Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0409/2015 (CODE OF CRIMINAL PROCEDURE, 1973 U/s 109 ) |
29/09/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ 28-09-2015 ರಂದು ರಾತ್ರಿ 11-00 ಗಂಟೆಯಿಂದ ಠಾಣಾ ಸರಹದ್ದಿನಲ್ಲಿ ಪಿರ್ಯಾದಿದಾರರು ಸಿಬ್ಬಂದಿಯಾದ ಪಿಸಿ-404 ರವರನ್ನು ಕರೆದುಕೊಂಡು ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತ ಈ ದಿನ ದಿನಾಂಕ : 29/09/2015 ರಂದು ಬೆಳಗಿನ ಜಾವ 4 ಗಂಟೆಗೆ ಹಲಕುಂದಿ ಗ್ರಾಮದ ಗ್ರಾಮ ಪಂಚಾಯ್ತಿ ಮುಂದಿನ ಕಮಾನಿನ ಹತ್ತಿರದ ಕಟ್ಟೆಯ ಹತ್ತಿರ ಹೋದಾಗ ಅಲ್ಲಿ ಮರೆಯಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಸದರಿಯವರನನ್ನು ನೋಡಿ ಅವನ ಬಳಿ ಹೋಗಿ ವಿಚಾರಿಸಲೆಂದು ಹೋದಾಗ ಅವನು ಸಮವಸ್ತ್ರದಲ್ಲಿದ್ದವರನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅವನನ್ನು ಹಿಡಿದುಕೊಂಡು ವಿಚಾರಿಸಲು ತನ್ನ ಹೆಸರು ದಾದಾವಲಿ ತಂದೆ ಮಾಬುಸಾಬ್, ವ : 20 ವರ್ಷ, ಮುಸ್ಲಿಂ ಜಾತಿ, ಬೇಲ್ದಾರ್ ಕೆಲಸ, ವಾಸ : ಆಶ್ರಯ ಕಾಲೋನಿ, ಬಡಾ ಕಮೇಲ ಹತ್ತಿರ, ಬೈಪಾಸ್ ಕೌಲ್ಬಜಾರ್, ಬಳ್ಳಾರಿ ಎಂದು ತಿಳಿಸಿದ್ದು, ಸದರಿಯವನಿಗೆ ಆ ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಕಾರಣ ಈತನನ್ನು ಹಾಗೇ ಬಿಟ್ಟಲ್ಲಿ ಸದರಿ ಏರಿಯಾದಲ್ಲಿ ಯಾವುದಾದರು ಕನ್ನಾ ಕಳವು ಮಾಡಲು ಬಂದಂತೆ ಸಂಶಯ ಬಂದಿದ್ದರಿಂದ ದಸ್ತಗಿರಿ ಮಾಡಿಕೊಂಡು ವಾಪಾಸ್ ಠಾಣೆಗೆ 05-00 ಎ.ಎಂ. ಗಂಟೆಗೆ ಬಂದು ಆರೋಪಿತನ ವಿರುದ್ದ ಮುಂಜಾಗ್ರತ ಕ್ರಮವಾಗಿ ಠಾಣೆಯ ಗುನ್ನೆ ನಂ. 409/2015 ಕಲಂ:109 ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿದೆ. | |||||||||||||||
2 | Cr.No:0410/2015 (CODE OF CRIMINAL PROCEDURE, 1973 U/s 110(E)(G) ) |
29/09/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ಈ ದಿನ ದಿನಾಂಕಃ 29-9-2015 ರಂದು ಬೆಳಿಗ್ಗೆ ನಾನು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 43 ರವರೊಂದಿಗೆ ಇಲಾಖೆ ಜೀಪ್ ನಂಬರ್ ಕೆ.ಎ-34ಜಿ-303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಗಸ್ತು ಮಾಡುತ್ತಾ ಬೆಳಿಗ್ಗೆ 7-30 ಗಂಟೆ ಸಮಯಕ್ಕೆ ಕಾರ್ಕಲತೋಟ ಗ್ರಾಮದ ಆಚೆ ಇರುವ ಪಾತ್ರಿಬೂದಿಹಾಳು ಗ್ರಾಮಕ್ಕೆ ಹೋದಾಗ ಅಲ್ಲಿ ಜನರು ಗುಂಪಾಗಿ ನಿಂತಿದ್ದು ನೋಡಿ ನಾನು ಜೀಪ್ ನಿಲ್ಲಿಸಿ ಸಿಬ್ಬಂದಿಯವರೊಂದಿಗೆ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಉದ್ದೇಶಿಸಿ ಮಟಕಾ ಜೂಜಾಟ ಆಡಿರಿ ಒಂದು ರೂಪಾಯಿಗೆ ನೂರು ರೂಪಾಯಿ ಬರುತ್ತದೆ. ಮಟಕಾ ಜೂಜಾಟ ಅಡಿರಿ ಸಾಹುಕಾರರು ಅಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟದ ದುಷ್ಟಟಗಳಿಗೆ ಬಿಳುವಂತೆ ಪ್ರಚೋದನೆ ಮಾಡುತ್ತಿದ್ದು, ಜನರಲ್ಲಿ ಮಟಕಾ ಜೂಜಾಟ ಅಡುವ ಆಸೆ ಹುಟ್ಟಿಸುತ್ತಿದ್ದು ಕಂಡು ಬಂದಿತು. ಈ ವ್ಯಕ್ತಿಯನ್ನು ಹಿಗೇಯೇ ಬಿಟ್ಟಲ್ಲಿ ಇತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಇತನನ್ನು ಹಿಡಿದುಕೊಂಡು ಇತನ ಹೆಸರು ವಿಚಾರಿಸಲು ವಿ. ಕೇಶವ ತಂದೆ ಗುರುಸ್ವಾಮಿ, ವ: 34 ವರ್ಷ, ವಡ್ಡರಜಾತಿ, ವಾಸ: ಪಾತ್ರಬೂದಿಹಾಳುಗ್ರಾಮ, ಬಳ್ಳಾರಿ ತಾಲ್ಲೂಕು ಅಂತಾ ತಿಳಿಸಿದನು. ಇತನು ಠಾಣೆಯ ಗುನ್ನೆ ನಂ: 176/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ಮಟಕಾ ಜೂಜಾಟದ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಇತನನ್ನು ಹಿಗೆಯೇ ಬಿಟ್ಟಲ್ಲಿ ಸಾರ್ವಜನಿಕರಿಗೆ ದುಷ್ಟಟಗಳಿಗೆ ಬಿಳುವಂತೆ ಮಾಡಿ, ಸಾರ್ವಜನಿಕರು ಸಂಜ್ಞೆಯ ಅಪರಾದಗಳಲ್ಲಿ ತೊಡಗುವಂತೆ ಮಾಡಿ ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಈತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬೆಳಿಗ್ಗೆ 8-30 ಗಂಟೆಗೆ ಬಂದು ಈತನ ಮೇಲೆ ಠಾಣೆ ಗುನ್ನೆ ನಂ: 410/2015 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ. | |||||||||||||||
Gandhinagar PS | ||||||||||||||||
3 | Cr.No:0204/2015 (IPC 1860 U/s 34,406,420 ) |
29/09/2015 | Under Investigation | |||||||||||||
CHEATING - CHEATING | ||||||||||||||||
