ್ಳರು ದೇವಸ್ಥಾನದ ಗ್ರಿಲ್ಸ್ ಡೋರಗಳನ್ನು ಮುರಿದು ತೆಗೆದು ದೇವಸ್ಥಾನದ ಒಳಗೆ ಇದ್ದ ಹುಂಡಿಯನ್ನು ಯಾವುದೋ ವಸ್ತವಿನಿಂದ ಮೀಟಿ ಒಡೆದು ಅದರೊಳಗೆ ಇದ್ದ ಸುಮಾರು 20000/- ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಸದರಿಯವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಕೋರಿ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.
Brucepet PS
3 Cr.No:0262/2015
(CODE OF CRIMINAL PROCEDURE, 1973 U/s 109 )
23/12/2015 Under Investigation
CrPC - Security For Good Behaviour (Sec 109)
Brief Facts :  ಹೆಚ್.ಸಿ.19 ಮತ್ತು ಪಿ.ಸಿ.373 ರವರು ಈ ದಿನ ದಿನಾಂಕ:23/12/2015 ರಂದು ಬೆಳಿಗ್ಗೆ 9.00 ಗಂಟೆಯಿಂದ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ಸರಹದ್ದಿನಲ್ಲಿ ಹಗಲು ಗಸ್ತು ತಿರುಗಾಡುತ್ತಿದ್ದಾಗ ಬೆಳಿಗ್ಗೆ 09.30 ಗಂಟೆ ಸುಮಾರಿಗೆ ಬಳ್ಳಾರಿ ನಗರದ ಲಾರಿ ಟರ್ಮಿನಲ್ ಹತ್ತಿರ ಆರೋಪಿತನು ತನ್ನ ಇರುವಿಕೆಯನ್ನು ಮರೆ ಮಾಚಿಕೊಂಡು ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ಓಡಿ ಹೋದ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡದಿದ್ದರಿಂದ ಹಾಗೂ ಅಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯದಿಂದ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಕಲಂ:109 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಳ್ಳಲು ನೀಡಿದ ವಿಶೇಷ ವರದಿ ಮೇರೆಗೆ ಈ ಪ್ರಥಮ ವರ್ತಮಾನ ವರದಿ.
Hadagali PS
4 Cr.No:0131/2015
(INDIAN MOTOR VEHICLES ACT, 1988 U/s 183,187 ; IPC 1860 U/s 
23/12/2015 Under Investigation
279,337 )
MOTOR VEHICLE ACCIDENTS NON-FATAL - State Highways
Brief Facts :  ಮೊನ್ನೆ ದಿನಾಂಕ21-12-2015 ರಂದು ಆರೋಪಿ ಸರ್ಪರಾಜ್ ಈತನು Suzuki samarai M/cyl-KA17-U-7625 ನೇದ್ದರಲ್ಲಿ ತನ್ನ ಹಿಂದೆ  ಕುಮಾರಿ  ಸುನಿತಾ @ ಚೆನ್ನಮ್ಮಳನ್ನು ಕುಳ್ಳಿರಿಸಿಕೊಂಡು  ಹೂವಿನ ಹಡಗಲಿ ತಿಪ್ಪಾಪುರ ಮುಖ್ಯ ರಸ್ತೆಯಲ್ಲಿ ಗಡಿ ದುರುಗಮ್ಮ ಗುಡಿಯ ಹತ್ತಿರ ರಸ್ತೆಯಲ್ಲಿ, ಹೀರೆ ಹಡಗಲಿ ಕಡೆಯಿಂದ ಹಡಗಲಿ ಕಡೆಗೆ ಸಂಜೆ 07-00 ಗಂಟೆಗೆ ಬರುವಾಗ, ಸರ್ಪರಾಜ್ ತನ್ನ ಮೋಟಾರ್ ಸೈಕಲ್ನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಲಾಯಿಸಿ ರಸ್ತೆಯಲ್ಲಿ ಬಿದ್ದಿದ್ದ ಕಲ್ಲು ಮೇಲೆ ಹತ್ತಿಸಿ ಸುನಿತಾಳನ್ನು ಕೆಳಕ್ಕೆ ಕೆಡವಿದಾಗ, ಸುನಿತಾಳಿಗೆ ತಲೆಗೆ ಬಹಳ ರಕ್ತಗಾಯವಾಗಿದ್ದು, ಮುಖ ಮತ್ತು ಇತರೆ ಕಡೆ ತೆರೆಚಿದ ರಕ್ತಗಾಯಳಾಗಿರುತ್ತವೆಂದು  ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಇದ್ದ ಕಂಪ್ಯೂಟರಿ ಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Hosahalli PS
5 Cr.No:0239/2015
(IPC 1860 U/s 504,323,324,506 )
23/12/2015 Under Investigation
CASES OF HURT - Simple Hurt
Brief Facts :  ದಿನಾಂಕ:೨೨/೧೨/೨೦೧೫ ರಂದು ರಾತ್ರಿ ೧೧-೪೫ ಗಂಟೆಗೆ ಹೆಚ್.ಸಿ.೧೩೩ ರವರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಫಿರ್‍ಯಾದಿದಾರರ ಹೇಳಿಕೆಯನ್ನು ಪಡೆದು ಕೊಂಡು ಈ ದಿನ ದಿನಾಂಕ:೨೩/೧೨/೨೦೧೫ ರಂದು ಬೆಳಿಗ್ಗೆ ೦೯-೦೦ ಗಂಟೆಗೆ ಠಾಣೆಗೆ ಬಂದು ಒಪ್ಪಿಸಿದ್ದನ್ನು ಸ್ವೀಕರಿಸಿ ಪರಿಶೀಲಿಸಿ ನೋಡಲಾಗಿ ದಿನಾಂಕ:೨೨/೧೨/೨೦೧೫ ರಂದು ಮದ್ಯಾಹ್ನ ೧೨-೩೦ ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ತಮ್ಮ ಶಿವರಾಜ,ಆದಿ ಬಸಪ್ಪ,ಬಸವರಾಜಪ್ಪ, ಅಂಜಿನಿ ರವರುಗಳು ನಮ್ಮೂರಿನ ಸಿದ್ಲಿಂಗಸ್ವಾಮಿ ದೇವರ ದೇವಸ್ಥಾನದ ಮುಂದೆ ಇದ್ದಾಗ ನಮ್ಮೂರಿನ ನಮ್ಮ ಜನಾಂಗದ ತಿಪ್ಪೇಸ್ವಾಮಿ ತಂದೆ ಲೇಟ್  ನಿಂಗಪ್ಪ ಈತನು ನಮ್ಮಲ್ಲಿಗೆ ಬಂದು ನಮ್ಮೂರಿನ ಲಿಂಗಾಯತರ ಜನಾಂಗದ ಕುಂಟೀರಪ್ಪರ ರುದ್ರಣ್ಣ,ನಟರಾಜ, ರವರಿಗೆ ನಾನು  ಸಹ ದೇವಸ್ಥಾನದ ಆವಣರದಲ್ಲಿ ಕೂಲಿ ಕೆಲಸ ಮಾಡಿದ್ದೇನೆ. ನನಗೆ ಕೂಲಿ ಹಣ ಕೊಡಿ ಎಂದು ಕೇಳಿದನು ಅದಕ್ಕೆ ಅವರು ನೀನು ಕೆಲಸ ಮಾಡಿಲ್ಲ ಕೆಲಸ ಮಾಡಿದ ಎ.ಕೆ.ಸಿದ್ದಪ್ಪ, ಮತ್ತು ಅವರ ಕಡೆಯವರಿಗೆ ಕೂಲಿ ಹಣ ಕೊಡುವುದಾಗಿ ತಿಳಿಸಿದರು.