ಭಾನುವಾರ, ನವೆಂಬರ್ 30, 2014

PRESS NOTE AS ON 01-12-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 01-12-2014
ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ನಗರದ ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ಕೌಲ್‍ಬಜಾರ್‍ನ ಬಾರ್‍ಬಾರ್ ಬೀದಿಯಿಂದ 18 ವರ್ಷದ ಹುಡುಗಿ ಮನೆಯಿಂದ ಕಾಣೆಯಾಗಿರುವ ಬಗ್ಗೆ. 

       ಪಿರ್ಯಾದಿದಾರರಾದ ಶ್ರೀ.ವಿರೇಶ್ ತಂದೆ ಲೇಟ್ ಎಲ್.ನಾರಾಯಣಪ್ಪ ವ: 57 ವರ್ಷ, ವಾಸ: ಸಾಯಿ ಬಾಬಾ ಗುಡಿ ಹತ್ತಿರ, ವಾರ್ಡ್ ನಂ. 24, ಬಾರ್ ಬಾರ್ ಸ್ಟ್ರೀಟ್, ಕೌಲ್ ಬಜಾರ್, ಬಳ್ಳಾರಿ ಇವರು ದೂರು ನೀಡಿದ್ದೇನೆಂದರೆ, ಅವರ  ಮೂರನೇ ಮಗಳಾದ ವನಿತಾ, 18 ವರ್ಷ, ಇವಳಿಗೆ ಇತ್ತಿಚ್ಚಗೆ ಮದುವೆ ಮಾಡಲು ಹುಡುಗನನನ್ನು ನೋಡುತ್ತಿದ್ದೇವು. ಆಗ ನನ್ನ ಮಗಳು ನನಗೆ ಮದುವೆ ಇಷ್ಠ ಇಲ್ಲ ಎಂದು ಹೇಳುತ್ತಿದ್ದಳು. ದಿನಾಂಕ: 29/11/2014 ರಂದು ಒಬ್ಬ ಹುಡುಗ ಬಂದು ನೋಡಿ, ಒಪ್ಪಿಕೊಂಡು ಹೋಗಿರುತ್ತಾನೆ. ನನ್ನ ಮಗಳಿಗೆ ಮದುವೆ ಮಾಡುತ್ತಿದ್ದೇವೆ ಎಂದು, ತನಗೆ ಮದುವೆ ಮಾಡಿಕೊಳ್ಳಲು ಇಷ್ಠವಿಲ್ಲದೇ ಇದ್ದುದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಬೆಳಗಿನ ಜಾವ 4-30 ಗಂಟೆಗೆ ಮನೆಯಲ್ಲಿ ಎಲ್ಲಾರು ಮಲಗಿರುವಾಗ, ಯಾರಿಗೂ ಹೇಳದೇ, ಕೇಳದೇ ಎಲ್ಲಿಗೋ ಹೋಗಿರುತ್ತಾಳೆ. ನಂತರ ನನ್ನ ಮಗಳನ್ನು ನಮ್ಮ ಏರಿಯಾದಲ್ಲಿ ಹಾಗೂ ಬಳ್ಳಾರಿಯ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗಳು ಅನಿತಳನ್ನು ಹುಡುಕಿಕೊಡಲು ಕೊಟ್ಟ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  
2) ಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಉತ್ತಂಗಿ ಗ್ರಾಮದ ಶ್ರೀ. ಗುರು ಕೊಟ್ಟೂರೇಶ್ವರ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಮುರಿದು ದೇವರಿಗೆ ಸಂಬಂಧಿಸಿದ ಬೆಳ್ಳಿ ಸಾಮಾನುಗಳ ಕಳವು.

       ದಿನಾಂಕ 29-11-2014 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 30-11-2014 ರಂದು ಬೆಳಗ್ಗೆ 5-15 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದುದಾರನು ಪೂಜಾರಿಕೆ ಮಾಡುವ ಉತ್ತಂಗಿ ಗ್ರಾಮದ ಚೆನ್ನಪ್ಪ ಸರ್ಕಲಿನ ಪಕ್ಕದಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿದ್ದ 1] ಅಂದಾಜು 2 ಕೆ.ಜಿ ಬೆಳ್ಳಿಯ ಶ್ರೀ ಗುರು ಕೊಟ್ಟೂರೇಶ್ವರ ದೇವರ ಮೂರ್ತಿ, 2] ಅಂದಾಜು 1 ಕೆ.ಜಿ ಬೆಳ್ಳಿಯ ದೇವರ 4 ಪಾದರಕ್ಷೆಗಳು (ಆವಿಗೆ), 3] ಅಂದಾಜು 1 ಕೆ.ಜಿ ಬೆಳ್ಳಿಯ 1 ದೊಡ್ಡ ಹಾಗೂ 3 ಸಣ್ಣ ಛತ್ರಿಗಳು, ಎಲ್ಲಾ ಸೇರಿ ಒಟ್ಟಾಗಿ ಅಂದಾಜು ರೂ. 1,28,000/- ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಯಾವುದೋ ಕಬ್ಬೀಣದ ರಾಡಿನಿಂದ ಸದರಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮೀಟಿ ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                         
                                                                                                                      ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                                 ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100  ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ನವೆಂಬರ್ 26, 2014

PRESS NOTE AS ON 26-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 26-11-2014
ಪತ್ರಿಕಾ ಪ್ರಕಟಣೆ 

1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಸೋಮಸಮುದ್ರ ಗ್ರಾಮದ ಹತ್ತಿರ  ಯಾವುದೋ ಲಾರಿಯ ಚಾಲಕನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಡಿಕ್ಕಿ ಪಡಿಸಿದ್ದು, ಒಬ್ಬ ಮಹಿಳೆ ಸಾವು ಹಾಗು 9 ಜನರಿಗೆ ಗಾಯಗಳು ಆಗಿರುತ್ತವೆ.

         ದಿನಾಂಕ 25/11/2014 ರಂದು ಬೆಳಿಗ್ಗೆ 4:30 ಗಂಟೆ ಸುಮಾರಿಗೆ ಸೋಮಸಮುದ್ರ ಗ್ರಾಮದ ಹತ್ತಿರ ಇರುವ ಉದಯಗೌಡರವರ ಗೋಡಾನ್ ಹತ್ತಿರ ಸಿರುಗುಪ್ಪ-ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಯಾವುದೋ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಆಜಾಗೂರುಕತೆಯಿಂದ ಚಲಾಯಿಸಿಕೊಂಡು ನಮ್ಮ ಹಿಂದಿನಿಂದ ಬಂದು ರಸ್ತೆಯ ಎಡಭಾಗದಲ್ಲಿ ಬಳ್ಳಾರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ನನ್ನ ತಮ್ಮನ ಹೆಂಡತಿ ಕಾವೇರಿಗೆ ಹಿಂದಿನಿಂದ ಡಿಕ್ಕಿಹೊಡೆದು ಕಾವೇರಿ ಸಾವಿಗೆ ಕಾರಣನಾಗಿ, ನಂತರ ಮುಂದೆ ಹೊರಟಿದ್ದ ನಮ್ಮ ಗ್ರಾಮದ ಪಾರ್ವತಿ ಗಂಡ ಶಿವಲಿಂಗಪ್ಪ. ಅಂಜಿನಮ್ಮ ಗಂಡ ಜಂಭಣ್ಣ,  ಪಾರ್ವತಿ ಗಂಡ ಬಸವರಾಜ ಮಹಾಲಕ್ಷ್ಮಿ ತಂದೆ ವಿರೇಶ,  ನಾಗಮ್ಮ ಹೊನ್ನೂರಮ್ಮ ಪಾರ್ವತಿ ಗಂಡ ಚಿದಾನಂದ ತಿಪ್ಪಮ್ಮ. ಈರಮ್ಮ ಒಳಪೆಟ್ಟು ಮತ್ತು ರಕ್ತಗಾಯಗಳನ್ನುಂಟು ಮಾಡಿ ಲಾರಿಯನ್ನು ನಿಲ್ಲಿಸದೇ  ಪರಾರಿಯಾದ  ಲಾರಿ ಚಾಲಕನ ವಿರುದ್ದ ಕ್ರಮಕೈಗೊಳ್ಳಲು ಕೊಟ್ಟ ದೂರಿನ ಮೇರೆಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.

2) ಕುಡುತಿನಿ ಠಾಣೆ ಸರಹದ್ದಿನ ತಿಮ್ಮಲಾಪುರ ಗ್ರಾಮದ ಹೆಚ್.ಎಲ್.ಸಿ. ಕಾಲುವೆಯಲ್ಲಿ ಪತಿಯು ತನ್ನ ಹೆಂಡತಿಯನ್ನು ವರದಕ್ಷಣೆ ಹಾಗು ಕಿರುಕುಳದಿಂದ ನೀರಿನಲ್ಲಿ ತಳ್ಳಿ ಸಾಯಿಸಿರುತ್ತಾನೆ. 

       ಫಿರ್ಯಾದಿದಾರರಾದ ಶ್ರೀ. ಶಂಕರ್ ಲಿಂಗಪ್ಪ ವಾ: ಕಪ್ಪಗಲ್ ಗ್ರಾಮ ಇವಳ ಮಗಳಾದ ಶ್ರೀಮತಿ. ಸೌಜನ್ಯ ಈಕೆಯನ್ನು ತನ್ನ ಗಂಡನಾದ ಮಂಜುನಾಥನಿಗೆ ಮದುವೆ ಮಾಡಿಕೊಟ್ಟಿದ್ದು, ನಂತರ ಗಂಡ-ಹೆಂಡತಿ 3 ತಿಂಗಳು ಚೆನ್ನಾಗಿದ್ದು, ತದನಂತರ ತನ್ನ ಮಗಳಿಕೆ ಕಿರುಕುಳ ನೀಡುವುದು, ಹೊಡೆಯುವುದು ಮತ್ತು ಆಕೆಯ ಅತ್ತೆ ಮಾವ ಇವರು ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲ, ನಡೆತೆ ಸರಿಯಾಗಿಲ್ಲ ಎಂದು ನಿಂದಿಸುವುದು ಮತ್ತು ನಿಮ್ಮಪ್ಪನ ಮನೆಯಿಂದ ಏನು ತಂದಿಲ್ಲ ಎಂದು ದಿನ ನಿತ್ಯ ಕಿರುಕುಳ ಕೊಡುತ್ತಿದ್ದು, ದಿನಾಂಕ: 24-11-2014 ರಂದು ಸೌಜನ್ಯಳನ್ನು ಡಾಕ್ಟರ್ ಹತ್ತಿರ ತೋರಿಸಲು ತೋರಣಗಲ್ಲುಗೆ ಕರೆದುಕೊಂಡು ತಿಮ್ಮಲಾಪುರ ಗ್ರಾಮಕ್ಕೆ ವಾಪಾಸು ಬರುವಾಗ ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಡುದಾರಿಯಲ್ಲಿ ಗಾಡಿಯನ್ನು ನಿಲ್ಲಿಸಿ ಸೌಜನ್ಯಗಳಿಗೆ ಕಾಲುವೆಗೆ ತಳ್ಳಿ ಸಾಯಿಸಿರುತ್ತಾನೆಂದು ಇದ್ದ ದೂರಿನ ಮೇರೆಗೆ ಕುಡುತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತದೆ.

                                                                                         ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                          ಬಳ್ಳಾರಿ.                                                                                                                                   
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಸೋಮವಾರ, ನವೆಂಬರ್ 24, 2014

PRESS NOTE AS ON 25-11-2014




                                                                                                                      ಜಿಲ್ಲಾ ಪೊಲೀಸ್ ಕಾರ್ಯಲಯ
                                                                                                                     ಬಳ್ಳಾರಿ, ದಿನಾಂಕ: 25-11-2014
                                                              ಪತ್ರಿಕಾ ಪ್ರಕಟಣೆ

1) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯ ಗುಡಿ ಹತ್ತರದ ಮನೆಯಿಂದ 30 ವರ್ಷದ ಹೆಣ್ಣುಮಗಳು ಕಾಣೆಯಾದ ಬಗ್ಗೆ. 

