ಗುರುವಾರ, ಅಕ್ಟೋಬರ್ 8, 2015

PRESS NOTE OF 09/10/2015

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0422/2015
(CODE OF CRIMINAL PROCEDURE, 1973 U/s 110(E)(G) )
08/10/2015 Under Investigation
CrPC - Security For Good Behaviour (Sec 110)
Brief Facts :  ಆಪಾದಿತನು  ಸಾರ್ವಜನಿಕರಿಗೆ ಉದ್ದೇಶಿಸಿ ಮಟಕಾ ಜೂಜಾಟ ಆಡಿರಿ ಒಂದು ರೂಪಾಯಿಗೆ ನೂರು ರೂಪಾಯಿ ಬರುತ್ತದೆ. ಮಟಕಾ ಜೂಜಾಟ ಅಡಿರಿ ಸಾಹುಕಾರರು ಅಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟದ ದುಷ್ಚಟಗಳಿಗೆ ಬೀಳುವಂತೆ ಪ್ರಚೋದನೆ ಮಾಡುತ್ತಿದ್ದು, ಜನರಲ್ಲಿ ಮಟಕಾ ಜೂಜಾಟ ಅಡುವ ಆಸೆ ಹುಟ್ಟಿಸುತ್ತಿದ್ದು ಈ ವ್ಯಕ್ತಿಯನ್ನು ಹಿಗೇಯೇ ಬಿಟ್ಟಲ್ಲಿ ಈತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಈತನನ್ನು ಹಿಡಿದುಕೊಂಡು ಇತನ ಹೆಸರು ವಿಚಾರಿಸಲು ಸಂಗಪ್ಪ ತಂದೆ ವೆಂಕಟರಮಣಪ್ಪ ವ: 42 ವರ್ಷ, ಚಟ್ಟ ಬಲೀಜ ಜನಾಂಗ, ಬೇಲ್ದಾರ್ ಕೆಲಸ, ವಾಸ: ಪೆಟ್ರೋಲ್ ಬಂಕ್ ಹಿಂದೆ, ವಿನಾಯಕ ನಗರ, ಬಳ್ಳಾರಿ ಅಂತ ತಿಳಿಸಿದ್ದು ಈತನು ಠಾಣೆಯ ಗುನ್ನೆ ನಂ: 1] 76/2012 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 2] ಗುನ್ನೆ ನಂ: 41/2014 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 3] ಗುನ್ನೆ ನಂ: 153/2014 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 4] ಗುನ್ನೆ ನಂ: 02/2015 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನನ್ನು ಹೀಗೆಯೇ ಬಿಟ್ಟಲ್ಲಿ ಸಾರ್ವಜನಿಕರಿಗೆ ದುಷ್ಚಟಗಳಿಗೆ ಬೀಳುವಂತೆ ಮಾಡಿ, ಸಾರ್ವಜನಿಕರು ಸಂಜ್ಞೆಯ ಅಪರಾದಗಳಲ್ಲಿ ತೊಡಗುವಂತೆ ಮಾಡಿ ಏರಿಯಾದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಈತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿದೆ
2 Cr.No:0423/2015
(CODE OF CRIMINAL PROCEDURE, 1973 U/s 110(E)(G) )