ಅದಕ್ಕೆ ತಿಪ್ಪೇಸ್ವಾಮಿ ಅವರೊಂದಿಗೆ ಬಾಯಿ ಜಗಳ ಮಾಡಲು ಹೋದಾಗ ನಾನು ಆತನಿಗೆ ಬುದ್ದಿ ಹೇಳಿ ಕಳುಹಿಸಲು ಹೋದಾಗ ತಿಪ್ಪೇಸ್ವಾಮಿಯು ನನಗೆ ಲೇ ಸೂಳೆ ಮಗನೆ ನೀನು ಸುಮ್ಮನೆ ಹೋಗಲೆ ಎಂದು ಬೈದಾಡಿ ಅಲ್ಲೇ ಇದ್ದ ಬಂಡಿ ಕಣಗ ತೆಗೆದು ನನ್ನ ಬೆನ್ನಿಗೆ ಮೈ ಕೈU ಎರಡು ಮೊಣಕಾಲಿಗೆ,ಬಾಯಿಂದ ನನ್ನ ಬಲಗಡೆ ಮುಖಕ್ಕೆ ಕಚ್ಚಿರುತ್ತಾನೆಂದು,ಕೈಯಿಂದ ನನ್ನ ತೊರಡು ಬೀಜಕ್ಕೆ ಕೈ ಹಾಕಿ ಹಿಚುಕಿ ನೋವುಮಾಡಿರುತ್ತಾನೆಂದು,ಜಗಳ ಬಿಡಿಸಲು ಬಂದ ನನ್ನ ತಮ್ಮ ಶಿವರಾಜನಿಗೆ ತಿಪ್ಪೇಸ್ವಾಮಿಯು ಕುಡುಗೋಲನ್ನು ತೆಗೆದು ಕೊಂಡು ನನ್ನ ತಮ್ಮನ ತಲೆಯ ಬಲ ಬಾಗಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾನೆಂದು, ಹೊಡೆದು ನೋವು ಮಾಡಿರುತ್ತಾನೆಂದು, ಇದ್ದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Itagi PS
6 Cr.No:0068/2015
(IPC 1860 U/s 279,337 )
23/12/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ದಿನಾಂಕ: 22-12-2015 ರಂದು ಫಿರ್ಯಾದಿಯು ತನ್ನ ಸೇಹಿತನ ಮಾರುತಿ ಶಿಫ್ಟ್ ಡಿಜೈರ್ ಕಂಪನಿಯ ಸಿಲ್ವರ್ ಬಣ್ಣದ ಕಾರ್ ನಂ ಕೆ,ಎ 32/M-7626 ನೇದ್ದರಲ್ಲಿ ತನ್ನ ಹೆಂಡತಿಯಾದ ಶ್ರೀಮತಿ ಸವಿತಾ, ಮಗ ವೈಭವ್, 7 ವರ್ಷ ಮತ್ತು ಮಗಳಾದ ವೈಷ್ಣವಿ, 14 ವರ್ಷ, ಇವರನ್ನು ಕರೆದುಕೊಂಡು ದಾವಣಗೆರೆಯಿಂದ ಕಲಬುರಗಿಗೆ ಹೋಗುತ್ತಿರುವಾಗ ಇಟ್ಟಿಗಿ-ಹಗರಿಬೊಮ್ಮನಹಳ್ಳಿ ಎಸ್.ಹೆಚ್-25 ಟಾರ್ ರಸ್ತೆಯಲ್ಲಿ ನೆಲ್ಲುಕುದುರೆ ಗ್ರಾಮವನ್ನು ದಾಟಿದ ನಂತರದ ತಿರುವಿನ ರಸ್ತೆಯಲ್ಲಿ ರಾತ್ರಿ 11-45 ಪಿ.ಎಂಮ ಗಂಟೆಗೆ ಫೋಸರ್್ ಕಂಪನಿಯ ಟ್ಯಾಕ್ಸ್ ನಂ ಕೆ.ಎ 15/ಎಂ-4071 ನೇದ್ದನ್ನು ಅದರ  ಚಾಲಕ ಪ್ರತಾಪನು ಅತಿಜೋರಾಗಿ ಮತ್ತು ಅಜಾಗರೂಕತೆಯಿಂದ ನೆಡೆಸಿಕೊಂಡು ಬಂದು ತಾನು ಓಡಿಸುತ್ತಿದ್ದ ಮೇಲ್ಕಂಡ ಕಾರಿನ ಮುಂಭಾಗದ ಬಲಭಾಗದ ಟೈಯರ್ನ ಬಳಿ ಡಿಕ್ಕಿಹೊಡೆಸಿದ ರಭಸಕ್ಕೆ ನಮ್ಮ ಕಾರಿನ ಮುಂಭಾಗದ ಬಲಭಾಗದ ಟೈಯರ್ ಬ್ಲಸ್ಟ್ ಆಗಿ, ಕಾರಿನ ಮುಂಭಾಗದ ಎಡ ಭಾಗ ಜಖಂಗೊಂಡು ಜೊತೆಗೆ ಟ್ರ್ಯಾಕ್ಸ್ ಸಹಾ ಜಖಂಗೊಂಡು ಅಪಘಾತ ಸ್ಥಳದಿಂದ ಸ್ವಲ್ಪ ಮುಂಭಾಗಕ್ಕೆ ಹೋಗಿ ಎಡ ಮಗ್ಗಲಾಗಿ ಪಲ್ಟಿ ಹೊಡೆದು ಜಖಂಗೊಂಡಿದ್ದು, ತಮಗೆ ಹಾಗೂ ಟ್ರ್ಯಾಕ್ಸಿನಲ್ಲಿದ್ದ ಮೂರ್ನಾಲ್ಕು ಜನರಿಗೆ ಒಳಗಾಯಗಳಾಗಿರುತ್ತವೆ. ಜೊತೆಗೆ ಟ್ರ್ಯಾಕ್ಸ್ ರಸ್ತಗೆ ಅಡ್ಡಲಾಗಿ ಬಿದ್ದಿರುತ್ತದೆ ಎಂದು ಹಾಗೂ ಈ ಘಟನೆಗೆ ಕಾರಣನಾದ ಟ್ರ್ಯಾಕ್ಸ್ ನ ಚಾಲಕನಾದ ಪ್ರತಾಪ ತಂದೆ ನಾಗರಾಜಪ್ಪನ ಮೇಲೆ ಕಾನೂನು ಕ್ರಮ ಜರುಗಿಸಲು ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.
