ಸೋಮವಾರ, ಡಿಸೆಂಬರ್ 29, 2014

PRESS NOTE AS ON 30-12-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 30-12-2014

ಪತ್ರಿಕಾ ಪ್ರಕಟಣೆ 

1) ಹಿರೇ ಹಡಗಲಿ ಪೊಲೀಸ್ ಠಾಣೆ ಸರಹದ್ದಿನ  ಹ್ಯಾರಡ ರಸ್ತೆಯಲ್ಲಿ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು.       
      
   ಫಿರ್ಯಾದಿದಾರರು ದಿನಾಂಕ: 29-12-2014 ರಂದು ಬೆಳಿಗ್ಗೆ ಹ್ಯಾರಡ ರಸ್ತೆಯಲ್ಲಿರುವ ತಮ್ಮ ಹೊಲಕ್ಕೆ ಹೋದವರು ಹೊಲದ ಕೆಲಸ ಮುಗಿಸಿಕೊಂಡು ಸಂಜೆ ವಾಪಾಸ್ ಊರಿಗೆ ಬರಲು ಹ್ಯಾರಡದಿಂದ ಹೊಳಲಿಗೆ ಬರುವ ರಸ್ತೆಯಲ್ಲಿ ನಡೆದುಕೊಂಡು ಬರುವಾಗ್ಗೆ ಸಂಜೆ 7-30 ಗಂಟೆ ಸುಮಾರಿಗೆ ವಿಠಲ್‍ಕರ್ ರವರ ಹೊಲದ ಹತ್ತಿರ ಫಿರ್ಯಾದಿದಾರರ ಎದುರುಗಡೆಯಿಂದ ಆರೋಪಿಯು ತನ್ನ ಮೋಟಾರ್ ಸೈಕಲ್ ನಂ. ಕೆಎ-35 ಡಬ್ಲೂ.5516 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿಗೆ ಡಿಕ್ಕಿ ಹೊಡೆಸಿದ್ದರಿಂದ ಫಿರ್ಯಾದಿಯ ಎರಡೂ ಮೊಣಕಾಲುಗಳ ಹತ್ತಿರ ತೆರಚಿದ ರಕ್ತಗಾಯಗಳಾಗಿ ಬಲ ಮೊಣಕಾಲ ಕೆಳಗೆ ಪೆಟ್ಟು ಆಗಿದ್ದು, ಅಫಘಾತಪಡಿಸಿ ಆರೋಪಿಗೆ ಸಹ ರಕ್ತಗಾಯಗಳು ಆಗಿದ್ದು, ಫಿರ್ಯಾದಿ ಮತ್ತು ಆರೋಪಿಗೆ ಇಬ್ಬರನ್ನು ಚಿಕಿತ್ಸೆಗಾಗಿ ಹೊಳಲು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಆರೋಪಿಯಾದ ಕೂರ್ಲಹಳ್ಳಿ  ಮಹಾವೀರ, 35 ವರ್ಷ, ವಾ: ಹ್ಯಾರಡ ಗ್ರಾಮ ಈತನು  ಮೃತಪಟ್ಟಿರುತ್ತಾನೆಂದು ದೂರು ಇರುತ್ತದೆ. ಈ ಬಗ್ಗೆ ಹಿರೇ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

2) ಬಳ್ಳಾರಿ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಅಲ್ಲೀಪುರ ಗ್ರಾಮದ ಹತ್ತಿರ 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ವ್ಯಕ್ತಿ ಸ್ಥಳದಲ್ಲಿಯೇ ಸಾವು. 

       ದಿನಾಂಕ: 29-12-14 ರಂದು ರಾತ್ರಿ ಸುಮಾರು 7-30 ಗಂಟೆಯ ಸಮಯದಲ್ಲಿ ಫಿರ್ಯಾಧಿ ಯುವರಾಜ ಸಾ: ಅಲ್ಲಿಪುರ ಗ್ರಾಮ, ಬಳ್ಳಾರಿ ಈತನು ತನ್ನ ಗ್ರಾಮದ ಅಬ್ದುಲ್ಲಾ ಇವರೊಂದಿಗೆ ತಮ್ಮ ಗ್ರಾಮದಿಂದ ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಳ್ಳಾರಿ ಸಿಟಿ ಕಡೆಗೆ ಹೋಗಲು ಬಳ್ಳಾರಿ ನಗರದ ಹೊಸಪೇಟೆ ರಸ್ತೆಯ ಹೊಂಡ ಶೋ ರೂಂ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ರಸ್ತೆಯ ಎಡಬದಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ, 50-55 ವರ್ಷ ಈತನು ಅಲ್ಲಿಪುರ ಕಡೆಗೆ ನಡೆದುಕೊಂಡು ಹೊರಟಿದ್ದು, ಈತನ ಹಿಂಬದಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಂ: ಕೆಎ.34.ಎಫ್.871 ನೇದ್ದರ ಚಾಲಕನಾದ ಹನುಮನಾಯ್ಕ ನು ಬಳ್ಳಾರಿ ಸಿಟಿ ಕಡೆಯಿಂದ ಬಸ್‍ನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ  ಡಿಕ್ಕಿ ಹೊಡಿಸಿದ್ದರಿಂದ ವ್ಯಕ್ತಿ ಮೃತಪಟ್ಟ ಬಗ್ಗೆ ದೂರು ಇದ್ದು ಈ ಬಗ್ಗೆ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                                                               
                                                                                                             ಪೊಲೀಸ್ ಸೂಪರಿಂಟೆಂಡೆಂಟ್,                                                                                                                                        ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು        
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ಡಿಸೆಂಬರ್ 28, 2014

PRESS NOTE AS ON 28-12-2014


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 28-12-2014

ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ಸಂಚಾರ ಠಾಣೆ ಸರಹದ್ದಿನ ನ್ಯಾಷನಲ್ ಕಾಲೇಜ್ ಹತ್ತಿರ ಮೋಟಾರ್ ಸೈಕಲ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಮೋಟಾರ್ ಸೈಕಲ್ ಸವಾರನ ಸಾವು, ಒಬ್ಬರಿಗೆ ಗಾಯ. 

            ದಿನಾಂಕ: 27-12-2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿದರರಾದ ತಾರಮ್ಮ ಮತ್ತು ಆಕೆಯ  ಸ್ನೇಹಿತ ಮಧುಕುಮಾರ್ ಇಬ್ಬರು ಕೂಡಿ ಮಧುಕುಮಾರ್‍ನ ಬೈಕ್ ನಂಬರ್ ಕೆಎ-35 ಡಬ್ಲೂ.9038 ನೇದ್ದರಕ್ಕು ಮೆಟ್ರಿ ದೇವಲಾಪುರ ಗ್ರಾಮದಿಂದ ಹಗರಿಬೊಮ್ಮನಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಹೋಗಲು ಹೊಸಪೇಟೆಯ ಮೂಲಕ ಹೊರಟಿದ್ದು, ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹೊಸಪೇಟೆಯ ಎಸ್.ಹೆಚ್.-25 ಹರಿಹರ ರಸ್ತೆಯಲ್ಲಿನ ನ್ಯಾಷನಲ್ ಕಾಲೇಜ್ ಎದುರಿಗೆ ಇರುವ ತಾರ್ ರಸ್ತೆಯ ಎಡಭಾಗಕ್ಕೆ ಹೋಗುತ್ತಿದ್ದಾಗ ಅದೇ ವೇಳೆಗೆ ಹರಿಹರ ಕಡೆಯಿಂದ ಹೊಸಪೇಟೆ ಸಿಟಿ ಕಡೆಗೆ ಹೋಗಲು ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-42 ಎಫ್ 552 ನೇದ್ದನ್ನು ಅದರ ಡ್ರೈವರ್ ಪ್ರಸನ್ನಕುಮಾರ್ ಎಂಬಾತನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ತನ್ನ ಮುಂದಿನ ಲಾರಿಯನ್ನು ಸೈಡ್ ಹೊಡೆಯುತ್ತಾ ಏಕಾಏಕಿ ಫಿರ್ಯಾದಿ ಹಾಗು ಆತನ ಸ್ನೇಹಿತ ಮಧುಕುಮಾರನು ಸೇರಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದರಿಂದ, ಬೈಕ್ ಓಡಿಸುತ್ತಿದ್ದ ಮಧುಕುಮಾರ್ ಹಾಗು ಫಿರ್ಯಾದಿ ತಾರಮ್ಮ ಇಬ್ಬರೂ ಬೈಕ್ ಸಮೇತ ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ಗಾಯಗಳು ಆಗಿದ್ದು, ಬೈಕ್ ಸವಾರ ಮಧುಕುಮಾರ್, 28 ವರ್ಷ, ವಾ; ದೇವಲಾಪುರ ಗ್ರಾಮ ಬಲಗಾಲಿನ ಕೆಳಗೆ ಮುರಿದು, ಬಲಭುಜಕ್ಕೆ ಭಾರೀ ರಕ್ತಗಾಯಗಾವಿ ಸ್ಥಳದಲ್ಲಿಯೇ ಮೃತಟ್ಟಿದ್ದು, ಗಾಯಗೊಂಡ ಫಿರ್ಯಾದಿದಾರರನ್ನು ಆಸ್ಪತ್ರೆದಾಖಲಿಸಲಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                               

                                                                                                                ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                            ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ಡಿಸೆಂಬರ್ 24, 2014

Press note as on 25/12/2014

                                              ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 25-12-2014

ಪತ್ರಿಕಾ ಪ್ರಕಟಣೆ 

1) ಹೊಸಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಎನ್.ಹೆಚ್.-13 ರಸ್ತೆಯ ಕುರುಬರ ಮಾರಣ್ಣನ ಹೊಲದ ಹತ್ತಿರ ಲಾರಿ ಬಿದ್ದು, ಕ್ಲೀನರ್ ಸಾವು, ಚಾಲಕನಿಗೆ ಗಾಯ. 

          ದಿನಾಂಕ:24/12/2014 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ.ಕರಿಬಸಪ್ಪ ತಂದೆ ತಿಪ್ಪೇಸ್ವಾಮಿ, ವ: 21 ವರ್ಷ, ಕುರುಬರ ಜನಾಂಗ, ಹೊಸಹಳ್ಳಿಯ ಹತ್ತಿರ ಎನ್.ಹೆಚ್.13 ರಸ್ತೆಯಲ್ಲಿ ಟೀ ಹೋಟಲ್ ವ್ಯಾಪಾರಿ, ವಾಸ:ಕರೇಕಲ್ಲು ಬಗಡಿ ಹೊಸಹಳ್ಳಿ ಎಂಬುವರು ಠಾಣೆಯಲ್ಲಿ ಹಾಜರಾಗಿ ಹೇಳಿಕೆಯ ದೂರನ್ನು ಕೊಟ್ಟಿದ್ದೇನೆಂದರೆ, ದಿನಾಂಕ:24/12/2014 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ತಂಬಿಗೆ ತೆಗೆದುಕೊಂಡು ನಮ್ಮ ಗ್ರಾಮದ ಕುರುಬರ ಮಾರಣ್ಣನ ಹೊಲದ ಹತ್ತಿರ ಎನ್.ಹೆಚ್.13 ರಸ್ತೆಯಲ್ಲಿ ಹೋಗುತ್ತಿರುವಾಗ ಚಿತ್ರದುರ್ಗದ ಕಡೆಯಿಂದ ಲಾರಿ ನಂ.ಎಂ.ಪಿ.41/ಜಿ.ಎ.1024 ರ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಜೋರಾಗಿ ನಡೆಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಲಾರಿಯನ್ನು ಎಡ ಮೊಗ್ಗಲಾಗಿ ಬೀಳಿಸಿದನು ಕೂಡಲೇ ನಾನು ಮತ್ತು ಸೋಮಪ್ಪ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುವ ಚಂದ್ರಶೇಖರ್, ತಿಪ್ಪೇಶ, ಹುಡೇಂ ಶಿವು ಸೇರಿಕೊಂಡು ಲಾರಿಯ ಬಳಿ ಹೋಗಿ ನೋಡಲಾಗಿ ಈ ಅಪಘಾತದಿಂದ ಲಾರಿಯ ಕ್ಲೀನರ್‍ಗೆ ತಲೆಯ ಹಣೆಯ ಎಡಭಾಗದಲ್ಲಿ ಬಲವಾದ ಸೀಳು ರಕ್ತಗಾಯವಾಗಿತ್ತು, ಎಡ ಮುಂಗೈ ಬೆರಳುಗಳಿಗೆ ರಕ್ತಗಾಯವಾಗಿ ಎಡ ಮುಂಗೈ ಮುರಿದು ರಕ್ತ ಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಮೃತಪಟ್ಟ ವ್ಯಕ್ತಿಯ ಹೆಸರು ವಿಳಾಸವನ್ನು ಚಾಲಕನಿಗೆ ಕೇಳಲಾಗಿ ಮೃತಪಟ್ಟವನು ಹೆಸರು ಸುರೇಶ್ ತಂದೆ ವಿಕ್ರಮ್, 25 ವರ್ಷ, ಬಿಲ್ ಠಾಕೂರ್ ಜನಾಂಗ [ ಆದಿವಾಸಿ ] ಸಿಪ್ರ ಗ್ರಾಮ ಸಾವೇರಾ ತಾಲೂಕು, ಇಂದೂರು ಜಿಲ್ಲಾ, ಮದ್ಯಪ್ರದೇಶ್ ಅಂತ ತಿಳಿಸಿದನು. ಅಪಘಾತವನ್ನುಂಟು ಮಾಡಿದ ಚಾಲಕನಿಗೆ ಹೆಸರು ವಿಳಾಸ ಕೇಳಲಾಗಿ ಅವನು ತನ್ನ ಹೆಸರು, ಹೇಮಂತ ತಂದೆ ಅಮರ್‍ಸಿಂಗ್‍ಜಿ, ವ:32 ವರ್ಷ, ಲಾರಿ ಚಾಲಕ, ವಾಸ: ರಾಧಾಗಂಜ್ ಗ್ರಾಮ ದಿವಾಸ್ ತಾಲೂಕು ಮತ್ತು ಜಿಲ್ಲಾ, ಮದ್ಯಪ್ರದೇಶ್ ಅಂತ ತಿಳಿಸಿದನು. ಈ ಅಪಘಾತದಿಂದ ಚಾಲಕನಿಗೆ ಎಡ ಮುಂಗೈ ಹತ್ತಿರ ಗದ್ದದ ಹತ್ತಿರ ತೆರೆಚಿದ ಗಾಯಗಳಾಗಿದ್ದವು. ಈ ಅಪಘಾತದಿಂದ ಲಾರಿಯ ಎಡಭಾಗ ಮತ್ತು ಕ್ಯಾಬಿನ್, ಮುಂದಿನ ಗ್ಲಾಸ್ ಜಕಂಗೊಂಡು ಲಾರಿಯಲ್ಲಿ ಲೋಡ ಮಾಡಿದ್ದ ಬಾಕ್ಸಗಳು ಚಲ್ಲಾ ಪಿಲ್ಲಿಯಾಗಿ ಕೆಳಗೆ ಬಿದ್ದಿರುತ್ತವೆ. ಗಾಯಗೊಂಡ ಚಾಲಕನಿಗೆ ಹೊಸಹಳ್ಳಿ ಸರ್ಕಾರಿ ಆಸ್ಪತ್ರೆಯಲಿ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿ ಕೊಟ್ಟ ದೂರಿನ ಮೇರೆಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಕಮ್ಮಿಂಗ್ ರಸ್ತೆಯಲ್ಲಿನ ತನ್ನ ಮನೆಯಿಂದ ಮಹಿಳೆ ಕಾಣೆಯಾದ ಬಗ್ಗೆ. 