Brief Facts : | 2007ನೇ ವರ್ಷದಲ್ಲಿ ಆರೋಪಿತರು ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಶ್ರೀ.ಶಿವಸಾಯಿ ಡೆವಲಪರ್ಸ್ ಹೆಸರಿನ ನಿವೇಶನಗಳನ್ನು ವಿಸ್ತೀರ್ಣಕ್ಕನುಗುಣವಾಗಿ ಕಂತುಗಳಲ್ಲಿ ಹಣವನ್ನು ಕಟ್ಟಿದರೆ ನಿವೇಶನಗಳನ್ನು ಕೊಡುವುದಾಗಿ ಕರಪತ್ರಗಳನ್ನು ಹಂಚಿಕೆ ಮಾಡಿದ್ದರಿಂದ ಫಿರ್ಯಾಧಿದಾರರು ಆರೋಪಿತರ ಹತ್ತಿರ ನಿವೇಶನ ಪಡೆಯುವುದಕ್ಕಾಗಿ ಆರೋಪಿತರಿಗೆ ಮುಂಗಡವಾಗಿ 3,000/-ಗಳು ಮತ್ತು ಪ್ರತಿ ತಿಂಗಳು 1,000/-ಗಳಂತೆ ಒಟ್ಟು 50 ತಿಂಗಳು ರೂ.50,000/- ಗಳು ಒಟ್ಟು ರೂ.53.000/- ಗಳನ್ನು ಕಟ್ಟಿದ್ದು, ಆರೋಪಿತರು ಕಂತು ಮುಗಿದರೂ ಪ್ಲಾಟ್ ಗಳನ್ನು ನೊಂದಣಿ ಮಾಡಿಸಿ ಕೊಡದೇ ಇದ್ದುದ್ದಕ್ಕೆ ಫಿರ್ಯಾದಿದಾರರು ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಆರೋಪಿತರ ಕಛೇರಿಗೆ ಹೋಗಿ | |||||||||||||||
ವಿಚಾರಿಸಿದಾಗ ಅವರು ಪ್ಲಾಟ್ ಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡು ರೂ.53,000/-ಗಳಿಗೆ ಆ-2 ರವರ ಸಹಿ ಇರುವ ಕರೂರು ವೈಶ್ಯ ಬ್ಯಾಂಕ್ ಚೆಕ್ ಕೊಟ್ಟಿದ್ದು, ಕೆಲವು ದಿನಗಳ ನಂತರ ಈ ಬಗ್ಗೆ ಆ-1 ರವರಿಗೆ ವಿಚಾರಿಸಲು ಸದರಿಯವರು "ನೀವು ಬ್ಯಾಂಕ್ ಗೆ ಹೋಗಬೇಡಿ ನಾವೇ ದುಡ್ಡು ಕೊಡುತ್ತೇವೆಂದು ತಿಳಿಸಿದ್ದು ಸದರಿಯವರು ಫಿರ್ಯಾದಿದಾರರಿಗೆ ಪ್ಲಾಟ್ ಕೊಡುತ್ತೇವೆಂದು ರೂ.53 ಸಾವಿರಗಳನ್ನು ಮೋಸ ಮಾಡುವ ಉದ್ದೇಶದಿಂದ ಕಟ್ಟಿಸಿಕೊಂಡು ಇಲ್ಲಿಯವರೆಗೆ ಪ್ಲಾಟ್ ಕೊಡದೇ ಹಾಗೂ ಹಣವನ್ನು ವಾಪಸ್ಸು ಕೊಡದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ನಂಬಿಸಿ ಮೋಸ ಮಾಡಿರುತ್ತಾರೆಂದು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ | ||||||||||||||||
Gudekote PS | ||||||||||||||||
4 | Cr.No:0110/2015 (CODE OF CRIMINAL PROCEDURE, 1973 U/s 107 ) |
29/09/2015 | Under Investigation | |||||||||||||
CrPC - Security For Good Behaviour (Sec 107 ) | ||||||||||||||||
Brief Facts : | ಈಗ್ಗೆ ಸುಮಾರು 3 ದಿನಗಳಿಂದ ಗುಡೇಕೋಟೆ ಠಾಣಾ ಸರಹದ್ದಿನಲ್ಲಿ ಬರುವ ಚೋರನೂರು, ಜಿಗೇನಹಳ್ಳಿ, ಯರ್ರದಮ್ಮನಹಳ್ಳಿ, ಶೆಲಿಯಪ್ಪನಹಳ್ಳಿ ಗ್ರಾಮಗಳಲ್ಲಿ ಕ್ರಿಶ್ಚಿಯನ್ ಫಾಸ್ಟರ್ ಗಳು ಹಿಂದುಳಿದ ಜನರಿಗೆ ಸಂಬಂದಿಸಿದ ಜಾಗಗಳನ್ನು ಅವರ ಅನುಮತಿ ಮೇಲೆ ಪಡೆದು ಚರ್ಚ್ ಗಳನ್ನು , ಪ್ರಾರ್ಥನಾ ಮಂದಿರಗಳನ್ನು ಕಟ್ಟಿಕೊಂಡು ಪ್ರತಿ ದಿನ ಹಿಂದೂ ಸಮುದಾಯಕ್ಕೆ ಸೇರಿದ ಹಿಂದುಳಿದ ಜನಾಂಗದವರನ್ನು ಆಕರ್ಷಿಸಿ ಪ್ರಾರ್ಥನೆಗೆ ಬರುವಂತೆ ಮಾಡಿಕೊಂಡು ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಾರೆಂದು ಆರೋಪಿಸಿ ಈ ಮೇಲ್ಕಂಡ ಪ್ರತಿವಾದಿಗಳೆಲ್ಲರೂ ಸೇರಿ ಸದರಿ ಗ್ರಾಮಗಳ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಫಾಸ್ಟರ್ ಗಳಿಗೆ ತಮ್ಮ ಪ್ರಾರ್ಥನಾ ಮಂದಿರಗಳನ್ನು ಮುಚ್ಚಿಕೊಂಡು ಊರು ಬಿಟ್ಟು ಹೋಗುವಂತೆ ಗಲಾಟೆ ಮಾಡಿದ್ದು ಈ ಸಂಬಂಧ ಫಾಸ್ಟರ್ ಗಳ ಕಡೆಯ ಕ್ರಿಶ್ಚಿಯನ್ ಸಮುದಾಯದವರಿಗೂ ಹಾಗೂ ಆಯಾ ಗ್ರಾಮಗಳ ಹಿಂದೂ ಸಮುದಾಯದ ಜನರ ನಡುವೆ ವೈಮನಸ್ಸು ಉಂಟಾಗಿದ್ದು ಈ ಸಂಬಂಧ ಎರಡೂ ಸಮುದಾಯದವರನ್ನು ಕರೆಸಿ ನಿನ್ನೆ ದಿನ ದಿ: 28/09/2015 ರಂದು ಕೂಡ್ಲಿಗಿ ಡಿ.ವೈ.ಎಸ್.ಪಿ ಸಾಹೇಬರು ಶಾಂತಿ ಸಭೆ ನಡೆಸಿ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಕಳುಹಿಸಿದ್ದು ಆದರೂ ಸಹಾ ಈ ಎರಡೂ ಸಮುದಾಯದವರ ನಡುವೆ ಯಾವ ಸಮಯದಲ್ಲಾದರೂ ಪುನಃ ಗಲಾಟೆಗಳು ಸಂಭವಿಸಿ ಸಾರ್ವಜನಿಕರ ಶಾಂತತೆಗೆ, ನೆಮ್ಮದಿಗೆ ಭಂಗವುಂಟಾಗುವ, ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟಾಗುವ ಸಂಭವವಿರುವುದಾಗಿ ಮಾಹಿತಿ ತಿಳಿದು ಬಂದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಈ ಮೇಲ್ಕಂಡ ಪ್ರತಿವಾದಿಗಳ ವಿರುದ್ದ ಈ ದೂರು ದಾಖಲಿಸಿರುತ್ತದೆ. | |||||||||||||||
Hospet Town PS | ||||||||||||||||
5 | Cr.No:0188/2015 (IPC 1860 U/s 354(B),355,504,506,323,34 ) |
29/09/2015 | Under Investigation | |||||||||||||
MOLESTATION - Public Place | ||||||||||||||||