Kuduthini PS
7 Cr.No:0156/2015
(IPC 1860 U/s 504 ; SC AND THE ST  (PREVENTION OF ATTROCITIES) ACT, 1989 U/s 3(1)(10) )
23/12/2015 Under Investigation
SCHEDULED CASTE AND THE 
SCHEDULED TRIBES - Scheduled Caste
Brief Facts :  ಪಿರ್ಯಾದಿದಾರನು ಬೋವಿ ಜನಾಂಗಕ್ಕೆ ಸೇರಿದ್ದು, ಪಿರ್ಯಾದಿದಾನು 2013 ನೇ ಇಸ್ವಿಯಲ್ಲಿ ಹೊಸದರೋಜಿ ಗ್ರಾಮ ಪಂಚಾಯ್ತಿಯ ಪಿ.ಡಿ.ಓಗೆ ಅರ್.ಟಿ. ಕಾಯ್ದೆ ಅಡಿಯಲ್ಲಿ 13 ನೇ ಹಣಕಾಸು ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳ ಮಾಹಿತಿ ಮತ್ತು ಬಸವ ಹಾಗೂ ಇಂದಿರ ಅವಾಜ್ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಮಾಹಿತಿ ನೀಡುವಂತೆ ಅರ್ಜಿಯನ್ನು ನೀಡಿದ್ದು, ಅದರೆ ಮಾಹಿತಿಯನ್ನು ನೀಡಿರುವುದಿಲ್ಲ. ನಂತರ ಈಗ್ಗೆ 8 ತಿಂಗಳ ಹಿಂದೆ ಪಿರ್ಯಾದಿದಾರನು ಪಿ.ಡಿ.ಓ ಗೆ ಮಾಹಿತಿಯನ್ನು ಏಕೆ ನಿಲ್ಲವೆಂದು ಕೇಳಿದಾಗ ಪಿ.ಡಿ.ಓ ಈತನು ಏಕಾಎಕಿಯಾಗಿ ಲೇ ಬೋವಿ ಸೂಳೇ ಮಗನೇ ನಿಂದ ಜಾಸ್ತಿಯಾಯಿತು. ನೀನು ಏನು ಮಾಡಂಗಿದ್ದಿಯಾ ಮಾಡು, ನಾನೇನು ಮಾಡಬೇಕು ಅಂತಾ ಪಿ.ಡಿ.ಓ ಬೈದಿರುತ್ತಾನೆ. ಮತ್ತು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿ ಮತ್ತು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅದ್ದರಿಂದ ಪಿ.ಡಿ.ಓ ಗಂಗಾಧರ ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ರತಿ ಲಗತ್ತಿಸಿದೆ)
Sandur PS
8 Cr.No:0210/2015
(IPC 1860 U/s 279,337,304(A) )
23/12/2015 Under Investigation
MOTOR VEHICLE ACCIDENTS FATAL - State Highways