ಫಿರ್ಯಾದುದಾರರಾದ ದಾಸರಗಾದಿಲಿಂಗ ತಂದೆ ದಾಸರ ಅಂಜಿನೇಯ, 36 ವರ್ಷ, ದಾಸರ ಜನಾಂಗ, ಕೂಲಿ ಕೆಲಸ, ವಾಸ: ಬ್ರಹ್ಮಯ್ಯಗುಡಿ ಹತ್ತಿರ, ಕಪ್ಪಗಲ್ ರಸ್ತೆ, ಬಳ್ಳಾರಿ ಇವರ ಹೆಂಡತಿಯಾದ ಶ್ರೀಮತಿ. ವರಲಕ್ಷ್ಮೀ ವಯಸ್ಸು 30 ವರ್ಷ, ಇವರು ದಿನಾಂಕ 19-11-2014 ರಂದು ಬೆಳಿಗ್ಗೆ ಸುಮಾರು 5-30 ಗಂಟೆಯಿಂದ 6-00 ಗಂಟೆಯ ಸಮಯದಲ್ಲಿ ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯಗುಡಿ ಹತ್ತಿರ ಇರುವ ಫಿರ್ಯಾಧಿದಾರರ ಗುಡಿಸಲು ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋದವಳು ವಾಪಸ್ಸು ಮನೆಗೆ ಬಾರದೇ  ಕಾಣೆಯಾಗಿರುತ್ತಾಳೆಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿ ಮಾಡಿಕೊಡಲು ಕೋರಿ ದೂರು ಇದ್ದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                       ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                   ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಗುರುವಾರ, ನವೆಂಬರ್ 20, 2014

PRESS NOTE AS ON 18-11-2014

 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 18-11-2014

ಪತ್ರಿಕಾ ಪ್ರಕಟಣೆ 

1) ಹಿರೇಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಮೈಲಾರ-ಕುರುವತ್ತಿ ಕಡೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ಲಿಸಿ ಟೈರ್ ಗಾಡಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಚಾಲಕನ ಸಾವು.

       ದಿನಾಂಕ: 16-11-2014 ರಂದು ರಾತ್ರಿ 10-00 ಗಂಟೆಗೆ ಸುಮಾರಿಗೆ ಮೈಲಾರ ಗ್ರಾಮದಿಂದ ಕುರುವತ್ತಿಗೆ ಹೋಗುವ ರಸ್ತೆಯಲ್ಲಿ ಆರೋಪಿಯಾದ ಬಸವರಾಜ ತನ್ನ ಆಟೋ ನಂ ಕೆ.ಎ-17 ಎ-9065 ರ ಚಾಲಕ ತನ್ನ ಆಟೋವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತ ರಸ್ತೆಯ ಎಡಬದಿ ಕಚ್ಚಾರಸ್ತೆಯಲ್ಲಿ ನಿಲ್ಲಿಸಿದ್ದ ಟೈರ್ ಬಂಡಿಗೆ ಡಿಕ್ಕಿ ಹೊಡೆಸಿದ್ದರಿಂದ ಆಟೋ ಬಲ ಮಗ್ಗುಲಾಗಿ ಪಲ್ಟಿಯಾಗಿದ್ದು, ಆಟೊ ಚಾಲಕ ಆರೋಪಿ ಬಸವರಾಜ, 30 ವರ್ಷ, ವಾ: ಮೈಲಾರ ಗ್ರಾಮ ಈತನಿಗೆ ತಲೆಯ ಹಿಂಬಾಗಕ್ಕೆ ತೀವ್ರವಾದ ರಕ್ತಗಾಯವಾಗಿದ್ದು ಆಟೋ ಹಿಂಬದಿಯಲ್ಲಿದ್ದ ಹೊನ್ನೂರುಸಾಬ್‍ಗೆ ಯಾವುದೇ ಗಾಯಗಳು ಆಗಿರುವುದಿಲ್ಲವೆಂದು ಗಾಯಗೊಂಡ ಬಸವರಾಜನಿಗೆ ಗುತ್ತಲ ಆಸ್ಪತ್ತೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಬಸವರಾಜ ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತದೆ.  

2) ಬಳ್ಳಾರಿ ನಗರದ ಬ್ರೂಸ್‍ಪೇಟೆ ಠಾಣೆ ಸರಹದ್ದಿನ ಇಂದಿರಾನಗರದಿಂದ 19 ವರ್ಷದ ಹುಡುಗಿ ಕಾಣೆಯಾಗಿರುವ ಬಗ್ಗೆ.   

          ದಿನಾಂಕ 14-11-14 ರಂದು ರಾತ್ರಿ 10-00 ಗಂಟೆಯಿಂದ ದಿ: 15-11-2014 ರ ಬೆಳಗಿನ ಜಾವ 03-00 ಗಂಟೆ ಮಧ್ಯದ ಅವಧಿಯಲ್ಲಿ ಪಿರ್ಯಾಧಿದಾರರಾದ ಶ್ರೀಮತಿ ತಿಮ್ಮಕ್ಕ ಗಂಡ ತಿಮ್ಮಪ್ಪ,  48 ವರ್ಷ, ವಾಸ: ಇಂದಿರಾ ನಗರ, ಬಳ್ಳಾರಿ ಇವರು ತನ್ನ ಮಗಳಾದ ಕು:ಉಷಾ, 19 ವರ್ಷ, ವಾ: 16 ನೇ ವಾರ್ಡ, ಶ್ರೀರಾಂಪುರ ಕಾಲೋನಿ, ಇಂದಿರಾನಗರ, ಬಳ್ಳಾರಿ ಇವಳೊಂದಿಗೆ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 15-11-14 ರಂದು ಬೆಳಗಿನ ಜಾವ 03-30 ಗಂಟೆಗೆ ಪಿರ್ಯಾಧಿದಾರರು ಎದ್ದು ನೋಡಲು ಉಷಾ ರವರು ಇರದೇ ಕಾಣೆಯಾಗಿರುತ್ತಾಳೆಂದು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                
                                                                                                                         ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                                               ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

PRESS NOTE AS ON 19-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 19-11-2014
ಪತ್ರಿಕಾ ಪ್ರಕಟಣೆ 

1) ತೆಕ್ಕಲಕೋಟೆ ಪೊಲೀಸ್ ಠಾಣೆ ಸರಹದ್ದಿನ ಸಿರುಗುಪ್ಪ-ಬಳ್ಳಾರಿ ರಸ್ತೆಯ ಎಸ್.ಹೆಚ್.-19 ರಸ್ತೆಯ ಹೆಂಗಸರ ಶೌಚಾಲಯದ ಬಳಿ ಯಾವುದೋ ವಾಹನ ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವು.

      ದಿನಾಂಕ 18-11-2014 ರಂದು ಪಿರ್ಯಾದಿದಾರರಾದ ಶ್ರೀ ಹರಿಜನ ಗೂಳೆಪ್ಪ ತಂದೆ ಹರಿಜನ ಕಂದಾರಪ್ಪ 41 ವರ್ಷ, ಹರಿಜನರು, ವ್ಯವಸಾಯ, ವಾ: 20 ನೇ ವಾರ್ಡ ದೇವಿನಗರ ರವರು ದೂರು ನೀಡಿದ್ದೇನೆಂದರೆ,  ದಿನಾಂಕ:17-11-2014 ರಂದು ತಮ್ಮ ಹೊಲದಿಂದ ಎಸ್.ಹೆಚ್-19 ರಸ್ತೆಯ ಮೂಲಕ ಮನೆಗೆ  ವಾಪಸ್ಸಾಗುತ್ತಿರುವಾಗ ಸಂಜೆ 07-30 ಗಂಟೆಗೆ ಸೂಮಾರಿಗೆ ತಮ್ಮೂರಿನ ಹೆಂಗಸರ ಉಪಯೋಗಕ್ಕಾಗಿ ಕಟ್ಟಿರುವ ಶೌಚಾಲಯದ ಬಳಿ ಎಸ್.ಹೆಚ್-19 ಸಿರುಗುಪ್ಪ-ಬಳ್ಳಾರಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಮಕಾಡೆ ಬಿದ್ದಿದ್ದು, ಹೋಗಿ ನೋಡಲು ನಮ್ಮ ಸಂಭಂಧಿಕನಾದ ಓಬಳೇಶ ತಂದೆ ದಸ್ತಗಿರಪ್ಪ, 18 ವರ್ಷ, ಹರಿಜನರು ಸಾ: ದೇವಿನಗರ ಕ್ಯಾಂಪ್ ಆಗಿದ್ದು ಕಿವಿ, ಮೂಗಿನಲ್ಲಿ ರಕ್ತ ಜಿನುಗುತಿದ್ದು, ಮೈ, ಕೈ-ಕಾಲುಗಳು ತೆರಚಿದ್ದವು, ಇವನನ್ನು ಚಿಕಿತ್ಸೆಗಾಗಿ ಸಿರುಗುಪ್ಪ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸಗೆ ದಾಖಲಿಸಿದ್ದು, ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಓಳೇಶನು ಮೃತನಾಗಿರುತ್ತಾನೆ. ಅವನು ಮೂಕನಾಗಿದ್ದರಿಂದ,  ಈ ಘಟನಯ ಬಗ್ಗೆ ಹೆಚ್ಚಿನ ವಿಷಯ ಕೆಳಲಾಗಿಲ್ಲ ಅಪಘಾತ ಸ್ಥಳದ ಸನ್ನಿವೇಶ ಮತ್ತು ಮೃತ ಓಬಳೇಶನ ಮೈಮೇಲಿನ  ಗಾಯಗಳನ್ನು ಗಮನಿಸಿದಲ್ಲಿ, ಯಾವುದೋ ವಾಹನದ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಓಬಳೇಶನಿಗೆ ಡಿಕ್ಕಿ ಪಡಿಸಿ ಸಾವಿಗೆ ಕಾರಣವಾಗಿದ್ದು,  ಸದರಿ ವಾಹನವನ್ನು ಪತ್ತೆ ಮಾಡಿ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ ಮೇರೆಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
 
2) ಹೊಸಪೇಟೆ ಠಾಣೆ ಸರಹದ್ದಿನ ಉಕ್ಕಡಕೇರೆಯ ಮನೆಯಿಂದ 14 ವರ್ಷದ ಬಾಲಕ ಕಾಣೆಯಾಗಿರುವ ಬಗ್ಗೆ. 

ದಿನಾಂಕ: 18-11-2014 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದುದಾರರಾದ ಶ್ರೀ. ಯಲ್ಲಪ್ಪ.ಟಿ. ತಂದೆ ಜಂಬಪ್ಪ, 46 ವರ್ಷ ನಾಯಕರು, ವಾ: ಉಕ್ಕಡಕೇರಿ, ಹೊಸಪೇಟೆ ರವರು ಕೊಟ್ಟ ದೂರು ಏನೆಂದರೆ, ತನ್ನ ಮಗ ಧೀರಜ್, 14 ವರ್ಷ ಈತನು ಹೊಸಪೇಟೆಯ ಜೇಸಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು, ದಿನಾಂಕ: 15-11-2014 ರಂದು ಶನಿವಾರ ಎಂದಿನಂತೆ ಶಾಲೆಗೆ ಹೋಗಿ ಮದ್ಯಾಹ್ನ ಮನೆಗೆ ವಾಪಾಸು ಬಂದು ಸಂಜೆ ಸುಮಾರು 5-15 ಗಂಟೆಯ ಸಮಯದಲ್ಲಿ ತಾನು ತನ್ನ ಸ್ನೇಹಿತರ ಹತ್ತಿರ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಈತನು ಹೋಗುವಾಗ ಹಸಿರು ಬಣ್ಣದ ಟೀ ಷರ್ಟ್, ಕೆಂಪು ಬಣ್ಣದ ಹಾಫ್ ಪ್ಯಾಂಟ್ ತೊಟ್ಟಿದ್ದು, ಕನ್ನಡ ಇಂಗ್ಲೀಷ್ ಹಿಂದಿ ಮತ್ತು ಕೊಂಕಣೆ ಮಾತನಾಡುತ್ತಾನೆ. ರಾತ್ರಿಯಾದರೂ ಬಾರದೇ ಇದ್ದುದರಿಂದ ತನ್ನ ಮಗನ ಸ್ನೇಹಿತರ ಮನೆಗಳಲ್ಲಿ ಮತ್ತು ತಮ್ಮ ಸಂಬಂಧಿಕರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಗಲಿಲ್ಲ, ನಂತರ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲವೆಂದು ಸದರಿ ಹುಡುಗನನ್ನು ಹುಡುಕಿ ಕೊಡಲು ನೀಡಿದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿರುತ್ತುದೆ.  
      