Brief Facts : | ದಿನಾಂಕ: 29/09/2015 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾಧಿದಾರಳು ಠಾಣೆಗೆ ಹಾಜರಾಗಿ ಕೊಟ್ಟ ಬರವಣಿಗೆ ದೂರು ಸಾರಾಂಶವೇನೆಂದರೆ ಹೊಸಪೇಟೆಯಲ್ಲಿರುವ ತಮ್ಮ ಮಗ ಸೋಮಶೇಖರ್ ರವರ ಮನೆಗೆ ಬಂದು ಇರುವ ಕಾಲಕ್ಕೆ ದಿನಾಂಕ: 27-09-2015 ರಂದು ತಮ್ಮ ಮಗನ ಮನೆಯ ಮುಂದೆ ಕಟ್ಟೆ ಕಟ್ಟಿಸುವ ಕಾಲಕ್ಕೆ ಮದ್ಯಾಹ್ನ 2-00 ಗಂಟೆಗೆ ತನ್ನ ಮೈದುನ ಪಿ.ಪ್ರಭಾಕರ, ಪ್ರಭಾಕರ ಇವರ ತಂಗಿ ಗಂಗಮ್ಮ ಇವರಿಬ್ಬರು ಮನೆಯ ಮುಂದಿನ ಕಟ್ಟೆಯನ್ನು ಕಟ್ಟುತ್ತಿದ್ದ ಮೇಸ್ತ್ರಿಗಳಿಗೆ ಕಟ್ಟೆ ಕಟ್ಟಬಾರದೆಂದು ಗದರಿಸಿದಾಗ ಫಿರ್ಯಾದಿದಾರಳು ಮನೆಯ ಮುಂದೆ ಕಟ್ಟೆ ಕಟ್ಟಿದರೆ ನಿಮಗೇನು ತೊಂದರೆ ಎಂದು ಕೇಳಿದ್ದಕ್ಕೆ ಫಿರ್ಯಾದಿದಾರಳ ಮೈದುನನಾದ ಪ್ರಭಾಕರ ಈತನು ಏನೇ ಕಂತ್ರಿ ಸೂಳೆ ಯಾರಪ್ಪನ ಜಾಗ ಅಂತಾ ಕಟ್ಟೆ ಕಟ್ಟುತ್ತೀಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಈಕೆಯ ಜಡೆ, ಸೀರೆ ಹಿಡಿದು ಎಳೆದಾಡಿ ಅವಮಾನಪಡಿಸಿ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿ ಗಂಗಮ್ಮಳು ಫಿರ್ಯಾದಿದಾರಳಿಗೆ ಚಪ್ಪಲಿಯಿಂದ ಹೊಡೆದು ಜಗಳ ಮಾಡುವಾಗ ಜಗಳದಲ್ಲಿದ್ದ ಫಿರ್ಯಾದಿದಾರಳನ್ನು ಬಿಡಿಸಲು ಬಂದ ಗಂಡ ಮತ್ತು ಸೋಮಶೇಖರ್ ಇವರಿಗೆ ಪ್ರಭಾಕರ ಈತನು ಕೈಗಳಿಂದ ಹೊಡೆದು ಜಗಳ ಮಾಡಿದ್ದು ಈ ಜಗಳದಲ್ಲಿ ಫಿರ್ಯಾದಿದಾರಳಿಗೆ ಮತ್ತು ಅಕೆಯ ಗಂಡನಿಗೆ ಆದ ಗಾಯಗಳ ಬಗ್ಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡು ಠಾಣೆಗೆ ಹಾಜರಾಗಿ ಕೊಟ್ಟ ದೂರು ಸಾರಂಶದ ಮೆರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Kuduthini PS | ||||||||||||||||
6 | Cr.No:0129/2015 (IPC 1860 U/s 279,304(A) ; INDIAN MOTOR VEHICLES ACT, 1988 U/s 187 ) |
29/09/2015 | Under Investigation | |||||||||||||
MOTOR VEHICLE ACCIDENTS FATAL - National Highways | ||||||||||||||||
Brief Facts : | ದಿನಾಂಕ:- 27.09.2015 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಬಳ್ಳಾರಿ-ಹೊಸಪೇಟೆ ಎನ್.ಹೆಚ್, 63 ರಸ್ತೆಯಲ್ಲಿ ವಾಸಪ್ಪ ಡಾಬಾದ ಮುಂದೆ ಹತ್ತಿರ ಲಾರಿ ನಂ, ಎಪಿ-03/ಟಿಟಿ-3349 ನೇದ್ದರ ಚಾಲಕ ಮತ್ತು ಲಾರಿ ಕ್ಲೀನರ್ ಇವರು ಲಾರಿಯನ್ನು ನಿಲ್ಲಿಸಿದ್ದು, ಲಾರಿ ಕ್ಲೀನರ್ ನು ಪಿರ್ಯಾದಿದಾರನ ಹೋಟಲ್ ಹತ್ತಿರ ಬಂದು ಅಗಲ್ ವಾಲ್ ಫ್ಯಾಕ್ಟರಿಗೆ ಹೋಗುವ ಬಗ್ಗೆ ದಾರಿಯನ್ನು ಕೇಳಿದ್ದು, ನಂತರ ಸ್ವಲ್ಪ ಒತ್ತಿನ ನಂತರ | |||||||||||||||
ಲಾರಿ ಡ್ರೈವರ್ ನು ರಸ್ತೆಯನ್ನು ದಾಟುತ್ತಿರುವಾಗ ಬಳ್ಳಾರಿ ಕಡೆಯಿಂದ ಕುಡತಿನಿ ಕಡೆಯಿಂದ ಬಂದ ಮೋಟರ್ ಸೈಕಲ್ ಚಾಲಕನು ಮೋಟರ್ ಸೈಕಲ್ ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿ ಡ್ರೈವರ್ ಗೆ ಡಿಕ್ಕಿ ಹೊಡೆಸಿದ್ದರಿಂದ ತಲೆಗೆ ಒಳಪೆಟ್ಟು ಅಗಿದ್ದು, ನಂತರ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಗೆ ಹೋಗಿ ಚಿಕಿತ್ಸೆ ಫಲಕಾರಿಯಾಗಧೇ ಮೃತಪಟ್ಟಿರುತ್ತಾನೆ. ಅದ್ದರಿಂದ ಲಾರಿ ಡ್ರೈವರ್ ಗೆ ಡಿಕ್ಕಿ ಹೊಡೆದ ಮೋಟರ್ ಸೈಕಲ್ ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ. ( ದೂರಿನ ಪ್ರತಿ ಲಗತ್ತಿಸಿದೆ) | ||||||||||||||||
Sirigeri PS | ||||||||||||||||
7 | Cr.No:0142/2015 (KARNATAKA POLICE ACT, 1963 U/s 78(III) ) |
29/09/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 28-09-2015 ರಂದು ಸಂಜೆ 5.15 ಗಂಟೆಗೆ ಶ್ರೀ.ಎನ್ ಲೊಕೇಶ್ವರಪ್ಪ ಸಿಪಿಐ., ತೆಕ್ಕಲಕೋಟ ವೃತ್ತ, ರವರು ಠಾಣೆಗೆ ಬಂದು ಮೂಲ ಪಂಚನಾಮೆ, ಮಾಲು, ಮತ್ತು ದೂರನ್ನು ನೀಡಿದ್ದು ಸಾರಾಂಶ: ದಿನಾಂಕ: 28-09-2015 ರಂದು ಮಾನ್ಯ ಸಿಪಿಐ ತೆಕ್ಕಲಕೋಟರವರಿಗೆ ಠಾಣೆಯ ಸರಹದ್ದಿನ ಎಂ ಸೂಗೂರು ಗ್ರಾಮದ ಪರಮಣ್ಣ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಸೀಬಿನ ಮಟ್ಕಾ ಜೂಜಾಟ ನೆಡೆಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ತೆಕ್ಕಲಕೋಟ ರವರು ಸಿಬ್ಬಂದಿಗಳಾದ ಎಎಸ್ಐ ಜೀವರತ್ನಂ ಎಎಸ್ಐ ಹೆಚ್ಸಿ-46 ಪಿಸಿ-1162 ಮತ್ತು ಪಂಚರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-533 ರಲ್ಲಿ ಮಧ್ಯಾಹ್ನ 3:30ಗಂಟೆಗೆ ಠಾಣೆಯಿಂದ ಹೊರಟು ಮಧ್ಯಾಹ್ನ 3:45 ಗಂಟೆಗೆ ಎಂ ಸೂಗೂರು ಗ್ರಾಮದ ಪರಮಣ್ಣ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಲು ಸೇರಿದ ಜನರ ಗುಂಪಿನ ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಕಲ್ದಾರಿ ವಿರೇಶ ತಂದೆ ದೊಡ್ಡಬಸಪ್ಪ, 40ವರ್ಷ, ಕಬ್ಬೇರು ಜನಾಂಗ, ವ್ಯವಸಾಯ, ವಾಸ : ಎಂ ಸೂಗೂರು ಗ್ರಾಮ ರವರನ್ನು ಹಿಡಿದುಕೊಂಡು, ಸದರಿ ಮಟ್ಕಾ ಜೂಜಾಟದಲ್ಲಿ ದೊರೆತ ಒಟ್ಟು ನಗದು ಹಣ ರೂ. 340/-, ಒಂದು ಮಟಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ ಇವುಗಳನ್ನು ಪಂಚನಾಮೆ ಅಡಿಯಲ್ಲಿ ಜಪ್ತು ಮಾಡಿಕೊಂಡು ಬಂದಿದ್ದಾಗಿ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಎನ್ ಸಿ ನಂ :06/2015 ಕಲಂ : 78 ಕ್ಲಾಸ್ [3] ಕೆ.ಪಿ. ಅಕ್ಟ್ ರಲ್ಲಿ ನೊಂದಾಯಿಸಿಕೊಂಡಿರುತ್ತದೆ. | |||||||||||||||
8 | Cr.No:0143/2015 (KARNATAKA POLICE ACT, 1963 U/s 78(III) ) |