       ಪಿಯಾದಿದಾರರಾದ ಶ್ರೀ. ಸಂಗಮೇಶ ತಂದೆ ವರಬಸಪ್ಪ, 36 ವರ್µ, ಹಿಂದೂ ಬಲಿಜಿಗ ಜನಾಂಗ, ವಾಸ: ರಂಗನಾಥ ಶಾಲೆ ಹತ್ತಿರ, ಕಮ್ಮಿಂಗ್ ರಸ್ತೆ, ಬಳ್ಳಾರಿ. ಇವರ ದೂರಿನ ಮೇರೆಗೆ ದಿ:18-12-2014 ರಂದು ಸಂಜೆ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರರ ಹೆಚಿಡತಿಯಾದ ಶ್ರೀಮತಿ.ಲಲಿತಮ್ಮ, 31 ವರ್ಷ, ವಾ: ಕಮ್ಮಿಂಗ್ ರಸ್ತೆ, ಬಳ್ಳಾರಿ ಇವರು ಮನೆಗೆ ಬೀಗ ಹಾಕಿ ಸೀರೆ ಜಿಗ್ ಜಾಗ್ ಮಾಡಿಸಲು ಕೊಟ್ಟು ಬರುತ್ತೇನೆಂದು ಟೈಲರ್ ಸೀನಾ ರವರ ಬಳಿ ಮನೆಯು ಬೀಗವನ್ನು ಕೊಟ್ಟು ಹೋದವಳು ರಾತ್ರಿಯಾದರು ಬಾರದೆ ಇದ್ದು ಈ ಬಗ್ಗೆ ಈ ದಿನದ ವರೆಗೂ ಪಿರ್ಯಾದಿದಾರರು ತನ್ನ ಹೆಂಡತಿ ಲಲಿತಳನ್ನು ತಮ್ಮ ಸಂಬಂಧಿಕರ ಮನೆಗಳಲ್ಲಿ ಇತರೆ ಕಡೆಗಳಲ್ಲಿ ಹುಡಿಕಾಡಿ ನೋಡಲು  ಸಿಗದೇ ಇದ್ದುದ್ದರಿಂದ ಕಾಣೆಯದ ತನ್ನ ಹೆಂಡತಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಇದ್ದ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                 ಪೊಲೀಸ್ ಸೂಪರಿಂಟೆಂಡೆಂಟ್, 
                                                         ಬಳ್ಳಾರಿ.                

ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ಡಿಸೆಂಬರ್ 21, 2014

PRESS NOTE ON 22/12/2014

                                                                                                            ಜಿಲ್ಲಾ ಪೊಲೀಸ್ ಕಾರ್ಯಲಯ
                                                                                                          ಬಳ್ಳಾರಿ, ದಿನಾಂಕ: 22-12-2014
                                                                  ಪತ್ರಿಕಾ ಪ್ರಕಟಣೆ
1) ಕೂಡ್ಲಿಗಿ ಪೊಲೀಸ್ ಠಾಣೆ ಸರಹದ್ದಿನ  ಕರೆಕಲ್ಲು ಬಗಡೆ ಹತ್ತಿರ ಮೋಟಾರ್ ಸೈಕಲ್ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು.
   
          ದಿನಾಂಕ 21/12/2014 ರಂದು ರಾತ್ರಿ ಪಿರ್ಯಾದುದಾರರು ಕೊಟ್ಟ ಹೇಳಿಕೆಯನ್ನು ರಾತ್ರಿ 8-30 ಗಂಟೆಯಿಂದ 9-15 ಗಂಟೆಯವರೆಗೆ  ಕೊಟ್ಟ ಹೇಳಿಕೆ ದೂರನ್ನು ಪಡೆದುಕೊಂಡು ರಾತ್ರಿ 9-30 ಗಂಟೆಗೆ ಮರಳಿ ಠಾಣೆಗೆ ಬಂದು  ದೂರಿನ  ಸಾರಾಂಶದ ಮೇರೆಗೆ ಪ್ರಕರಣದಾಖಲಿಸಿದ್ದು ಪಿರ್ಯಾದುದಾರರ ದೂರಿನ ಸಾರಾಂಶದಲ್ಲಿ  ಕುಮಾರ್ ತಂದೆ ರಾಮಪ್ಪ ಈತನು ಹೊಂಡ ಶೈನ್ ಮೋಟರ್ ಸೈಕಲ್ ನಂಬರ್ ಕೆ.ಎ 35 ಯು. 5878 ನೇದ್ದರಲ್ಲಿ ಗಾಳೆಪ್ಪ ಮತ್ತು ಎನ್.ಮಂಜು ಎಂಬುವರನ್ನು ಕೂಡಿಸಿಕೊಂಡು ಈ ದಿನ ದಿನಾಂಕ 21/12/2014ರಂದು ಸಂಜೆ 6-45 ಗಂಟೆಯ ಸುಮಾರಿಗೆ ಕೂಡ್ಲಿಗಿ ಹತ್ತಿರ ಕರೆಕಲ್ಲು ಬಗಡೆಯ ಹತ್ತಿರ ಮೋಟಾರ್ ಸೈಕಲ್‍ನ್ನು ಕೂಡ್ಲಿಗಿ ಕಡೆಯಿಂದ  ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಿದಾಗ ಎದುರಿಗೆ ಬಂದ ಲಾರಿಯನ್ನು ನೋಡಿ ಪುನ ಬಲಕ್ಕೆ ಮೋಟಾರ್ ಸೈಕಲ್ ತೆಗೆದುಕೊಂಡಾಗ  ಮೋಟಾರ್ ಸೈಕಲ್ ಹಿಡಿತ ತಪ್ಪಿ ಎಡ ಮೊಗ್ಗಲಾಗಿ ಬಿದ್ದಿದ್ದು ಇದರಿಂದ ರಸ್ತೆಗೆ ಬಿದ್ದ ಕುಮಾರ್ ಈತನಿಗೆ ಮೂಗು ಮತ್ತು ಬಾಯಿಯ ಹತ್ತಿರ ರಕ್ತಗಾಯ, ಹಾಗು ಎದೆಗೆ ಒಳಪೆಟ್ಟಾಗಿದ್ದು ಗಾಳೆಪ್ಪನಿಗೆ ಮುಖಕ್ಕೆ ಮತ್ತು ಬಾಯಿಗೆ ರಕ್ತಗಾಯ ಹಾಗು ಇತರ ಕಡೆ ಒಳಪೆಟ್ಟುಗಳಾಗಿದ್ದು  ಎನ್.ಮಂಜು ಈತನಿಗೆ ಎರಡು ಮೊಣಕೈಗಳಿಗೆ ಮತ್ತು ಬಲ ಸೊಂಟಕ್ಕೆ ರಕ್ತಗಾಯಗಳಾಗಿದ್ದು ಚಿಕಿತ್ಸೆಗೆಂದು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಕುಮಾರ ತಂದೆ ರಾಮಪ್ಪ, 23 ವರ್ಷ, ಜಂಗಲರ ಜನಾಂಗ, ವಾಸ ಬೆಂಗಳೂರು ರಸ್ತೆಯ ಹತ್ತಿರದ ಚರ್ಚೆ ಹಿಂಭಾಗ, ಕೂಢ್ಲಿಗಿ ಪಟ್ಟಣ ಈತನನ್ನು ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು P ಈ ಬಗ್ಗೆ ಕೊಟ್ಟ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ಸುಧಾಕ್ರಾಸ್ ಬ್ಯಾಂಕ್ ಎ.ಟಿ.ಎಂ.ನಿಂದ 21 ವರ್ಷದ ಯುವಕ ಕಾಣೆಯಾದ ಬಗ್ಗೆ
      ಫಿರ್ಯಾಧಿದಾರರ ಅಬ್ದುಲ್ ರಜಾಕ್ ತಂದೆ ಲೇಟ್ ಬಿ.ಶೇಖ್ ಸಾಬ್. ವಾಸ: ಸೊಲ್ಳಾಪುರಮ್ಮ ಬೀದಿ ಕೌಲ್‍ಬಜಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಫಿರ್ಯಧಿದಾರರ ಮಗನಾದ ಮಹಮ್ಮದ್ ಅಸದ್ ವ: 21ವರ್ಷ ಇತನು ಬಳ್ಳಾರಿ ಅಲ್ಲಿಪುರದ ಹತ್ತಿರವಿರುವ ಬಿ.ಐ.ಟಿ.ಎಂ. ಇಂಜಿನಿಯರಿಂಗ್ ಕಾಲೇಜ್‍ನಲ್ಲಿ  ವಿದ್ಯಾಬ್ಯಾಸ ಮಾಡುತ್ತಿರುತ್ತಾನೆ. ಪ್ರತಿದಿನ ಬೆಳಿಗ್ಗೆ 9-30 ಗಂಟೆಗೆ ಕಾಲೇಜ್‍ಗೆ ತನ್ನ ಮೋಟರ್ ಸೈಕಲ್‍ನಲ್ಲಿ ಹೊಗಿ ಸಂಜೆ    5-00 ಗಂಟೆಗೆ ಮನೆಗೆ ಮರಳಿ ಬರುತ್ತಿದ್ದನು.  ಅದೇ ರೀತಿ ದಿನಾಂಕ: 18/12/2014 ರಂದು ಎಂದಿನಂತೆ ಬೆಳಿಗ್ಗೆ 9-30 ಗಂಟೆಗೆ ಕಾಲೇಜ್‍ಗೆ ಹೋಗಿದ್ದು, ಸಂಜೆ 06-00 ಗಂಟೆಯಾದರೂ ಮರಳಿ ಮನೆಗೆ ಬರಲಿಲ್ಲ. ನಂತರ ನಾನು ಅವನ ಮೋಬೈಲ್ ನಂ: 9880986786 ನ್ನೆದ್ದಕ್ಕೆ ಕರೆಮಾಡಿದಾಗ್ಯೂ ಸ್ವೀಚ್‍ಆಫ್ ಎಂದು ಬಂದಿರುತ್ತದೆ. ತಕ್ಷಣ ನಾನು ನನ್ನ ಮಗನ ಗೆಳೆಯರಿಗೆ ವಿಚಾರಿಸಿದೆ ಅದಕ್ಕೆ ಅವರು  ಗೊತ್ತಿಲ್ಲವೆಂದು ಹೇಳಿದರು ನಂತರ ನಾನು ನಮ್ಮ ಸಂಬಂಧಿಕರಿಗೆ ಫೋನ್‍ಮಾಡಿ ವಿಚಾರಿಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ, ನಂತರ ನಾನು ಮತ್ತು ನನ್ನ ಮನೆಯವರು ನಗರದ ಇತರೆ ಕಡೆಗಳಲ್ಲಿ ಹೋಗಿ ಹುಡುಕಾಡಿ ನೋಡಿದಾಗ್ಯೂ ಪತ್ತೆಯಾಗಲಿಲ್ಲ. ಅದೇದಿನ ರಾತ್ರಿ ಸುಮಾರು 10-30 ಗಂಟೆಗೆ  ನನ್ನ ಮಗನು ತನ್ನ ಮೋಟರ್ ಸೈಕಲ್‍ನ್ನು ಸುಧಾಕ್ರಾಸ್ ಹತ್ತಿರದ ಎಸ್.ಬಿ.ಐ. ಬ್ಯಾಂಕ್‍ನ ಎ.ಟಿ.ಎಂ. ರೂಮ್ ಮುಂದೆ ಬಿಟ್ಟು ಹೋಗಿರುತ್ತಾನೆ. ಅದ್ದರಿಂದ ನಾನು ನಗರದ ವಿವಿಧಕಡೆಗಳಲ್ಲಿ ತಿರುಗಾಡಿ ನೋಡಿದರೂ ಪತ್ತೆಯಾಗದೇ ಎಲ್ಲೋ  ಕಾಣೆಯಾಗಿರುತ್ತಾನೆ. ಕಾರಣ ಕಾಣೆಯಾದ ನನ್ನ ಮಗ ಮಹಮ್ಮದ್ ಅಸದ್‍ನನ್ನು ಹುಡುಕಿಕೊಡಲು ಕೊಟ್ಟ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                               
ಪೊಲೀಸ್ ಪರಿಂಟೆಂಡೆಂಟ್,                                                                              
                                                    ಬಳ್ಳಾರಿ.                                                                                                                 
ಇವರಿಗೆ,



ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಶನಿವಾರ, ಡಿಸೆಂಬರ್ 13, 2014

Press Note As On 14-12-2014


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ 
ದಿನಾಂಕ: 14-12-2014
ಪತ್ರಿಕಾ ಪ್ರಕಟಣೆ 

1) ತಂಬ್ರಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಹಂಪಸಾಗರ ಗ್ರಾಮದಲ್ಲಿ ಯಾರೋ ಕಳ್ಳರಿಂದ ಮನೆಯ ಬಾಗಿಲಿನ ಬೀಗದ ಚಿಲಕದ ಕೊಂಡಿಯನ್ನು ಮುರಿದು  ಕಳ್ಳತನ, ಬಂಗಾರ, ಬೆಳ್ಳಿ, ನಗದು ಹಣ ಕಳವು 

         ದಿ.12-12-2014 ರಂದು ಬೆಳಗ್ಗೆ 7-00 ಗಂಟೆಯಿಂದ ದಿನಾಂಕ:13-12-2014 ರಂದು ಬೆಳಗ್ಗೆ 10-00 ಗಂಟೆಯ ಮದ್ಯದ ಅವಧಿಯಲ್ಲಿ ಹಂಪಸಾಗರ ಗ್ರಾಮದ ಫಿರ್ಯಾದಿಯ ತಂದೆ ಅರಲೂರ್ ಮಲ್ಲಪ್ಪ ರವರ ಮನೆಯ ಬಾಗಿಲಿಗೆ ಹಾಕಿದ ಬೀಗದ ಕಬ್ಬಿಣದ ಚಿಲುಕದ ಕೊಂಡಿಗಳನ್ನು ಯಾರೋ ಕಳ್ಳರು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 2 ಕಬ್ಬಿಣದ ಗಾಡ್ರೇಜ್‍ಗಳನ್ನು ಮತ್ತು ಒಂದು ಕಟ್ಟಿಗೆಯ ಕಪಾಟನ್ನು ಮುರಿದು ಎರಡು ಕಬ್ಬಿಣದ ಗಾಡ್ರೇಜ್‍ನಲ್ಲಿಟ್ಟದ್ದ ಒಟ್ಟು 160 ಗ್ರಾಂ ತೂಕದ ಬಂಗಾರದ ಒಡವೆಗಳು, 450 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಹಾಗೂ 17,000/- ರೂ ನಗದು ಹಣ, 20 ರೇಷ್ಮೆ ಸೀರೆಗಳು ಎಲ್ಲ ಹಳೆಯ ಮತ್ತು ಹೊಸ ವಸ್ತುಗಳು ಹಾಗೂ ನಗದು ಹಣ ಸೇರಿ ಒಟ್ಟು 2,95,000/- ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ನೀಡಿದ ದೂರಿನ ಮೇರೆಗೆ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 


2) ಹೊಸಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಜುಮ್ಮೋಬನಹಳ್ಳಿ ಗ್ರಾಮದಿಂದ 17 ವರ್ಷದ  ಹುಡುಗಿ ಕಾಣೆಯಾದ ಬಗ್ಗೆ. 