08/10/2015 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕ 08-10-2015 ರಂದು ನಾನು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.-390, 245, ಸಿ.ಪಿ.ಸಿ.-141 ರವರೊಂದಿಗೆ ಇಲಾಖೆ ಜೀಪ್ ನಂ: ಕೆ.ಎ-34ಜಿ-303 ರಲ್ಲಿ ಚಾಲಕ ಎಪಿಸಿ 89 ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಲು ಠಾಣೆಯಿಂದ ಬೆಳಿಗ್ಗೆ 10-30 ಗಂಟೆಗೆ ಹೊರಟು ಗಸ್ತು ಮಾಡುತ್ತಾ ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ ಮುಂಡರಗಿ ಗ್ರಾಮದ ನಾಗಪ್ಪ ಕಟ್ಟೆ ಹತ್ತಿರ ಹೋದಾಗ ಜನರು ಗುಂಪಾಗಿ ನಿಂತಿದ್ದು ನೋಡಿ ನಾನು ಜೀಪ್ ನಿಲ್ಲಿಸಿ ಸಿಬ್ಬಂದಿಯವರೊಂದಿಗೆ ಹೋಗಿ ನೋಡಲು, ಅಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಉದ್ದೇಶಿಸಿ ಮಟಕಾ ಜೂಜಾಟ ಆಡಿರಿ ಒಂದು ರೂಪಾಯಿಗೆ ನೂರು ರೂಪಾಯಿ ಬರುತ್ತದೆ. ಮಟಕಾ ಜೂಜಾಟ ಅಡಿರಿ ಸಾಹುಕಾರರು ಅಗಿರಿ ಎಂದು ಜನರಲ್ಲಿ ಆಸೆ ಹುಟ್ಟಿಸುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟದ ದುಷ್ಚಟಗಳಿಗೆ ಬೀಳುವಂತೆ ಪ್ರಚೋದನೆ ಮಾಡುತ್ತಿದ್ದು, ಜನರಲ್ಲಿ ಮಟಕಾ ಜೂಜಾಟ ಅಡುವ ಆಸೆ ಹುಟ್ಟಿಸುತ್ತಿದ್ದು ಕಂಡು ಬಂದಿತು. ಈ ವ್ಯಕ್ತಿಯನ್ನು ಹಿಗೇಯೇ ಬಿಟ್ಟಲ್ಲಿ ಈತನು ಸಾರ್ವಜನಿಕರಿಗೆ ತಪ್ಪು ದಾರಿಗೆ ಎಳೆಯುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಈತನನ್ನು ಹಿಡಿದುಕೊಂಡು ಈತನ ಹೆಸರು ವಿಚಾರಿಸಲು ಎಲ್. ಶ್ರೀನಿವಾಸ @ ಸೀನಾ ತಂದೆ ವಿಠ್ಠಲ್ ರಾವ್ ವ: 40 ವರ್ಷ, ಮರಾಠಿ ಜನಾಂಗ, ಕೋಳಿ ಫಾರಂನಲ್ಲಿ ಸೂಪರ್ ವೈಜರ್ ಕೆಲಸ ವಾಸ: ಓಲ್ಡ್ ರಾಯದುಗರ್ಾ ಬಸ್ ಸ್ಟಾಪ್ ಹತ್ತಿರ, ಬಳ್ಳಾರಿ ಅಂತ ತಿಳಿಸಿದನು. ಈತನು ಠಾಣೆಯ 1] ಗುನ್ನೆ ನಂ: 38/2014 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ 2] ಬಳ್ಳಾರಿ ಗ್ರಾಮೀಣ ಠಾಣೆ ಗುನ್ನೆ ನಂ: 425/2014 ಕಲಂ: 78 ಕ್ಲಾಸ್ [3] ಕೆ.ಪಿ. ಅಕ್ಟ್ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈತನನ್ನು ಹೀಗೆಯೇ ಬಿಟ್ಟಲ್ಲಿ ಸಾರ್ವಜನಿಕರಿಗೆ ದುಷ್ಚಟಗಳಿಗೆ ಬೀಳುವಂತೆ ಮಾಡಿ, ಸಾರ್ವಜನಿಕರು ಸಂಜ್ಞೆಯ ಅಪರಾದಗಳಲ್ಲಿ ತೊಡಗುವಂತೆ ಮಾಡಿ ಏರಿಯಾದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಈತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಮದ್ಯಾಹ್ನ 12-30 ಗಂಟೆಗೆ ಬಂದು ಈತನ ಮೇಲೆ ಠಾಣೆ ಗುನ್ನೆ ನಂ: 423/2015 ಕಲಂ 110 (ಇ)&(ಜಿ) ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.