29/09/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ: 29-09-2015 ರಂದು ರಾತ್ರಿ8:00 ಗಂಟೆಗೆ ಶ್ರೀ.ಎನ್ ಲೊಕೇಶ್ವರಪ್ಪ ಸಿಪಿಐ., ತೆಕ್ಕಲಕೋಟ ವೃತ್ತ, ರವರು ಠಾಣೆಗೆ ಬಂದು ಮೂಲ ಪಂಚನಾಮೆ, ಮಾಲು, ಮತ್ತು ದೂರನ್ನು ನೀಡಿದ್ದು ಸಾರಾಂಶ: ದಿನಾಂಕ: 29-09-2015 ರಂದು ಮಾನ್ಯ ಸಿಪಿಐ ತೆಕ್ಕಲಕೋಟರವರಿಗೆ ಠಾಣೆಯ ಸರಹದ್ದಿನ ಕರೂರು ಗ್ರಾಮದ ಮಠದ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಸೀಬಿನ ಮಟ್ಕಾ ಜೂಜಾಟ ನೆಡೆಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ತೆಕ್ಕಲಕೋಟ ರವರು ಸಿಬ್ಬಂದಿಗಳಾದ ಎಎಸ್ಐ ಜೀವರತ್ನಂ ಎಎಸ್ಐ ಹೆಚ್ಸಿ-46 ಪಿಸಿ-1162 ಮತ್ತು ಪಂಚರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-533 ರಲ್ಲಿ ಸಂಜೆ 5:45ಗಂಟೆಗೆ ಠಾಣೆಯಿಂದ ಹೊರಟು ಸಂಜೆ 6:15 ಗಂಟೆಗೆ ಕರೂರು ಗ್ರಾಮದ ಮಠದ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಲು ಸೇರಿದ ಜನರ ಗುಂಪಿನ ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಹಡಪದ ದೇವರಾಜ ತಂದೆ ಮಹಾದೇವಪ್ಪ, 35ವರ್ಷ, ವಾಸ:ಕರೂರು ಗ್ರಾಮ ರವರನ್ನು ಹಿಡಿದುಕೊಂಡು, ಸದರಿ ಮಟ್ಕಾ ಜೂಜಾಟದಲ್ಲಿ ದೊರೆತ ಒಟ್ಟು ನಗದು ಹಣ ರೂ. 920/-, ಒಂದು ಮಟಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ ಇವುಗಳನ್ನು ಪಂಚನಾಮೆ ಅಡಿಯಲ್ಲಿ ಜಪ್ತು ಮಾಡಿಕೊಂಡು ಬಂದಿದ್ದಾಗಿ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಎನ್ ಸಿ ನಂ :07/2015 ಕಲಂ : 78 ಕ್ಲಾಸ್ [3] ಕೆ.ಪಿ. ಅಕ್ಟ್ ರಲ್ಲಿ ನೊಂದಾಯಿಸಿಕೊಂಡಿರುತ್ತದೆ. | |||||||||||||||
Tekkalkota PS | ||||||||||||||||
9 | Cr.No:0096/2015 (IPC 1860 U/s 341,323,355,504 ) |
29/09/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಎಮ್ಮೆಯ ಮಲಮೂತ್ರದಿಂದ ವಾಸನೆ ಹೆಚ್ಚಾಗಿ ಸೊಳ್ಳೆ ಹೆಚ್ಚಾಗಿವೆ ಎಂದು ಹೇಳಿದ್ದಕ್ಕೆ ಪಕ್ಕದ ಮನೆಯ ಈರಣ್ಣನ್ನು ಪಿರ್ಯಾರದಿದಾರರ ಗಂಡನಿಗೆ ದಿನಾಂಕ; 26/09/2015 ರಂದು ರಾತ್ರಿ 8-30 ಗಂಟೆಗೆ ಮೈಲಾಪುರ ಗ್ರಾಮದಲ್ಲಿ ಪಿರ್ಯಾ ದಿ ಮನೆಯ ಮುಂದಿನ ಅಂಗಳದಲ್ಲಿ ಪಿರ್ಯಾದಿ ಗಂಡನನ್ನು ತಡೆದು ನಿಲ್ಲಿಸಿ, ದುರ್ಬಾಷೆಗಳಿಂದ ಬೈದು, ಚಪ್ಪಲಿಯಿಂದ ಹೊಡೆದು ನೋವು ಪಡಿಸಿ, ಪಿರ್ಯಾನದಿಗೂ ದಬ್ಬಾಡಿದ್ದಾಗಿ ಆರೋಪಿ ಈರಣ್ಣನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ದೂರು ಪಡೆದು ಠಾಣಾ ಗುನ್ನೆ ನಂಬರ್ 96/2015 ಕಲಂ 341-323-355-504 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿದೆ. | |||||||||||||||
ಮಂಗಳವಾರ, ಸೆಪ್ಟೆಂಬರ್ 29, 2015
PRESS NOTE OF 29/09/2015
ಸೋಮವಾರ, ಸೆಪ್ಟೆಂಬರ್ 28, 2015
PRESS NOTE OF 28/09/2015
Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0408/2015 (CODE OF CRIMINAL PROCEDURE, 1973 U/s 110(E)(G) ) |
28/09/2015 | Under Investigation | |||||||||||||
CrPC - Security For Good Behaviour (Sec 110) | ||||||||||||||||
Brief Facts : | ದಿನಾಂಕ 28-9-2015 ರಂದು ಮದ್ಯಾಹ್ನ ನಾನು ಠಾಣೆಯ
ಸಿಬ್ಬಂದಿಯವರಾದ ಹೆಚ್.ಸಿ. 390 ರವರೊಂದಿಗೆ ಇಲಾಖೆ ಜೀಪ್ ನಂಬರ್ ಕೆ.ಎ-34ಜಿ-303 ರಲ್ಲಿ
ಚಾಲಕ ಎಪಿಸಿ 89 ರವರೊಂದಿಗೆ ಗಸ್ತು ಮಾಡುತ್ತಾ ಮದ್ಯಾಹ್ನ 12-30 ಗಂಟೆ ಸಮಯಕ್ಕೆ ಬೆಂಗಳೂರು
ರಸ್ತೆ ಗುಗ್ಗರಹಟ್ಟಿ ಬಸ್ ಸ್ಟಾಂಡ್ ಮುಂದುಗಡೆ ಹೋದಾಗ ಜನರು ಗುಂಪಾಗಿ ನಿಂತಿದ್ದು ನೋಡಿ ನಾನು
ಜೀಪ್ ನಿಲ್ಲಿಸಿ ಸಿಬ್ಬಂದಿಯವರೊಂದಿಗೆ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು
ಸಾರ್ವಜನಿಕರಿಗೆ ಉದ್ದೇಶಿಸಿ ಮಟಕಾ ಜೂಜಾಟ ಆಡಿರಿ ಒಂದು ರೂಪಾಯಿಗೆ ನೂರು ರೂಪಾಯಿ ಬರುತ್ತದೆ.
ಮಟಕಾ ಜೂಜಾಟ ಅಡಿರಿ ಸಾಹುಕಾರರು ಅಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ
ಮಟಕಾ ಜೂಜಾಟದ ದುಷ್ಟಟಗಳಿಗೆ ಬಿಳುವಂತೆ ಪ್ರಚೋದನೆ ಮಾಡುತ್ತಿದ್ದು, ಜನರಲ್ಲಿ ಮಟಕಾ ಜೂಜಾಟ
ಅಡುವ ಆಸೆ ಹುಟ್ಟಿಸುತ್ತಿದ್ದು ಕಂಡು ಬಂದಿತು. ಈ ವ್ಯಕ್ತಿಯನ್ನು ಹಿಗೇಯೇ ಬಿಟ್ಟಲ್ಲಿ ಇತನು
ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಇತನನ್ನು ಹಿಡಿದುಕೊಂಡು
ಇತನ ಹೆಸರು ವಿಚಾರಿಸಲು ಬಾಲಕೃಷ್ಣ @ ಕೊಂಡಯ್ಯ ತಂದೆ ನಾಗಪ್ಪ, ವ: 48 ವರ್ಷ, ಕೊರಚರಜಾತಿ,
ಕೂಲಿಕೆಲಸ, ವಾಸ: ಹುಲಿಗೆಮ್ಮ ಗುಡಿಹತ್ತಿರ, ವೆಂಕಟಮ್ಮಕಾಲೋನಿ, ಗುಗ್ಗರಹಟ್ಟಿ, ಬಳ್ಳಾರಿ.