                                                 ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                         ಬಳ್ಳಾರಿ.                                                                                                                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

PRESS NOTE AS ON 20-11-2014


ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 20-11-2014

ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಬೊಮ್ಮನಾಳ್ ರಸ್ತೆಯ ಬೇಕರಿ ಮುಂದೆ ನಡೆಯುತ್ತಿದ್ದ ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಯ ಬಂಧನ. 
        ದಿಃ17-11-2014 ರಂದು ಮದ್ಯಾಹ್ನ 01-45 ಗಂಟೆಗೆ ಪಿ.ಐ ಬ್ರೂಸ್‍ಪೇಟೆ ರವರು ಠಾಣೆಯಲ್ಲಿರುವಾಗ ಬಳ್ಳಾರಿ ನಗರದ ಮಿಲ್ಲರಪೇಟೆ ಬೊಮ್ಮನಾಳ್ ರಸ್ತೆಯಲ್ಲಿರುವ ಬೇಕರಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಸೀಬಿನ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಪಿ.ಎಸ್.ಐ. ರವರಿಗೆ ಸೂಚಿಸಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 2-10 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಪಾದಿತನಾದ ಹುಲುಕುಂಟೇಶ್ವರ ಆಚಾರಿ ರವರನ್ನು ಹಿಡಿದು ಅತನಿಂದ ಜೂಜಾಟಕ್ಕೆ ಇಟ್ಟಿದ್ದ ನಗದು ಹಣ ರೂ. 5,135, /-ರೂ, 6 ಮಟ್ಕಾ ಪಟ್ಟಿ ಒಂದು ಬಾಲ್‍ಪೆನ್ ನೇದ್ದವುಗಳನ್ನು ಜಪ್ತು ಪಡಿಸಿಕೊಂಡು ಆತನಿಗೆ ವಿಚಾರಿಸಿದ್ದು ಆತನು ಮಿಲ್ಲರಪೇಟೆಯ ವಾಸಿ ಮೌನೇಶ್‍ನಿಗೆ ಮಟಕಾ ಪಟ್ಟಿಗಳನ್ನು ಕೊಡುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನಿಗೆ ಹಿಡಿದುಕೊಂಡು ಬಂದು ಪಿ.ಎಸ್.ಐ.ರವರು ನೀಡಿದ ವರದಿ ಮೇರೆಗೆ ಠಾಣೆಯ ಎನ್.ಸಿ. ನಂಃ 26/14 ರಲ್ಲಿ ನಮುದಿಸಿಕೊಂಡು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕಲಂಃ78(3) ಕ.ಪೋ. ಕಾಯ್ದೆ ಈಗ ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಪ್ರಕರಣದಲ್ಲಿ ಪ್ರ.ವ.ವರದಿಯನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಘನ 1ನೇ ಎಸಿಜೆ & ಜೆಎಂಎಫ್‍ಸಿ ಬಳ್ಳಾರಿ ರವರ ಪರವಾನಿಗೆ ಕೋರಿದ್ದು ಘನ ನ್ಯಾಯಾಲಯವು ಪರವಾನಿಗೆ ನೀಡಿದ್ದರಿಂದ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.
                                                                                                              ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                            ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ನವೆಂಬರ್ 16, 2014

Press Note as on 16-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 16-11-2014
ಪತ್ರಿಕಾ ಪ್ರಕಟಣೆ

1.            ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಬಸವ ಕಾಲುವೆಯಲ್ಲಿ ಅಪರಿಚಿತ ಮಹಿಳೆಯನ್ನು ಕೈ ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಕೊಲೆ ಮಾಡಿ ನೀರಿನಲ್ಲಿ ಹಾಕಿ ಹೋಗಿರುವ ಬಗ್ಗೆ.

          ಪಿರ್ಯಾದಿದಾರರಾದ ಶ್ರೀ. ಎಂ.ಗೋವಿಂದ  ತಂದೆ ಬಯೋಜಪ್ಪ  ವ:39 ವರ್ಷ, ಮರಾಠಿ ಜನಾಂಗ, ನೀರಾವರಿ ಇಲಾಖೆಯಲ್ಲಿ ಲಸ್ಕರ್ ಕೆಲಸವಾಸ: ಹಳೇ ಮಲಪನಗುಡಿ ಗ್ರಾಮ, ಹೊಸಪೇಟೆ ತಾಲ್ಲೂಕು ನೀರಾವರಿ ಇಲಾಖೆಯಲ್ಲಿ ಅಸ್ಕರ್ ಕೆಲಸ ಮಾಡುತ್ತಿದ್ದು  ಇವರಿಗೆ  ಮಲಪನಗುಮಡಿ ಗ್ರಾಮದ ಬಳಿ ಇರುವ  10 ನೇ ಮೈಲಿ ಕಲ್ಲಿನಿಂದ 17 ನೇ ಮೈಲಿ ಕಲ್ಲಿನ ವರೆಗೆ ಕಾಲುವೆ ಕಾಯುವ ಕಾಯುವ  ಲಸ್ಕರ್  ಕೆಲಸ ಮಾಡುತ್ತಿದ್ದು  ಕೊಂಡನಾಯಕನಹಳ್ಳಿಯ ಬಳಿ  ಬಸವ ಕಾಲುವೆಗೆ ಅಡ್ಡಲಾಗಿ  ರಸ್ತೆಗೆ ಸೇತುವೆ ಇದ್ದು ಈ ಸೆತುವೆಯ ಒಂದು ಬಾಗ  ಬಿದ್ದು ಹೋಗಿರುವುದರಿಂದ ಅದನ್ನು ಸರಿ ಪಡಿಸುವ ಸಲುವಾಗಿ ಸದರಿ ಕಾಲುವೆಯ ನೀರನ್ನು ಬಂದ್ ಮಾಡಿರುತ್ತಾರೆ, ಪಿರ್ಯಾದಿದಾರರು ದಿನಾಂಕ:15/11/2014 ರಂದು ಬೆಳಿಗ್ಗೆ ಕರ್ತವ್ಯದ ಮೇಲೆ ಇದ್ದು ಕಾಲುವೆಯನ್ನು ಚಕ್ ಮಾಡುತ್ತಾ ಬರುತ್ತಿರುವಾಗ 11.3 ನೇ ಮೈಲಿ ಕಲ್ಲಿನ ಬಳಿ ಕಾಲುವೆಯಲ್ಲಿ ನಿಂತ ನೀರಿನಲ್ಲಿ ಒಬ್ಬ ಅನಾಮಧೇಯ ಮಹಿಳೆಯ ಶವ ಬೋರಲಾಗಿ ತೇಲುತ್ತಿದ್ದು ಅವಳ ಮೈ ಮೇಲೆ ಕೆಂಪು ಕಲರಿನ ಜಾಕೇಟ್ ಹಾಗು ಕರಿಯ ಗೆರೆಯುಳ್ಳ ಕೆಂಪು, ಬಿಳಿ ಹಳದಿ ಹೂಗಳಿರುವ ಸೀರೆ ಇದ್ದು, ಈಕೆಯ ಕೈಗಳನ್ನು ಮತ್ತು ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿದಂತೆ ಕಂಡುಬರುತ್ತಿದ್ದು ಯಾರೋ ದುಷ್ಕರ್ಮಿಗಳು ಈ  ಸುಮಾರು 30-32 ವರ್ಷ   ವಯಸ್ಸಿನ  ಅನಾಮಧೇಯ ಮಹಿಳೆ ಹೆಸರು ವಿಳಾಸ ಗೊತ್ತಿರುವುದಿಲ್ಲ ಆಕೆಯನ್ನು ಯಾವುದೋ ಕಾರಣಕ್ಕಾಗಿ ಕೊಲೆ ಮಾಡಿ ಸಾಕ್ಷತ್ವವನ್ನು ನಾಶಪಡಸುವ ಉದ್ದೇಶದಿಂದ ಕಾಲುವೆಯಲ್ಲಿ ತಂದು ಹಾಕಿರುವಂತೆ ಕಂಡು ಬರುತ್ತಿದೆ ಎಂದು ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಕೊಟ್ಟ ದೂರಿನ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                     
  ಪೊಲೀಸ್ ಸೂಪರಿಂಟೆಂಡೆಂಟ್,     
                            ಬಳ್ಳಾರಿ.                
ಇವರಿಗೆ
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.



ಶನಿವಾರ, ನವೆಂಬರ್ 15, 2014

PRESS NOTE AS ON 15-11-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: ೧೫-೧೧-೨೦೧೪
ಪತ್ರಿಕಾ ಪ್ರಕಟಣೆ 

೧) ಕೌಲ್‌ಬಜಾರ್ ಠಾಣೆ ಸರಹದ್ದಿನ ಗಣೇಶ್ ವಿಲಾಸ್ ಹೋಟಲ್ ಮುಂದೆ ನಡೆಯುತ್ತಿದ್ದ ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ. 

         ದಿನಾಂಕ: ೧೪-೧೧-೨೦೧೪ ರಂದು ರಾತ್ರಿ ೭-೩೦ ಗಂಟೆಗೆ ಬಳ್ಳಾರಿ ಕೌಲ್‌ಬಜಾರ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ಶ್ರೀ ಎಂ.ಬಿ ಗೊಳಸಂಗಿ ಪೊಲೀಸ್ ಇನ್ಸ್‌ಪೆಕ್ಟರ್ ರವರಿಗೆ ಕೌಲ್‌ಬಜಾರ್‌ನ ಗಣೇಶ್‌ವಿಲಾಸ್ ಹೋಟೆಲ್ ಮುಂದೆ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪಿ.ಐ. ಮತ್ತು ಅವರ  ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿದಾಗ ಮಟಕಾ ಬರೆಯುತ್ತಿದ್ದ ಆರೋಪಿತರಾದ ೧] ಜಿ. ಉಮಾಪತಿ ೨] ಟೀ ಬಾಬು ರ ರವರನ್ನು ವಶಕ್ಕೆ ಪಡೆದಿದ್ದು ಆರೋಪಿ-೨ ರವರು ಓಡಿಹೋಗಿದ್ದು, ಆರೋಪಿತರಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ ರೂ. ೪,೩೫೦/- ರೂ. ೧ ಮಟಕಾ ಪಟ್ಟಿ, ೧ ಬಾಲ್‌ಪೆನ್ನು ನ್ನು ಜಪ್ತುಪಡಿಸಿಕೊಂಡಿದ್ದು, ಈ ಬಗ್ಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 

೨) ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದಿನ ಹಲಕುಂದಿ ಗ್ರಾಮದಿಂದ ೧೮ ವರ್ಷದ ಹುಡುಗಿ ಕಾಣೆಯಾಗಿರುವ ಬಗ್ಗೆ. 

      ಫಿರ್ಯಾದಿದಾರರಾದ ಶ್ರೀ. ಮಹೇಶ್ ಹೂಗಾರ್ ತಂದೆ ಹುಚ್ಚಪ್ಪ ವಯಸ್ಸು ೫೭ ವರ್ಷ, ಲಿಂಗಾಯತ ಜಾತಿ, ಹೂವಿನ ವ್ಯಾಪಾರ, ವಾಸ. ೨ನೇ ವಾರ್ಡ, ಹೊನ್ನಳ್ಳಿ ರಸ್ತೆ, ಗಾದಿ ಕಾಂಪ್ಲಕ್ಸ್, ಹಲಕುಂದಿ ಗ್ರಾಮ, ಬಳ್ಳಾರಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದೇನೆಂದರೆ, ದಿನಾಂಕ: ೧೨-೧೧-೨೦೧೪ ರಂದು ಮದ್ಯಾಹ್ನ  ೧೨-೩೦ ಗಂಟೆಗೆ ಹಲಕುಂದಿ ಗ್ರಾಮದ ಹೊನ್ನಳ್ಳಿ ರಸ್ತೆಯಲ್ಲಿರುವ ತಮ್ಮ ಮನೆಯಿಂದ ಕು: ಸುಮಲತಾ ವಯಸ್ಸು ೧೮ ವರ್ಷ, ವಾಸ. ಹಲಕುಂದಿ ಗ್ರಾಮ, ಬಳ್ಳಾರಿ ತಾಲ್ಲೂಕು ಇವಳು ಬಳ್ಳಾರಿಯ ಸಣ್ಣ ಮಾರ್ಕೆಟ್ ಹತ್ತಿರವಿರುವ ತನ್ನ ದೊಡ್ಡಮ್ಮ ಶ್ರೀಮತಿ ಲಕ್ಷ್ಮೀದೇವಿರವರ ಮನೆಗೆ ಚೋಟಾ ಮೊಹರಂ ಹಬ್ಬಕ್ಕೆ ಹೋಗುತ್ತೇನೆಂದು ಹೋದವಳು ಅಲ್ಲಿಗೆ ಹೋಗದೇ ಮನೆಗೆ ವಾಪಾಸ್ ಬರದೇ ಕಾಣೆಯಾಗಿರುತ್ತಾಳೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 

                                                                                                           ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು                        ಜಿ.ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ನವೆಂಬರ್ 12, 2014

Limit the amount of personal information you post - Do not post information that would make you vulnerable (e.g., your address, information about your schedule or routine).
Remember that the internet is a public resource - Only post information you are comfortable with anyone seeing. This includes information in your profile and in blogs and other forums. Also, once you post information online, you can't retract it. Even if you remove the information from a site, saved or cached versions may still exist on other people's machines
Beware of strangers - The internet makes it easy for people to misrepresent their identities and motives. Consider limiting the people who are allowed to contact you on these sites. If you interact with people you do not know, be cautious about the amount of information you reveal or agreeing to meet them in person.
Be skeptical - Don't believe everything you read online. People may post false or misleading information about various topics, including their own identities. This is not necessarily done with malicious intent; it could be unintentional, a product of exaggeration, or a joke. Take appropriate precautions, though, and try to verify the authenticity of any information before taken any action.
Check privacy policies - Some sites may share information such as email addresses or user preferences with other companies. This may lead to an increase in spam. Also, try to locate the policy for handling referrals to make sure that you do not unintentionally sign your friends up for spam. Some sites will continue to send email messages to anyone you refer until they join.