         ದಿನಾಂಕ:13/12/2014 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ.ಹೊನ್ನೂರ್‍ಸಾಬ್ ತಂದೆ ಲೇಟ್ ಇಮಾಮ್‍ಸಾಬ್, ವ:60 ವರ್ಷ, ಮುಸ್ಲೀಂ ಜನಾಂಗ, ಕೂಲಿ ಕೆಲಸ, ವಾಸ: ಜುಮ್ಮೋಬನಹಳ್ಳಿ ಗ್ರಾಮ ಎಂಬುವರು ಠಾಣೆಯಲ್ಲಿ ಹಾಜರಾಗಿ ದೂರನ್ನು ಕೊಟ್ಟಿದ್ದೇನೆಂದರೆ, ನನ್ನ ಮಗಳಾದ ಕು:ಹೆಚ್.ಮೆಹರ್‍ತಾಜ್, ವ:17 ವರ್ಷ, ಇವಳು ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮುರು ತಾಲೂಕು ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಎಸ್.ಎ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿದ್ದು, ಪ್ರತಿ ದಿನದಂತೆ ನನ್ನ ಮಗಳು ದಿನಾಂಕ:15/11/2014 ರಂದು ಬೆಳಿಗ್ಗೆ 8-30 ಗಂಟೆಗೆ ಮನೆಯಿಂದ ಕಾಲೇಜಿಗೆ ರೇವಣಸಿದ್ದೇಶ್ವರ ಬಸ್ಸಿನ ಮೂಲಕ ಕಾಲೇಜಿಗೆ ಹೋದವಳು ಮನೆಗೆ ಹಿಂದಿರುಗಲಿಲ್ಲ ನಾನು ಹಾಗು ನಮ್ಮ ಕುಟುಂಬದವರು ಹಾಗು ನಮ್ಮ ಸಂಬಂಧಿಕರು ಎಲ್ಲಾ ಕಡೆ ಹುಡುಕಾಡಿ ನೋಡಲಾಗಿ ಪತ್ತೆಯಾಗಿರುವುದಿಲ್ಲವೆಂದು, ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯ ಕೈಗೊಂಡಿರುತ್ತದೆ. 


                                                  ಪೊಲೀಸ್ ಸೂಪರಿಂಟೆಂಡೆಂಟ್,    
                                                        ಬಳ್ಳಾರಿ.                   
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

PRESS NOTE AS ON 13/12/2014


                                              ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 13-12-2014

ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ಶ್ರೀ. ಕನಕದುರ್ಗಮ್ಮ ದೇವಸ್ಥಾನದಿಂದ 38 ವರ್ಷದ ಯುವಕ ಹಣದೊಂದಿಗೆ ಕಾಣೆಯಾಗಿರುವ ಬಗ್ಗೆ. 

        ದಿನಾಂಕ 11-11-2014 ರಂದು ಬೆಳಿಗ್ಗೆ 6-30 ಗಂಟೆಗೆ ಫಿರ್ಯಾದಿ ಶ್ರೀ ಮಲ್ಲಿಕಾರ್ಜುನ ತಂದೆ ಮಲ್ಲಯ್ಯ ಸಾ: ಮೋಕ ಗ್ರಾಮ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ತನ್ನ ಅಣ್ಣನಾದ ತಿಪ್ಪೇಸ್ವಾಮಿ, ವ: 38 ವರ್ಷ, ಈತನು ಆಟೋ ನಂ.ಕೆ.ಎ.34-ಎ-3192 ನೇದ್ದರಲ್ಲಿ ಹತ್ತಿ ಲೋಡ್ ಮಾಡಿಕೊಂಡು ಚಾಲಕನಾದ ಮಹೇಶ್‍ನೊಂದಿಗೆ ಬಳ್ಳಾರಿಗೆ ಹತ್ತಿ ಮಾರಾಟ ಮಾಡಲು ಬಂದು, ಹತ್ತಿ ಮಾರಾಟದಿಂದ ಬಣ ರೂ. 54,600/- ಗಳನ್ನು ಪಡೆದುಕೊಂಡು ಸದರಿ ಆಟೋದಲ್ಲಿ ಬಳ್ಳಾರಿ ನಗರದ ಶ್ರೀ ಕನಕ ದುರ್ಗಮ್ಮ ಗುಡಿ ಹತ್ತಿರಕ್ಕೆ ಬಂದು ಆಟೋದಿಂದ ಕೆಳಗಿಳಿದು ಆಟೋ ಚಾಲಕನಿಗೆ ಊರಿಗೆ ಹೋಗಿರುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಮರಳಿ ಬಂದಿರುವುದಿಲ್ಲವೆಂದು ಕೊಟ್ಟ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ವರಲಹಳ್ಳಿ ಗ್ರಾಮದ ಹತ್ತಿರ ಹೆಚ್.ಬಿ.ಹಳ್ಳಿ- ಕೊಟ್ಟೂರು ರಸ್ತೆಯಲ್ಲಿ ಮೋಟಾರ್ ಸೈಕಲ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಮೋಟಾರ್ ಸೈಕಲ್ ಸವಾರನ ಸಾವು. 

       ದಿನಾಂಕ 12-12-14 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿ ಶ್ರೀ ಎನ್.ಮಾಬುಸಾಬ್ ಇವರು ಠಾಣೆಯಲ್ಲಿ ಹಾಜರಾಗಿ ಹೇಳಿಕೆ ದೂರು ನೀಡಿದ್ದು ಅದರಲ್ಲಿ ತನ್ನ 3 ನೇ ಮಗನಾದ ಮಹಮ್ಮದ್ ಶಫಿ ಈತನು ರಾಂಪುರದಲ್ಲಿ ಮದುವೆಯಾಗಿ ಅಲ್ಲೆ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರನ್ನು ನೋಡಿಕೊಂಡು ಹೋಗಲು ದಿನಾಂಕ 11-12-14 ರಂದು ರಾತ್ರಿ 8-30 ಗಂಟೆಗೆ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ ಕೆ.ಎ.17/ಇಇ-0211 ನೇದ್ದರಲ್ಲಿ ಪಿರ್ಯಾದಿದಾರರ ಮನೆಗೆ ಬಂದು ಎಲ್ಲರನ್ನು ನೋಡಿಕೊಂಡು ನಿನ್ನೆ ರಾತ್ರಿ 10-30 ಗಂಟೆ ಸುಮಾರಿಗೆ ಪುನಹ ರಾಂಪುರಕ್ಕೆ ಹೋಗಲು ಹ.ಬೊ.ಹಳ್ಳಿ-ಕೊಟ್ಟೂರುನ ತಾರ್ ರಸ್ತೆಯ ಮೇಲೆ ವರಲಹಳ್ಳಿ ಗ್ರಾಮದ ಹತ್ತಿರ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ ಕೆ.ಎ.17/ಇಇ-0211 ಹೋಗುತ್ತಿದ್ದಾಗ ಕೊಟ್ಟೂರು ಕಡೆಯಿಂದ ಆರೋಪಿ ಆರ್..ಶಿವಕುಮಾರ ಈತನು ತನ್ನ ಇಂಡಿಕಾ ಕಾರ್ ನಂ ಕೆ.ಎ.35/ಎನ್-0415 ನೇದ್ದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹಮ್ಮದ ಶಫಿಯ ಮೋಟರ್ ಸೈಕಲ್‍ಗೆ ಡಿಕ್ಕಿಹೊಡೆಸಿದ ಪರಿಣಾಮ ಮಹಮ್ಮದ್ ಶಫಿ, 30 ವರ್ಷ ವಾ: ಹೆಚ್.ಬಿ.ಹಳ್ಳಿ ಈತನ  ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತನ ಬಲಗೈ ಭುಜಕ್ಕ, ಬಲ ಎದಗೆ, ಮತ್ತು ಬಲಾಗಾಲಿನ ತೊಡೆಗೆ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು, ಚಿಕಿತ್ಸೆಗೆ 108 ಆಂಬೂಲೆನ್ಸ್‍ನಲ್ಲಿ ಹ.ಬೊ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೇರೆ ಸಿ.ಜಿ ಆಸ್ಪತ್ರಗೆ ಕಳಿಸಿಕೊಟ್ಟಿದ್ದು, ಸಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷೀಸಿ ಮೃತಪಟ್ಟಿದ್ದಾಗಿ ತಿಳಿಸಿದ್ದಾಗಿ, ಇದ್ದ ದೂರಿನ ಮೇರೆಗೆ ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

                                                                                                              ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                                             ಬಳ್ಳಾರಿ.                                                                                                                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                                 ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಶುಕ್ರವಾರ, ಡಿಸೆಂಬರ್ 12, 2014

PRESS NOTE AS ON 12-12-2014

                                                   ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 12-12-2014

ಪತ್ರಿಕಾ ಪ್ರಕಟಣೆ 

1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ವಿ.ಟಿ. ಕ್ಯಾಂಪ್‍ನ ದಮ್ಮೂರು ಗ್ರಾಮದ ಹತ್ತಿರ ಬುಲೇರೋ ವಾಹನ ಹಾಗು ಕಾರಿನ ನಡುವೆ ರಸ್ತೆ ಅಫಘಾತ ಬುಲೇರೋ ವಾಹನ ಚಾಲಕನ ಸಾವು. 

       ದಿ: 11/12/14 ರಂದು ಪಿರ್ಯಾದಿ ಮಗಳ ಸೀಮಂತ ಕಾರ್ಯಕ್ರಮಕ್ಕೆ ಹಳೆಕೋಟೆಗೆ ತನ್ನ ಅಣ್ಣನ ಮಗಳು ಲಕ್ಚಿ ಇತರೆ ಸಂಬಂದಿಕರೊಂದಿಗೆ ಬುಲೇರೋ ವಾಹನ ಸ: ಕೆಎ-34/ಎಂ:8213 ರಲ್ಲಿ ಹೋಗುತ್ತಿರುವಾಗ ಆರೋಪಿ ತನ್ನ ಕಾರ್‍ನ್ನು  ಸಿರುಗುಪ್ಪ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷತೆಯಿಂದ ನಡೆಸಿಕೊಂಡು ಬಂದು ಎಸ್.ಹೆಚ್-19 ರಸ್ತೆ, ವಿ.ಟಿ.ಕ್ಯಾಂಪ್ ದಮ್ಮೂರು ಗ್ರಾಮದ ಹತ್ತಿರ ರಸ್ತೆ ಬಲಬಾಗಕ್ಕೆ ತಿರುಗಿಸಿದ್ದರಿಂದ ರಸ್ತೆ ಎಡಬಾಗದಲ್ಲಿ ಹೊರಟಿದ್ದ ತನ್ನ ಕಾರ್‍ಗೆ ಡಿಕ್ಕಿ ಹೊಡೆಸಿದ್ದರಿಂದ ತಮ್ಮ ವಾಹನದಲ್ಲಿದ್ದ ಲಕ್ಷ್ಮಿ, ಗಂಗಮ್ಮ, ಸಾವಿತ್ರಿ ರವರಿಗೆ ಗಾಯಗಳಾಗಿ ವಾಹನ ಜಖಂಗೊಂಡಿದ್ದು, ಕಾರ್ ಚಾಲಕ ಸುರೇಶ್, 25 ವರ್ಷ, ವಾ: ಕುರುಗೋಡು ಈತನಿಗೆ ಎದೆಗೆ ಹಿಚುಕಿದಂತಾಗಿ ಕಾಲಿಗೆ ರಕ್ತಗಾಯವಾಗಿದ್ದು, ಕಾರ್‍ನಲ್ಲಿದ್ದ ಏಜಾಜ್‍ಹುಸೇನ್ ರವರಿಗೆ ಸಹ ಗಾಯಗಳಾಗಿದ್ದು, ಎಲ್ಲರು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆಯಲ್ಲಿ ಗುಣವಾಗದೆ ಕಾರ್ ಚಾಲಕ ಸುರೇಶ್ ಈತನು ಚಿಕಿತ್ಸೆ ಪಡೆಯುತ್ತಾ ಮೃತಪಟ್ಟಿರುತ್ತಾನೆಂದು ಇದ್ದ ದೂರಿನ ಮೇರೆಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.  

   
2) ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ಕೇಂದ್ರಿಯ ವಿದ್ಯಾಲಯದ ಮುಂದೆ ಇರುವ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡದಲ್ಲಿ ರಾಡ್ ಬೆಂಡಿಂಗ್ ಕೆಲಸ ಮಾಡುವವನಿಂದ ಅಪ್ರಾಪ್ತ 2 ವರ್ಷದ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ

        ಫಿರ್ಯಾಧಿದಾರರು ತನ್ನ ಗಂಡ ಮತ್ತು ಮೂರು ಜನ ಮಕ್ಕಳೊಂದಿಗೆ ಈಗ್ಗೆ 3 ತಿಂಗಳಿನಿಂದ ಡಾಲರ್ಸ್ ಕಾಲೋನಿ ಷರೀಫ್ ರವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟದ ಮುಂದೆ ಒಂದು ಶೆಡ್‍ನಲ್ಲಿ ವಾಸವಾಗಿದ್ದು, ಫಿರ್ಯಾಧಿದಾರರ ಗಂಡನು ಷರೀಫ್ ರವರ ಹೊಸದಾಗಿ ಕಟ್ಟುತ್ತಿರುವ ಕಟ್ಟಡಕ್ಕೆ ವಾಚ್‍ಮನ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ: 10/12/2014 ರಂದು ಆರೋಪಿ-ರಿಜ್ಞಾನ್ @ ರಿಜ್ಜುನು ಷರೀಪ್ ರವರ ಬೀಲ್ಡಂಗ್‍ನಲ್ಲಿ ಕೆಲಸ ಮಾಡಲು ಬಂದಿದ್ದು, ನಂತರ ಮದ್ಯಾಹ್ನ 12-15 ಗಂಟೆಗೆ ತನ್ನ ಮಗಳನ್ನು ತಮ್ಮ ಶೆಡ್ ಹತ್ತಿರ ಬಿಟ್ಟು, ಪಕ್ಕದ ಮನೆ ಹೆಂಗಸಿನೊಂದಿಗೆ ಮಾತನಾಡಲು ಹೋದ ಸಮಯದಲ್ಲಿ ಮದ್ಯಾಹ್ನ 12-15 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ಮದ್ಯದ ಅವಧಿಯಲ್ಲಿ ಬಂಡಿಹಟ್ಟಿಯ ಕೇಂದ್ರಿಯ ವಿದ್ಯಾಲಯದ ಮುಂದೆ ಇರುವ ಷರೀಫ್ ರವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡದ ಒಂದು ರೂಂನಲ್ಲಿ ಫಿರ್ಯಾಧಿದಾರರ ಅಪ್ರಾಪ್ತ 2 ವರ್ಷದ ಮಗಳ ಮೇಲೆ ರಾಡ್‍ಬೆಂಡಿಂಗ್ ಕೆಲಸ ಮಾಡುವ ರಿಜ್ವಾನ್ @ ರಿಜ್ಜು ಲೈಂಗಿಕ ಅತ್ಯಾಚಾರ ಮಾಡಿದ್ದಾಗಿ ಫೀರ್ಯಾಧಿದಾರರು ಕೊಟ್ಟ ಹೇಳಿಕೆ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  

3) ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಹೊಸ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುತ್ತಿರುವಾಗ್ಗೆ ಮಹಿಳೆಯ ಕೊರಳ ಬಂಗಾರದ ಚೈನ್ ಕಿತ್ತುಕೊಂಡು ಪರಾರಿ. 