ಅಂತಾ ತಿಳಿಸಿದನು. ಇತನು ಠಾಣೆಯ ಈ ಕೆಳಕಂಡ ಮಟಕಾ ಜೂಜಾಟದ ಪ್ರಕರಣಗಳಲ್ಲಿ
ಭಾಗಿಯಾಗಿರುತ್ತಾನೆ. 1]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 95/2012 ಕಲಂ: 78 ಕ್ಲಾಸ್
[3] ಕೆ.ಪಿ. ಅಕ್ಟ್ 2]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 255/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 3]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 300/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 396/2013 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 5]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 24/2014 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್6]. ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 10/2015 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ಇತನನ್ನು ಹಿಗೆಯೇ ಬಿಟ್ಟಲ್ಲಿ ಸಾರ್ವಜನಿಕರಿಗೆ ದುಷ್ಟಟಗಳಿಗೆ ಬಿಳುವಂತೆ ಮಾಡಿ, ಸಾರ್ವಜನಿಕರು ಸಂಜ್ಞೆಯ ಅಪರಾದಗಳಲ್ಲಿ ತೊಡಗುವಂತೆ ಮಾಡಿ ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಈತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಮದ್ಯಾಹ್ನ 1-00 ಗಂಟೆಗೆ ಬಂದು ಈತನ ಮೇಲೆ ಠಾಣೆ ಗುನ್ನೆ ನಂ: 408/2015 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ. |
|||||||||||||||
Brucepet PS | ||||||||||||||||
2 | Cr.No:0189/2015 (IPC 1860 U/s 379 ) |
28/09/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ದಿನಾಂಕ:29/08/2015 ರಂದು ಸಂಜೆ 7.45 ಗಂಟೆಯಿಂದ ರಾತ್ರಿ 8.00 ಗಂಟೆ ಮದ್ಯಾವದಿಯಲ್ಲಿ ಬಳ್ಳಾರಿ ನಗರದ ಮೀನಾಕ್ಷಿ ಸರ್ಕಲ್ ಹತ್ತಿರದ ಶಿವಲೀಲಾ ಹೋಟೆಲ್ ಎದರುಗಡೆ ಇರುವ ಹರಿಯಾಣ ಹ್ಯಾಂಡ್ ಲೂಮ್ಸ್ ಮುಂದುಗಡೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಫಿರ್ಯಾದಿದಾರರ ಕಪ್ಪು ಬಣ್ಣದ ಹಿರೋ ಸ್ಪೆಂಡರ್ ಪ್ಲಸ್ ಮೋಟರ್ ಸೈಕಲ್ ನಂ.ಕೆಎ34-ಈಬಿ-8624 ಚಾಸಿ ನಂ. MBLHA10AMDHK67264 Engine No.HA10EJDHK48833, ಮಾಡಲ್ 2013, ಇದರ ಅಂದಾಜು ಬೆಲೆ ರೂ.37,000/- ಗಳ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಲು ಇದ್ದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ. | |||||||||||||||
Sandur PS | ||||||||||||||||
3 | Cr.No:0157/2015 (IPC 1860 U/s 379 ) |
28/09/2015 | Under Investigation | |||||||||||||
THEFT - Of Automobiles - Of Two Wheelers | ||||||||||||||||
Brief Facts : | ದಿನಾಂಕ
28.9.2015 ರಂದು ಪಿರ್ಯಾದುದಾರರಾದ ರಾಜು H.B.ತಂದೆ ಬಸವನ ಗೌಡ H.B.ವಃ27 ವರ್ಷ,
ಲಿಂಗಾಯತರರು ರಿಲಾಯನ್ಸ್ ಆಫೀಸ್ನಲ್ಲಿ ಕೆಲಸ ವಾಸಃ- 8 ನೇ ವಾರ್ಡ ಮೇನ್ ಬಜಾರ್ ವೀರಶೈವ
ಕಲ್ಯಾಣ ಮಂಟಪದ ಬಳಿ ಸಂಡೂರು. ಸ್ವಂತ ಊರು ಃ-
ಊರಮ್ಮ ಗುಡಿ ಬಳಿ ತಂಬ್ರಳ್ಳಿ H.B.ಹಳ್ಳಿ.[ತಾ] ರವರು ಕೊಟ್ಟ ದೂರು ಏನೆಂದರೆ ನಾನು 2015 ಫೆಬ್ರವರಿ ತಿಂಗಳಲ್ಲಿ ಹೊಸಪೇಟೆಯಲ್ಲಿ ಒಂದು ಹೀರೊ ಸ್ಪ್ಲೆಂಡರ್ ಪ್ರೊ ಮೋಟಾರ್ ಸೈಕಲ್ ನಂಬರ್ K.A.35-EB 4839 ಖರೀದಿ ಮಾಡಿರುತ್ತೇನೆ.ದಿನಾಂಕ 18.09.2015 ರಾತ್ರಿ ನಾನು ದಿನನಿತ್ಯದಂತೆ ನನ್ನ HERO -SPLENDR- PRO ಮೋಟಾರ್ ಸೈಕಲ್ ನಂಬರ್ K.A.35-EB4839 ರನ್ನು ನಮ್ಮ ಮನೆಯ ಮುಂದುಗಡೆ ನಿಲ್ಲಿಸಿ ಅದರ ಹ್ಯಾಂಡ್ಲಾಕ್ ಮಾಡಿ ನಂತರ ನಮ್ಮ ಮನೆಯಲ್ಲಿ ಊಟ ಮಾಡಿ ನಂತರ ವೀರಶೈವ ಕಲ್ಯಾಣ ಮಂಟ ಪಕ್ಕೆ ಗಣೇಶ ಹಬ್ಬದ ಪ್ರಯುಕ್ತ ನೋಡಲು ಹೋಗಿ ನಂತರ ವಾಪಾಸ್ಸು ರಾತ್ರಿ 11-30 ಗಂಟೆಗೆ ವಾಪಾಸ್ಸು ಮನೆಗೆ ಬಂದು ಮಲಗುವ ಮುಂಚೆ ಮೋಟಾರ್ ಸೈಕಲ್ ಹ್ಯಾಂಡ್ಲಾಕ್ನ್ನು ಚೆಕ್ ಮಾಡಿಕೊಂಡು ಮನೆಯಲ್ಲಿ ಒಳಗೆ |
|||||||||||||||
ಮಲಗಿಕೊಂಡೆನು.ನಂತರ ಮರುದಿನ ದಿನಾಂಕ 19/09/2015 ರಂದು ಬೆಳಿಗ್ಗೆ 8-00 ಗಂಟೆಗೆ ಎದ್ದು ನೋಡ ಲಾಗಿ ಮನೆಯ ಮುಂದೆ ನಿಲ್ಲಿಸಿ ಬೀಗ ಹಾಕಿದ್ದ ನನ್ನ ಬೈಕ್ ನೋಡಲಾಗಿ ಇರಲಿಲ್ಲಅಲ್ಲಿ ಅಕ್ಕಪಕ್ಕದಲ್ಲಿ ಹುಡುಕಾಡಲಾಗಿ ಇರಲಿಲ್ಲ.ಬೈಕ್ನ್ನು ಯಾರೋ ಕಳ್ಳರು ಮಾಡುವ ಉದ್ದೇಶದಿಂದ ದಿನಾಂಕ 18.09.2015 ರಂದು ರಾತ್ರಿ 11=30 ಗಂಟೆಯಿಂದ ದಿನಾಂಕ 19.09.2015 ಬೆಳಿಗ್ಗೆ 08-00 ಗಂಟೆಯ ಮದ್ಯದ ಅವಧಿಯಲ್ಲಿ ಕಳವು ಮಾಡಿ ಕೊಂಡು ಹೋಗಿರುತ್ತಾರೆ.ಕಳುವಾದ ಮೋಟಾರ್ ಸೈಕಲ್ನ್ನು ಬಳ್ಳಾರಿ, ಹೊಸಪೇಟೆ,ಕೂಡ್ಲಿಗಿ. ಹಾಗು ಇತರೆ ಕಡೆಗಳಿಗೆಲ್ಲಾ ಹೋಗಿ ಇಲ್ಲಿಯವರೆವಿಗೂ ಹುಡುಕಾಡಿದ್ದು ಸಿಗದೇ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಕಳುವಾದ ಮೇಲ್ಕಂಡ ನನ್ನ ಮೋಟಾರ್ ಸೈಕಲ್ ಮತ್ತು ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ಕಳುವಾದ ಮೋಟಾರ್ ಸೈಕಲ್ನ ವಿವರಗಳು[1] ನೊಂದಣಿ ಸಂಖ್ಯೆಃ- K.A.35-EB4839 [2]ಚಾಸಿ ನಂಬರ್ MB LHA10BFFHA82822 [3]ಇಂಜೀನ್ ನಂಬರ್ HA10ERFHA18768 [4]ಬಣ್ಣ ಕಪ್ಪುಬಣ್ಣ [5] ಮಾದರಿ ಃ-HERO SPLENDOR.PRO [6] ವಾಹನದ ಅಂದಾಜು ಮೊತ್ತ ಃ-35000/-ರೂಗಳು.ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. | ||||||||||||||||