ಮಂಗಳವಾರ, ನವೆಂಬರ್ 11, 2014

PRESS NOTE AS ON 11-11-2014

                 ಪತ್ರಿಕಾ ಪ್ರಕಟಣೆ

ಚಾಲಕನನ್ನು ಹೊಡೆದು ಕಾರ್ ದೋಚಿಕೊಂಡು ಹೋಗಿದ್ದ ಆರೋಪಿಗಳು ಕುರುಗೋಡು ಮತ್ತು ಕುಡುತಿನಿ ಪೊಲೀಸ್ ಅಧಿಕಾರಿಗಳಿಂದ ಪತ್ತೆ ಮತ್ತು ಬಂಧನ :

ದಿನಾಂಕ: ೧೯/೧೦/೧೪ ರಂದು ಬೆಳಿಗ್ಗೆ ೭.೦೦ ಗಂಟೆಗೆ ಶ್ರೀ.ಶ್ರೀಧರ್, ತಂದೆ: ಕಾಲತ್ರಿಮೂರ್ತಿ, ಶ್ರೀ.ಸಾಯಿ ಕಾರ್ ಡೆಕೋರ‍್ಸ್ ಮಾಲೀಕರು, ವಾಸ: ಪಟೇಲ್ ನಗರ, ಹೊಸಪೇಟೆ, ಇವರು ಕುಡುತಿನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದರಿ ದೂರಿನಲ್ಲಿ ತನ್ನ ತಂದೆ ಶ್ರೀ.ಕಾಲತ್ರಿಮೂರ್ತಿ ರವರಿಗೆ ದಿನಾಂಕ: ೧೭/೧೦/೨೦೧೪ ರಂದು ಸಂಜೆ ೬.೩೦ ಗಂಟೆಗೆ ೩ ಜನ ಅಪರಿಚಿತ ವ್ಯಕ್ತಿಗಳು ಹೊಸಪೇಟೆಯಿಂದ ಅನಂತಪುರಕ್ಕೆ ಹೋಗಿಬರಬೇಕೆಂದು ಇಂಡಿಕಾ ಕಾರ್ ಸಂಖ್ಯೆ: ಕೆ.ಎ.೩೭/೯೫೬೬ ಇದನ್ನು ಬಾಡಿಗೆಗೆ ತೆಗೆದುಕೊಂಡು ಹೊಸಪೇಟೆಯಿಂದ ಹೊರಟಿರುತ್ತಾರೆ.  ಕಾರನ್ನು ಫಿರ್ಯಾದಿದಾರರ ತಂದೆ ಶ್ರೀ.ಕಾಲತ್ರಿಮೂರ್ತಿ ರವರೇ ಚಲಾಯಿಸಿಕೊಂಡು ಹೋಗಿರುತ್ತಾರೆ.  ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ವೇಣಿ ವೀರಾಪುರ ಕ್ರಾಸ್ ಹತ್ತಿರ ಸದರಿ ೩ ಜನರು ಕಾರ್ ನಿಲ್ಲಿಸಿ ಟಾಯ್ಲೆಟ್‌ಗೆ ಹೋಗಿ ಬರುತ್ತೇವೆಂದು ಇಳಿದು ಸ್ವಲ್ಪ ಸಮಯದ ನಂತರ ವಾಪಸ್ ಬಂದು ಕಾಲತ್ರಿಮೂರ್ತಿ ರವರಿಗೆ ಮುಖಕ್ಕೆ ಯಾವುದೋ ವಸ್ತು ಸಿಂಪಡಿಸಿ, ಹೊಡೆದು, ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ರಸ್ತೆ ಬದಿಯಲ್ಲಿ ಬಿಸಾಡಿ, ಆತನ ಮೊಬೈಲ್ ನಂಬರ್ ಮತ್ತು ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.  ನಂತರ ಈ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಕಾಲತ್ರಿಮೂರ್ತಿ ರವರು ದಿನಾಂಕ: ೦೩/೧೧/೨೦೧೪ ರಂದು ಮೃತಪಟ್ಟಿರುತ್ತಾರೆ.  ಆದ್ದರಿಂದ, ಸದರಿ ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ, ಸಿ.ಪಿ.ಐ., ಕುರುಗೋಡು ಶ್ರೀ.ಲಕ್ಷ್ಮೀಕಾಂತಯ್ಯ ರವರು ತನಿಖೆ ಕೈಗೊಂಡಿರುತ್ತಾರೆ.  ತನಿಖಾ ಕಾಲದಲ್ಲಿ ಸಿ.ಪಿ.ಐ., ಕುರುಗೋಡು, ಪಿ.ಎಸ್.ಐ., ಕುಡತಿನಿ ಶ್ರೀ.ವಾಸುಕುಮಾರ್, ಹಾಗೂ ಸಿಬ್ಬಂದಿಯವರ ತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿರುತ್ತಾರೆ.
ಡಿ.ಎಸ್.ಪಿ., ಬಳ್ಳಾರಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ತನಿಖಾ ತಂಡವು ದಿನಾಂಕ: ೧೦/೧೧/೨೦೧೪ ರಂದು ಬೆಳಿಗ್ಗೆ ಆರೋಪಿಗಳಾದ (೧) ಟಿ.ಸುರೇಶ್‌ಬಾಬು, ತಂದೆ: ಟಿ.ಪಿ.ಶ್ರೀರಾಮುಲು, ೩೮ ವರ್ಷ, ಕಮ್ಮಾ ಜನಾಂಗ, ಕಂಟ್ರ್ಯಾಕ್ಟರ್ ವೃತ್ತಿ, ವಾಸ: ಸಿದ್ದಾರ್ಥ ನಗರ, ಬಳ್ಳಾರಿ, (೨) ರವಿವರ್ಮ, ತಂದೆ: ಶ್ರೀನಿವಾಸ್, ೨೩ ವರ್ಷ, ಕಮ್ಮಾ ಜನಾಂಗ, ಡಿಪ್ಲೊಮಾ ವಿದ್ಯಾರ್ಥಿ, ವಾಸ: ಚಪ್ಪರದಹಳ್ಳಿ, ಹೊಸಪೇಟೆ, ಇವರನ್ನು ಕ್ರಮವಾಗಿ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.  ಸದರಿ ಆರೋಪಿಗಳನ್ನು ವಿಚಾರಣೆಗೊಳಪಡಿಸಿ, ಪ್ರಕರಣದಲ್ಲಿ ಆರೋಪಿಗಳು ದೋಚಿಕೊಂಡು ಹೋಗಿದ್ದ ಕಾರ್ ಸಂಖ್ಯೆ: ಕೆ.ಎ.೩೭/೯೫೬೬ ಇದ್ದನ್ನು ಆಂಧ್ರಪ್ರದೇಶದ ಗುತ್ತಿ ಪಟ್ಟಣದಲ್ಲಿ ವಶಪಡಿಸಿಕೊಂಡಿರುತ್ತಾರೆ.  ಅದೇ ರೀತಿ ದಿನಾಂಕ: ೧೧/೧೧/೨೦೧೪ ರಂದು ಆರೋಪಿ (೩) ಶ್ರೀಮತಿ.ಪುಷ್ಪ, ಗಂಡ: ಕಾಲ ತ್ರಿಮೂರ್ತಿ, ೩೬ ವರ್ಷ, ಕಮ್ಮಾ ಜನಾಂಗ, ಬಟ್ಟೆ ವ್ಯಾಪಾರ, ವಾಸ: ಕೃಷ್ಣಾ ಟೂರಿಸ್ಟ್ ಹೋಂ ಹಿಂದುಗಡೆ, ಹೊಸಪೇಟೆ, ಇವರನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿ ಶ್ರೀಮತಿ.ಪುಷ್ಪ ಇವರ ವಿಚಾರಣೆಯಿಂದ, ತಾನು ಈ ಪ್ರಕರಣದಲ್ಲಿನ ಕಾರ್ ಚಾಲಕ ಮತ್ತು ಮೃತ ಕಾಲತ್ರಿಮೂರ್ತಿ ಇವರ ಎರಡನೇ ಹೆಂಡತಿಯಾಗಿದ್ದು, ಕಾಲತ್ರಿಮೂರ್ತಿ ರವರು ತನಗೆ ತೊಂದರೆ ಕೊಡುತ್ತಿದ್ದನೆಂದು, ಇದಲ್ಲದೆ ತಾನು ಆರೋಪಿ ಸುರೇಶ್‌ಬಾಬುನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕಾಲತ್ರಿಮೂರ್ತಿಯನ್ನು ಸಾಯಿಸಿದರೆ ತನಗೆ ಯಾರೂ ಅಡ್ಡಿಬರುವುದಿಲ್ಲವೆಂದು ಯೋಜನೆ ರೂಪಿಸಿಕೊಂಡು ಈ ಪ್ರಕರಣದ ಇನ್ನೊಬ್ಬ ಆರೋಪಿ ಬಿಹಾರ ರಾಜ್ಯದ ಚಂದು ₨ ಬಿಸ್ವಾಸ್ ಈತನನ್ನು ಬರಮಾಡಿಕೊಂಡು ಎಲ್ಲರೂ ಸೇರಿ ಪಿತೂರಿ ನಡೆಸಿ ಈ ಕೃತ್ಯವನ್ನು ಎಸಗಿರುವುದಾಗಿ ತಿಳಿದುಬಂದಿರುತ್ತದೆ.  ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಚಂದು ₨ ಬಿಸ್ವಾಸ್ ಈತನು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಈ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಸಿ.ಪಿ.ಐ., ಕುರುಗೋಡು, ಪಿ.ಎಸ್.ಐ., ಕುಡುತಿನಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರು ಶ್ಲಾಘಿಸಿರುತ್ತಾರೆ.

                                                          ಪೊಲೀಸ್ ಅಧೀಕ್ಷಕರು,
                                                          ಬ ಳ್ಳಾ ರಿ.
ಇವರಿಗೆ : ಜಿಲ್ಲೆಯ ಎಲ್ಲಾ ಪತ್ರಿಕಾ ವರದಿಗಾರರಿಗೆ.

ಸೋಮವಾರ, ನವೆಂಬರ್ 10, 2014

PRESS NOTE AS ON 10-11-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: ೧೦-೧೧-೨೦೧೪
ಪತ್ರಿಕಾ ಪ್ರಕಟಣೆ 

೧) ಕೂಡ್ಲಿಗಿ ಪೊಲಿಸ್ ಠಾಣೆ ಸರಹದ್ದಿನ ಪೋತನಕಟ್ಟೆ ಗ್ರಾಮದ ಹತ್ತಿರ  ಚಿಲಕನಹಟ್ಟಿ ಕಾಯ್ದಿಟ್ಟ ಅರಣ್ಯದ ರಸ್ತೆಯಲ್ಲಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ  ಡಿಕ್ಕಿ ಕಾರು ಚಾಲಕನ ಸಾವು, ೫ ಜನರಿಗೆ ಗಾಯ. 