Brief Facts :  ಈ ದಿನ ದಿ: 23-12-2015ರಂದು ಮದ್ಯಾಹ್ನ 2-30ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್.ಸಿ.252 ರವರು ಗಾಯಾಳು ಪಿರ್ಯಾದಿ ಶ್ರೀಮತಿ. ಮೀನಾಕ್ಷಿ ಗಂಡ ಶ್ರೀಧರ, ಸಾ: ಹೊಸಪೇಟೆ ರವರ ದೂರನ್ನು ಪಡೆದು ಪಿಸಿ.898 ರವರ ಮೂಲಕ ಠಾಣೆಗೆ ಕಳುಹಿಸಿದ್ದನ್ನು ಸ್ವೀಕರಿಸಿ ಸಾರಾಂಶ ನೋಡಲು, ಈ ದಿನ ನನ್ನ ಗಂಡ ಶ್ರೀಧರ ರವರು ಸೇರಿ ಬೆಳಿಗ್ಗೆ 8-00 ಗಂಟೆಗೆ ನಾನು ಕಂಪ್ಯೂಟರ್ ಸರ್ವೀಸ್ ಮಾಡಲು ಕೋಡಿಹಳ್ಳಿಗೆ ಹೋಗಬೇಕಾಗಿದೆ, ನೀನು ರೆಡಿಯಾಗು ನಿನಗೆ ಯಶವಂತನಗರದಲ್ಲಿ ಬಿಟ್ಟು ನಾನು ಕೆಲಸ ಮುಗಿಸಿಕೊಂಡು ವಾಪಾಸ್ಸು ಯಶವಂತನಗರಕ್ಕೆ ಬರುತ್ತೇನೆಂದು ಹೇಳಿದ್ದು, ಆಗ ನಾವಿಬ್ಬರು ಹೊಸಪೇಟೆಯಿಂದ ನಮ್ಮ ಕವಸಕಿ ಬಜಾಜ್ ಮೋಟಾರು ಸೈಕಲ್ ನಂ: ಕೆಎ.35/ಜೆ.8232 ರಲ್ಲಿ ಕುಳಿತು ಕೋಡಿಹಳ್ಳಿಗೆ ಹೋಗಲು ಸಂಡೂರು ಮಾರ್ಗವಾಗಿ ಬರುತ್ತಿರುವಾಗ ನನ್ನ ಗಂಡನು ಮೋಟಾರು ಸೈಕಲ್ ನಡೆಸುತ್ತಿದ್ದು, ನಾನು ಹಿಂದೆ ಕುಳಿತ್ತಿದ್ದೆನು. ನನ್ನ ಗಂಡನು ಸುಶೀಲಾನಗರ ದಾಟಿದ ನಂತರ ಮೋಟಾರು ಸೈಕಲ್ ನ್ನು ಜೋರಾಗಿ ನಡೆಸುತ್ತಿದ್ದನು. ನಾವು ಬಂಗ್ಲೆ ಮಲ್ಲಿ ಕಾರ್ಜುನ ರವರ ಹೊಲದ ಸಮೀಪ ಬರುತ್ತಿರುವಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದು, ಆಗ ನನ್ನ ಗಂಡನು ಏಕಾಏಕೀ ಮೋಟಾರು ಸೈಕಲ್ ಬ್ರೇಕ್ ಹಾಕಿ ನಾಯಿಗೆ ಗುದ್ದಿ ಮೋಟಾರು ಸೈಕಲ್ ಸಮೇತ ನಾವಿಬ್ಬರು ರಸ್ತೆಯ ಮೇಲೆ ಬಿದ್ದಿದ್ದು, ಮೋಟಾರು ಸೈಕಲ್ ಸುಮಾರು 50 ಅಡಿ ದೂರದ ವರೆಗೆ ಉಜ್ಜಿಕೊಡು ಹೋಯಿತು. ನನ್ನ ಗಂಡನಿಗೆ ತಲೆಗೆ ಒಳಪೆಟ್ಟಾಗಿ ಎಡಕಿವಿಯಲ್ಲಿ ರಕ್ತ ಬರುತ್ತಿದ್ದು, ಆತನು ಮಾತಾಡುತ್ತಿರಲಿಲ್ಲ. ನನಗೆ ಎಡಭುಜಕ್ಕೆ ತರಚಿದ ಗಾಯವಾಯಿತು. ಆ ಸಮಯ ದಾರಿಯಲ್ಲಿ ಬಂದ ಸುಶೀಲಾನಗರದ ತಿಪ್ಪೇಸ್ವಾಮಿ ಮತ್ತು ಜೈಸಿಂಗ್ ಪುರದ ಎಂ.