    ದಿನಾಂಕ: 11-12-2014 ರಂದು ಬೆಳಿಗ್ಗೆ 06-45 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ. ಲಲಿತ ಗಂಡ ನಾಗೇಶ್ವರರಾವ್, 52 ವರ್ಷ, ವಾ: ಹೈದರಾಬಾದ್ ಇವರು ಬಳ್ಳಾರಿ ನಗರದ ಹೊಸ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕೊಪ್ಪಳಕ್ಕೆ ಹೋಗುವ ಬಸ್ಸನ್ನು ಹತ್ತುತ್ತಿರುವಾಗ ಅವರ ಹಿಂದಿನಿಂದ ಯಾರೋ ಒಬ್ಬ ವ್ಯಕ್ತಿ ಫಿರ್ಯಾದಿದಾರರಳ ಕೊರಳಿಗೆ ಕೈ ಹಾಕಿ ಅವರ ಕೊರಳಲ್ಲಿದ್ದ 30 ಗ್ರಾಂ ತೂಕದ ಬಂಗಾರದ ಕೊರಳಿನ ಚೈನ್ ಸರ ಅಂದಾಜು ಬೆಲೆ ರೂ. 75,000/- ಬೆಲೆ ಬಾಳುವುದನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ಸದರಿ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಗಾರದ ಚೈನ್ ಸರವನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದುರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.  

                                                                                                            ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                              ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

INAUGURATION OF DURGAVAHINI 12-12-2014

  ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 12-12-2014

ಪತ್ರಿಕಾ ಪ್ರಕಟಣೆ 




                                           
ಬಳ್ಳಾರಿ ಜಿಲ್ಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ “ ದುರ್ಗಾವಾಹಿನಿ” ಎಂದು ಮೂರು ಹೊಸ ಪೊಲೀಸ್ ವಾಹನಗಳ ಉದ್ಘಾಟನೆ.

          ದಿನಾಂಕ: 01-12-2014 ರಿಂದ 31-12-2014 ರವರೆಗೆ ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳಾರಿ ಜಿಲ್ಲೆಯಾದ್ಯಂತ ಅಪರಾಧ ತಡೆ ಮಾಸಾಚರಣೆಯನ್ನು ಬಳ್ಳಾರಿ ಜಿಲ್ಲಾ ಪೊಲೀಸರಿಂದ ಆಚರಿಸಲಾಗುತ್ತದೆ. 

       ರಾಷ್ಟ್ರಾದ್ಯಂತ ಇತ್ತೀಚೆಗೆ ಮಹಿಳೆಯರಿಗೆ ಅನೇಕ ತೊಂದರೆಗಳುಂಟಾಗುತ್ತಿದ್ದು, ಅವರ  ರಕ್ಷಣೆಗೆಂದೇ ಹಲವಾರು ಕಾನೂನುಗಳನ್ನು ಮಾರ್ಪಾಡು ಮಾಡಲಾಗಿದೆ ಹಾಗೂ ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸಲು ಬಳ್ಳಾರಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ “ಮಹಿಳಾ ಸಹಯವಾಣಿ ಘಟಕ” ತೆರೆಯಲಾಗಿದ್ದು, ಈ ದಿನದಿಂದ ಬಳ್ಳಾರಿ ನಗರದ ಆದಿ ದೇವತೆ ದುರ್ಗಮ್ಮ ದೇವಿಯ ಹೆಸರಿನಲ್ಲಿ “ದುರ್ಗಾವಾಹಿನಿ” ಪ್ರಾರಂಭ ಮಾಡಲಾಗಿರುತ್ತದೆ. ಈ ವರ್ಷದ ಅಪರಾಧ ತಡೆ ಮಾಸಾಚಾರಣೆಯನ್ನು ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿದೆ. 

   ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಎನ್.ಎಂ.ಡಿ..ಸಿ. ಸಂಡೂರು  ಸಂಸ್ಥೆಯ ಸಹಾಯದಿಂದ 03 ವಾಹನಗಳನ್ನು ಪಡೆಯಲಾಗಿದ್ದು, ಒಂದು ವಾಹನವು ಬಳ್ಳಾರಿ ನಗರ ಮತ್ತು ಗ್ರಾಮೀಣ ಉಪವಿಭಾಗಳ ವ್ಯಾಪ್ತಿಯಲ್ಲಿ, ಎರಡನೇ ವಾಹನವು ಹೊಸಪೇಟೆ, ಹಂಪಿ ಮತ್ತು ಹಡಗಲಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಹಾಗು ಮೂರನೇ ವಾಹನವು ಕೂಡ್ಲಿಗಿ ಉಪವಿಭಾಗದ ವ್ಯಾಪ್ತಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗು ಮಹಿಳೆಯರ ವಿರುದ್ಧ ಸಂಭವಿಸುವ ಅಪರಾಧಗಳ ಕಾನೂನುಗಳ ಬಗ್ಗೆ ಮಾಹಿತಿ ನೀಡಲು ಈ ದಿನ ದಿನಾಂಕ:  12-12-2014 ರಂದು ಉದ್ಘಾಟನೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮವು ಹೊಸಪೇಟೆ ಪಟ್ಟಣದಲ್ಲಿ ನಡೆದಿರುತ್ತದೆ.  ವಾಹನಗಳ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ. ವಜುಭಾಯಿವಾಲಾ ಹಾಗು ಸನ್ಮಾನ್ಯ ಶ್ರೀ. ಪಿ.ಟಿ. ಪರಮೇಶ್ವರ ನಾಯ್ಕ, ಕಾರ್ಮಿಕ ಸಚಿವರು ಹಾಗು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ರಾಜ್ಯ, ಬೆಂಗಳೂರು ರವರು ಮಾಡಿರುತ್ತಾರೆ.

   ಬಳ್ಳಾರಿ ಜಿಲ್ಲೆಯಾದ್ಯಂತ ಮಹಿಳಾ ಸಹಾಯವಾಣಿ ಘಟಕ ಹಾಗು ದುರ್ಗಾವಾಹಿನಿ ವಾಹನಗಳು ನಿರಂತರವಾಗಿ ಮಹಿಳೆಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತವೆ.  ಜಿಲ್ಲೆಯ ಸಾರ್ವಜನಿಕರು ಮೇಲ್ಕಂಡ ಸಹಾಯವಾನಿ ಹಾಗು ದುರ್ಗಾವಾಹಿನಿಯ ಸದುಪಯೋಗ ಪಡೆದುಕೊಳ್ಳಲು ಮತ್ತು ಮಹಿಳೆಯರು, ಶಾಲಾ ಕಾಲೇಜುಗಳ ವಿಧ್ಯಾರ್ಥಿನಿಯರು ಹಾಗು ಮಕ್ಕಳು ತಮ್ಮ ಯಾವುದೇ ದೂರುಗಳು ಇದ್ದಲ್ಲಿ ದುರ್ಗಾವಾಹಿನಿ ಸಂಖ್ಯೆ: 7829181181 ಗೆ ಸಂಪರ್ಕಿಸಲು ವಿನಂತಿಸಿಕೊಳ್ಳಲಾಗಿದೆ.  

                                                 ¥ÉÆ°Ã¸ï ¸ÀÆ¥ÀjAmÉAqÉAmï,                                                            §¼Áîj.                                                                                                                                            
EªÀjUÉ,       
J¯Áè ¥ÀwæPÁ ªÀgÀ¢UÁgÀjUÉ




ಗುರುವಾರ, ಡಿಸೆಂಬರ್ 11, 2014

PRESS NOTE AS ON 11/12/2014



 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 11-12-2014
ಪತ್ರಿಕಾ ಪ್ರಕಟಣೆ 

1) ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ಎಸ್.ಎನ್.ಪೇಟೆ ಯಿಂದ 57 ವರ್ಷದ  ಗುರುಪ್ರಸಾದ್ ಇವರು ಕಾಣೆಯಾಗಿರುವ ಬಗ್ಗೆ. 
 
       ಫಿರ್ಯಾಧಿದಾರರಾದ ಶ್ರೀಮತಿ. ಜಿ. ವೇಣಿ ಗಂಡ ಗುರುಪ್ರಸಾದ್, 47 ವರ್ಷ, ಸಾ: ಹೌ ನಂ. 305, ಉಮಾಮಹೇಶ್ವರಿ ಕಲ್ಯಾಣ ಮಂಟಪದ ಹತ್ತಿರ, 2ನೇ ಕ್ರಾಸ್, ರಾಘವೇಂದ್ರ ಕಾಲೋನಿ ಹತ್ತಿರ, ಬಳ್ಳಾರಿ ರವರು ಠಾಣೆಗೆ ಹಾಜರಾಗಿ ದಿ: 10-11-14 ರಂದು ಬೆಳಿಗ್ಗೆ 10-30 ಗಂಟೆಗೆ ಗುರುಪ್ರಸಾದ್, 57 ವರ್ಷ, ಈತನು ಬಳ್ಳಾರಿಯ 2ನೇ ಹಂತ ರಾಘವೇಂದ್ರ ಕಾಲೋನಿಯ ತನ್ನ ಮನೆಯಿಂದ ಮಂಜುನಾಥ ರವರ ಮೋಟರ್ ಸೈಕಲ್‍ನಲ್ಲಿ ಬಳ್ಳಾರಿ ನಗರದ ಎಸ್.ಎನ್.ಪೇಟೆ, 1ನೇ ಕ್ರಾಸ್‍ನಲ್ಲಿರುವ ಗಜರಾಜ ಅಂಡ್ ಕೋ ಅಡಿಟರ್ ಆಫೀಸ್ ಮುಂದುಗಡೆ ಮೋಟರ್ ಸೈಕಲ್‍ನಿಂದ ಇಳಿದು ಹೋದವನು ಇಲ್ಲಿಯವರೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾನೆಂದು ನೀಡಿದ ದೂರಿನ ಮೇರಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                                                                    ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                               ಬಳ್ಳಾರಿ.                                                                                                                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                            ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಸೋಮವಾರ, ಡಿಸೆಂಬರ್ 8, 2014

PRESS NOTE AS ON 08-12-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 08-12-2014
ಪತ್ರಿಕಾ ಪ್ರಕಟಣೆ 
1) ತುಮಟಿ ಗ್ರಾಮದಲ್ಲಿ ಕೊಲೆ. 
   
            ದಿನಾಂಕ: 06-12-2014 ರಂದು ಸಂಜೆ 7-30 ಗಂಟೆಯಿಂದ 8-30 ಗಂಟೆಯ ಸಮಯದ ಮದ್ಯದ ಅವದಿಯಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ಸರಹದ್ದಿನ ತುಮಟಿ ಗ್ರಾಮದಲ್ಲಿ ಪಿರ್ಯಾದಿಯಾದ ಹೊನ್ನಮ್ಮ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದು ಆ ಸಮಯದಲ್ಲಿ ಬಸಪ್ಪನವರ ಮಗನಾದ ಸ್ವಾಮಿಯು ಸಾರ್ವಜನಿಕ ಶೌಚಾಲಯದ ಹತ್ತಿರ ನೀಲಮ್ಮನ ಹಿಂದೆ ಬಂದು ನಿಂತಿದ್ದು ಹೆದರಿ ಕೂಗಿಕೊಂಡಾಗ ಓಡಿ ಹೋಗಿರುತ್ತಾನೆ. ಈ ವಿಷಯವನ್ನು ತನ್ನ ದೊಡ್ಡಮ್ಮನ ಮಗಳಾದ ಗಂಗಮ್ಮಳಿಗೆ ತಿಳಿಸಿದ್ದು ನೀನು ಮೊದಲು ಹೋಗು ನಿನ್ನ ಹಿಂದೆ ನಾನು ಬರುತ್ತೇನೆಂದು ಹೇಳಿ ನೀಲಮ್ಮಳನ್ನು ಮೊದಲು ದೊಡ್ಡಿಗೆ ಕಳುಹಿಸಿ ಹಿಂದೆ ಹಿಂಬಾಲಿಸಿದ್ದು ಬಸಪ್ಪನವರ ಮಗನಾದ ಸ್ವಾಮಿಯು ಹಿಂದೆ ಬಂದಿದ್ದು ನಿಂತಿದ್ದನ್ನು ನೋಡಿ ಕೂಗಿಕೊಂಡಾಗ ಓಡಿಹೋಗಿರುತ್ತಾನೆ. ಈ ವಿಷಯವಾಗಿ ಸ್ವಾಮಿಯವರ ಮನೆಯಲ್ಲಿ ನೋಡಲಾಗಿ ಮನೆಯಲ್ಲಿ ಇಲ್ಲದೆ ಇರುವುದು ಕಂಡು ಬಂದಿದ್ದು, ನಂತರ ನಾನು ನನ್ನ ದೊಡ್ಡಪ್ಪ ಇತರರು ಸೇರಿಕೊಂಡು ಕೇಳಲು ಹೋದಾಗ ನಾನು ಅಲ್ಲಿಗೆ ಹೋಗಿರುವುದಿಲ್ಲ ಏನು ಮಾಡಿಕೊಳ್ಳುತ್ತಿಯಾ ಮಾಡಿಕೊ ಎಂದು ಮಾತನಾಡಿದ್ದು,  ನಂತರ ಸ್ವಾಮಿ ತಂದೆ ಬಸಪ್ಪ, ರಮೇಶ್ ತಂದೆ ಕುಂಟ  ಬಸಪ್ಪ, ರವಿ ತಂದೆ ಕುಂಟ ಬಸಪ್ಪ, ಈಶ್ವರ ತಂದೆ ಚೆನ್ನಬಸಪ್ಪ, ಇವರೆಲ್ಲರು ನಮ್ಮ ದೊಡ್ಡಪ್ಪನಿಗೆ ಇವರದೆಲ್ಲ ಜಾಸ್ತಿಯಾಗಿದೆ ಎಂದು ಸಾಯಿಸಿರಿ ಕೆಳಗೆ ಬೀಳಿಸಿ ಕೈ ಕಾಲುಗಳಿಂದ ಎದೆಗೆ, ಹೊಟ್ಟೆಗೆ ಹೊಡೆದಿದರಿಂದ ಗುಜ್ಜಲ ನಾಗಪ್ಪನಿಗೆ ಒಳಪೆಟ್ಟು ಆಗಿ ಮೃತ ಪಟ್ಟಿರುತ್ತಾನೆಂದು ದೂರು ದಾಖಲಿಸಿದ್ದು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಿ.ಪಿ.ಐ ಸಂಡೂರು ರವರು ತನಿಖೆ ಮುಂದುವರಿಸಿರುತ್ತಾರೆ. 

2. ಹುಲ್ಲು ತುಂಬಿದ ಟ್ರಾಕ್ಟರ್ ಮೇಲೆಂದ ಬಿದ್ದು ಒಬ್ಬ ಸಾವು : 

ಹೀರೆಹಡಗಲಿ ಪೊಲೀಸ್ ಠಾಣೆ ಗುನ್ನೆ ನಂ 139/2014  ದಿನಾಂಕ 07-12-2014 ರಂದು ಮದ್ಯಾಹ್ನ 1-00 ಗಂಟೆಗೆ ರಾಜವಾಳ-ಹಡಗಲಿ ಮಾರ್ಗದಲ್ಲಿ ಕೆ.ಎ. 35 ಟಿ 6133 ಟ್ರಾಲಿ ನಂ 1994 ರಲ್ಲಿ ಬೇವುರು ಬಸವರಾಜಪ್ಪನವರಿಗೆ ಹುಲ್ಲು ತರಲು ಚಾಲಕ ಪ್ರಭುಗೌಡ ಮೃತ ಕೆಂಚನಗೌಡ ಇತರರೊಂದಿಗೆ ಹೋಗಿದ್ದು ಟ್ರಾಕ್ಟರ್‍ನಲ್ಲಿ ಹುಲ್ಲನ್ನು ಲೋಡ್ ಮಾಡಿಕೊಂಡು ರಾಜವಾಳ್ ಮತ್ತು ಹಡಗಲಿ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಚಾಲಕ ಪ್ರಭುಗೌಡರವರು ಅತಿವೇಗ ಮತ್ತು ಅಜಾಗರುಕತೆಯಿಂದ ನಡೆಸಿದ್ದರಿಂದ ಮೇಲೆ ಕುಳಿತ ಕೆಂಚನಗೌಡನು ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆಂದು ದೂರು.  

                                                                                                       ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                                      ಬಳ್ಳಾರಿ.                                                                                                                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಶನಿವಾರ, ಡಿಸೆಂಬರ್ 6, 2014

PRESS NOTE AS ON 07-12-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 07-12-2014

ಪತ್ರಿಕಾ ಪ್ರಕಟಣೆ 

1) ಅಪ್ರಾಪ್ತ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಸಿನ ಹುಡುಗರಿಂದ ಅತ್ಯಾಚಾರ. 
   
            ದಿನಾಂಕ: 06-12-2014 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹೊಸಪೇಟೆಯ ಎನ್.ಸಿ. ಕಾಲೋನಿ ಏರಿಯಾದಲ್ಲಿ 9 ವರ್ಷದ ಬಾಲಕಿಯನ್ನು ಹೊಸಪೇಟೆ ಪಟ್ಟಣದ ತಳವಾರ ಕೇರಿಯ ವಾಸಿಗಳಾದ 4 ಜನ ಅಪ್ರಾಪ್ತ ವಯಸ್ಸಿನ ಹುಡುಗರು ( ವಯಸ್ಸು 10 ರಿಂದ 13 ವರ್ಷ ) ಅತ್ಯಾಚಾರ ಮಾಡಿರುತ್ತಾರೆಂದು ಹೊಸಪೇಟೆ ಪಟ್ಟಣ ಠಾಣೆಯಲ್ಲಿ ನೊಂದ ಬಾಲಕಿಯ ತಾಯಿ ಕೊಟ್ಟ ದೂರಿನ ಮೇರೆಗೆ ಕಲಂ 376(ಬಿ) ಐಪಿಸಿ ಮತ್ತು ಕಲಂ 3, 6 ಪೋಕ್ಸೋ ಆಕ್ಟ್-2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅತ್ಯಾಚಾರಕ್ಕೆ ಒಳಪಟ್ಟ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.  ಅತ್ಯಾಚಾರವೆಸಗಿದ ಹುಡುಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರು ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ ಜ್ಯುವೆನಲ್  ಬೋರ್ಡ  ಮುಂದೆ ಹಾಜರುಪಡಿಸಿದ್ದು, ಅವರ ಆದೇಶದ ಮೇರೆಗೆ ಅಬ್ಸ್‍ರ್‍ವೇಶನ್ ಸೆಂಟರ್ ಬಳ್ಳಾರಿಯಲ್ಲಿ ದಿನಾಂಕ: 19-12-2014 ರ ವರೆಗೆ ಇಡಲು ಒಪ್ಪಿಸಿರುತ್ತಾರೆ. ಪ್ರಕರಣದ ತನಿಖೆಯನ್ನು ಪಿ.ಐ. ಹೊಸಪೇಟೆ ಪಟ್ಟಣ ಠಾಣೆ ರವರು ದಾಖಲಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.   

                                                                                                                   ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                              ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಶುಕ್ರವಾರ, ಡಿಸೆಂಬರ್ 5, 2014

BALLARI DISTRICT CRIME PREVENTION MONTH 2014


                                                                                                                    ದಿನಾಂಕ  05-12-2014
                                                          ಬಳ್ಳಾರಿ.
ಪತ್ರಿಕಾ ಪ್ರಕಟಣೆ

ಅಪರಾಧ ತಡೆ ಮಾಸಾಚರಣೆ-2014

ಬಳ್ಳಾರಿ ಜಿಲ್ಲೆಯಲ್ಲಿ 01-12-2014 ರಿಂದ 31-12-2014 ರವರೆಗೆ ಅಪರಾಧ ತಡೆ ಮಾಸಾಚರಣೆಯನ್ನು ಆಚರಿಸುತ್ತಿದ್ದು ಈ ವರ್ಷ ವಿಶೇಷವಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗೀಕ ಶೋಷಣೆ/ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಕೆಲವೊಂದು ಸಾಮಾಜಿಕ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ (ಅhiಟಜ ಐiಟಿe) ಕಾಣೆಯಾದ ಮಕ್ಕಳ ಬ್ಯೂರೋ ಮತ್ತು ಮಹಿಳಾ ಸಹಾಯವಾಣಿ, ಸಾಂತ್ವನ ಕೇಂದ್ರ, ಸೌಖ್ಯಬೆಳಕು ಸಮುದಾಯ ಸೇವಾ ಸಂಸ್ಥೆ ಮತ್ತು ಮಹಿಳೆ ಮತ್ತು ಮಕ್ಕಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.  
     ನಮ್ಮ ಸಂದೇಶಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ವ್ಯಾಪಕ ತಳಹದಿಯಲ್ಲಿ ನಗರಗಳಲ್ಲಿ ವಾರ್ಡ್ ಮತ್ತು ಹಳ್ಳಿಗಳನ್ನು ಘಟಕಗಳನ್ನಾಗಿ ಆಯ್ದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಮ್ಮ ಸಂದೇಶಗಳನ್ನು ಅವರಿಗೆ ತಿಳಿಯುವ ರೀತಿಯಲ್ಲಿ  ಪ್ರಚಾರಪಡಿಸಲು ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 
1. ಅಪರಾಧ ತಡೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಚಾರ ಪಡಿಸಲು ದಿನಪತ್ರಿಕೆಗಳು, ದೃಶ್ಯಮಾಧ್ಯಮಗಳು, ಇಂಟರ್‍ನೆಟ್É ವೆಬ್‍ಸೈಟ್ಸ್, ವ್ಯಾಟ್ಸ್‍ಅಪ್, ಫೇಸ್‍ಬುಕ್, ಎಸ್.ಎಂ.ಎಸ್. ಗಳನ್ನು ಬಳಸಿಕೊಳ್ಳಲಾಗುವುದು. 
2. ಮಹಿಳೆ ಮತ್ತು ಮಕ್ಕಳ ದೌರ್ಜನ್ಯಕ್ಕೆ ಸಂಬಂಧಿಸದಂತೆ ಕೆಲಸ ಮಾಡುತ್ತಿರುವ ಸರ್ಕಾರಿ ಇಲಾಖೆಯ ಅಂಗ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ವಿಶೇಷವಾಗಿ ಮಹಿಳೆ ಮಕ್ಕಳ ದೌರ್ಜನ್ಯ ತಡೆಯಲು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳನ್ನು ಮತ್ತು ಇತ್ತೀಚಿನ ಕಾನೂನು ಮತ್ತು ಕಾನೂನಿನ ತಿದ್ದುಪಡಿಗಳು ಬಗ್ಗೆ ಭಾಷಣಗಳ ಮೂಲಕ ವಾರ್ಡ್ ಮತ್ತು ಹಳ್ಳಿಗಳು ಮತ್ತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುವುದು. 
3. ಜ್ಞಾನಜ್ಯೋತಿ ಮಹಾವಿದ್ಯಾಲಯ ಬಳ್ಳಾರಿ ಮತ್ತು ಸೌಖ್ಯಬೆಳಕು ಸಮುದಾಯ ಸೇವಾ ಸಂಸ್ಥೆ, ಬಳ್ಳಾರಿ ಇವರಿಂದ ಬೀದಿ ನಾಟಕಗಳು ಮತ್ತು ಹಾಡುಗಳನ್ನು ಹಾಡಿಸುವುದರ ಮೂಲಕ ಜಾಗೃತಿ ಮೂಡಿಸುವುದು. 
4. ಪೊಲೀಸ್ ಅಧಿಕಾರಿಗಳಿಂದ ತಮ್ಮ ವ್ಯಾಪ್ತಿಯಲ್ಲಿ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಇಂತಹ ಅಪರಾಧಗಳ ತಡೆಗಟ್ಟುವ ಬಗ್ಗೆ ಇರುವಂತಹ ಕಾನೂನಿನ ಬಗೆಗೆ ಅರಿವು ಮೂಡಿಸುವುದು.             
5. ಕರಪತ್ರಗಳನ್ನು ಮುದ್ರಿಸಿ ಹಂಚುವುದರ ಮೂಲಕ
6. ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆಯಲು ಸಂಬಂಧಿಸಿದಂತೆ  ಕಿರುಚಿತ್ರ (ಆoಛಿumeಟಿಣಡಿಥಿ ಈiಟms) ಗಳನ್ನು ಜನರಿಗೆ ತೋರಿಸುವುದರ ಮೂಲಕ
7. ಫ್ಲೆಕ್ಸ್ ಮತ್ತು ಬೋರ್ಡ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರ ಮೂಲಕ ವಿವಿಧ ಕಾನೂನಿನ ಬಗ್ಗೆ ಅರಿವು ಮೂಡಿಸುವುದು.
8. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳ ಮಾಹಿತಿ ಫಲಕಗಳನ್ನು ಅಂಟಿಸುವುದು.
  
      ಅಪರಾಧ ತಡೆ ಮಾಸಾಚರಣೆ ಸಲುವಾಗಿ ಮೂರು ವಿಶೇಷ ಪೊಲೀಸ್ ವಾಹನಗಳನ್ನು ಕ್ರಮವಾಗಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಉಪವಿಭಾಗ-01, ಹೊಸಪೇಟೆ, ಹಂಪಿ ಮತ್ತು ಹಡಗಲಿ  ಉಪವಿಭಾಗ-01, ಕೂಡ್ಲಿಗಿ ಉಪವಿಭಾಗ-01 ನೀಡುತ್ತಿದ್ದು ಆ ವಾಹನಗಳನ್ನು ಸದರಿ ಕಾರ್ಯಕ್ರಮ ಸಲುವಾಗಿ ಸುಸಜ್ಜಿತ ಗೊಳಿಲಾಗಿದ್ದು ಆ ಪ್ರತಿಯೊಂದು ವಾಹನದಲ್ಲಿ 2 ಜನ ಮಹಿಳಾ ಸಿಬ್ಬಂದಿ, ಒಬ್ಬ ವಿಡಿಯೋಗ್ರಾಫರ್ ಮತ್ತು ಮೈಕ್‍ಸಿಸ್ಟಮ್ ಇದ್ದು ನಗರ ಮತ್ತು ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸಲು ಸುಸಜ್ಜಿತಗೊಳಿಲಾಗಿರುತ್ತದೆ.     ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಒಂದು ತಿಂಗಳ ಮಟ್ಟಿಗೆ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ/ಶೋಷಣೆ ತಡೆಯುವ ಸಲುವಾಗಿ ಸಮುದಾಯ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಕೇವಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸದೇ ಕೆಲವೊಂದು ಸರ್ಕಾರಿ ಘಟಕಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದು  ಅಂತಹ ಸಂಸ್ಥೆಗಳನ್ನು ಬಳಸಿಕೊಂಡು ನಿರಂತರವಾಗಿ ಒಂದು ತಿಂಗಳು ಕಾಲ ಅರಿವು ಕಾರ್ಯಕ್ರಮಗಳ್ನು ಹಮ್ಮಿಕೊಳ್ಳಲಾಗಿದೆ. 
                                                         
                                                                                                                         ಪೊಲೀಸ್ ಅಧೀಕ್ಷಕರು,  
                                                                                                                     ಬಳ್ಳಾರಿ










ಗುರುವಾರ, ಡಿಸೆಂಬರ್ 4, 2014

Crime Prevention Month-2014


ದಿನಾಂಕ  05-12-2014
           ಬಳ್ಳಾರಿ.
ಪತ್ರಿಕಾ ಪ್ರಕಟಣೆ

ಅಪರಾಧ ತಡೆ ಮಾಸಾಚರಣೆ-2014

ಬಳ್ಳಾರಿ ಜಿಲ್ಲೆಯಲ್ಲಿ 01-12-2014 ರಿಂದ 31-12-2014 ರವರೆಗೆ ಅಪರಾಧ ತಡೆ ಮಾಸಾಚರಣೆಯನ್ನು ಆಚರಿಸುತ್ತಿದ್ದು ಈ ವರ್ಷ ವಿಶೇಷವಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗೀಕ ಶೋಷಣೆ/ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಕೆಲವೊಂದು ಸಾಮಾಜಿಕ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ (ಅhiಟಜ ಐiಟಿe) ಕಾಣೆಯಾದ ಮಕ್ಕಳ ಬ್ಯೂರೋ ಮತ್ತು ಮಹಿಳಾ ಸಹಾಯವಾಣಿ, ಸಾಂತ್ವನ ಕೇಂದ್ರ, ಸೌಖ್ಯಬೆಳಕು ಸಮುದಾಯ ಸೇವಾ ಸಂಸ್ಥೆ ಮತ್ತು ಮಹಿಳೆ ಮತ್ತು ಮಕ್ಕಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.  