Cowlbazar PS
3 Cr.No:0295/2015
(IPC 1860 U/s 00MP )
08/10/2015 Under Investigation
MISSING PERSON - Man
Brief Facts :  ಈ ದಿನ ದಿನಾಂಕ; 08/10/2015 ರಂದು  ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಸ್.ಬಾಬುರಾವ್. ತಂದೆ ಲೇಟ್ ನಾಗೇಶ್ ರಾವ್. ವ: 63ವರ್ಷ ಮರಾಠಿ ಜನಾಂಗ. ಹೋಟೆಲ್ನಲ್ಲಿ ಕೆಲಸ.ವಾಸ: ವಾರ್ಡ ನಂ: 34 ಎಸ್.ಪಿ. ಸರ್ಕಲ್ ಹತ್ತಿರ ಮರಾಠಿಗಲ್ಲಿ ಹುಲಿಗೆಮ್ಮ ಟೆಂಪಲ್ ಹತ್ತಿರ 
ಬಳ್ಳಾರಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ನೋಡಿಲು ಸಾರಾಂಶವೆನೆಂದರೆ;  ತನ್ನ ಹಿರಿಯ ಮಗನಾದ  ಎಸ್.ನಾಗರಾಜ್ ರಾವ್ ನ ಹೆಂಡತಿ ಮಗಳು ಅದೋನಿಯಲ್ಲಿದ್ದು ಅವರನ್ನು ನೋಡಿಕೊಂಡು ಬರುವುದಾಗಿ ಹೇಳಿ ದಿನಾಂಕ; 27/08/2015 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೆ ಮತ್ತು ಪೋನ್ ಮಾಡದೇ ಹಾಗುಅದೋನಿಗೂ ಹೋಗದೆ ಎಲ್ಲೋ ಕಾಣೆಯಾಗಿರುತ್ತಾನೆ ಅವನ ಪೋನ್ ನಂಬರ್ 8884938011, 9036042104, ನ್ನೆದ್ದಕ್ಕೆ ಕರಮಾಡಿದರೆ ಸ್ವೀಚ್ಆಫ್ ಎಂದು ಬರುತ್ತಿದ್ದು.  ನಗರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ತನ್ನ ಮಗನ ಪೋಟೋ ತೋರಿಸಿ ವಿಚಾರಿಸಿದಾಗ್ಯೂ ತನ್ನ ಮಗನ ಬಗ್ಗೆ ಮಾಹಿತಿ ಸಿಗೆಲಿಲ್ಲ ಕಾರಣ ಕಾಣೆಯಾದ ತನ್ನ ಮಗ ಎಸ್. ನಾಗರಾಜ್ ರಾವ್  ನನ್ನು ಪತ್ತೆಮಾಡಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿದೆ.