ಶ್ರೀಧರ ಇತರರು ಸೇರಿ ನಮಗೆ ಯಾವುದೋ ಒಂದು ಟ್ರ್ರಾಕ್ಸ್ ನಲ್ಲಿ ಹಾಕಿ ಸಂಡೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ನನ್ನ ಗಂಡನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದು, ಆದರೆ ನನ್ನ ಗಂಡನು ಚಿಕಿತ್ಸೆಯಲ್ಲಿ ಗುಣವಾಗದೇ ಮದ್ಯಾಹ್ನ 12-00 ಗಂಟೆಗೆ ಸತ್ತು ಹೋದನು. ಈ ಅಪಘಾತವು ಈ ದಿನ ಬೆಳಿಗ್ಗೆ 10-00 ಗಂಟೆಗೆ ನಡೆದಿರುತ್ತದೆ. ನನ್ನ ಗಂಡನು ಮೋಟಾರು ಸೈಕಲ್ ನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ದಾರಿಯಲ್ಲಿ ಅಡ್ಡ ಬಂದ ನಾಯಿಗೆ ಗುದ್ದಿ ಮೋಟರು ಸೈಕಲ್ ಸ್ಕಿಡ್ ಆಗಿ ಬೀಳಿಸಿದ್ದರಿಂದ ನಾನು ಗಾಯಗೊಂಡು ನನ್ನ ಗಂಡ ಶ್ರೀಧರ ರವರು ಸತ್ತು ಹೋಗಿದ್ದು, ಈ ಅಪಘಾತಕ್ಕೆ ನನ್ನ ಗಂಡನು ಕಾರಣನಾಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಇದ್ದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
Thoranagal PS
9 Cr.No:0188/2015
(INDIAN MOTOR VEHICLES ACT, 1988 U/s 187 ; IPC 1860 U/s 279,337 )
23/12/2015 Under Investigation
MOTOR VEHICLE ACCIDENTS NON-FATAL - State Highways
Brief Facts :  ನಿವೇದನೆ:-
          ಈ ದಿನ ದಿನಾಂಕ: 23/12/2015 ರಂದು 11;;00 ಎ.ಎಂ.ಗೆ ನಾನು ಠಾಣೆಯಲ್ಲಿ ಇರುವಾಗ  ಹೆಚ್.ಸಿ. 329 ರವರು   ಈ ದಿನ  ದಿನಾಂಕ: 23/12/2015 ರಂದು 10;00 ಎ.ಎಂ.ಗೆ ಸಂಜೀವನಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿ ಸುನಿಲ್ ಕುಮಾರ್ ತಿವಾರಿ ರವರು ನೀಡಿದ ದೂರಿನ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದು ದೂರಿನ ಸಾರಂಶವೆನೆಂದರೆನಾನು ಮೇಲಿನ ವಿಳಾಸದಲ್ಲಿ ಈಗ್ಗೆ ಸುಮಾರು 4 ವರ್ಷದಿಂದ  ವಾಸವಾಗಿದ್ದು, ಜೈ ಮಾತಾಜಿ ಗುಡಿಯಲ್ಲಿ ಪಂಡಿತ ಕೆಲಸ ಮಾಡುತ್ತೇನೆ. ಪೂಜೆ ಕಾರ್ಯ ಮುಗಿದನಂತರ ತೋರಣಗಲ್ಲು ಒಲ್ಡ್ ಗೇಟ್  ಬಳಿಯಲ್ಲಿ  ಇರುವ  ಜಿಂದಾಲ್ ಲಾರಿ ಟರ್ಮಿನಲ್ ಹತ್ತಿರ  ಬಂದು ಲಾರಿ ಹೆಲ್ಪರ್  ಕೆಲಸ ಮಾಡುತ್ತೆನೆ. ಲಾರಿಗಳಿಗೆ ಕ್ಲೀನರ್ ಇಲ್ಲದಿರುವಾಗ ಲಾರಿ ಡ್ರೈವರ್ ಗಳಾಗಲಿ  ಟ್ರಾನ್ಸ್ ಪೂರ್ಟನವರಾಗಲಿ ಲಾರಿ ಹೆಲ್ಪರ್ ಕೆಲಸಕ್ಕೆ ಕರೆದರೆ  ಕೂಲಿ ಹಣ ತೆಗೆದು ಕೊಂಡು ಅವರ ಲಾರಿಯಲ್ಲಿ ಲಾರಿ ಹೆಲ್ಪರ್ ಕೆಲಸಕ್ಕೆ ಹೋಗಿ ಜೆ.ಎಸ್.ಡಬ್ಲೂ, ಸ್ಟೀಲ್ ಲಿಮಿಟೆಡ್ ಪ್ಯಾಕ್ಟರಿ ಒಳಗೆ  ಹೋಗಿ ಲಾರಿಯಲ್ಲಿ ಲೋಡ್ ಮಾಡಿಸಿಕೊಂಡು ಹೊರಗೆ ಬರುತ್ತೇನೆ. ಅದರಂತೆ ದಿನಾಂಕ: 17/12/2015 ರಂದು ಮದ್ಯಾಹ್ನ 12;00 ಗಂಟೆಗೆ ಸುಮಾರಿ ಲಾರಿ ಟರ್ಮಿನಲ್ ನಲ್ಲಿ  ಇರುವಾಗ  ಶ್ರೀಗಣೇಶ್   ರೋಡ್ ಲೈನ್ಸ್ ನ ಲಾರಿ ನಂ ಜಿಜೆ/05/ವೈ.ವೈ/6485ರ ಚಾಲಕ ಮುನ್ನ ಕುಮ಻ರ್ ಸಿಂಗ್ ನನ್ನ ಹತ್ತಿರ ಬಂದು ನಮ್ಮ ಲಾರಿ ಲೋಡಿಂಗ ಗೆ  ಹೋಗಬೇಕಾಗಿದ್ದು ಲಾರಿ  ಹೆಲ್ಪರ್ ಕೆಲಸಕ್ಕೆ ಬಾ ಎಂದು  ಕರೆದಿದ್ದರಿಂದ  ನಾನು  ಅಯ್ತು ಎಂದು ಅತನ ಲಾರಿಗೆ ಹೆಲ್ಪರ್ ಕೆಲಸಕ್ಕೆ  ಹೋದೆನು. ಡ್ರೈವರ್ ಟ್ರಾನ್ಸ್ ಪೂರ್ಟ್ ನವರ ಕಡೆಯಿಂದ ಲೋಡಿಂಗ್ ಸ್ಲಿಪ್ ತೆಗೆದು ಕೊಂಡು ಬಂದಿದ್ದು ಮದ್ಯಾಹ್ನ 12;45 ಸುಮಾರಿಗೆ ನಾನು ಮುನ್ನಾ ಕುಮಾರ ಸಿಂಗ್ನ ಟ್ರೇಲರ್ ಲಾರಿ ನಂ ಜಿಜೆ/05/ವೈವೈ/6485ರಲ್ಲಿ ಹತ್ತಿ ಕೊಂಡು  ಲಾರಿ ಹೆಲ್ಪರ್ ಕೆಲಸಕ್ಕೆ ಬಮದೆನು.  ಲಾರಿಯನ್ನು ಚಾಲಕ ಮುನ್ನಾ ಕುಮ಻ರ್ ಸಿಂಗ್ ಲಾರಿ ಟರ್ಮಿನಲ್ ನಿಂದ ಜಿಂದಾಲ್ ಪ್ಯಾಕ್ಟರಿ ಒಳಗೆ ಹೋಗಲು ರಸ್ತೆಯಲ್ಲಿ ಅತೀವೇಗವಾಗಿ  ನಿರ್ಲಕ್ಷತೆಯಿಂದ  ಚಲಾಯಿಸಿಕೊಂಡು ಬರುತ್ತಿರುವಾಗ 
ಎಫ್.ಜಿ. ಗೇಟ್ ಸಮೀಪ ಬರುವ ರೈಲ್ವೆ ಟ್ರ್ಯಾಕ್-3  ಹತ್ತಿರ ಲಾರಿಯನ್ನು ಅದೇ ಸ್ಫಡ್ ನಲ್ಲಿ ಏಕಾ ಏಕಿ ಎಡಕ್ಕೆ ತಿರುಗಿಸಿ ನಂತರ ಬಲಕ್ಕೆ ಕಟ್ ಮಾಡಿದ್ದರಿಂದ ಲಾರಿ ಕ್ಯಾಬಿನ್ ಎಡಗಡೆ ಡೋರ್ ಲಾಕ್ ಓಪನ್ ಆಗಿದ್ದರಿಂದ ನಾನು ಲಾರಿಯಿಂದ ಕೆಳಗೆ ರಸ್ತೆ ಮೆಲೆ ಬಿದ್ದೆನು. ಆಗ ಸಮಯ ಮದ್ಯಾಹ್ನ 1;00 ಗಂಟೆಯಾಗಿತು. ನಾನು