Thoranagal PS | ||||||||||||||||
4 | Cr.No:0148/2015 (INDIAN MOTOR VEHICLES ACT, 1988 U/s 192(A) ; IPC 1860 U/s 279 ) |
28/09/2015 | Under Investigation | |||||||||||||
NEGLIGENT ACT - Other - Related | ||||||||||||||||
Brief Facts : | ಪೊಲೀಸ್ ಠಾಣೆಯ ಎ.ಎಸ್. ಐ ಕೃಷ್ಣಪ್ಪ ಆದ ನಾನು ಮಾನ್ಯ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:28-09-2015ರಂದು ಬೆಳಗ್ಗೆ 8.00ಗಂಟೆ ಸಮಯದಲ್ಲಿ ತೋರಣಗಲ್ಲು ಗ್ರಾಮದಲ್ಲಿ ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದಿದ್ದು, ನಂತರ ಪಿಸಿ 232 ರವರ ಮೂಖಾಂತರ ಪಂಚರುಗಳನ್ನು ಠಾಣೆಗೆ ಬರಮಾಡಿಕೊಂಡು, ಅವರಿಗೆ ವಿಷಯವನ್ನು ತಿಳಿಸಿ, ಪಂಚರಾಗಿ ಸಹಕರಿಸಲು ಕೋರಿದ ಮೇರೆಗೆ ಅವರುಗಳು ಒಪ್ಪಿದ ಮೇರೆಗೆ, ಅವರನ್ನು ಮತ್ತು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಪಿಸಿ 232, 1067, 676 ಎ.ಪಿಸಿ 251 ರವರನ್ನು ತಮ್ಮ ಇಲಾಖಾ ಜೀಪ್ ನಂ-ಕೆಎ-34 ಜಿ-488ನೇದ್ದರಲ್ಲಿ ತೋರಣಗಲ್ಲು ಗ್ರಾಮದ ಬೈಪಾಸ್ ರಸ್ತೆಯ ಬಳಿಗೆ ಈ ದಿನ ಬೆಳಗ್ಗೆ 8.30ಗಂಟೆಗೆ ಹೋಗಿ ನೋಡಲಾಗಿ, ತೋರಣಗಲ್ಲು ಗ್ರಾಮದ ಕಡೆಯಿಂದ ಸರಕು ಸಾಗಣೆಮಾಡುವ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬರುತ್ತಿದ್ದ ವಾಹನವನ್ನು, ನಾನು ಮತ್ತು ಸಿಬ್ಬಂದಿಯವರು ಪಂಚರುಗಳ ಸಮಕ್ಷಮ ಒಂದೊಂದು ವಾಹನಗಳನ್ನು ನಿಲ್ಲಿಸಿ, ಅವುಗಳನ್ನು ಪರಿಶೀಲಿಸಿ ನೋಡಲಾಗಿ 1) ನಾಲ್ಕು ಚಕ್ರದ ಬಿಳಿ ಬಣ್ಣದ ಬೂಲೇರೋ ಮ್ಯಾಕ್ಸಿ ಟ್ರಕ್ ನಂ:ಕೆಎ-35 ಬಿ-4821 ನೇದ್ದನ್ನು ನೋಡಲಾಗಿ ಸದರಿ ವಾಹನದಲ್ಲಿದ್ದ 15 ಜನ ಪ್ರಯಾಣಿಕರಿದ್ದು, ಪೊಲೀಸರು ವಾಹನವನ್ನು ನಿಲ್ಲಿಸಿದ ತಕ್ಷಣ ಎಲ್ಲರೂ ಇಳಿದು ಹೋದರು, ನಂತರ ವಾಹನದ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಉದ್ದಾನಪ್ಪ ತಂದೆ ಪೆನ್ನಪ್ಪ 22ವರ್ಷ, ನಾಯಕರ ಜನಾಂಗ, ಡ್ರೈವರ್, ಸಾ:ಕಾಕುಬಾಳು ಗ್ರಾಮ, ಹೊಸಪೇಟೆ (ತಾ) ಬಳ್ಳಾರಿ (ಜಿ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ನಂತರ ಬಂದ 2) ನಾಲ್ಕು ಚಕ್ರದ ಆಶ್ ಕಲರ್ ನ ಟಾಟಾ ಕಂಪನಿಯ ಟಾಟಾ ಎಸ್ ನಂ:ಕೆಎ-34 ಎ-2422 ನೇದ್ದನ್ನು ನೋಡಲಾಗಿ ಸದರಿ ವಾಹನದಲ್ಲಿದ್ದ 14ಜನ ಜನರಿದ್ದು, ಪೊಲೀಸರು ವಾಹನವನ್ನು ನಿಲ್ಲಿಸಿದ ತಕ್ಷಣ ಎಲ್ಲರೂ ಇಳಿದು ಹೋದರು, ನಂತರ ವಾಹನದ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಕೆ ವಜ್ರೇಶ ತಂದೆ ಮಲ್ಲಪ್ಪ 25ವರ್ಷ, ಡ್ರೈವರ್ ಕೆಲಸ, ಸಾ- ಕಾಕುಬಾಳು ಗ್ರಾಮ, ಹೊಸಪೇಟೆ (ತಾ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ತಿಳಿಸಿದನು. ನಂತರ ಬಂದ 3) ಕೆಂಪು ಬಣ್ಣದ ಒಂದು ಟಾಟಾ ಕಂಪನಿಯ ನಾಲ್ಕು ಚಕ್ರದ ಗೂಡ್ಸ್ ಆಟೋ ನಂ:ಕೆಎ-35 ಎ-8620 ಬಂದಿದ್ದು, ಸದರಿ ವಾಹನವನ್ನು ಪೊಲೀಸರು ನಿಲ್ಲಿಸಿದ ತಕ್ಷಣ ಅದರಲ್ಲಿದ್ದ ನಾಲ್ಕು ಜನ ವಾಹನವನ್ನು ಇಳಿದು ತಮ್ಮ ಕೆಲಸಗಳಿಗೆ ಹೋದರು, ನಂತರ ಸದರಿ ವಾಹನದ ಡ್ರೈವರ್ ಅನ್ನು ವಿಚಾರಿಸಲಾಗಿ ತನ್ನ ಹೆಸರು ಸದ್ದಾಂ ಹುಸೇನ್ ತಂದೆ ನಿಜಾಮುದ್ದೀನ್ 18ವರ್ಷ, ಡ್ರೈವರ್ ಕೆಲಸ, ಸಾ:ಎಲ್&ಟಿ ಕಾಲೋನಿ, ಜಿಂದಾಲ್ ಕಾರ್ಖಾನೆ, ತೋರಣಗಲ್ಲು (ಗ್ರಾ) ಸಂಡೂರು (ತಾ) ಸ್ವಂತ ವಿಳಾಸ:ಚರಾಗ (ಗ್ರಾ) ರಾಮಚಂದ್ರಪು (ಪೊ) ಬಲರಾಮಪುರ (ಜಿ) ಛತ್ತಿಸ್ ಘಡ್ (ರಾ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ತದನಂತರ ಬಂದ 4) ನಾಲ್ಕು ಚಕ್ರದ ಸಿಲ್ವರ್ ಕಲರ್ ನ ಟಾಟಾ ಸೂಪರ್ ಎಸ್ ನಂ:ಕೆಎ-35 ಬಿ-4246 ನೇದ್ದಾಗಿದ್ದು, ಪೊಲೀಸರು ನಿಲ್ಲಿಸಿದ ತಕ್ಷಣ ಅದರಲ್ಲಿದ್ದ ಹದಿನಾಲ್ಕು ಜನ ವಾಹನವನ್ನು ಇಳಿದು ತಮ್ಮ ಕೆಲಸಗಳಿಗೆ ಹೋದರು, ನಂತರ ಅದರಲ್ಲಿದ್ದ ಡ್ರೈವರ್ ರವರನ್ನು ವಿಚಾರಿಸಲಾಗಿ ತಮ್ಮ ಹೆಸರು ಕಮಲೇಶ್ ಶರ್ಮ ತಂದೆ ಲಲನ್ ಶರ್ಮ 36ವರ್ಷ, 36ವರ್ಷ , ಡ್ರೈವರ್ ಕೆಲಸ, ಹಾಲಿ ವಾಸ:ಡಾ.