Hosahalli PS
4 Cr.No:0181/2015
(IPC 1860 U/s 279,337,304(A) ; INDIAN MOTOR VEHICLES ACT, 1988 U/s 183 )
08/10/2015 Under Investigation
MOTOR VEHICLE ACCIDENTS FATAL - National Highways
Brief Facts :  ದಿನಾಂಕ:08-10-2015 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಇಬ್ರಾಹಿಂ ತಂದೆ ಲೇಟ್ ನಬೀಸಾಬ್, ವ;28ವರ್ಷ, ಮುಸ್ಲಿಂ ಜನಾಂಗ, ವ್ಯವಸಾಯ,ಸಾ: ಹುಚ್ಚವನಹಳ್ಳಿ ಗ್ರಾಮ, ಜಗಳೂರು ತಾಲೂಕು,ದಾವಣಗೆರೆ ಜಿಲ್ಲೆ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಂಶವೆನೆಂದರೆ ನಮ್ಮ ತಂದೆಗೆ ನಾವು ನಾಲ್ಕು ಜನ ಮಕ್ಕಳಿದ್ದು,1]ಷಂಷದ್ 2] ನಾನು.2] ಸನ್ನಾವುಲ್ಲಾ,4]ಅಯಿಷಾ ಅಂತಾ ಇದ್ದು,ನಮ್ಮಅಕ್ಕ ಮತ್ತು ನಮ್ಮ ತಂಗಿಗೆ ಮದುವೆಯಾಗಿದ್ದು ಅವರು ಗಂಡನ ಮನೆಯಲ್ಲಿ ವಾಸವಿರುತ್ತಾರೆ.ನನ್ನ ತಮ್ಮ ಸನ್ನಾವುಲ್ಲಾನಿಗೆ ಮದುವೆಯಾಗಿರುವುದಿಲ್ಲ , ನನ್ನ ತಮ್ಮ ಸನ್ನಾವುಲ್ಲಾ ಈತನು ನಮ್ಮ ಜೊತೆಯಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಇರುತ್ತಾನೆ. ದಿನಾಂಕ:07-10-2015 ರಂದು ಸಾಯಂಕಾಲ 04.30 ಗಂಟೆಗೆ ನಮ್ಮ ಮನೆಗೆ ತರಕಾರಿಗೆ ತರಲೆಂದು ನನ್ನ ತಮ್ಮ ಸನ್ನಾವುಲ್ಲಾನು ನಮ್ಮ ಗ್ರಾಮದ ನಹುಷಾ ಎಂಬುವರ ಮೋಟಾರ್ ಸೈಕಲ್ ನಂ:ಕೆ.ಎ-17/ಎಸ್.2544 ನೇದ್ದರಲ್ಲಿ  ನಮ್ಮ ಚಿಕ್ಕಪ್ಪನ ಮಗನಾದ ನಾಸೀರ ತಂದೆ ಹಬೀಬ್ ಖಾನ ರವರನ್ನು ಕೂಡಿಸಿಕೊಂಡು  ಹೊಸಹಳ್ಳಿಗೆ ಹೋಗಿ ಬರುತ್ತೇನೆಂದು  ನಮ್ಮ ತಾಯಿ ಮಮತಾಜ್ ಬಿಗೆ ಹೇಳಿ ಹೋಗಿರುತ್ತಾನೆ. ನಂತರ ಅದೇ ದಿನ ಸಾಯಂಕಾಲ ಸುಮಾರು 07-00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ದಾದು ತಂದೆ ದಸ್ತಗಿರ್ ಸಾಬ್ ಎಂಬುವರು ನನಗೆ ನಮ್ಮ ಮನೆಯ ಹತ್ತಿರ ಬಂದು ನಿನ್ನ ತಮ್ಮ ಹೊಸಹಳ್ಳಿಯಿಂದ ಸದರಿ ಮೋಟಾರ್ ಸೈಕಲ್ ನಂ:ಕೆ.ಎ-17/ಎಸ್.2544 ನೇದ್ದರಲ್ಲಿ ಅಲೂರು ಕ್ರಾಸ್ ಸಮೀಪ ಗೋಪಾಲ ರೆಡ್ಡಿ ಹೊಲದ ಹತ್ತಿರ ಬರುತ್ತಿರುವಾಗ  ಸದರಿ ಮೋಟಾರ್ ಸೈಕಲ್   ಸನ್ನಾವುಲ್ಲನ್ನು ನಡೆಸಿಕೊಂಡು  ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯಲ್ಲಿ ಬರುವ ಕುಣಿಯಲ್ಲಿ ಮುಂದಿನ ಚಕ್ರ ಇಳಿಸಿದ್ದರಿಂದ ಮೋಟಾರ್ ಸೈಕಲ್ ನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ತಾಯಿ ಸ್ಥಳಕ್ಕೆ ಬಂದು ನೋಡಿದಾಗ ನನ್ನ ತಮ್ಮ ಮತ್ತು ನಾಸಿರ ಖಾನ ಇಬ್ಬರು ಕೆಳಗೆ ಬಿದ್ದಿದು ನನ್ನ ತಮ್ಮ ಸನ್ನಾವುಲ್ಲಾನ ತಲೆಗೆ ಬಲವಾದ ರಕ್ತಗಾಯವಾಗಿದ್ದು  ಮತ್ತು ಬಲಗಾಲಿಗೆ ಬಲವಾದ ಪೆಟ್ಟು ಬಿದ್ದು ಎಚ್ಚರ ತಪ್ಪಿ ಬಿದ್ದಿದನು. ಅಲ್ಲೇ ಬಿದ್ದಿದ್ದ ನಾಸೀರನಿಗೆ ಎಡಗಾಲುಗೆ ರಕ್ತಗಾಯವಾಗಿ ಮತ್ತು ಎಡಪಕ್ಕೆಗೆ ಒಳಪೆಟ್ಟು ಬಿದ್ದಿದ್ದು ನಾಸೀರನಿಗೆ ಈ ಘಟನೆಯ ಬಗ್ಗೆ ಕೇಳಲು  ಸನ್ನಾವುಲ್ಲಾನು ಮೋಟಾರ್ ಸೈಕಲ್ ನೇದ್ದನ್ನು ನಡೆಸಿಕೊಂಡು ಬರುವಾಗ ರಸ್ತೆಯಲ್ಲಿರುವ ಕುಣಿಯನ್ನು ಕಾಣದೆ ಮುಂದಿನ ಚಕ್ರ ಇಳಿಸಿದ್ದರಿಂದ ಅಯಾ ತಪ್ಪಿ ಕೆಳಗೆ ಬಿದ್ದಿವು ಅಂತಾ ತಿಳಿಸಿದನು ,ನಾನು ಕೂಡಲೇ 108 ಅಂಬ್ಯುಲೇನ್ಸ್ ನಲ್ಲಿ ಗಾಯಗೊಂಡ ನನ್ನ ತಮ್ಮ  ಸನ್ನಾವುಲ್ಲಾ ಮತ್ತು ನಾಸೀರ್ ಖಾನ್ 108 ಅಂಬ್ಯುಲೇನ್ಸ ನಲ್ಲಿ ಜಗಳೂರು ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿದೆನು.  ನನ್ನ ತಮ್ಮ ಸನ್ನಾವುಲ್ಲನ್ನು ದಿನಾಂಕ:07-10-2015 ರಂದು ರಾತ್ರಿ 09-35 ಗಂಟೆಗೆ  ಚಿಕಿತ್ಸೆ ಪಲಕಾರಿಯಾಗದೆ  ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಗಾಯಗೊಂಡ ನಾಸೀರನಿಗೆ  ಇಲ್ಲಿಯವರೆಗೆ ಚಿಕಿತ್ಸೆ ಕೊಡಿಸಿ ಈ ಘಟನೆಯ ಬಗ್ಗೆ ನಮ್ಮ ಬಂದುಗಳೊಂದಿಗೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೊಟ್ಟ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.