ಕೆಳಗೆ ಬಿದ್ದಿದ್ದನ್ನು ನೋಡಿ ಡ್ರೈವರ್ ಮುನ್ನಾಕುಮಾರ್ ಸಿಂಗ್  ಲಾರಿ ನಿಲ್ಲಿಸಿ ಕೆಳಗೆ ಇಳಿದು  ನನ್ನ ಹತ್ತಿರ ಬಂದಿದ್ದು ಅದರಂತೆ ದಾರಿಯಲ್ಲಿ ಹೋಗುತ್ತಿದ್ದ ಪಾಂಡೇ ಡೋಡ್ ಕ್ಯಾರಿಯರ್ಸ್  ಸಂತೋಷ ಪಾಂಡೇ ಹಾಗೂ ಇತರರು ಬಂದು ನನಗೆ ಉಪಚರಿಸಿ ನೋಡಲು ನನ್ನ ೆಡ ಕಾಲು ಹಿಮ್ಮಡಿಗೆ  ರಕ್ತ ಗಾಯ ಭುಜಕ್ಕೆ ,ತಲೆ ಹಿಂದೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕೋಡಲೇ ಜಿಂದಾಲ್ ಸಂಜೀವನಿನಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ  ವಿಷಯವನ್ನು  ಬಾಂಬೇಯಲ್ಲಿರುವ ನಮ್ಮ ಅಣ್ಣ ನಿಲ್ ಕುಮಾರ್  ತ್ರಿಪಾಟಿಗೆ ಪೂನ್ ಮಾಡಿ ತಿಳಿಸಿದೆನು. ಬಾಂಬೆಯಿಂದ ನನ್ನ ಬಳಿ ಬಂದಿರುತ್ತಾರೆ.
      ದಿನಾಂಕ: 17/12/2015 ರಂದು ಮದ್ಯಾಹ್ನ 1;00 ಗಂಟೆ ಸುಮಾರಿಗೆ ಜಿಂದಾಲ್ ಲಾರಿ ಟರ್ಮಿನಲ್ ನಿಂದ ಎಫ್.ಜಿ. ಗೇಟ್ ಕಡೆ ಬರುತ್ತಿರುವಾಗ ದಾರಿಯಲ್ಲಿ  ಲಾರಿಯನ್ನು ಚಾಲಕ ಮುನ್ನಾಕುಮಾರ್ ಸಿಂಗ್  ಅತೀವೇಗ ವಾಗಿ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು  ಬಂದು ರೈಲ್ವೆ ಗೇಟ್ -3 ಹತ್ತಿರ ಏಕಾ ಏಕಿ  ಕಟ್ ಮಾಡಿದ್ದರಿಂದ  ಈ ಅಪಘಾತ ಸಂಭವಿಸಿರುತ್ತದೆ. ಈ ಘಟನೆಗೆ ಕಾರಣನಾದ ಟ್ರೇಲರ್ ಲಾರಿ ನಂ ಜಿಜೆ/05/ವೈ/ವೈ/6485ರ ಚಾಲಕ ಮುನ್ನಾ ಕುಮಾರ್ ಸಿಂಗ್ ಈತನ ವಿರುದ್ದ ಕಾನೂನು  ಕ್ರಮ ಜರುಗಿಸಲು ಮನವಿ ನಮ್ಮ ಅಣ್ಣ ಬಾಂಬೇಯಿಂದ  ಬಂದ ನಂತರ ಈ ಬಗ್ಗೆ  ಚರ್ಚಿಸಿ ತಡವಾಗಿ ದೂರು ನೀಡಿರುತ್ತೇನೆ.  ನಾನು ಹಿಂದ ಹೇಳಿದ್ದನ್ನು ಕನ್ನಡದಲ್ಲಿ ಬರೆದು ಕೊಂಡು  ಅನುವಾದಿಸಿ ಹೇಳಿದ್ದು ಸರಿ ಇದೆ ಎಂದು ದೂರಿನ ಮೇರೆಗೆ ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ. (ಪ್ರ.ವ.ವ.ಗೆ ಪಿರ್ಯಾದಿ ದೂರನ್ನು ಲಗತ್ತಿಸಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