           ದಿನಾಂಕ ೦೯/೧೧/೨೦೧೪ ರಂದು ಕೆ.ಎ. ೦೪ ಎಂ.ಹೆಚ್ ೯೨೪೦ ನಂಬರಿನ ಮಾರುತಿ ಸುಜೂಕಿ ಆಲ್ಟೋ ಕಾರಿನಲ್ಲಿ ಚಾಲಕ ಶಿವಕುಮಾರ ತಂದೆ ಮಾಯಣ್ಣ ವ: ೩೨ ವರ್ಷ. ವಕ್ಕಲಿಗ ಜನಾಂಗ ವಾಸ: ಮಾಗಡಿ ರಾಮನಗರ ಜಿಲ್ಲೆ ಈತನೊಂದಿಗೆ ಮತ್ತು ತನ್ನ ಸ್ನೇಹಿತರಾದಂತ ಮಂಜುನಾಥ, ಸೂರಿ, ಹನುಮಂತರಾಜ ಇವರುಗಳೊಂದಿಗೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಟಿ.ಬಿ ಡ್ಯಾಂ ಮತ್ತು ಹಂಪಿಯನ್ನು ನೋಡಿಕೊಂಡು ಹೋಗಲು ಬಂದಿದ್ದು, ಹಂಪಿಯ ಮುಖ್ಯ ಸ್ಥಳಗಳನ್ನು ನೋಡಿದ ನಂತರ ಸದರಿ ಮೇಲ್ಕಂಡ ಕಾರಿನಲ್ಲಿ ಬೆಳಿಗ್ಗೆ ೧೧:೦೦ ಗಂಟೆಗೆ ಹಂಪಿಯಿಂದ ಹೊರಟು ಎನ್,ಹೆಚ್ ೧೩ ಮುಖಾಂತರ ಬೆಂಗಳೂರು ಕಡೆಗೆ ಹೊರಟಿದ್ದಾಗ ಪೋತಲಗಟ್ಟೆ ಕ್ರಾಸ್ ದಾಟಿದ ನಂತರ ಸುಮಾರು ೧ ಕಿ ಮೀ ದೂರದಲ್ಲಿ ಚಿಲಕನಹಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಎನ್.ಹೆಚ್ ೧೩ ರಲ್ಲಿ ಮೇಲ್ಕಂಡ ಕಾರ್ ಚಾಲಕ ಶಿವಕುಮಾರನು ಮದ್ಯಾಹ್ನ ೧೨:೩೦ ಗಂಟೆ ಸುಮಾರಿಗೆ ರಸ್ತೆಯ ಎಡಬದಿಯಲ್ಲಿ ಕಾರನ್ನು ನಿಧಾನವಾಗಿ ಚಲಾಯಿಸಿಕೊಂಡು ಮರಿಯಮ್ಮನಹಳ್ಳಿ ಕಡೆಯಿಂದ ಕೂಡ್ಲಿಗಿ ಕಡೆಗೆ ಹೊರಟಿದ್ದಾಗ ಎದುರುಗಡೆಯಿಂದ ಅಂದರೆ ಕೂಡ್ಲಿಗಿ ಕಡೆಯಿಂದ ಟಿ.ಎನ್, ೩೪ ಎಸ್ ೨೯೪೯ ನೊಂದಣೆ ಸಂಖ್ಯೆಯ ಲೋಡ್ ತುಂಬಿದ ಲಾರಿಯನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ನಡೆಸುತ್ತಾ ತಾರ್ ರಸ್ತೆಯ ಎಡ ಬದಿಯಿಂದ ಒಮ್ಮೆಲೇ ಬಲಬದಿಗೆ ತಿರುಗಿಸಿ ಕಾರಿನ ಮುಂದುಗಡೆ ಬಾಗಕ್ಕೆ ಜೋರಾಗಿ ಡಿಕ್ಕಿಪಡಿಸಿದ್ದರ ಪರಿಣಾಮ ಸದರಿ ಕಾರು ಪಲ್ಟಿಯಾಗಿ ತಾರ್ ರಸ್ತೆಯ ಎಡಬದಿ ಕಚ್ಚಾ ರಸ್ತೆಯಲ್ಲಿ ಜಕ್ಕಂಗೊಂಡು ಬಿದ್ದಿದ್ದು ಈ ಅಪಘಾತದಲ್ಲಿ ಕಾರಿನ ಚಾಲಕ ಶಿವಕುಮಾರನ ತಲೆಗೆ ರಕ್ತಗಾಯವಾಗಿದ್ದು ಇನ್ನೊಬ್ಬನಿಗೆ ತುಟಿಗೆ ಗದ್ದಕ್ಕೆ ಎಡಿಕಣ್ಣಿನ ಉಬ್ಬಿನ ಮೇಲೆ ರಕ್ತಗಾಯಗಳಾಗಿದ್ದು ಕಾರಿನ ಹಿಂದುಗಡೆ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಮಂಜುನಾಥ, ಸೂರಿ, ಹನುಮಂತರಾಜ ಇವರಿಗೂ ಸಹಾ ರಕ್ತಗಾಯ ಪೆಟ್ಟುಗಳು ಆಗಿದ್ದು ಅಪಘಾತ ಉಂಟು ಪಡಿಸಿದ ಮೇಲ್ಕಂಡ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆಂದು, ಕಾರ್ ಚಾಲಕ ಶಿವಕುಮಾರನು ಅಸ್ಪತ್ರೆಗೆ ಬರುವಾಗ ಮಾರ್ಗ ಮದ್ಯದಲ್ಲೇ ಸತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಕೂಡ್ಲಿಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

೨) ಬಳ್ಳಾರಿ ನಗರದ ತಿಲಕ್ ನಗರದ ಒಂದು ಮನೆಯ ಬಾಗಿಲಿನ ಚಿಲಕ ಕೊಂಡಿಯನ್ನು ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣ ಹಾಗು ನಗದು ಹಣ ಕಳವು. 


      ಫಿರ್ಯಾದಿದಾರಾದ ಅಲ್ತಪ್ ಹುಸೇನ್ ತಂದೆ ಸೈಯದ್ ಮಹಮದ್ ವ: ೪೦ ವರ್ಷ, ವಾಸ: ತಿಲಕ್ ನಗರ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ದಿನಾಂಕ ೦೭/೧೧/೨೦೧೪ ರಂದು ಸಂಜೆ ೬:೦೦ ಗಂಟೆಯಿಂದ ದಿ: ೦೯/೧೧/೧೪ ರಂದು ಬೆಳಿಗ್ಗೆ ೧೧:೦೦ ಗಂಟೆಯ ಮಧ್ಯಾ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಯಾವುದೋ ಆಯುಧದಿಂದ ಜಖಂಗೊಳಿಸಿ ಮನೆಯೂಳಗೆ ಪ್ರವೇಶಿಸಿ ಮನೆಯ ಹಾಲ್‌ನಲ್ಲಿಟ್ಟಿದ್ದ ಗಾಡ್ರೇಜ್ ಬೀರುವಾವನ್ನು ತೆಗೆದು ಅದರಲ್ಲಿದ್ದ ಸುಮಾರು ರೂ ೧,೪೩,೦೦೦/- ಬೆಲೆಬಾಳುವ ಬಂಗಾರ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                                                                        ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು                         ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.

ಗುರುವಾರ, ನವೆಂಬರ್ 6, 2014

Press Note as on 07-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 07-11-2014
ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ಪಟ್ಟಣದ ಹೊರಗೆ ಇರುವ ಎನ್.ಹೆಚ್.-13 ರಸ್ತೆಯ ಸುರಂಗ ಮಾರ್ಗ-2 ರಲ್ಲಿ ಟ್ರ್ಯಾಕ್ಸ್ ವಾಹನದಿಂದ ರಸ್ತೆ ಅಫಘಾತ ಒಬ್ಬ ವ್ಯಕ್ತಿಯ ಸಾವು, ಒಬ್ಬ ಮಹಿಳೆಗೆ ಗಾಯ

       ದಿನಾಂಕ: 06-11-2014 ರಂದು ಮದ್ಯಾಹ್ನ 2-45 ಗಮಟೆ ಸುಮಾರಿಗೆ ಹೊಸಪೇಟೆಯ ಕಣಿವೆ ಏರಿಯಾದಲ್ಲಿರುವ ಎನ್.ಹೆಚ್.-13 ರಸ್ತೆಯ ಸುರಂಗ ಮಾರ್ಗ-2 ರ ಒಳಗೆ ರಸ್ತೆ ಮೇಲೆ ಫಿರ್ಯಾದಿ ಮತ್ತು ಗಾಯಾಲುಗಳಾದ ಶಿವಶಾಂತವಿರ, ಬಸಮ್ಮ ಹಾಗು ಕೆಲಸಗಾರಳಾದ ಚಾಮುಂಡೇಶ್ವರಿ ರವರುಗಳು ಸುರಂಗ ಮಾರ್ಗದ ಸೀಲಿಂಗ್‍ನಲ್ಲಿರುವ ಟ್ಯೂಬ್‍ಲೈಟ್ ರಿಪೇರಿ ಕೆಲಸದಲ್ಲಿದ್ದಾಗ ಶಿವಶಾಂತವಿರನು ಅಲ್ಯುಮಿನಿಯಂ ಲ್ಯಾಡರ್‍ನ ಮೇಲೆ ನಿಂತು ಟ್ಯೂಬ್‍ಲೈಟ್ ಬಿಚ್ಚುತ್ತಿರುವಾಗ್ಗೆ ಅದೇ ವೇಳೆಗೆ ಮರಿಯಮ್ಮನಹಳ್ಳಿ ಕಡೆಯಿಂದ ಹೊಸಪೇಟೆ ಕಡೆ ಬರುತ್ತಿದ್ದ ಟ್ರಾಕ್ಸ್ ನಂಬರ್ ಕೆ.ಎ-35 ಎ.8839 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸುತ್ತಾ ಲಾರಿಯನ್ನು ಓವರ್‍ಟೇಕ್ ಮಾಡುತ್ತಾ ಬಂದು ಬ್ಯಾರಿಯರ್‍ಗೆ ಮತ್ತು ಫುಟ್‍ಪಾತ್‍ಗೆ ಡಿಕ್ಕಿ ಹೊಡೆಸಿಕೊಂಡು ಅಲ್ಯುಮಿನಿಯಂ ಲ್ಯಾಡರ್ ತಿವಿದು ಬೀಳಿಸಿ ಸ್ವಲ್ಪ ದೂರ ದಬ್ಬಿಕೊಂಡು ಹೋಗಿದ್ದು, ಲ್ಯಾಡರ್ ಮೇಲೆ ನಿಂತಿದ್ದ ಶಾಂತವೀರನು ಮೇಲಿನಿಂದ ರಸ್ತೆಯ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ ಕಿವಿ, ಮೂಗಿನಿಂದ ರಕ್ತ ಸೋರಿದ್ದು, ಗಾಯಗೊಂಡ ಶಿವಶಾಂತವೀರ ತಂದೆ ಲೇಟ್ ನಾಗರಾಜ, 30 ವರ್ಷ, ಕುಂಬಾರ ಜಾತಿ, ಎಲೆಕ್ಟ್ರೀಷಿಯನ್ ಕೆಲಸ, ವಾಸ: ಹೊಸಹಳ್ಳಿ ಗ್ರಾಮ, ಕೊಪ್ಪಳ ತಾ & ಜಿಲ್ಲೆ ಈತನಿಗೆ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ದಿನಾಂಕ.06/11/2014 ರಂದು ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಸದರಿ ಗಾಯಾಳು ಸಂಜೆ ಮಾರ್ಗಮಧ್ಯೆದಲ್ಲಿ ಮೃತಪಟ್ಟಿರುತ್ತಾನೆಂದು, ಸ್ಥಳದಲ್ಲಿ ನಿಂತಿದ್ದ ಕೂಲಿ ಬಸಮ್ಮಳಿಗೆ ಗಾಯಗಳಾಗಿದ್ದು, ಟ್ರ್ಯಾಕ್ಸ್ ಚಾಲಕನು ವಾಹನವನ್ನು  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಇದ್ದ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ. 


2) ಗಾಂಧಿನಗರ ಠಾಣೆ ಸರಹದ್ದಿನ ಸತ್ಯನಾರಾಯಣ ಪೇಟೆಯ 2 ಮತ್ತು 3 ಲಿಂಕ್ ಕ್ರಾಸಿನಲ್ಲಿ ಅಪರಿಚಿತ ವ್ಯಕ್ತಿಗಳು ಮೋಟಾರ್ ಸೈಕಲ್‍ನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ. 

      ಪಿರ್ಯಾಧಿದಾರರಾದ ಶ್ರೀಮತಿ ಸುಮಿತ್ರ ಗಂಡ ಕೆ.ಎಸ್. ವೆಂಕಟೇಶ್ ರವರು ದಿನಾಂಕ; 06-11-14 ರಂದು ರಾತ್ರಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೆನಂದರೆ ದಿನಾಂಕ; 06-11-2014 ರಂದು ರಾತ್ರಿ    07-30 ಗಂಟೆ ಸಮಯದಲ್ಲಿ ರಾಘವೇಂದ್ರಸ್ವಾಮಿ ಮಠದಿಂದ ತನ್ನ ಅತ್ತೆಯ ಮನೆಗೆ ಹೋಗಲು ಎಸ್.ಎನ್.ಪೇಟೆ 2 ಮತ್ತು 3 ನೇ ಕ್ರಾಸಿನ ಲಿಂಕ್ ರಸ್ತೆಯ ಕುಂತಲಾಭಿವೃಧ್ದಿನಿ ತೈಲ ತಯಾರು ಮಾಡುವವರ ಮನೆ ಮುಂದೆ ಹೋಗುತ್ತಿದ್ದಾಗ ರಾತಿ 08-30 ರ ಸಮಯದಲ್ಲಿ ಹಿಂದಿನಿಂದ ಇಬ್ಬರು ವ್ಯಕ್ತಿಗಳು ಮೋಟಾರ ಬೈಕಿನಲ್ಲಿ ಬಂದು ಅದರಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿಯು ಫಿರ್ಯಾದಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಮೋಟಾರ್ ಬೈಕಿನಲ್ಲಿ ಪರಾರಿಯಾಗಿದ್ದು  ಕಿತ್ತುಕೊಂಡ ಮಾಂಗಲ್ಯ ಸರವು  40 ಗ್ರಾಂ ಇದ್ದು, ಅದರ ಅಂದಾಜು ಬೆಲೆ ರೂಪಾಯಿ 1,08,000/- ಗಳಷ್ಟಿದ್ದು ಸುಲಿಗೆ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 
                                                 ಪೊಲೀಸ್ ಸೂಪರಿಂಟೆಂಡೆಂಟ್, 
                                                         ಬಳ್ಳಾರಿ.               

ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
 ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ನವೆಂಬರ್ 5, 2014

Press Note as on 06-10-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 06-11-2014

ಪತ್ರಿಕಾ ಪ್ರಕಟಣೆ 

1) ಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಜೋಗಿ ಹಳ್ಳದ ಬ್ರಿಡ್ಜ್ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು, ಒಬ್ಬ ವ್ಯಕ್ತಿಗೆ ಗಾಯ.

