ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 01-12-2014
ಪತ್ರಿಕಾ ಪ್ರಕಟಣೆ
ಪಿರ್ಯಾದಿದಾರರಾದ ಶ್ರೀ.ವಿರೇಶ್ ತಂದೆ ಲೇಟ್ ಎಲ್.ನಾರಾಯಣಪ್ಪ ವ: 57 ವರ್ಷ, ವಾಸ: ಸಾಯಿ ಬಾಬಾ ಗುಡಿ ಹತ್ತಿರ, ವಾರ್ಡ್ ನಂ. 24, ಬಾರ್ ಬಾರ್ ಸ್ಟ್ರೀಟ್, ಕೌಲ್ ಬಜಾರ್, ಬಳ್ಳಾರಿ ಇವರು ದೂರು ನೀಡಿದ್ದೇನೆಂದರೆ, ಅವರ ಮೂರನೇ ಮಗಳಾದ ವನಿತಾ, 18 ವರ್ಷ, ಇವಳಿಗೆ ಇತ್ತಿಚ್ಚಗೆ ಮದುವೆ ಮಾಡಲು ಹುಡುಗನನನ್ನು ನೋಡುತ್ತಿದ್ದೇವು. ಆಗ ನನ್ನ ಮಗಳು ನನಗೆ ಮದುವೆ ಇಷ್ಠ ಇಲ್ಲ ಎಂದು ಹೇಳುತ್ತಿದ್ದಳು. ದಿನಾಂಕ: 29/11/2014 ರಂದು ಒಬ್ಬ ಹುಡುಗ ಬಂದು ನೋಡಿ, ಒಪ್ಪಿಕೊಂಡು ಹೋಗಿರುತ್ತಾನೆ. ನನ್ನ ಮಗಳಿಗೆ ಮದುವೆ ಮಾಡುತ್ತಿದ್ದೇವೆ ಎಂದು, ತನಗೆ ಮದುವೆ ಮಾಡಿಕೊಳ್ಳಲು ಇಷ್ಠವಿಲ್ಲದೇ ಇದ್ದುದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಬೆಳಗಿನ ಜಾವ 4-30 ಗಂಟೆಗೆ ಮನೆಯಲ್ಲಿ ಎಲ್ಲಾರು ಮಲಗಿರುವಾಗ, ಯಾರಿಗೂ ಹೇಳದೇ, ಕೇಳದೇ ಎಲ್ಲಿಗೋ ಹೋಗಿರುತ್ತಾಳೆ. ನಂತರ ನನ್ನ ಮಗಳನ್ನು ನಮ್ಮ ಏರಿಯಾದಲ್ಲಿ ಹಾಗೂ ಬಳ್ಳಾರಿಯ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗಳು ಅನಿತಳನ್ನು ಹುಡುಕಿಕೊಡಲು ಕೊಟ್ಟ ದೂರಿನ ಮೇರೆಗೆ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಉತ್ತಂಗಿ ಗ್ರಾಮದ ಶ್ರೀ. ಗುರು ಕೊಟ್ಟೂರೇಶ್ವರ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಮುರಿದು ದೇವರಿಗೆ ಸಂಬಂಧಿಸಿದ ಬೆಳ್ಳಿ ಸಾಮಾನುಗಳ ಕಳವು.
ದಿನಾಂಕ 29-11-2014 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 30-11-2014 ರಂದು ಬೆಳಗ್ಗೆ 5-15 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದುದಾರನು ಪೂಜಾರಿಕೆ ಮಾಡುವ ಉತ್ತಂಗಿ ಗ್ರಾಮದ ಚೆನ್ನಪ್ಪ ಸರ್ಕಲಿನ ಪಕ್ಕದಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿದ್ದ 1] ಅಂದಾಜು 2 ಕೆ.ಜಿ ಬೆಳ್ಳಿಯ ಶ್ರೀ ಗುರು ಕೊಟ್ಟೂರೇಶ್ವರ ದೇವರ ಮೂರ್ತಿ, 2] ಅಂದಾಜು 1 ಕೆ.ಜಿ ಬೆಳ್ಳಿಯ ದೇವರ 4 ಪಾದರಕ್ಷೆಗಳು (ಆವಿಗೆ), 3] ಅಂದಾಜು 1 ಕೆ.ಜಿ ಬೆಳ್ಳಿಯ 1 ದೊಡ್ಡ ಹಾಗೂ 3 ಸಣ್ಣ ಛತ್ರಿಗಳು, ಎಲ್ಲಾ ಸೇರಿ ಒಟ್ಟಾಗಿ ಅಂದಾಜು ರೂ. 1,28,000/- ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಯಾವುದೋ ಕಬ್ಬೀಣದ ರಾಡಿನಿಂದ ಸದರಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮೀಟಿ ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪೊಲೀಸ್ ಸೂಪರಿಂಟೆಂಡೆಂಟ್,
ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.