     ನಮ್ಮ ಸಂದೇಶಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ವ್ಯಾಪಕ ತಳಹದಿಯಲ್ಲಿ ನಗರಗಳಲ್ಲಿ ವಾರ್ಡ್ ಮತ್ತು ಹಳ್ಳಿಗಳನ್ನು ಘಟಕಗಳನ್ನಾಗಿ ಆಯ್ದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಮ್ಮ ಸಂದೇಶಗಳನ್ನು ಅವರಿಗೆ ತಿಳಿಯುವ ರೀತಿಯಲ್ಲಿ  ಪ್ರಚಾರಪಡಿಸಲು ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

1. ಅಪರಾಧ ತಡೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಚಾರ ಪಡಿಸಲು ದಿನಪತ್ರಿಕೆಗಳು, ದೃಶ್ಯಮಾಧ್ಯಮಗಳು, ಇಂಟರ್‍ನೆಟ್ ವೆಬ್‍ಸೈಟ್ಸ್, ವ್ಯಾಟ್ಸ್‍ಅಪ್, ಫೇಸ್‍ಬುಕ್, ಎಸ್.ಎಂ.ಎಸ್. ಗಳನ್ನು ಬಳಸಿಕೊಳ್ಳಲಾಗುವುದು. 

2. ಮಹಿಳೆ ಮತ್ತು ಮಕ್ಕಳ ದೌರ್ಜನ್ಯಕ್ಕೆ ಸಂಬಂಧಿಸದಂತೆ ಕೆಲಸ ಮಾಡುತ್ತಿರುವ ಸರ್ಕಾರಿ ಇಲಾಖೆಯ ಅಂಗ ಸಂಸ್ಥೆಗಳು, ಸರ್ಕಾರೇತರ ಸಂಘಟನೆಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ವಿಶೇಷವಾಗಿ ಮಹಿಳೆ ಮಕ್ಕಳ ದೌರ್ಜನ್ಯ ತಡೆಯಲು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳನ್ನು ಮತ್ತು ಇತ್ತೀಚಿನ ಕಾನೂನು ಮತ್ತು ಕಾನೂನಿನ ತಿದ್ದುಪಡಿಗಳು ಬಗ್ಗೆ ಭಾಷಣಗಳ ಮೂಲಕ ವಾರ್ಡ್ ಮತ್ತು ಹಳ್ಳಿಗಳು ಮತ್ತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುವುದು. 

3. ಜ್ಞಾನಜ್ಯೋತಿ ಮಹಾವಿದ್ಯಾಲಯ ಬಳ್ಳಾರಿ ಮತ್ತು ಸೌಖ್ಯಬೆಳಕು ಸಮುದಾಯ ಸೇವಾ ಸಂಸ್ಥೆ, ಬಳ್ಳಾರಿ ಇವರಿಂದ ಬೀದಿ ನಾಟಕಗಳು ಮತ್ತು ಹಾಡುಗಳನ್ನು ಹಾಡಿಸುವುದರ ಮೂಲಕ ಜಾಗೃತಿ ಮೂಡಿಸುವುದು. 

4. ಪೊಲೀಸ್ ಅಧಿಕಾರಿಗಳಿಂದ ತಮ್ಮ ವ್ಯಾಪ್ತಿಯಲ್ಲಿ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಇಂತಹ ಅಪರಾಧಗಳ ತಡೆಗಟ್ಟುವ ಬಗ್ಗೆ ಇರುವಂತಹ ಕಾನೂನಿನ ಬಗೆಗೆ ಅರಿವು ಮೂಡಿಸುವುದು.   
          
5. ಕರಪತ್ರಗಳನ್ನು ಮುದ್ರಿಸಿ ಹಂಚುವುದರ ಮೂಲಕ.

6. ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆಯಲು ಸಂಬಂಧಿಸಿದಂತೆ  ಕಿರುಚಿತ್ರ (ಆoಛಿumeಟಿಣಡಿಥಿ ಈiಟms) ಗಳನ್ನು ಜನರಿಗೆ ತೋರಿಸುವುದರ ಮೂಲಕ

7. ಫ್ಲೆಕ್ಸ್ ಮತ್ತು ಬೋರ್ಡ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರ ಮೂಲಕ ವಿವಿಧ ಕಾನೂನಿನ ಬಗ್ಗೆ ಅರಿವು ಮೂಡಿಸುವುದು.

8. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳ ಮಾಹಿತಿ ಫಲಕಗಳನ್ನು ಅಂಟಿಸುವುದು.
 
      ಅಪರಾಧ ತಡೆ ಮಾಸಾಚರಣೆ ಸಲುವಾಗಿ ಮೂರು ವಿಶೇಷ ಪೊಲೀಸ್ ವಾಹನಗಳನ್ನು ಕ್ರಮವಾಗಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಉಪವಿಭಾಗ-01, ಹೊಸಪೇಟೆ, ಹಂಪಿ ಮತ್ತು ಹಡಗಲಿ  ಉಪವಿಭಾಗ-01, ಕೂಡ್ಲಿಗಿ ಉಪವಿಭಾಗ-01 ನೀಡುತ್ತಿದ್ದು ಆ ವಾಹನಗಳನ್ನು ಸದರಿ ಕಾರ್ಯಕ್ರಮ ಸಲುವಾಗಿ ಸುಸಜ್ಜಿತ ಗೊಳಿಲಾಗಿದ್ದು ಆ ಪ್ರತಿಯೊಂದು ವಾಹನದಲ್ಲಿ 2 ಜನ ಮಹಿಳಾ ಸಿಬ್ಬಂದಿ, ಒಬ್ಬ ವಿಡಿಯೋಗ್ರಾಫರ್ ಮತ್ತು ಮೈಕ್‍ಸಿಸ್ಟಮ್ ಇದ್ದು ನಗರ ಮತ್ತು ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸಲು ಸುಸಜ್ಜಿತಗೊಳಿಲಾಗಿರುತ್ತದೆ.     ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಒಂದು ತಿಂಗಳ ಮಟ್ಟಿಗೆ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ/ಶೋಷಣೆ ತಡೆಯುವ ಸಲುವಾಗಿ ಸಮುದಾಯ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಕೇವಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸದೇ ಕೆಲವೊಂದು ಸರ್ಕಾರಿ ಘಟಕಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದು  ಅಂತಹ ಸಂಸ್ಥೆಗಳನ್ನು ಬಳಸಿಕೊಂಡು ನಿರಂತರವಾಗಿ ಒಂದು ತಿಂಗಳು ಕಾಲ ಅರಿವು ಕಾರ್ಯಕ್ರಮಗಳ್ನು ಹಮ್ಮಿಕೊಳ್ಳಲಾಗಿದೆ. 

                                                           ಪೊಲೀಸ್ ಅಧೀಕ್ಷಕರು,  
                                                    ಬಳ್ಳಾರಿ             

Press Note As on 05-12-2014



 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 05-12-2014

ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ  ಮನೆ ಕಳ್ಳತನ, ಬಂಗಾರದ ಆಭಣರಗಳ ಕಳವು. 

         ಫಿರ್ಯಾದಿದಾರರಾದ ಶ್ರೀಮತಿ ಸುಗುಣ ಕೆ.ಎಸ್.ವಾ: ಬಳ್ಳಾರಿ ರವರು ದಿನಾಂಕ 21-11-14 ರಂದು ರಾತ್ರಿ 09-30 ಗಂಟಗೆ ತನ್ನ ಮಹಡಿ ಮನೆಗೆ ಬೀಗ ಹಾಕಿಕೊಂಡು ತನ್ನ ಮಗಳ ಮಗಳ ಮನೆಗೆ ಬೆಂಗಳೂರಿಗೆ ಹೋಗಿದ್ದು ದಿನಾಂಕ 03-12-14 ರಮದು ಬೆಳಿಗ್ಗೆ 09-00 ಗಂಟೆಗೆ ಪಕ್ಕದ ಮನೆಯವರು ಫಿರ್ಯಾದಿಗೆ ಫೋನ್ ಮಾಡಿ ಫಿರ್ಯಾದಿಯ ಮನೆ ಕಳ್ಳತನವಾದಂತೆ ಕಂಡು ಬರುತ್ತಿದೆ ಎಂದು ತಿಳಿಸಿದ್ದು ದಿನಾಂಕ 03-12-14 ರಂದು ಫಿರ್ಯಾದಿ ರಾತ್ರಿ 10-00 ಗಂಟೆಗೆ ಮನೆಗೆ ಬಂದು ನೋಡಲು ಬೀಗದ ಪತ್ತ ಕಿತ್ತು ಹಾಕಿ ಬಾಗಿಲು ತೆರೆದಿದ್ದು ಬೆಡ್ ರೂಮಿನ ಬಾಗಿಲು ತೆರೆದು ಅದರಲ್ಲಿದ್ದ 150 ಗ್ರಾಮ ಬಂಗಾರ, 20 ಗ್ರಾಂ ಬೆಳ್ಳಿಯ ನಗದು ಹಣ 12,000/- ರೂ ಎಲ್ಲಾ ಒಟ್ಟು ಬೆಲೆ 4,32,600/- ಗಳ ಮೌಲ್ಯದ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ. 

2) ಹೊಸಪೇಟೆ ನಗರದ ಬಡಾವಣೆ ಪೊಲೀಸ್ ಠಾಣೆ ಸರಹದ್ದಿನ ಎಂ.ಜೆ.ನಗರದಿಂದ ಒಬ್ಬ ವ್ಯಕ್ತಿ ಕಾಣೆಯಾದ ಬಗ್ಗೆ. 

         ಪಿರ್ಯಾದಿಯ ಮಗನಾದ ಶಿವಶಂಕರನು ಮತ್ತು ಆತನ ತಾಯಿ ದಿನಾಂಕ: 27-28/11/14 ರಂದು ಹೊಸಪೇಟೆಯಲ್ಲಿರುವ ತಮ್ಮ ದೊಡ್ಡಪ್ಪನ ಮಗನಾದ ಸಂತೋಷ ರವರ ಮದುವೆಗೆ ದಿನಾಂಕ: 24/11/14 ರಂದು ತಮ್ಮ ಊರಾದ ಬೆಟಗೇರಿಯಿಂದ ತಮ್ಮ ತಾಯಿಯವರಾದ ಶ್ರೀಮತಿ ಪುಷ್ಪಲತಾ ರವರೊಂದಿಗೆ ಎಂ.ಜೆ ನಗರದ 6 ನೇ ಕ್ರಾಸ್‍ನಲ್ಲಿರುವ ಮನೆಗೆ ಬಂದಿದ್ದು, ಕುರುಗೋಡಿನಲ್ಲಿರುವ ತನ್ನ ಅಕ್ಕಳಾದ ಶ್ರೀಮತಿ ಸೌಭಾಗ್ಯಳನ್ನು ಮದುವೆಗೆ ಕರೆದುಕೊಂಡು ಬರಲು ದಿನಾಂಕ: 26/11/14 ರಂದು ಬೆಳಿಗ್ಗೆ 7-00 ಗಂಟೆಗೆ ತಮ್ಮ ದೊಡ್ಡಪ್ಪ ರವರ ಮನೆಯಿಂದ ಶಿವಶಂಕರ ವಯಸ್ಸು: 30 ವರ್ಷ, ಈತನು ಹೋಗಿದ್ದು, ಇಲ್ಲಿಯವರೆಗೂ ಕುರುಗೋಡಿಗೂ ಹೋಗದೇ ತಮ್ಮ ಊರಿಗೂ ಬಾರದೇ ವಾಪಾಸ್ಸು ಹೊಸಪೇಟೆಗೂ ಬಾರದೇ ಕಾಣೆಯಾಗಿದ್ದು, ಈತನನ್ನು ಸಂಬಂಧಿಕರೆಲ್ಲರೂ ಸೇರಿ ಹೊಸಪೇಟೆ ಕುರುಗೋಡು ಗದಗ, ಬೆಂಗಳೂರು, ಪೂನಾ, ಬಳ್ಳಾರಿ ಮತ್ತು ಇತರೆ ಎಲ್ಲಾ ಕಡೆ ಹುಡುಕಾಡಿದ್ದು, ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ತಮ್ಮ ಮಗನನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

3) ಹಚ್ಚೊಳ್ಳಿ ಪೊಲೀಸ್ ಠಾಣೆ ಸರಹದ್ದಿನ ಬಸರಳ್ಳಿ ಗ್ರಾಮದ ಮಸೀದಿ ಮುಂದೆ ಈಚರ್ ವಾಹನ 3 ವರ್ಷದ ಬಾಲಕನಿಗೆ ಡಿಕ್ಕಿ ಬಾಲಕ ಸ್ಥಳದಲ್ಲಿಯೇ ಸಾವು.

      ಫಿರ್ಯಾದಿದಾರರಾದ ಶ್ರೀ. ರಾಘವೇಂದ್ರ ರಾವ್ ತಂದೆ ಸಾಂಭಶಿವರಾವ್, 27 ವರ್ಷ, ಶಿಳ್ಳೆಕ್ಯಾತರು ವಾಸ: ರಾಜೀವ್ ಗಾಂಧಿಪುರ, ರಾಮನಗರ ತಾಲೂಕು ಇವರ ಮಗ ರಾಹುಲ್ ತಂದೆ ರಾಘವೇಂದ್ರ ರಾವ್. 3 ವರ್ಷ, ಈತನು  ಬಸರಳ್ಳಿ ಗ್ರಾಮ ಮಸೀದಿಯ ಮುಂದೆಗಟೆ ಆಟವಾಡುತ್ತಿದ್ದಾಗ  ಆರೋಪಿಯಾದ ರಾಜಣ್ಣ ಈತನು ಎ.ಪಿ.26/ಡಬ್ಯೂ.5401 ನೇದ್ದರ ಈಚರ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮಸೀದಿಯಿಂದ ಮುಂದೆ ಆಟವಾಡುತ್ತಿದ್ದ ಪಿರ್ಯಾದಿದಾರರ ಮಗನಿಗೆ ಡಿಕ್ಕಿ ಹೊಡೆಸಿದದ್ದರಿಂದ ಮೃತಪಟ್ಟಿರುವುದಾಗಿ ಇದ್ದ ದೂರಿನ ಮೇರೆಗೆ ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 


4) ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನ ಗ್ರಾಹಂ ರಸ್ತೆಯಲ್ಲಿ ನಡೆಯುತ್ತಿದ್ದ  ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ಆರೋಪಿಗಳ ಬಂಧನ, ನಗದು ಹಣ ವಶ. 