Hospet Extention PS
5 Cr.No:0048/2015
(IPC 1860 U/s 420,170 )
08/10/2015 Under Investigation
CHEATING - CHEATING
Brief Facts :  ದಿನಾಂಕ 08/10/2015 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಿಕೃತ ದೂರು ಮಾಡಿಕೊಂಡು ಬಂದು ನೀಡಿದ ದೂರಿನ ಸಾರಾಂಶವೇನೆಂದರೆ.ಫಿರ್ಯಾದಿ ತಾನು ದಿನಾಂಕ 05/10/2015 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲಿದ್ದಾಗ ತನ್ನ  ನನ್ನ ಮೊಬೈಲ್ ನಂ.9448127635 ನೇದ್ದಕ್ಕೆ ಯಾರೋ ಒಬ್ಬ ವ್ಯಕ್ತಿಯ ಮೊಬೈಲ್ ನಂ.917808517637  ನಿಂದ ಕರೆ ಮಾಡಿ ತಾನು  ಮ್ಯಾನೇಜರ್ ಎಂದು ಹಿಂದಿಯಲ್ಲಿ ಮಾತಾನಾಡಿ ನಿಮ್ಮ ಎ.ಟಿ.ಎಂ. ಬ್ಲಾಕ್ ಆಗಿದೆ. ಅದನು ನವೀಕರಣ ಮಾಡಬೇಕಾಗಿದೆ. ನಿಮ್ಮ ಎ.ಟಿ.ಎಂ.ನಂಬರ ಮತ್ತು  ಸಿಕ್ರೇಟ್ ನಂ  ಕೊಡಲು ಕೇಳಿದನು. ಆಗ ತಾನು ತನ್ನ ಎ.ಟಿ.ಎಂ. ನಂ.4052380405904660 ಮತ್ತು ಎ.ಟಿ.ಎಂ. ಸಿಕ್ರೇಟ್ ನಂ.4639 ಅಂತ  ತಿಳಿಸಿದ್ದು  ಸಂಜೆ 5-30 ಗಂಟೆಗೆ ತನ್ನ ಮೊಬೈಲ್ ನಲ್ಲಿ ಹಣ ಬಿಡಿಸಿದ ಒಟ್ಟು 4 ಮೇಸಜ್ ಗಳು ಬಂದಿದ್ದು, ತಾನು ಅನುಮಾನಗೊಂಡು ಕೆನರಾ ಬ್ಯಾಂಕ್ ಎ.ಟಿ.ಎಂ. ಗೆ  ಸಂಜೆ 5-45 ಗಂಟೆಗೆ ಹೋಗಿ  ಮಿನಿ ಸ್ಟೇಟ್ ಮೆಂಟ್ ನ್ನು  ತೆಗೆದು ನೋಡಲು   ಅದೇ ದಿನ ಮದ್ಯಾಹ್ನ 12-15 ಗಂಟೆಗೆ ರೂ.100, 12-34 ಗಂಟೆಗೆ ರೂ.9,990/-, 12-45 ಗಂಟೆಗೆ ರೂ.9,990/- ಮತ್ತು ಮದ್ಯಾಹ್ನ 12-51 ಗಂಟೆಗೆ ರೂ.4,500/- ಒಟ್ಟು ರೂ.24.580/- ಗಳನ್ನು ಯಾರೋ ವ್ಯಕ್ತಿಯು ಅನ್ ಲೈನ್ ಮೂಲಕ ಹಣ ಡ್ರಾ ಮಾಡಿಕೊಂಡಿದ್ದು ಗೊತ್ತಾಯಿತು ನಂತರ ತಾನು ತನ್ನ ಖಾತೆಯಲ್ಲಿಯ ಹಣದ ಬಗ್ಗೆ ತಿಳಿಯಲು  ಹಣ ರೂ.1000 ಡ್ರಾ ಮಾಡಿಕೊಂಡು ನಂತರ  ತನ್ನ ಖಾತೆಯಲ್ಲಿ ಹಣ ಡ್ರಾ ಆದ ಬಗ್ಗೆ  ಬ್ಯಾಂಕಿಗೆ ಹೋಗಿ ಎ.