          ದಿನಾಂಕ 05-11-2014 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರರ ಮಗನಾದ ಮೃತ ಯಲ್ಲಪ್ಪನು ಮೋಟಾರ್ ಸೈಕಲ್ ನಂ ಕೆ.ಎ-02 ಇ.ಎಫ್-8192 ನೇದ್ದರಲ್ಲಿ ಬಾರಿಮ್‍ಸಾಬ್ ನನ್ನು ಹಿಂದೆ ಕೂಡಿಸಿಕೊಂಡು, ಕಂದಗಲ್ ಗ್ರಾಮಕ್ಕೆ ಹೋಗಿ ಕೋಳಿಗಳನ್ನು ತೆಗೆದುಕೊಂಡು ವಾಪಸ್ಸು ಕೊರ್ಲಹಳ್ಳಿ ಗ್ರಾಮಕ್ಕೆ ಹೊಗಲು ಬರುತ್ತಿದ್ದಾಗ ಕೊಂಬಳಿ-ಪುರ ಮುಖ್ಯ ರಸ್ತೆಯಲ್ಲಿನ ಜೋಗಿ ಹಳ್ಳದ ಬ್ರಿಡ್ಜ್ ಹತ್ತಿರ, ಕೊಂಬಳಿ ಗ್ರಾಮ ಸಮೀಪ ಮೋಟಾರೈ ಸೈಕಲ್‍ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಕೊಂಡು ಬಂದು ಜೋಗಿ ಹಳ್ಳದ ಬಲಗಡೆ ತಗ್ಗಿನಲ್ಲಿ ಬಿದ್ದು ಪಿರ್ಯಾದಿಯ ಮಗ ಯಲ್ಲಪ್ಪ ತಂದೆ ಬಸಪ್ಪ, 25 ವರ್ಷ, ವಾ: ಕೊರಲಹಳ್ಳಿ ಗ್ರಾಮ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ ಈತನಿಗೆ ಹಣೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತೇನೆಂದು ಹಾಗೂ ಗಾಯಗೊಂಡ ಬಾರಿಮ್‍ಸಾಹೇಬನಿಗೆ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                 ಪೊಲೀಸ್ ಸೂಪರಿಂಟೆಂಡೆಂಟ್, 
                                                         ಬಳ್ಳಾರಿ.                 


ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
 ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

Press Note as on 05-11-2014

 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 05-11-2014

ಪತ್ರಿಕಾ ಪ್ರಕಟಣೆ 

1) ಗಾದಿಗನೂರು ಪೊಲೀಸ್ ಠಾಣೆ ಸರಹದ್ದಿನ ಕಾಕುಬಾಳ ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದವರನ್ನು ದಸ್ತಗಿರಿ ಮಾಡಿ ಮಧ್ಯದ ಬಾಟಲಿಗಳ ವಶ. 

          ದಿನಾಂಕ: 04.11.2014 ರಂದು ಮದ್ಯಾಹ್ನ :02 :30 ಗಂಟೆಗೆ ಪಿ.ಎಸ್.ಐ ಗಾದಿಗನೂರು ರವರು ಠಾಣೆಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿ ಪಡೆದು, ಸಿಬ್ಬಂದಿಯವರೊಂದಿಗೆ ಹೊಸಪೇಟೆ ತಾಲ್ಲೂಕು ಕಾಕುಬಾಳು ಗ್ರಾಮದ ಸುಭಾಷರವರ ಬೀಡಿ ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ, ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಮಧ್ಯಾಹ್ನ : 03 :20 ಗಂಟೆಗೆ ಧಾಳಿ ಮಾಡಲi 1) ಜಡಿಯಪ್ಪ ತಂದೆ ಸಣ್ಣ ಹನುಮಪ್ಪ, 30ವರ್ಷ, ಕುರುಬರು, ವ್ಯವಸಾಯ, ವಾಸ: 1ನೇ ವಾರ್ಡ, ಕಾಕುಬಾಳು ) 2) ಸುಭಾಷಪ್ಪ ತಂದೆ ರೇವಣಸಿದ್ದಪ್ಪ, ಲಿಂಗಾಯ್ತರು, ವಾಸ: ಕಾಕುಬಾಳು ಗ್ರಾಮ, 3) ರಮೇಶ ತಂದೆ ಪಂಪಣ್ಣ @ ಸೀಮೆಎಣ್ಣೆ ಪಂಪಣ್ಣ, ವಾಸ: ಕಾಕುಬಾಳು ಗ್ರಾಮ 4) ಸುವರ್ಣವಮ್ಮ ಗಂಡ ಸುಭಾಷಪ್ಪ, ವಾಸ: ಕಾಕುಬಾಳು ಗ್ರಾಮ ಇವರು ಸಿಕ್ಕಿ ಬಿದ್ದಿದ್ದು,  ಇವರ ಕಡೆಯಿಂದ ಒಟ್ಟು ರೂ. 12,952/- ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಜಪ್ತುಪಡಿಸಿಕೊಂಡು, ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಈ ಬಗ್ಗೆ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  

2) ಬಳ್ಳಾರಿ ನಗರದ ಕೌಲ್‍ಬಜಾರ್‍ನಿಂದ 50 ವರ್ಷದ ಎಂ.ಡಿ. ಇಸಾಕ್ ಇವರು ಮನೆಯಿಂದ ಕಾಣೆಯಾಗಿರುವ ಬಗ್ಗೆ.

        ಫಿರ್ಯಾಧಿದಾರರಾದ ಶ್ರೀ. ಎಂ.ಡಿ.ಐ ಐಯುಬ್ ತಂದೆ ಎಂ.ಡಿ ಇಸಾಕ್ ವ: 23 ವರ್ಷ ವಾಸ: ಕೌಲ್ ಬಜಾರ್ ಬಳ್ಳಾರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಫಿರ್ಯಾದಿದಾರರ ತಂದೆಗೆ ಈಗ್ಗೆ 3 ವರ್ಷಗಳಿಂದ ಆಕ್ಸಿಡೆಂಟ್ ಆಗಿದ್ದು ಕಾಲಿಗೆ ರಾಡ್ ಹಾಕಿದ್ದು ಅಲ್ಲದೆ ಅವರಿಗೆ ಮೂರು ಮಕ್ಕಳಿದ್ದು ಯಾರಿಗೂ ಮದುವೆ ಯಾಗದೇ ಇದ್ದುದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದು      ದಿನಾಂಕ 31-10-14 ರಂದು ಮದ್ಯಾಹ್ನ 1:00 ಗಂಟೆಗೆ ಫಿರ್ಯಾದಿದಾರರ ತಂದೆ ಶ್ರೀ. ಎಂ.ಡಿ. ಇಸಾಕ್, 50 ವರ್ಷ ಇವರು ನಮಾಜ್ ಹೋಗಿ ಅಲ್ಲಿಂದ ಸಿಟಿಗೆ ಹೋಗಿ ಹಣ ಕೊಟ್ಟು ಬರುವುದಾಗಿ ಹೇಳಿ ಮನೆಯಿಂದ 2,500/- ರೂಗಳನ್ನು ತೆಗೆದುಕೊಂಡು ಹೋಗಿದ್ದು ಮರಳಿ ಮನೆಗೆ ಬಾರದೇ ಇದ್ದುದ್ದರಿಂದ ಕಾಣೆಯಾದ ತನ್ನ ತಂದೆಯನ್ನು ನಗರದ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದೇ ಇದ್ದುದ್ದರಿಂದ ಕಾಣೆಯಾದ ನನ್ನ ತಂದೆಯನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.   

3) ಬಳ್ಳಾರಿ ನಗರದ ಗೌಳೇರಹಟ್ಟಿಯ ತನ್ನ ಮನೆಯಿಂದ 30 ವರ್ಷದ ಗೌರಿ @ ತಾರಾವತಿ ಇವರು  ಕಾಣೆಯಾಗಿರುವ ಬಗ್ಗೆ. 

         ಫಿರ್ಯಾದಿದಾರರಾದ ಜಿ.ಲೋಕೇಶ್ ತಂದೆ ಲೇಟ್ ನಾಗೇಶಪ್ಪ ವಾಸಃ ಗೌಳೇರಹಟ್ಟಿ ಬಳ್ಳಾರಿ, ದಿನಾಂಕ: 30-10-2014 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮನೆಯಲ್ಲಿದ್ದಾಗ ಫಿರ್ಯಾದಿದಾರರ ಹೆಂಡತಿ ಗೌರಿ @ ತಾರಾವತಿ, 30 ವರ್ಷ, ರವರು ವಾಕಿಂಟ್ ಹೋಗಿ ಬರುತ್ತೇನೆ, ಅಂತಾ ಹೇಳಿ ಹೋದವಳು ತುಂಬಾ ಸಮಯವಾದರೂ ಬಾರದೇ ಇದ್ದುದನ್ನು ಕಂಡು ಫಿರ್ಯಾದಿ ಹಾಗೂ ಅವರ ಅಳಿಯ ಸತೀಶ್ ಸೇರಿ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹೋಗಿ ಹುಡುಕಾಡಿ ನೋಡಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಫಿರ್ಯಾದಿಯು ತನ್ನ ಹೆಂಡತಿಯನ್ನು ಇಲ್ಲಿಯವರೆಗೂ ಹುಡುಕಾಡಿ ನೋಡಲು ಸಿಗದೇ ಇದ್ದುದ್ದರಿಂದ ತನ್ನ ಹೆಂಡತಿಯನ್ನು  ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಬಳ್ಳಾರಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.

                                                 
 ಪೊಲೀಸ್ ಸೂಪರಿಂಟೆಂಡೆಂಟ್,         
                                                       ಬಳ್ಳಾರಿ.                         
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು          
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಮಂಗಳವಾರ, ನವೆಂಬರ್ 4, 2014

PRESS NOTE AS ON 02-11-2014

                 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: ೦೨-೧೧-೨೦೧೪
ಪತ್ರಿಕಾ ಪ್ರಕಟಣೆ 

೧) ಬಳ್ಳಾರಿ ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ಸರಹದ್ದಿನ  ಗೋಲ್ಡ್‌ಸ್ಮಿತ್ ಕಾಲೋನಿಯಿಂದ ಗಂಡ ಮತ್ತು ಇಬ್ಬರು ಮಕ್ಕಳು ಎಲ್ಲಿಗೋ ಹೋಗಿದ್ದು, ಕಾಣೆಯಾಗಿರುವ ಬಗ್ಗೆ.  
  
      ಫಿರ್ಯಾದಿದಾರರಾದ ಶ್ರೀಮತಿ ಫರ್‌ಹಿನ್ ಬೇಗಂ  ಗಂಡ ಜಹಿಂದ್ ಬಾಷ ವ: ೨೩ ವರ್ಷ ವಾಸ: ಗೋಲ್ಡ್ ಸ್ಮಿತ್ ಕಾಲೋನಿ, ಬಳ್ಳಾರಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಫಿರ್ಯಾದಿದಾರರ ಗಂಡ ತಮ್ಮ ಮಕ್ಕಳಾದ ೧] ಉಮೇರ್ ವ: ೪ವರ್ಷ, ೨] ಜೈನಾ ವ: ೨ ವರ್ಷ ರವರನ್ನು ಫಿರ್ಯಾದಿದಾರರ ಗಂಡ ದಿನಾಂಕ: ೦೧-೧೧-೨೦೧೪ ರಂದು ಬೆಳಿಗ್ಗೆ ೧೦:೩೦ ತಮ್ಮ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲವಾದ್ದರಿಂದ ಫಿರ್ಯಾದಿದಾರರು ತಮ್ಮ ಸಂಬಂಧಿಕರ ಮನೆಗೆಳಲ್ಲಿ ಹುಡುಕಾಡಿ ಎಲ್ಲಿಯೂ ಪತ್ತಿಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

೨) ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಸರಹದ್ದಿನ  ಟ್ಯಾಂಕ್‌ಬಂಡ್ ರಸ್ತೆಯಲ್ಲಿನ ಪಾದುಕಾ ಫುಟ್‌ವರ್ಲ್ಡ್ ಅಂಗಡಿಯಿಂದ ಶ್ರೀನಿವಾಸಲು ಇವರು ಎಲ್ಲಿಗೋ ಹೋಗಿದ್ದು, ಕಾಣೆಯಾಗಿರುವ ಬಗ್ಗೆ.   