       ದಿಃ02-12-2014 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಗ್ರಾಹಂ ರಸ್ತೆಯಲ್ಲಿರುವ ಖುಷಿ ಬಾರ್ ಪಕ್ಕದಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ದಂಧೇಯಲ್ಲಿ ತೊಡಗಿದ್ದಾಗ ಪಿ.ಐ. ಡಿ.ಸಿ.ಐ.ಬಿ ಘಟಕ ಬಳ್ಳಾರಿ, ರವರು ಸಿಬ್ಬಂದಿ ಸಂಗಡ  ದಾಳಿ ಮಾಡಿದಾಗ 1] ಚಂದ್ರ ಲೇಟ್ ಲಿಂಗಪ್ಪ ವಃ46 ವರ್ಷ, ವಾಲ್ಮೀಕಿ ಜನಾಂಗ, ಕೂಲಿ ಕೆಲಸ,ಸಾಃ ವಡ್ಡರ ಬಂಡೆ, ಬಳ್ಳಾರಿ, 2) ಹನೀಫ ತಂದೆ ದಾವ್ರದ್ ವಃ23ವರ್ಷ, ಮುಸ್ಲಿಂ ಕಾರ್ ಪೆಂಟರ್ ಕೆಲಸ, ಸಾಃ ಹನುಮಾನ್ ನಗರ, ಬಳ್ಳಾರಿ  ಇವರಿಂದ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ  ನಗದು ಹಣ 11,050/-, 4 ಮಟಕಾ ಪಟ್ಟಿಗಳು , 2 ಬಾಲ್ ಪೆನ್ನು ಇವುಗಳನ್ನು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

5) ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ರಂಗಪ್ಪ ಬೀದಿಯ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಮಟಕಾ ಜೂಜಾಟದ ಮೇಲೆ ಪೊಲೀಸರ ದಾಳಿ ಆರೋಪಿಗಳ ಬಂಧನ, ನಗದು ಹಣ ವಶ. 

     ಪಿರ್ಯಾದಿದಾರರಾದ ಪಿ.ಐ ಡಿ.ಸಿಐ.ಬಿ ರವರಿಗೆ ಮೇದಾರ ಓಣಿಯಲ್ಲಿರುವ ರಂಗಪ್ಪ ಬೀದಿಯ ಸಾರ್ವಜನಿಕ ಸ್ಥಳದಲ್ಲಿ ನಸೀಬಿನ ಮಟಕಾ ಜೂಜಾಟ ನಡೆಯುತ್ತಿದೆ ಎಂದು ಬಂದ ಮಾಹತಿ ಮೇರೆಗೆ ಪಿ.ಐ ರವರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು, ಆರೋಪಿ 1] ಚಂದ್ರಶೇಖರ್ ತಂದೆ ಲೇಟ್ ಸಿದ್ದಪ್ಪ  ವ: 36 ವರ್ಷ, ವಾಸ ಮೇದಾರ್ ಓಣೆ ಬಳ್ಳಾರಿ. ರವರು 1 ರೂ ಕಟ್ಟಿದರೆ, ಅದೇ ನಂಬರ್ ಬಂದರೆ 80 ರೂ.ಗಳನ್ನು ಕೊಡುವುದಾಗಿ ಕೂಗಿ ಕರೆಯುತ್ತಾ, ಮಟಕಾ ಜೂಜಾಟದ ಚೀಟಿಗಳನ್ನು ಬರೆದು ಕೊಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 11350/- ರೂ. 1 ಮಟಕಾ ಪಟ್ಟಿ, 1 ಬಾಲ್‍ಪೆನ್ನು ಜಪ್ತು ಪಡಿಸಿಕೊಂಡು ದೂರು ನೀಡಿದ್ದ ಮೇರೆಗೆ ದಿನಾಂಕ 03-11-2014ರಂದು ಠಾಣೆಯ ಎನ್.ಸಿ ನಂ 161/14 ನೇದ್ದರಲ್ಲಿ ದೂರನ್ನುದಾಖಲಿಸಿಕೊಂಡು ದಿನಾಂಕ 04-11-14 ರಂದು ಪ್ರ.ವರದಿಯನ್ನು ದಾಖಲಿಸಲು ನ್ಯಾಯಲಯಾದ ಅನುಮತಿಯನ್ನು ಪಡೆದು ಈ ಪ್ರಕರಣ ದಾಖಲಿಸಿದೆ.

                                                 ಪೊಲೀಸ್ ಸೂಪರಿಂಟೆಂಡೆಂಟ್,   
                                                         ಬಳ್ಳಾರಿ.                   
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ನವೆಂಬರ್ 30, 2014

PRESS NOTE AS ON 01-12-2014


 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 01-12-2014
ಪತ್ರಿಕಾ ಪ್ರಕಟಣೆ 

1) ಬಳ್ಳಾರಿ ನಗರದ ಕೌಲ್‍ಬಜಾರ್ ಪೊಲೀಸ್ ಠಾಣೆ ಸರಹದ್ದಿನ ಕೌಲ್‍ಬಜಾರ್‍ನ ಬಾರ್‍ಬಾರ್ ಬೀದಿಯಿಂದ 18 ವರ್ಷದ ಹುಡುಗಿ ಮನೆಯಿಂದ ಕಾಣೆಯಾಗಿರುವ ಬಗ್ಗೆ. 

       ಪಿರ್ಯಾದಿದಾರರಾದ ಶ್ರೀ.ವಿರೇಶ್ ತಂದೆ ಲೇಟ್ ಎಲ್.ನಾರಾಯಣಪ್ಪ ವ: 57 ವರ್ಷ, ವಾಸ: ಸಾಯಿ ಬಾಬಾ ಗುಡಿ ಹತ್ತಿರ, ವಾರ್ಡ್ ನಂ. 24, ಬಾರ್ ಬಾರ್ ಸ್ಟ್ರೀಟ್, ಕೌಲ್ ಬಜಾರ್, ಬಳ್ಳಾರಿ ಇವರು ದೂರು ನೀಡಿದ್ದೇನೆಂದರೆ, ಅವರ  ಮೂರನೇ ಮಗಳಾದ ವನಿತಾ, 18 ವರ್ಷ, ಇವಳಿಗೆ ಇತ್ತಿಚ್ಚಗೆ ಮದುವೆ ಮಾಡಲು ಹುಡುಗನನನ್ನು ನೋಡುತ್ತಿದ್ದೇವು. ಆಗ ನನ್ನ ಮಗಳು ನನಗೆ ಮದುವೆ ಇಷ್ಠ ಇಲ್ಲ ಎಂದು ಹೇಳುತ್ತಿದ್ದಳು. ದಿನಾಂಕ: 29/11/2014 ರಂದು ಒಬ್ಬ ಹುಡುಗ ಬಂದು ನೋಡಿ, ಒಪ್ಪಿಕೊಂಡು ಹೋಗಿರುತ್ತಾನೆ. ನನ್ನ ಮಗಳಿಗೆ ಮದುವೆ ಮಾಡುತ್ತಿದ್ದೇವೆ ಎಂದು, ತನಗೆ ಮದುವೆ ಮಾಡಿಕೊಳ್ಳಲು ಇಷ್ಠವಿಲ್ಲದೇ ಇದ್ದುದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಬೆಳಗಿನ ಜಾವ 4-30 ಗಂಟೆಗೆ ಮನೆಯಲ್ಲಿ ಎಲ್ಲಾರು ಮಲಗಿರುವಾಗ, ಯಾರಿಗೂ ಹೇಳದೇ, ಕೇಳದೇ ಎಲ್ಲಿಗೋ ಹೋಗಿರುತ್ತಾಳೆ. ನಂತರ ನನ್ನ ಮಗಳನ್ನು ನಮ್ಮ ಏರಿಯಾದಲ್ಲಿ ಹಾಗೂ ಬಳ್ಳಾರಿಯ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗಳು ಅನಿತಳನ್ನು ಹುಡುಕಿಕೊಡಲು ಕೊಟ್ಟ ದೂರಿನ ಮೇರೆಗೆ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  
2) ಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಉತ್ತಂಗಿ ಗ್ರಾಮದ ಶ್ರೀ. ಗುರು ಕೊಟ್ಟೂರೇಶ್ವರ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಮುರಿದು ದೇವರಿಗೆ ಸಂಬಂಧಿಸಿದ ಬೆಳ್ಳಿ ಸಾಮಾನುಗಳ ಕಳವು.

       ದಿನಾಂಕ 29-11-2014 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 30-11-2014 ರಂದು ಬೆಳಗ್ಗೆ 5-15 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದುದಾರನು ಪೂಜಾರಿಕೆ ಮಾಡುವ ಉತ್ತಂಗಿ ಗ್ರಾಮದ ಚೆನ್ನಪ್ಪ ಸರ್ಕಲಿನ ಪಕ್ಕದಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿದ್ದ 1] ಅಂದಾಜು 2 ಕೆ.ಜಿ ಬೆಳ್ಳಿಯ ಶ್ರೀ ಗುರು ಕೊಟ್ಟೂರೇಶ್ವರ ದೇವರ ಮೂರ್ತಿ, 2] ಅಂದಾಜು 1 ಕೆ.ಜಿ ಬೆಳ್ಳಿಯ ದೇವರ 4 ಪಾದರಕ್ಷೆಗಳು (ಆವಿಗೆ), 3] ಅಂದಾಜು 1 ಕೆ.ಜಿ ಬೆಳ್ಳಿಯ 1 ದೊಡ್ಡ ಹಾಗೂ 3 ಸಣ್ಣ ಛತ್ರಿಗಳು, ಎಲ್ಲಾ ಸೇರಿ ಒಟ್ಟಾಗಿ ಅಂದಾಜು ರೂ. 1,28,000/- ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಯಾವುದೋ ಕಬ್ಬೀಣದ ರಾಡಿನಿಂದ ಸದರಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮೀಟಿ ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                         
                                                                                                                      ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                                 ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100  ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಬುಧವಾರ, ನವೆಂಬರ್ 26, 2014

PRESS NOTE AS ON 26-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 26-11-2014
ಪತ್ರಿಕಾ ಪ್ರಕಟಣೆ 

1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಸೋಮಸಮುದ್ರ ಗ್ರಾಮದ ಹತ್ತಿರ  ಯಾವುದೋ ಲಾರಿಯ ಚಾಲಕನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಡಿಕ್ಕಿ ಪಡಿಸಿದ್ದು, ಒಬ್ಬ ಮಹಿಳೆ ಸಾವು ಹಾಗು 9 ಜನರಿಗೆ ಗಾಯಗಳು ಆಗಿರುತ್ತವೆ.

         ದಿನಾಂಕ 25/11/2014 ರಂದು ಬೆಳಿಗ್ಗೆ 4:30 ಗಂಟೆ ಸುಮಾರಿಗೆ ಸೋಮಸಮುದ್ರ ಗ್ರಾಮದ ಹತ್ತಿರ ಇರುವ ಉದಯಗೌಡರವರ ಗೋಡಾನ್ ಹತ್ತಿರ ಸಿರುಗುಪ್ಪ-ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಯಾವುದೋ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಆಜಾಗೂರುಕತೆಯಿಂದ ಚಲಾಯಿಸಿಕೊಂಡು ನಮ್ಮ ಹಿಂದಿನಿಂದ ಬಂದು ರಸ್ತೆಯ ಎಡಭಾಗದಲ್ಲಿ ಬಳ್ಳಾರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ನನ್ನ ತಮ್ಮನ ಹೆಂಡತಿ ಕಾವೇರಿಗೆ ಹಿಂದಿನಿಂದ ಡಿಕ್ಕಿಹೊಡೆದು ಕಾವೇರಿ ಸಾವಿಗೆ ಕಾರಣನಾಗಿ, ನಂತರ ಮುಂದೆ ಹೊರಟಿದ್ದ ನಮ್ಮ ಗ್ರಾಮದ ಪಾರ್ವತಿ ಗಂಡ ಶಿವಲಿಂಗಪ್ಪ. ಅಂಜಿನಮ್ಮ ಗಂಡ ಜಂಭಣ್ಣ,  ಪಾರ್ವತಿ ಗಂಡ ಬಸವರಾಜ ಮಹಾಲಕ್ಷ್ಮಿ ತಂದೆ ವಿರೇಶ,  ನಾಗಮ್ಮ ಹೊನ್ನೂರಮ್ಮ ಪಾರ್ವತಿ ಗಂಡ ಚಿದಾನಂದ ತಿಪ್ಪಮ್ಮ. ಈರಮ್ಮ ಒಳಪೆಟ್ಟು ಮತ್ತು ರಕ್ತಗಾಯಗಳನ್ನುಂಟು ಮಾಡಿ ಲಾರಿಯನ್ನು ನಿಲ್ಲಿಸದೇ  ಪರಾರಿಯಾದ  ಲಾರಿ ಚಾಲಕನ ವಿರುದ್ದ ಕ್ರಮಕೈಗೊಳ್ಳಲು ಕೊಟ್ಟ ದೂರಿನ ಮೇರೆಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.

2) ಕುಡುತಿನಿ ಠಾಣೆ ಸರಹದ್ದಿನ ತಿಮ್ಮಲಾಪುರ ಗ್ರಾಮದ ಹೆಚ್.ಎಲ್.ಸಿ. ಕಾಲುವೆಯಲ್ಲಿ ಪತಿಯು ತನ್ನ ಹೆಂಡತಿಯನ್ನು ವರದಕ್ಷಣೆ ಹಾಗು ಕಿರುಕುಳದಿಂದ ನೀರಿನಲ್ಲಿ ತಳ್ಳಿ ಸಾಯಿಸಿರುತ್ತಾನೆ. 

       ಫಿರ್ಯಾದಿದಾರರಾದ ಶ್ರೀ. ಶಂಕರ್ ಲಿಂಗಪ್ಪ ವಾ: ಕಪ್ಪಗಲ್ ಗ್ರಾಮ ಇವಳ ಮಗಳಾದ ಶ್ರೀಮತಿ. ಸೌಜನ್ಯ ಈಕೆಯನ್ನು ತನ್ನ ಗಂಡನಾದ ಮಂಜುನಾಥನಿಗೆ ಮದುವೆ ಮಾಡಿಕೊಟ್ಟಿದ್ದು, ನಂತರ ಗಂಡ-ಹೆಂಡತಿ 3 ತಿಂಗಳು ಚೆನ್ನಾಗಿದ್ದು, ತದನಂತರ ತನ್ನ ಮಗಳಿಕೆ ಕಿರುಕುಳ ನೀಡುವುದು, ಹೊಡೆಯುವುದು ಮತ್ತು ಆಕೆಯ ಅತ್ತೆ ಮಾವ ಇವರು ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲ, ನಡೆತೆ ಸರಿಯಾಗಿಲ್ಲ ಎಂದು ನಿಂದಿಸುವುದು ಮತ್ತು ನಿಮ್ಮಪ್ಪನ ಮನೆಯಿಂದ ಏನು ತಂದಿಲ್ಲ ಎಂದು ದಿನ ನಿತ್ಯ ಕಿರುಕುಳ ಕೊಡುತ್ತಿದ್ದು, ದಿನಾಂಕ: 24-11-2014 ರಂದು ಸೌಜನ್ಯಳನ್ನು ಡಾಕ್ಟರ್ ಹತ್ತಿರ ತೋರಿಸಲು ತೋರಣಗಲ್ಲುಗೆ ಕರೆದುಕೊಂಡು ತಿಮ್ಮಲಾಪುರ ಗ್ರಾಮಕ್ಕೆ ವಾಪಾಸು ಬರುವಾಗ ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಡುದಾರಿಯಲ್ಲಿ ಗಾಡಿಯನ್ನು ನಿಲ್ಲಿಸಿ ಸೌಜನ್ಯಗಳಿಗೆ ಕಾಲುವೆಗೆ ತಳ್ಳಿ ಸಾಯಿಸಿರುತ್ತಾನೆಂದು ಇದ್ದ ದೂರಿನ ಮೇರೆಗೆ ಕುಡುತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತದೆ.