ಟಿ.ಎಂ. ಬ್ಲಾಕ್ ಮಾಡಿಸಿರುತ್ತಾರೆ. ಯಾರೋ ವ್ಯಕ್ತಿಯು ಫಿರ್ಯಾದಿದಾರರಿಂದ ಎ.ಟಿ.ಎಂ. ನಂಬರ ಮತ್ತು ಸಿಕ್ರೇಟ್ ನಂಬರ್ ಪಡೆದುಕೊಂಡು  ಅನ್ ಲೈನ್ ನಲ್ಲಿ ಹಣ ತೆಗೆದುಕೊಂಡು  ತನಗೆ ಮೋಸ ಮಾಡಿರುತ್ತಾನೆಂದು  ಈ  ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗ ಪ್ರಕರಣ 
ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
Kurugod PS
6 Cr.No:0167/2015
(IPC 1860 U/s 504,323,324,427,34,506 )
08/10/2015 Under Investigation
CASES OF HURT - Simple Hurt
Brief Facts :  ದಿನಾಂಕ: 07/10/2015 ರಂದು ಸಂಜೆ 5:00 ಗಂಟೆಗೆ ಪಿರ್ಯಾಧಿದಾರರು ತಮ್ಮ ಬಯಲು ಜಾಗದ ಗುಡಿಸಲು ಹಾಕುತ್ತೀರಿ ಎಂದು ಆರೋಪಿತರಿಗೆ ಕೇಳಿದಾಗ ಆರೋಪಿ-01 ರವರು ಇದು ನಮ್ಮ ಜಾಗ ನಾವು ಗುಡಿಸಲು ಹಾಕುತ್ತೇವೆ ಎಂದಿದ್ದು ನಂತರ ಪಿರ್ಯಾದಿದಾರರು ಮನೆಗೆ ಬಂದು ತನ್ನ ಗಂಡ ಈರಪ್ಪನಿಗೆ ವಿಷಯ ತಿಳಿಸುತ್ತಿದ್ದಾಗ ಸಾಯಂಕಾಲ 05:30 ಗಂಟೆಗೆ ಆರೋಪಿ-01 ರಿಂದ 04 ರವರು ಕೂಡಿ ಪಿರ್ಯಾದಿದಾರರ ಮನೆ ಹತ್ತಿರ ಹೋಗಿ  ಅವರಲ್ಲಿ ಆರೋಪಿ-01 ರವರು ಪಿರ್ಯಾದಿಗೆ ಲೇ ತುಡುಗು ಸೂಳೆ ನಮಗೆ ಗುಡಿಸಲು ಹಾಕಬೇಡ ಎಂದು ಬೈಯ್ಯುತ್ತೀಯಾ ಈಗ ನಿನ್ನ ಮನೆಯನ್ನು ಕಿತ್ತುತ್ತೇವೆ ನೋಡು ಎಂದು ಬೈದು ಕಬ್ಬಿಣದ ಹಾರೆಯಿಂದ ಮನೆಯ ಮೇಲಿನ ಸಿಮೆಂಟ್ ಶೀಟ್ನ್ನು  ಹೊಡೆದು ಹಾಕಿದ್ದು ಇನ್ನೂಳಿದ ಆರೋಪಿ-02 ರಿಂದ 03 ರವರು  ಪಿರ್ಯಾದಿಗೆ ಹೊಡೆ ಬಡೆ ಮಾಡಿ ಸಾಯಿಸುತ್ತೇವೆೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಇದರೊಂದಿಗೆ ಪಿರ್ಯಾದಿ ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ.