        ಪಿರ್ಯಾದಿದಾರರಾದ ಶ್ರೀ. ಎನ್ . ರವಿ ತಂದೆ ಶ್ರೀನಿವಾಸುಲು ೪೨ ವರ್ಷ ,ವಾಸ; ಮನೆ ನಂ; ೩೫/೨, ವಾರ್ಡ ನಂ;೧೩ ಮರಾಠ ಬೀದಿ, ಪಾಂಡುರಂಗ ಗುಡಿ ಹತ್ತಿರ, ಕಮ್ಮಿಂಗ್ ರೋಡ್,ಬಳ್ಳಾರಿ. ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನಂದರೆ, ದಿ; ೨೬/೦೮/೨೦೧೪ ರಂದು ೧೨;೩೦ ಮಧ್ಯಾಹ್ನ ಗಂಟೆಗೆ    ಬಳ್ಳಾರಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಪಾದುಕಾ ಪುಟ್‌ವರ್ಲ್ಡ್ ಶಾಪ್‌ಗೆ ಪಿರ್ಯಾದಿದಾರರ ತಂದೆ ಶ್ರೀನಿವಾಸಲು, ೫೫ ವರ್ಷ, ಇವರು ಬಂದು ಪಿರ್ಯಾದಿದಾರರಿಗೆ ಅಂಗಡಿಯ ಬೀಗವನ್ನು ಕೊಟ್ಟು  ಯಾರಿಗೆ ಏನೇನು ಕೊಡಬೇಕು ಕೊಡು ಅಂತಾ ಹೇಳಿದಾಗ ಪಿರ್ಯಾದಿದಾರರು ತನಗೂ ಈ ಅಂಗಡಿಗೆ ಏನು ಸಂಬಂಧ ಅಂತಾ ಹೇಳಿದ್ದಕ್ಕೆ ಪಿರ್ಯಾದಿದಾರರ ತಂದೆಯಾದ  ಶ್ರೀನಿವಾಸ ರವರು ತನ್ನ ಕೈಯಲ್ಲಿದ್ದ ಬೀಗವನ್ನು ಬೀಸಾಡಿ ಎಲ್ಲಿಗೋ ಹೋಗಿದ್ದ ಆ ದಿನದಿಂದ ಇಲ್ಲಿಯವರೆಗೂ ಶ್ರೀನಿವಾಸನನ್ನು ನಗರದ ಎಲ್ಲಾ ಕಡೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರು  ಶ್ರೀನಿವಾಸರವರ ಇರುವಿಕೆಯ ಬಗ್ಗೆ ಎಲ್ಲಿಯೂ ಮಾಹಿತಿ ದೊರೆತಿರುವುದಿಲ್ಲವೆಂದು ಕೊಟ್ಟ ದುರಿನ ಮೇರೆಗೆ ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                           ಪೊಲೀಸ್ ಸೂಪರಿಂಟೆಂಡೆಂಟ್,                                                                            
                                                                                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು                        ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.

PRESS NOTE AS ON 04-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: ೦೪-೧೧-೨೦೧೪
ಪತ್ರಿಕಾ ಪ್ರಕಟಣೆ

೧) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಹತ್ತಿರ ಹೆಚ್.ಬಿ.ಹಳ್ಳಿ-ಕೂಡ್ಲಿಗಿ ರಸ್ತೆಯ ಪುಂಡಿಕಾಳ್ ಜಿಲಾನ್ ಹೊಲದ ಹತ್ತಿರ ಎರೆಡು ಮೋಟಾರ್ ಸೈಕಲ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಒಬ್ಬ ಸವಾರನ ಸಾವು. 

         ದಿನಾಂಕ: -೦೩/೧೧/೨೦೧೪ ರಂದು ರಾತ್ರಿ ೧೦-೧೫ ಗಂಟೆ ಸುಮಾರಿಗೆ ಬಲ್ಲಹುಣ್ಸಿ ಗ್ರಾಮದಲ್ಲಿ ನಡೆಯುವ ಮೊಹರಂ ಹಬ್ಬದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಫಿರ‍್ಯಾದಿದಾರರು, ತನ್ನ ಸ್ನೇಹಿತ ಪರಶುರಾಮ ಇಬ್ಬರು ಪರಶುರಾಮನ ಹೀರೋಹೊಂಡ ಸ್ಪ್ಲಂಡರ್ ಪ್ಲಸ್ ಮೋಟರ್ ಸೈಕಲ್ ನಂ.ಕೆ.ಎ-೩೫/ಯು-೮೦೧೪ ನೇದ್ದರಲ್ಲಿ ಫಿರ‍್ಯಾದಿ ಹಿಂದೆ ಕುಳಿತಿದ್ದು, ಮೋಟರ್ ಸೈಕಲನ್ನು ಪರಶುರಾಮನು ಚಲಾಯಿಸಿಕೊಂಡು ಹ.ಬೊ.ಹಳ್ಳಿ-ಕೂಡ್ಲೀಗಿ ತಾರ್ ರಸ್ತೆಯ ಮೇಲೆ ಪುಂಡಿಕಾಳ್ ಜಿಲಾನ್ ಇವರ ಹೊಲದ ಹತ್ತಿರ ರಸ್ತೆಯ ಎಡಬದಿಗೆ ಹೋಗುತ್ತಿದ್ದಾಗ, ಬಲ್ಲಹುಣ್ಸಿ ಕಡೆಯಿಂದ ಆರೋಪಿ ಪ್ರಕಾಶ ಈತನು ತನ್ನ ೫ ವರ್ಷದ ಮಗ ದೇವರಾಜನನ್ನು ಕೂಡಿಸಿಕೊಂಡು ತನ್ನ ಬಜಾಜ್ ಕವಾಸಕಿ ಕ್ಯಾಲಿಬರ್ ಮೋಟರ್ ಸೈಕಲ್ ನಂ.ಕೆ.ಎ-೩೫/ಜೆ-೫೬೬೭ ನೇದ್ದನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಮಗೆ ಡಿಕ್ಕಿ ಹೊಡೆಸಿದ ಪರಿಣಾಮ ಗಾಡಿಯಲ್ಲಿದ್ದ ಫಿರ‍್ಯಾದಿ ಮತ್ತು ಪರಶುರಾಮ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದರಿಂದ ಫಿರ‍್ಯಾದಿಗೆ ಎಡಗಾಲಿನ ಪಾದದ ಹತ್ತಿರ ತೆರಚಿದ ರಕ್ತಗಾಯ ಮತ್ತು ಮೈಮೇಲೆ ಒಳಪೆಟ್ಟಾಗಿ, ಪರಶುರಾಮನಿಗೆ ಮುಖದ ಮೇಲೆ ಬಲವಾದ ರಕ್ತಗಾಯವಾಗಿ ರಕ್ತ ಸೋರುತ್ತಿದ್ದು, ಆರೋಪಿ ಪ್ರಕಾಶ ಮತ್ತು ಆತನ ಮಗ ದೇವರಾಜ ಸಹ ರಸ್ತೆಯ ಮೇಲೆ ಬಿದ್ದರಿದ್ದರಿಂದ ಅವರಿಗೂ ಸಹ ರಸ್ತೆಗಾಯ ಮತ್ತು ಒಳಪೆಟ್ಟಾಗಿರುತ್ತವೆ. ಹಿಂದೆ ಬರುತ್ತಿದ್ದ ಗೋಣಿಸ್ವಾಮಿ ಮತ್ತು ಪ್ರತಾಪ್ ಇವರು ಈ ಅಪಘಾತವನ್ನು ನೋಡಿ ಗಾಯಗೊಂಡಿದ್ದವರನ್ನು ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ಬಂದು ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಪರಶುರಾಮ ತಂದೆ ವೀರಪ್ಪ, ೩೫ ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಹಿರೋಹೊಂಡಾ ಸ್ಲೇಂಡರ್ ಮೋಟರ್ ಸೈಕಲ್ ನಂ.ಕೆ.ಎ-೩೫/ಯು-೮೦೧೪ ನೇದ್ದರ ಚಾಲಕ, ವಾಸ:-ಮಡ್ಡಕ್ಕಿ ಬಟ್ಟಿ ಹತ್ತಿರ, ಚಾಲಿನಗರ, ಹ.ಬೊ.ಹಳ್ಳಿ ಈತನು ಮೃತಪಟ್ಟ ಬಗ್ಗೆ ಖಚಿತ ಪಡಿಸಿರುವುದಾಗಿ ಇದ್ದ ದೂರಿನ ಮೇರೆಗೆ ಹೆಚ್.ಬಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
೨) ಇಟ್ಟಿಗಿ ಗ್ರಾಮದಲ್ಲಿ ತವರು ಮನೆಯಿಂದ ಹೆಚ್ಚಿನ ವರದಕ್ಷಣೆ ತರಲಿಲ್ಲವೆಂದು ಮದುವೆಯಾದ ೨ ತಿಂಗಳಲ್ಲಿ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿದ ಬಗ್ಗೆ.
         ಆರೋಪಿಯಾದ ಸುಬಾನ್‌ಸಾಬ್ ಈತನು ದಾವಣಗೆರೆಯ ತಮ್ಮ ಸಂಬಂಧಿಕರ ಮನೆಗೆ ಬಂದು ಹೋಗುವುದು ಮಾಡುವಾಗ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದ ರಿಹಾನಳನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳಿಸಿ ಪ್ರೀತಿಸಿದ್ದರಿಂದ ರಿಹಾನಳ ಮನೆಯವರು ಇವರ ಪ್ರೀತಯ ಒತ್ತಾಯಕ್ಕೆ ಮಣಿದು ರಿಹಾನಳನ್ನು ದಿನಾಂಕ: ೨೮-೦೯-೨೦೧೪ ರಂದು ದಾವಣಗೆರೆಯಲ್ಲಿ ರೂ. ೨೦,೦೦೦/- ನಗದು ಹಣ ಹಾಗು ರೂ. ೧೦,೦೦೦/- ಬೆಲೆ ಬಾಳುವ ಬಟ್ಟೆಗಳನ್ನು ವರದಕ್ಷಣೆ ವರೋಪಚಾರಕ್ಕೆಂದು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಆಕೆಯ ಗಂಡ ರಿಹಾನಳನ್ನು ಮದುವೆಯಾಗಿರುವುದು ಮೃತಳ ಅತ್ತೆಯಾದ ಆರೋಪಿ ಜಮೀಲಾ ಮತ್ತು ಮೃತಳ ನಾದಿನಿಯಾದ ಶ್ರೀಮತಿ. ರಷೀದಾ ಇವರಿಗೆ ಇಷ್ಟವಿಲ್ಲವಾದ್ದರಿಂದ ಮದುವೆಯಾದ ನಂತರದ ದಿನಗಳಲ್ಲಿ ಆರೋಪಿತರ ೩ ಜನರು ಸೇರಿಕೊಂಡು ರಿಹಾನಳಿಗೆ ಇನ್ನೂ ಹೆಚ್ಚಿನ ವರದಕ್ಷಣೆಯಾಗಿ ರೂ. ೫೦,೦೦೦/- ಗಳನ್ನು ತವರು ಮನೆಯಿಂದ ಪಡೆದುಕೊಂಡು ಬರುವಂತೆ ಪೀಡಿದುತ್ತಾ ಹೊq-ಬಡೆ ಮಾಡುತ್ತಾ ಬಂದು ಹೆಚ್ಚಿನ ವರದಕ್ಷಣೆಯನ್ನು ಕೊಡದೇ ಇದ್ದರೆ ರಿಹಾನಳಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕುವುದಾಗಿ ರಿಹಾನಳ ತಂದೆ ತಾಯಿಗಳಿಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಾ ಬಂದು, ಹೆಚ್ಚಿನ ವರದಕ್ಷಣೆ ತಾರದೇ ಇದ್ದುದರಿಂದ ಆರೋಪಿತರು ದಿನಾಂಕ: ೦೨-೧೧-೨೦೧೪ ರಂದು ಸಂಜೆ ೫-೦೦ ಗಂಟೆಗೆ ಸುಮಾರಿಗೆ ಇಟ್ಟಿಗಿ ಗ್ರಾಮದ ತಮ್ಮ ಮನೆಯಲ್ಲಿ ರಿಹಾನಳ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ರಿಹಾನಳಿಗೆ ತಲೆಯಿಂದ ಪಾದದವರೆಗೆ ಸುಟ್ಟ ಗಾಯಗಳಾಗಿದ್ದು, ಈ ಬಗ್ಗೆ ಇಟ್ಟಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸೀರಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣೆಗೆರೆ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆಂದು ಇದದ ದೂರಿನ ಮೇರೆಗೆ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.

                                                                                                          ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                        ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು                          ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.

ಶನಿವಾರ, ನವೆಂಬರ್ 1, 2014

PRESS NOTE AS 01-11-2014

 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: ೦೧-೧೧-೨೦೧೪
ಪತ್ರಿಕಾ ಪ್ರಕಟಣೆ 

೧) ಕೂಡ್ಲಿಗಿ ಪೊಲೀಸ್ ಠಾಣೆ ಸರಹದ್ದಿನ ಹೊಸಪೇಟೆ ಬೈಪಾಸ್ ಎನ್.ಹೆಚ್.-೧೩ ರಸ್ತೆಯಲ್ಲಿ ಮೋಟಾರ್ ಸೈಕಲ್‌ಗೆ ಯಾವುದೋ ಲಾರಿ ಡಿಕ್ಕಿ ಪಡಿಸಿ ಪರಾರಿಯಾಗಿದ್ದು, ಅಫಘಾತದಲ್ಲಿ ಮೋಟಾರ್ ಸೈಕಲ್ ಸವಾರನ ಸಾವು.  