                                                                                         ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                          ಬಳ್ಳಾರಿ.                                                                                                                                   
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಸೋಮವಾರ, ನವೆಂಬರ್ 24, 2014

PRESS NOTE AS ON 25-11-2014




                                                                                                                      ಜಿಲ್ಲಾ ಪೊಲೀಸ್ ಕಾರ್ಯಲಯ
                                                                                                                     ಬಳ್ಳಾರಿ, ದಿನಾಂಕ: 25-11-2014
                                                              ಪತ್ರಿಕಾ ಪ್ರಕಟಣೆ

1) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯ ಗುಡಿ ಹತ್ತರದ ಮನೆಯಿಂದ 30 ವರ್ಷದ ಹೆಣ್ಣುಮಗಳು ಕಾಣೆಯಾದ ಬಗ್ಗೆ. 

ಫಿರ್ಯಾದುದಾರರಾದ ದಾಸರಗಾದಿಲಿಂಗ ತಂದೆ ದಾಸರ ಅಂಜಿನೇಯ, 36 ವರ್ಷ, ದಾಸರ ಜನಾಂಗ, ಕೂಲಿ ಕೆಲಸ, ವಾಸ: ಬ್ರಹ್ಮಯ್ಯಗುಡಿ ಹತ್ತಿರ, ಕಪ್ಪಗಲ್ ರಸ್ತೆ, ಬಳ್ಳಾರಿ ಇವರ ಹೆಂಡತಿಯಾದ ಶ್ರೀಮತಿ. ವರಲಕ್ಷ್ಮೀ ವಯಸ್ಸು 30 ವರ್ಷ, ಇವರು ದಿನಾಂಕ 19-11-2014 ರಂದು ಬೆಳಿಗ್ಗೆ ಸುಮಾರು 5-30 ಗಂಟೆಯಿಂದ 6-00 ಗಂಟೆಯ ಸಮಯದಲ್ಲಿ ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯಗುಡಿ ಹತ್ತಿರ ಇರುವ ಫಿರ್ಯಾಧಿದಾರರ ಗುಡಿಸಲು ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋದವಳು ವಾಪಸ್ಸು ಮನೆಗೆ ಬಾರದೇ  ಕಾಣೆಯಾಗಿರುತ್ತಾಳೆಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿ ಮಾಡಿಕೊಡಲು ಕೋರಿ ದೂರು ಇದ್ದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

                                                                                                       ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                                                   ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಗುರುವಾರ, ನವೆಂಬರ್ 20, 2014

PRESS NOTE AS ON 18-11-2014

 ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 18-11-2014

ಪತ್ರಿಕಾ ಪ್ರಕಟಣೆ 

1) ಹಿರೇಹಡಗಲಿ ಪೊಲೀಸ್ ಠಾಣೆ ಸರಹದ್ದಿನ ಮೈಲಾರ-ಕುರುವತ್ತಿ ಕಡೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ಲಿಸಿ ಟೈರ್ ಗಾಡಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಚಾಲಕನ ಸಾವು.

       ದಿನಾಂಕ: 16-11-2014 ರಂದು ರಾತ್ರಿ 10-00 ಗಂಟೆಗೆ ಸುಮಾರಿಗೆ ಮೈಲಾರ ಗ್ರಾಮದಿಂದ ಕುರುವತ್ತಿಗೆ ಹೋಗುವ ರಸ್ತೆಯಲ್ಲಿ ಆರೋಪಿಯಾದ ಬಸವರಾಜ ತನ್ನ ಆಟೋ ನಂ ಕೆ.ಎ-17 ಎ-9065 ರ ಚಾಲಕ ತನ್ನ ಆಟೋವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತ ರಸ್ತೆಯ ಎಡಬದಿ ಕಚ್ಚಾರಸ್ತೆಯಲ್ಲಿ ನಿಲ್ಲಿಸಿದ್ದ ಟೈರ್ ಬಂಡಿಗೆ ಡಿಕ್ಕಿ ಹೊಡೆಸಿದ್ದರಿಂದ ಆಟೋ ಬಲ ಮಗ್ಗುಲಾಗಿ ಪಲ್ಟಿಯಾಗಿದ್ದು, ಆಟೊ ಚಾಲಕ ಆರೋಪಿ ಬಸವರಾಜ, 30 ವರ್ಷ, ವಾ: ಮೈಲಾರ ಗ್ರಾಮ ಈತನಿಗೆ ತಲೆಯ ಹಿಂಬಾಗಕ್ಕೆ ತೀವ್ರವಾದ ರಕ್ತಗಾಯವಾಗಿದ್ದು ಆಟೋ ಹಿಂಬದಿಯಲ್ಲಿದ್ದ ಹೊನ್ನೂರುಸಾಬ್‍ಗೆ ಯಾವುದೇ ಗಾಯಗಳು ಆಗಿರುವುದಿಲ್ಲವೆಂದು ಗಾಯಗೊಂಡ ಬಸವರಾಜನಿಗೆ ಗುತ್ತಲ ಆಸ್ಪತ್ತೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಬಸವರಾಜ ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತದೆ.  

2) ಬಳ್ಳಾರಿ ನಗರದ ಬ್ರೂಸ್‍ಪೇಟೆ ಠಾಣೆ ಸರಹದ್ದಿನ ಇಂದಿರಾನಗರದಿಂದ 19 ವರ್ಷದ ಹುಡುಗಿ ಕಾಣೆಯಾಗಿರುವ ಬಗ್ಗೆ.   

          ದಿನಾಂಕ 14-11-14 ರಂದು ರಾತ್ರಿ 10-00 ಗಂಟೆಯಿಂದ ದಿ: 15-11-2014 ರ ಬೆಳಗಿನ ಜಾವ 03-00 ಗಂಟೆ ಮಧ್ಯದ ಅವಧಿಯಲ್ಲಿ ಪಿರ್ಯಾಧಿದಾರರಾದ ಶ್ರೀಮತಿ ತಿಮ್ಮಕ್ಕ ಗಂಡ ತಿಮ್ಮಪ್ಪ,  48 ವರ್ಷ, ವಾಸ: ಇಂದಿರಾ ನಗರ, ಬಳ್ಳಾರಿ ಇವರು ತನ್ನ ಮಗಳಾದ ಕು:ಉಷಾ, 19 ವರ್ಷ, ವಾ: 16 ನೇ ವಾರ್ಡ, ಶ್ರೀರಾಂಪುರ ಕಾಲೋನಿ, ಇಂದಿರಾನಗರ, ಬಳ್ಳಾರಿ ಇವಳೊಂದಿಗೆ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 15-11-14 ರಂದು ಬೆಳಗಿನ ಜಾವ 03-30 ಗಂಟೆಗೆ ಪಿರ್ಯಾಧಿದಾರರು ಎದ್ದು ನೋಡಲು ಉಷಾ ರವರು ಇರದೇ ಕಾಣೆಯಾಗಿರುತ್ತಾಳೆಂದು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 
                                                
                                                                                                                         ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                                                                                               ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

PRESS NOTE AS ON 19-11-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 19-11-2014
ಪತ್ರಿಕಾ ಪ್ರಕಟಣೆ 

1) ತೆಕ್ಕಲಕೋಟೆ ಪೊಲೀಸ್ ಠಾಣೆ ಸರಹದ್ದಿನ ಸಿರುಗುಪ್ಪ-ಬಳ್ಳಾರಿ ರಸ್ತೆಯ ಎಸ್.ಹೆಚ್.-19 ರಸ್ತೆಯ ಹೆಂಗಸರ ಶೌಚಾಲಯದ ಬಳಿ ಯಾವುದೋ ವಾಹನ ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವು.

      ದಿನಾಂಕ 18-11-2014 ರಂದು ಪಿರ್ಯಾದಿದಾರರಾದ ಶ್ರೀ ಹರಿಜನ ಗೂಳೆಪ್ಪ ತಂದೆ ಹರಿಜನ ಕಂದಾರಪ್ಪ 41 ವರ್ಷ, ಹರಿಜನರು, ವ್ಯವಸಾಯ, ವಾ: 20 ನೇ ವಾರ್ಡ ದೇವಿನಗರ ರವರು ದೂರು ನೀಡಿದ್ದೇನೆಂದರೆ,  ದಿನಾಂಕ:17-11-2014 ರಂದು ತಮ್ಮ ಹೊಲದಿಂದ ಎಸ್.ಹೆಚ್-19 ರಸ್ತೆಯ ಮೂಲಕ ಮನೆಗೆ  ವಾಪಸ್ಸಾಗುತ್ತಿರುವಾಗ ಸಂಜೆ 07-30 ಗಂಟೆಗೆ ಸೂಮಾರಿಗೆ ತಮ್ಮೂರಿನ ಹೆಂಗಸರ ಉಪಯೋಗಕ್ಕಾಗಿ ಕಟ್ಟಿರುವ ಶೌಚಾಲಯದ ಬಳಿ ಎಸ್.ಹೆಚ್-19 ಸಿರುಗುಪ್ಪ-ಬಳ್ಳಾರಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಮಕಾಡೆ ಬಿದ್ದಿದ್ದು, ಹೋಗಿ ನೋಡಲು ನಮ್ಮ ಸಂಭಂಧಿಕನಾದ ಓಬಳೇಶ ತಂದೆ ದಸ್ತಗಿರಪ್ಪ, 18 ವರ್ಷ, ಹರಿಜನರು ಸಾ: ದೇವಿನಗರ ಕ್ಯಾಂಪ್ ಆಗಿದ್ದು ಕಿವಿ, ಮೂಗಿನಲ್ಲಿ ರಕ್ತ ಜಿನುಗುತಿದ್ದು, ಮೈ, ಕೈ-ಕಾಲುಗಳು ತೆರಚಿದ್ದವು, ಇವನನ್ನು ಚಿಕಿತ್ಸೆಗಾಗಿ ಸಿರುಗುಪ್ಪ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸಗೆ ದಾಖಲಿಸಿದ್ದು, ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಓಳೇಶನು ಮೃತನಾಗಿರುತ್ತಾನೆ. ಅವನು ಮೂಕನಾಗಿದ್ದರಿಂದ,  ಈ ಘಟನಯ ಬಗ್ಗೆ ಹೆಚ್ಚಿನ ವಿಷಯ ಕೆಳಲಾಗಿಲ್ಲ ಅಪಘಾತ ಸ್ಥಳದ ಸನ್ನಿವೇಶ ಮತ್ತು ಮೃತ ಓಬಳೇಶನ ಮೈಮೇಲಿನ  ಗಾಯಗಳನ್ನು ಗಮನಿಸಿದಲ್ಲಿ, ಯಾವುದೋ ವಾಹನದ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಓಬಳೇಶನಿಗೆ ಡಿಕ್ಕಿ ಪಡಿಸಿ ಸಾವಿಗೆ ಕಾರಣವಾಗಿದ್ದು,  ಸದರಿ ವಾಹನವನ್ನು ಪತ್ತೆ ಮಾಡಿ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ ಮೇರೆಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
 
2) ಹೊಸಪೇಟೆ ಠಾಣೆ ಸರಹದ್ದಿನ ಉಕ್ಕಡಕೇರೆಯ ಮನೆಯಿಂದ 14 ವರ್ಷದ ಬಾಲಕ ಕಾಣೆಯಾಗಿರುವ ಬಗ್ಗೆ. 

ದಿನಾಂಕ: 18-11-2014 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದುದಾರರಾದ ಶ್ರೀ. ಯಲ್ಲಪ್ಪ.ಟಿ. ತಂದೆ ಜಂಬಪ್ಪ, 46 ವರ್ಷ ನಾಯಕರು, ವಾ: ಉಕ್ಕಡಕೇರಿ, ಹೊಸಪೇಟೆ ರವರು ಕೊಟ್ಟ ದೂರು ಏನೆಂದರೆ, ತನ್ನ ಮಗ ಧೀರಜ್, 14 ವರ್ಷ ಈತನು ಹೊಸಪೇಟೆಯ ಜೇಸಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು, ದಿನಾಂಕ: 15-11-2014 ರಂದು ಶನಿವಾರ ಎಂದಿನಂತೆ ಶಾಲೆಗೆ ಹೋಗಿ ಮದ್ಯಾಹ್ನ ಮನೆಗೆ ವಾಪಾಸು ಬಂದು ಸಂಜೆ ಸುಮಾರು 5-15 ಗಂಟೆಯ ಸಮಯದಲ್ಲಿ ತಾನು ತನ್ನ ಸ್ನೇಹಿತರ ಹತ್ತಿರ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಈತನು ಹೋಗುವಾಗ ಹಸಿರು ಬಣ್ಣದ ಟೀ ಷರ್ಟ್, ಕೆಂಪು ಬಣ್ಣದ ಹಾಫ್ ಪ್ಯಾಂಟ್ ತೊಟ್ಟಿದ್ದು, ಕನ್ನಡ ಇಂಗ್ಲೀಷ್ ಹಿಂದಿ ಮತ್ತು ಕೊಂಕಣೆ ಮಾತನಾಡುತ್ತಾನೆ. ರಾತ್ರಿಯಾದರೂ ಬಾರದೇ ಇದ್ದುದರಿಂದ ತನ್ನ ಮಗನ ಸ್ನೇಹಿತರ ಮನೆಗಳಲ್ಲಿ ಮತ್ತು ತಮ್ಮ ಸಂಬಂಧಿಕರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಗಲಿಲ್ಲ, ನಂತರ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲವೆಂದು ಸದರಿ ಹುಡುಗನನ್ನು ಹುಡುಕಿ ಕೊಡಲು ನೀಡಿದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿರುತ್ತುದೆ.  
      
                                                 ಪೊಲೀಸ್ ಸೂಪರಿಂಟೆಂಡೆಂಟ್,                                                                               
                                                         ಬಳ್ಳಾರಿ.                                                                                                                  
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.