ಬಸವರಾಜ ರವರ ಮನೆ ಹತ್ತಿರ, 1ನೇ ವಾರ್ಡ್, ತೋರಣಗಲ್ಲು ಗ್ರಾಮ, ಸಂಡೂರು (ತಾ) ಸ್ವಂತ ವಿಳಾಸ- ಮೇಘೌಲಖೌಡ್ (ಗ್ರಾ) ನಿಚಲಾಲ್ (ಪೊ) ಮಹರಾಜ ಗಂಜ್ (ಜಿ) ಉತ್ತರಪ್ರದೇಶ (ರಾ) ಎಂದು ತಿಳಿಸಿದನು. ನಂತರ ಮತ್ತೊಂದು 5) ನಾಲ್ಕು ಚಕ್ರದ ಒಂದು ಬಿಳಿ ಬಣ್ಣದ ಮಹೇಂದ್ರ ಮಾಕ್ಸ್ ವಾಹನ ನಂ-ಕೆಎ-35 ಬಿ-1625 ನೇದ್ದಾಗಿದ್ದು , ಇದರಲ್ಲಿ ನಾಲ್ಕುಜನರಿದ್ದು , ಪೊಲೀಸರು ವಾಹವನ್ನು ನಿಲ್ಲಿಸಿದ ತಕ್ಷಣ ಇಳಿದು ಹೋದರು. ನಂತರ ವಾಹನದ ಡ್ರೈವರ್ ನನ್ನು ವಿಚಾರಿಸಲಾಗಿ ತನ್ನ ಹೆಸರು ಎರ್ರಿಸ್ವಾಮಿ ತಂದೆ ಹುಲುಗಪ್ಪ 25ವರ್ಷ, ನಾಯಕರ ಜನಾಂಗ, ಸ್ವಂತ ಕುರೆಕುಪ್ಪ (ಗ್ರಾ) ಸಂಡೂರು (ತಾ) ಎಂದು ತಿಳಿಸಿ, ತಾನು ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ನಂತರ 6) ಬಳಿ ಬಣ್ಣದ ನಾಲ್ಕು ಚಕ್ರದ ಟಾಟಾ ಎಸ್ ಕಂಪನಿಯ ನಂ-ಕೆಎ-34 ಎ-7896 ನೇದ್ದಾಗಿದ್ದು, ಇದರಲ್ಲಿ 12ಜನರಿದ್ದು, ಪೊಲೀಸರು ವಾಹನವನ್ನು ನಿಲ್ಲಿಸುತ್ತಿದ್ದಂತೆ ಇಳಿದು ಹೋದರು. ನಂತರ ಡ್ರೈವರ್ ನನ್ನು ವಿಚಾರಿಸಲಾಗಿ ತನ್ನ ಹೆಸರು ಮಂಜುನಾಥ ಡಿ ತಂದೆ ಎರ್ರಿಸ್ವಾಮಿ 25ವರ್ಷ, ಕುರುಬರು ಜನಾಂಗ, ಸಾ-ಹೆಚ್.ಎಲ್.ಸಿ ಕಾಲೋನಿ, ಕುಡುತಿನಿ ಪಟ್ಟಣ, ಬಳ್ಳಾರಿ (ಜಿ) ಎಂದು ತಿಳಿಸಿ, ಜನರನ್ನು ಹತ್ತಿಸಿಕೊಂಡು ಜಿಂದಾಲ್ ಕಾರ್ಖಾನೆಯ ಗೇಟ್ ಹತ್ತಿರ ಬಿಡಲು ಹೋಗುತ್ತಿರುವುದಾಗಿ ತಿಳಿಸಿದನು. ನಂತರ 7)ಒಂದು ಬಿಳಿ ಬಣ್ಣದ ಟಾಟಾ ಜೀಪ್ ವಾಹನ ನಂ-ಕೆಎ-34 ಎ-7060ನೇದ್ದಾಗಿದ್ದು, ಇದರಲ್ಲಿ 3 ಜನರಿದ್ದು ಪೊಲೀಸರು ವಾಹನವನ್ನು ನಿಲ್ಲಿಸಿದ ತಕ್ಷಣ ಅದರಲ್ಲಿ ಜನರು ಇಳಿದು ಹೋದರು, ನಂತರ ಡ್ರೈವರ್ ನನ್ನು ವಿಚಾರಿಸಲಾಗಿ ತನ್ನ ಹೆಸರು ಡಿ ಚಂದ್ರಶೇಖರ್ ತಂದೆ ದೊಡ್ಡ ಎರ್ರಿಸ್ವಾಮಿ, 34ವರ್ಷ, ಕುರುಬರು ಜನಾಂಗ, ಸಾ-ರ2, ವಾರ್ಡ್ ನಂ-2 ಏಳು ಬೆಂಚೆ (ಗ್ರಾ) ಬಳ್ಳಾರಿ (ತಾ) ಎಂದು ತಿಳಿಸಿದನು. ನಂತರ ವಾಹನದಲ್ಲಿದ್ದ ಜನರನ್ನು ಜಿಂದಾಲ್ ಕಾರ್ಖಾನೆಯ ಹತ್ತಿರ ಗೇಟ್ ಹತ್ತಿರ ಬಿಡಲುಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಸದರಿ ಮೇಲ್ಕಂಡ 7 ವಾಹನಗಳನ್ನು ಪೊಲೀಸರು ಸರಕು ಸಾಗಾಣಿಕೆ ಮಾಡುವ ವಾಹನದಲ್ಲಿ ಪರವಾನಿಗೆ ಉಲ್ಲಂಘಿಸಿ, ಜನರನ್ನು ಸಾಗಾಣಿಕೆ ಮಾಡುತ್ತಿದ್ದರಿಂದ ಮುಂದಿನ ಕ್ರಮಕ್ಕಾಗಿ ತಮ್ಮ ವಶಕ್ಕೆ ಸ್ಥಳದಲ್ಲಿ ಪಡೆದುಕೊಂಡು, ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನಾನು ಸರ್ಕಾರದ ಪರವಾಗಿ ಮೇಲ್ಕಂಡ ಆರೋಪಿಗಳ ವಿರುದ್ದ ಈ ದಿನ ದಿನಾಂಕ-28-09-2015ರಂದು ಬೆಳಗ್ಗೆ 10.15ಗಂಟೆಗೆ ಠಾಣಾ ಗುನ್ನೆ ನಂ-149/2015 ಕಲಂ 279 ಐಪಿಸಿ ಮತ್ತು 192(ಎ) ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ, ಮಾನ್ಯ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದೆ. | |||||||||||||||
ಗುರುವಾರ, ಸೆಪ್ಟೆಂಬರ್ 24, 2015
PRESS NOTE OF 24/09/2015
Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0077/2015 (CODE OF CRIMINAL PROCEDURE, 1973 U/s 109,41 ) |
24/09/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ದಿನಾಂಕ:24/09/2015 ರಂದು ಬೆಳಿಗ್ಗೆ 10-00 ಗಂಟೆಗೆ ಕಾಕರ್ಲತೋಟ ಹೊರವಲಯದ ಶ್ರೀ ಸಾಯಿ ಕಾಲೋನಿಯ ಉಮೇಶ ರವರ ಮನೆಯ ಮುಂದೆ ಇಬ್ಬರು ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಡುತ್ತಿದ್ದು ಸಮವಸ್ತದಲ್ಲಿದ್ದ ನಮ್ಮನ್ನು ನೋಡಿ ಅವಿತುಕೊಳ್ಳಲು ನಂತರ ಓಡಿ ಹೋಗಲು ಯತ್ನಿಸಿದವರನ್ನು ಬೆನ್ನಟ್ಟಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ಉತ್ತರ ನೀಡಲು ತಡವರಿಸಿದ್ದು ನಂತರ ಮತ್ತೆ ಮತ್ತೆ ವಿಚಾರಿಸಲು ಆರೋಪಿತರು ಆ ವೇಳೆಯಲ್ಲಿ ಆ ಸ್ಥಳದಲ್ಲಿದ್ದ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಇವರುಗಳನ್ನು ಹೀಗೇಯೇ ಬಿಟ್ಟರೆ ಯಾವುದಾದರು ಕಳುವು ವಗೈರೆಯಂತಹ ಸಂಜ್ಞೆಯ ಅಪರಾಧಗಳನ್ನು ಮಾಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
Kudligi PS | ||||||||||||||||
2 | Cr.No:0163/2015 (IPC 1860 U/s 448,504,323,506(2) ; KARNATAKA MONEY LENDERS ACT 1961 U/s 38,39 ; KARNATAKA PROHIBITION OF CHARGING EXORBITANT INTEREST ACT, 2004 U/s 3,4 ) |
24/09/2015 | Under Investigation | |||||||||||||
CRIMINAL TRESPASS - House | ||||||||||||||||
Brief Facts : | ಈ ದಿನ ದಿನಾಂಕ: ೨೪/೦೯/೨೦೧೫ ರಂದು ಮದ್ಯಾಹ್ನ ೧-೦೦ ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಮಹಾಂತೇಶ್ ತಂದೆ ಕೊಟ್ರೇಶಪ್ಪ, ೨೭ ವರ್ಷ, ನೇವಾರ ಜನಾಂಗ, ಕೂಲಿ ಕೆಲಸ, ವಾಸ ಕಣಿವಿನಾಯಕನಹಳ್ಳಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತಮ್ಮ ಗ್ರಾಮದ ವೆಂಕಟೇಶ್ ತಂದೆ ಚೋಳಪ್ಪ ಈತನಿಗೆ ಹಾಗೂ ತನಗೆ ಹಣಕೊಡುವ ವಿಚಾರವಾಗಿ ವೈಷಮ್ಯ ಇದ್ದು. ದಿನಾಂಕ ೨೨/೦೯/೨೦೧೫ ರಂದು ಬೆಳಿಗ್ಗೆ ೮-೦೦ ಗಂಟೆಯ ಸುಮಾರಿಗೆ ತಾನು ಕಣಿವಿನಾಯಕನಹಳ್ಳಿ ಗ್ರಾಮದ ನಮ್ಮ ಮನೆಯಲ್ಲಿರುವಾಗ್ಗೆ ವೆಂಕಟೇಶನು ಏಕಾಏಕಿ ತಮ್ಮ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಮಾಡಿ ಆತನು ತನಗೆ ನಾನು ಕೊಟ್ಟ ಹಣವನ್ನು ಕೊಡು ಅಂತ ಹೇಳಿದ್ದು ಅದಕ್ಕೆ ತಾನು ಎಷ್ಟು ಅಂತ ಕೇಳಿದ್ದು ಆತನು ಅಸಲು ಬಡ್ಡಿ ಎಲ್ಲಾ ಸೇರಿ ೭೦೦೦೦/- ರೂ ಹಣ ಕೊಡು ಅಂತ ಹೇಳಿದ್ದು ತಾನು ಈ ಸಮಯದಲ್ಲಿ ನನ್ನ ಬಳಿ ಹಣ ಇಲ್ಲಾ ಕಾರಣ ಮುಂದೆ ಕೊಡುತ್ತೇನೆಂದು ಹೇಳಿದ್ದಕ್ಕೆ. ಆತನು ಇಲ್ಲ ನನಗೆ ಈಗಲೇ ಬೇಕಲೇ ಸೂಳೆ ಮಗನೆ ನೀನು ಏನು ಮಾಡಿ ಕಟ್ಟುತ್ತೀಯೋ ಗೋತ್ತಿಲ್ಲ ನನಗೆ ಹಣ ಕೊಡು ಅಂತ ಅಂದಿದ್ದು ಅದಕ್ಕೆ ತಾನು ದುಡಿದು ಕಟ್ಟುತ್ತೇನೆ ಈಗಲೇ ಅಂದರೆ ಆಗುವುದಿಲ್ಲ ಅಂತಾ ಹೇಳಿದ್ದು, ಅದಕ್ಕೆ ಆತನು ತಾನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕಬ್ಬಿಣದ ಮೊಚ್ಚನ್ನು ತೋರಿಸಿ ಏ ಸೂಳೇಮಗನೇ ನೀನು ಈ ರೀತಿ ಕೇಳಿದರೆ ಕೊಡುವುದಿಲ್ಲ ನಿನ್ನನ್ನು ಇಲ್ಲಿಯೇ ಮುಗಿಸಿಬಿಡುತ್ತೇನೆ ಅಂತಾ ಅಂದು ತನ್ನ ಕುತ್ತಿಗೆಗೆ ಕೈ ಹಾಕಿ ಹೊಡೆಯಲು ಬಂದಾಗ ಇದನ್ನು ನೋಡಿದ ಅಕ್ಕಪಕ್ಕದ ಮನೆಯವರಾದ ವಡ್ಡರಯಮುನಪ್ಪ ತಂದೆ ತಿಪ್ಪಣ್ಣ, ಕೊಟ್ರಣ್ಣ ತಂದೆ ಹನುಮಂತಪ್ಪ, ಮಾರುತೆಪ್ಪ ತಂದೆ ಹನುಮಂತಪ್ಪ, ಈಶ್ವರಪ್ಪ ತಂದೆ ರಾಮಪ್ಪ ಮತ್ತು ತಮ್ಮ ತಾಯಿ ಶಾಂತಮ್ಮ ಹಾಗೂ ತಮ್ಮ ದೊಡ್ಡಮ್ಮ ಈರಮ್ಮ ರವರುಗಳು ಬಿಡಿಸಿಕೊಳ್ಳಲು ಬಂದಾಗ ವೆಂಕಟೇಶನು ಫಿರ್ಯಾದಿದಾರರ ತಾಯಿ ಮತ್ತು ತಮ್ಮ ದೊಡ್ಡಮ್ಮ ರವರಿಗೂ ಸಹ ದುರ್ಭಾಷೆಗಳಿಂದ ಬೈದಾಡಿ ಅವರಿಗೂ ಸಹ ತನ್ನ ಕೈಯಲಿದ್ದ ಮೊಚ್ಚನ್ನು ತೋರಿಸಿ ಇದೇ ಮೊಚ್ಚಿನಿಂದ ನಿಮ್ಮನ್ನೆಲ್ಲಾ ಕೊಲೆ ಮಾಡುತ್ತೇನೆ ಅಂತಾ ಪ್ರಾಣ ಬೆದರಿಕೆಯನ್ನು ಹಾಕಿ, ತಮ್ಮನ್ನು ಹೊಡೆಯಲು ತಂದಿದ್ದ ಮೊಚ್ಚನ್ನು ಅಲ್ಲಿಯೇ ಬಿಸಾಕಿ ಹೋಗಿದ್ದು, ಈ ಬಗ್ಗೆ ಗ್ರಾಮದ ಮೇಲ್ಕಂಡ ಹಿರಿಯರು ಹಣ ಕೊಡು ತೆಗೆದುಕೊಳ್ಳುವ ವಿಚಾರವಾಗಿ ಪಂಚಾಯ್ತಿ ಮಾಡಿ ಸರಿ ಮಾಡೋಣ ಅಂತಾ ಹೇಳಿದ್ದು, ಕಾರಣ ತಾವುಗಳು ಈ ಬಗ್ಗೆ ದೂರು ಕೊಡದೇ ಸುಮ್ಮನಾಗಿದ್ದು, ವೆಂಕಟೇಶನು ಈ ಬಗ್ಗೆ ಇದುವರೆಗೂ ಪಂಚಾಯ್ತಿಗೆ ಬಾರದೇ ಇದ್ದುದರಿಂದ ತಡವಾಗಿ ಬಂದು ದೂರು ಕೊಟ್ಟಿದ್ದು, ಕಾರಣ ವೆಂಕಟೇಶನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಅಂತಾ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. | |||||||||||||||
Marriyammanahalli PS | ||||||||||||||||
3 | Cr.No:0126/2015 (IPC 1860 U/s 279 ) |
24/09/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts : | ಈ ದಿನ ದಿನಾಂಕ-24/09/2015 ರಂದು ಬೆಳಿಗ್ಗೆ 10.15 ಗಂಟೆಗೆ ಪಿರ್ಯಾದಿ ಸೈಯದ್ ವಾಜೀದ್ ತಂದೆ ಅಬ್ದುಲ್ ಜಬ್ಬಾರ್ ವ.೩೭ ವರ್ಷ ಮುಸ್ಲಿಂ ಜಾತಿ ವ್ಯಾಪಾರ ವೃತ್ತಿ ವಾಸ- ರೂಜಾಬೀ ಖಾಜಾ ಕಾಲೋನಿ ಮನೆ ನಂ. ೫-೪೦೬/೧೧ಸಿ ಕಲಬುರ್ಗಿ ಇವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ- ತಮ್ಮಲ್ಲಿ ದೂರು ನೀಡುವುದೇನೆಂದರೆ ನಮ್ಮ ಸಂಬಂದಿಕರಾದ ಮಹಮ್ಮದ್ ಫಹೀಮ್ಗೆ ಕಾರ್ ಬೇಕಾಗಿದ್ದರಿಂದ ಕಾರ್ ಖರೀದಿ ಮಾಡಲು ದಾವಣಗೇರಿಯಲ್ಲಿ ನಮ್ಮ ಸ್ನೇಹಿತ ಸೈಯದ್ ಜಹೀರ್ ಇವರು ದಾವಣಗೇರಿಯಲ್ಲಿ ಇನಾವೋ ಕಾರ್ ಇದೆ ಬರ್ರಿ ವ್ಯಾಪಾರ ಮಾಡೋಣ ಎಂದಿದ್ದರಿಂದ ನಾನು ಮಹಮ್ಮದ್ ಫಹೀಮ್ ಮತ್ತು ಸಹೀರ್ ನಾವೆಲ್ಲ ಕಾರ್ ನಂ ಕೆ.ಎ.೩೨/ಎನ್.೩೪೭೨ ನೇದ್ದರಲ್ಲಿ ದಿನಾಂಕ-೨೩/೦೯/೨೦೧೫ ರಂದು ಬೆಳಗಿನ ಜಾವ ೧.೩೦ ಗಂಟೆಗೆ ಕಲಬುರ್ಗಿಯಿಂದ ಹೊರೆಟು ಬೆಳಿಗ್ಗೆ ೧೦.೦೦ ಗಂಟೆಗೆ ದಾವಣಗೇರಿ ತಲುಪಿದೆವು. ದಾವಣಗೇರಿಯಲ್ಲಿ ಇನಾವೋ ಕಾರ್ ಮಾಲಿಕ ಮಹೇಶ ಹೆಚ್.ಸಿ. ರವರು ತಮ್ಮ ಕಾರ್ ನಂ ಕೆ.ಎ ೧೭/ಎನ್.೬೪೦೮ ನೇದ್ದನ್ನು ನಮ್ಮ ಸ್ನೇಹಿತ ಸೈಯದ್ ಜಹೀರ್ ರವರ ಮಧ್ಯಸ್ಥಿಕೆಯಲ್ಲಿ ೧೨ ಲಕ್ಷ ರೂಪಾಯಿಗೆ ಕಾರ್ ಖರೀದಿ ಮಾಡಿಕೊಂಡು ನಾವು ಪುನಃ ರಾತ್ರಿ ೯ ಗಂಟೆಗೆ ದಾವಣಗೇರಿಯಿಂದ ಇನಾವೋ ಕಾರ್ ನಲ್ಲಿ ನಾನು ಮತ್ತು ಸಹೀರ್ ಇದ್ದು ನಾನು ಚಾಲನೆ ಮಾಡುತ್ತಿದ್ದೆ ನಾವು ಕಲಬುರ್ಗಿಯಿಂದ ತಂದ ಕಾರ್ನ್ನು ಮಹಮ್ಮದ್ ಫಹೀಮ್ ನಡೆಸಿಕೊಂಡು ಮುಂದೆ ಹೋಗುತ್ತಿದ್ದನು. ಈ ದಿನ ಬೆಳಗಿನ ಜಾವ ೧.೦೦ ಗಂಟೆಯ ಸುಮಾರಿಗೆ ನಾನು ಇನಾನೋ ಕಾರ್ ನಡೆಸುತ್ತಾ ಎನ್.ಹೆಚ್.೧೩ ರಸ್ತೆಯಲ್ಲಿ ಸ್ಮಯರ್ ಫ್ಯಾಕ್ಟರಿ ಹತ್ತಿರ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಹೊಸಪೇಟೆ ಕಡೆಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ದುಡುಕುತನದಿಂದ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಕಾರಿಗೆ ಬಲಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಸದರಿ ಅಪಘಾತದಿಂದಾಗಿ ನಮಗೆ ಯಾವುದೇ ಗಾಯಗಳು ಆಗಲಿಲ್ಲ. ನಮ್ಮ ಕಾರಿನ ಬಲಭಾಗವು ಸಂಪೂರ್ಣ ಜಖಂಗೊಂಡಿತು. ನಮ್ಮ ಕಾರಿಗೆ ಅಪಘಾತಪಡಿಸಿದ ಲಾರಿ ಮುಂದೆ ನಿಂತಿದ್ದು ಅದರ ನಂಬರ್ ನೋಡಲು ಟಿ.ಎನ್.೫೨/ಎಫ್.೭೫೪೫ ಇದ್ದು ಚಾಲಕನ ಹೆಸರು ಕೇಳಲು ತನ್ನ ಹೆಸರು ಫಳನೀಸ್ವಾಮಿ ವಾಸ- ಚೆನೈ ಎಂದು ತಿಳಿಸಿದನು. ಕಾರಣ ಅಪಘಾತಪಡಿಸಿದ ಲಾರಿ ನಂಬರ್ ಟಿ.ಎನ್. ೫೨/ಎಫ್. ೭೫೪೫ ನೇದ್ದರ ಚಾಲಕ ಫಳನೀಸ್ವಾಮಿ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮನವಿ. ಎಂದು ದೂರಿನ ಮೇರೆಗೆ ಗುನ್ನೆ ದಾಖಲಿಸಿದೆ. | |||||||||||||||
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)