     ದಿನಾಂಕ ೩೦/೧೦/೨೦೧೪ ರಂದು ರಾತ್ರಿ ೯-೦೦ ಗಂಟೆಯ ಸುಮಾರಿಗೆ ಶ್ರೀ.ನಾಗರಾಜ ತಂದೆ ಹಾಲಪ್ಪ, ೨೩ ವರ್ಷ, ವಾಲ್ಮೀಕಿ ಜನಾಂಗ, ವ್ಯವಸಾಯ, ವಾಸ ಹೊನ್ನಾಪುರ, ಹರಪನಹಳ್ಳಿ ತಾಲೂಕು ದಾವಣಗೇರೆ ಜಿಲ್ಲಾ ಈತನು ತನ್ನ ಮೋಟಾರ್ ಸೈಕಲ್ ನಂಬರ್ ಕೆ.ಎ ೧೭ ಇ.ಜೆ ೬೬೩೮ ಹಿರೋ ಹೊಂಡ ಮೋಟಾರ್ ಸೈಕಲ್‌ನಲ್ಲಿ ಕೂಢ್ಲಿಗಿ ಕಡೆಯಿಂದ ಕೈವಲ್ಯಾಪುರಕ್ಕೆ ಹೋಗಲೆಂದು ಹೊಸಪೇಟೆ ಬೈಪಾಸ್‌ನ ಎನ್.ಹೆಚ್.೧೩ ರಸ್ತೆಯಲ್ಲಿ ಹೋಗುತ್ತಿರುವಾಗ ಹೊಸಪೇಟೆ ಕಡೆಯಿಂದ ಬಂದ ಯಾವುದೋ ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನಾಗರಾಜನ ಮೋಟಾರ್ ಸೈಕಲ್‌ಗೆ ಅಪಘಾತ ಪಡಿಸಿದ್ದು ಇದರಿಂದ ಆತನಿಗೆ ಬಲಗಾಲು ಮೊಣಕಾಲು ಮತ್ತು ಮೊಣಕಾಲು ಕೆಳಗೆ ಮುರಿದಿದ್ದು ಅಲ್ಲದೆ ಬಲಗೈಯಿ ತೋಳಿನ ಹತ್ತಿರ ಮುರಿದ್ದಿದ್ದು ಮತ್ತು ಮುಖ ಸಂಪೂರ್ಣ ಜಜ್ಜಿದಂತಾಗಿ ಹಣೆಯಿಂದ ಮತ್ತು ಮೂಗಿನಿಂದ ರಕ್ತ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತಪಡಿಸಿz ಲಾರಿಯನ್ನು ಅದರ ಚಾಲಕನು ನಿಲ್ಲಿಸದೇ ಹೋಗಿರುತ್ತಾನೆಂದು ಈ ಅಪಘಾತದಲ್ಲಿ ಮೋಟಾರ್ ಸೈಕಲ್ ಸಂಪೂರ್ಣ ಜಖಂಗೊಂಡಿರುತ್ತದೆಂದು ಇದ್ದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. 

೨) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಬಿ.ಎಸ್.ಎ.ಎಲ್ ಫ್ಯಾಕ್ಟರಿ ಎದುರಿಗೆ ಇರುವ ಜನತಾ ನಗರದ ಒಂದು ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ಗಾಂಜಾ ಜಪ್ತು, ಆರೋಪಿಯ ಬಂಧನ. 
     ದಿನಾಂಕ: ೩೧-೧೦-೨೦೧೪ ರಂದು ಮದ್ಯಾಹ್ನ ೨-೦೦ ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಬಳ್ಳಾರಿ-ಅನಂತಪುರ ರಸ್ತೆ ಬಿ.ಎಸ್.ಎ.ಎಲ್. ಪ್ಯಾಕ್ಟರಿ ಎದುರಿಗೆ ಇರುವ ಜನತಾ ನಗರದಲ್ಲಿರುವ ಒಂದು ಮನೆಯಲ್ಲಿ  ಅಕ್ರಮವಾಗಿ ಗಾಂಜಾವನ್ನು ಶೇಖರಣೆ ಮಾಡಿ ಇಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಡಿ.ಎಸ್.ಪಿ. ಬಳ್ಳಾರಿ ಗ್ರಾಮೀಣ ಉಪ ವಿಭಾಗ ರವರು  ಮತ್ತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ. ಕೆ. ಹೊಸಕೇರಪ್ಪ ಮತ್ತು ಪೊಲೀಸ್ ಸಿಬ್ಬಂದಿಯವರು ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ ನೋಡಲಾಗಿ ಅರೋಪಿಯಾದ ಜಾಫರ್ ಸಾಧಿಕ್ ತಂದೆ ವಲಿಸಾಬ್, ವ: ೨೫ ವರ್ಷ, ಮುಸ್ಲಿಂ ಜಾತಿ, ಲಾರಿಚಾಲಕ, ವಾಸ: ಗಣೇಶ್ ಗುಡಿ ಹಿಂದುಗಡೆ, ಕೊಲುಮೆ ಚೌಕ್, ಬಳ್ಳಾರಿ ಇತನನ್ನು ದಸ್ತಗಿರಿ ಮಾಡಿ ಇತನು ಶೇಖರಣೆ ಮಾಡಿ ಇಟ್ಟುಕೊಂಡಿದ್ದ ಒಟ್ಟು ೪ ಚೀಲಗಳಲ್ಲಿಯ ಅಂದಾಜು ರೂ: ರೂ. ೧೦,೫೦೦/- ಬೆಲೆಯ ಅಂದಾಜು ೩೫ ಕೆ.ಜಿ. ಗಾಂಜಾ, ಇತನ ಬಳಿ ಇದ್ದ ನಗದು ಹಣ ರೂ: ೩,೭೦೦/-, ಒಂದು ತಕ್ಕಡಿ ೨ ಕೆ.ಜಿ. ತೂಕದ ಕಲ್ಲನ್ನು ಜಪ್ತು ಮಾಡಿಕೊಂಡಿದ್ದು, ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

೩) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಪೊಲೀಸ್ ಠಾಣೆ ಸರಹದ್ದಿನ ಬೆಂಗಳೂರು ರಸ್ತೆಯ ರೈಲ್ವೆ ಗೇಟ್ ಹತ್ತಿರ ಚೆಕ್‌ಪೋಸ್ಟ್ ಬಳಿ ಆಟೋ ಚಾಲಕನಿಂದ ಬಿಜಾಪುರ ವಾಸಿ ಪ್ರಯಾಣಿಕನಿಗೆ ಬೆದರಿಸಿ ಹಣ ಮೊಬೈಲ್ ದೋಚಿ ಪರಾರಿ. 
      ದಿನಾಂಕ ೩೦-೧೦-೨೦೧೪ ರಂದು ರಾತ್ರಿ ೧೧-೩೦ ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಮಲ್ಲಿಕಾರ್ಜುನ.ಎಂ.ಕೆ. ತಂದೆ ಮಲ್ಲಪ್ಪ ಕುಂಬಾರ್, ವ. ೪೦ ವರ್ಷ, ಲಿಂಗಾಯಿತ ಜನಾಂಗ, ವ್ಯಾಯಾಮ ಸಲಕರಣೆ ತಯಾರಿ ಮಾಡುವ ಕೆಲಸ , ವಾಸ: ಬಸವನಗರ , ಲಾಲಾ ಭಂಗ್ಲ  ಹತ್ತಿರ , ಬಿಜಾಪುರ. ಬಿಜಾಪುರ ಜಿಲ್ಲೆ. ನಗರದ ಮೋತಿ ಸರ್ಕಲ್ ಬಳಿ ಇರುವ ಮಯೂರಿ ಬಾರ್ ಮುಂದುಗಡೆ ನಿಂತು ಕೊಂಡಿದ್ದಾಗ ಅಲ್ಲಿಗೆ ಬಂದ ಆಟೋನಂ. ಕೆಎ-೩೪-ಎ-೭೭೮೭ ಚಾಲಕನಾದ ಮುತ್ತಣ್ಣ, ಫಿರ‍್ಯಾದಿದಾರರನ್ನು ಕಂಡು ಎಲ್ಲಿಗೆ ಹೋಗಬೇಕೆಂದು ವಿಚಾರಿಸಿದಾಗ ಆತನು ಊಟ ಎಲ್ಲಿಸಿಗುತ್ತೆ ಎಂಬುದಾಗಿ ಕೇಳಲಾಗಿ ಗುಗ್ಗರಹಟ್ಟಿ ಬಳಿ ಊಟ ಸಿಗುತ್ತದೆ ಎಂಬುದಾಗಿ ಕರೆದುಕೊಂಡು ಹೋಗಿ ಊಟ ಮಾಡಿಕೊಂಡು ವಾಪಸ್ಸು ಬರುವಾಗ ದಿನಾಂಕ: ೩೧-೧೦-೧೪ ರಂದು ೦೧-೦೦ ಎ.ಎಂ. ಗಂಟೆ ಸುಮಾರಿಗೆ ಬೆಂಗಳೂರು ರಸ್ತೆಯ ರೈಲ್ವೇ ಗೇಟ್ ಹತ್ತಿರ ಚೆಕ್ ಪೋಸ್ಟ್ ಬಳಿ ಕತ್ತಲಲ್ಲಿ ಆಟೋ ನಿಲ್ಲಿಸಿ ಫಿರ‍್ಯಾದಿದಾರನನ್ನು ನಿನ್ನ ಬಳಿ ಹಣ ಎಷ್ಠಿದೆ ಕೊಡು ಎಂಬುದಾಗಿ ಬೆದರಿಸಿ ಆತನ ಎದೆ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಮತ್ತು ಅತನ ಪ್ಯಾಂಟ್ ಜೇಬಿನಲ್ಲಿದ್ದ ನಗದು ಹಣ ರೂ.೭,೦೦೦/- ವನ್ನು ಬಲವಂತವಾಗಿ ಕಿತ್ತುಕೊಂಡು ತನ್ನನ್ನು ಅಲ್ಲೇ ಬಿಟ್ಟು ಹೋಗಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ. 

೪) ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ರಾಮಾ ಟಾಕೀಸು ಹತ್ತಿರ ಇರುವ ಓಂಕಾರೇಶ್ವರ ರಿಕ್ರಿಯೇಷನ್ ಕ್ಲಬ್‌ನಲ್ಲಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ೧೯ ಆರೋಪಿಗಳ ಬಂಧನ. 
      ದಿನಾಂಕ: ೩೧/೧೦/೧೪ ರಂದು ರಾತ್ರಿ ೭-೧೫  ಗಂಟೆಗೆ ಪಿ.ಐ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ರವರಿಗೆ ಬಂದ ಮಾಹಿತಿ ಮೇರೆಗೆ ಡಿ.ಎಸ್.ಪಿ ಹೊಸಪೇಟೆ ರವರ ನೇತೃತ್ವದಲ್ಲಿ ತಮ್ಮ ಠಾಣೆಯ ಎ.ಎಸ್.ಐ  ಮತ್ತು ಸಿಬ್ಬಂದಿಗಳು ಸೇರಿ ೯-೧೫ ಗಂ ಹೊಸಪೇಟೆಯ ರಾಮಾ ಟಾಕೀಸು ಹತ್ತಿರ ಇರುವ ಶ್ರೀ. ಓಂಕಾರೇಶ್ವರ ರಿಕ್ರಿಯೇಷನ್ ಅಸೋಸಿಯೇಷನ್‌ನಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಹರ್ ಇಸ್ಪೇಟ್ ಜೂಜಾಟದ ಮೇಲೆ ದಾಳಿ ಮಾಡಿದ್ದು, ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ ೧) ಡಿ.ಶರಣಯ್ಯ ತಂದೆ ಡಿ.ಮಹಾಬಲೇಶ್ವರಯ್ಯ ಮತ್ತು ಇತರೆ ೧೮ ಜನ ಎಲ್ಲಾರ ವಾಸ: ಹೊಸಪೇಟೆ ಇವರನ್ನು  ವಶದಿಂದ ದೊರೆತ ನಗದು ಹಣ ರೂ. ೭೮,೦೫೦/- ಮತ್ತು ೫೨ ಇಸ್ಪೇಟ್ ಎಲೆಗಳನ್ನು ೯ ಮೊಬೈಲ್‌ಗಳನ್ನು  ಜಪ್ತು ಪಡಿಸಿಕೊಂಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                                                                          ಪೊಲೀಸ್ ಸೂಪರಿಂಟೆಂಡೆಂಟ್,                                                                          
                                                                                                                           ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. ೯೮೪೫೪೮೪೧೦೦ ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-೧೭೫, ಮೋಬೈಲ್ ಸಂ: ೯೪೪೮೨೦೨೦೦೫ ರವರನ್ನು ಸಂಪರ್ಕಿಸಲು ವಿನಂತಿ.