T.B. Dam PS
7 Cr.No:0027/2015
(IPC 1860 U/s 497,506,34 )
08/10/2015 Under Investigation
OFFENCES RELATED TO MARRIAGE - OFFENCES RELATED TO MARRIAGE
Brief Facts :  ಫಿರ್ಯಾದಿದಾರರು  ಈಗ್ಗೆ ಸುಮಾರು 12 ವರ್ಷಗಳ ಹಿಂದೆ ಶ್ರೀಮತಿ, ಜಿ. ಅಂಬಿಕಾ. ತಂದೆ. ಎನ್. ಗೋಪಾಲ್. ಎಂಬುವರೊಂದಿಗೆ ವಿವಾಹವಾಗಿದ್ದು ತಮ್ಮಿಬ್ಬರ ಸಂಸಾರದಿಂದ ಇಬ್ಬರು ಮಕ್ಕಳಿರುತ್ತಾರೆ ಈಗ್ಗೆ ಸುಮಾರು ಒಂದು ವರ್ಷದಿಂದ ತನ್ನ ಹೆಂಡತಿ ಅಂಬಿಕಾಳು ಗಂಡ ಮತ್ತು ಮಕ್ಕಳ ಕಡೆಗೆ ಗಮನಹರಿಸದೇ ಮುಕ್ತುಲ್ ಷಾ ಬಾಬಾನೊಂದಿಗೆ ದೈಹಿಕ ಸಂಬಂಧ ಹೊಂದಿರುತ್ತಾಳೆಂದು ದಿನಾಂಕ:- 21/09/2015 ರಂದು ರಾತ್ರಿ 12-30 ಗಂಟೆಗೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಫ್ತಿಯಲ್ಲಿರುವ ಬಿ.ಟಿ.ಆರ್. ನಗರದಲ್ಲಿ ಮುಕ್ತುಲ್ ಷಾ ಬಾಬಾ ರವರು ವಾಸವಿರುವ ಬಾಡಿಗೆ ಮನೆಯಲ್ಲಿ ಜಿ. ಅಂಬಿಕಾ ಮತ್ತು ಮುಕ್ತುಲ್ ಷಾ ಬಾಬಾ ರವರು ಸರಸ ಸಲ್ಲಾಪದಲ್ಲಿರುವಾಗ ತಾವು ಮತ್ತು ತಮ್ಮ ಬಂಧುಗಳು ಹಾಗೂ ಇತರರು ಸೇರಿ ಪ್ರತ್ಯಕ್ಷವಾಗಿ ನೋಡಿರುತ್ತೇವೆ ಇದುವರೆಗೆ ನಡೆದಿರುವ ಎಲ್ಲಾ ಘಟನೆಗಳ ಕುರಿತು ತನ್ನಲ್ಲಿ ಸಿ.ಡಿ. ಇದೆಯೆಂದು ದೂರಿನ ಸಂಗಡ ಸಿ.ಡಿ. ಸಲ್ಲಿಸಿರುತ್ತಾರೆ.
                                 ತನ್ನ ಹೆಂಡತಿ ಮತ್ತು ಮುಕ್ತುಲ್ ಷಾ ಕಡೆಯವರಿದ ತನಗೆ ಬೆದರಿಕೆ ಕರೆಗಳು ಬರುತ್ತವೆ ಈ ಕುರಿತು ನ್ಯಾಯದೊರಕಿಸಿಕೊಡಬೇಕೆಂದು ಇದ್ದ ದೂರನ್ನು ಪಡೆದುಕೊಂಡು ಠಾಣೆಯ ಎನ್.ಸಿ. ನಂಬರ್ 04/2015 ರಲ್ಲಿ ನೊಂದಾಯಿಸಿಕೊಂಡಿದ್ದು ಫಿರ್ಯಾದಿದಾರರು ಆರೋಪಿಸಿರುವ ಅಪರಾಧಿಕ ಅಂಶಗಳು ಅಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿದ್ದರಿಂದ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದಲ್ಲಿ ಕೋರಿದ್ದು ಮುಂದಿನ ಕ್ರಮಕ್ಕಾಗಿ ಅನುಮತಿ ನೀಡಿರುವುದರಿಂದ ಈ ದಿವಸ ದಿನಾಂಕ:- 08/10/2015 ರಂದು ಬೆಳಿಗ್ಗೆ 10-00 ಗಂಟೆಗೆ ಟಿ.ಬಿ.ಡ್ಯಾಂ ಠಾಣೆಯ ಗುನ್ನೆನಂಬರ್ 27/2015 ಕಲಂ 497-506 ಆಧಾರ 34 ಐ.ಪಿ.ಸಿ. ಅಡಿಯಲ್ಲಿ ಗುನ್ನೆದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