Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0493/2015 (KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 ) |
17/11/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿನಾಂಕ: 17-11-2015 ರಂದು ಬೆಳಿಗ್ಗೆ ಶ್ರೀ. ಪ್ರಸಾದ್ ಕೆ. ಗೋಖಲೆ ಸಿಪಿಐ ಬಳ್ಳಾರಿ ಗ್ರಾಮೀಣ ವೃತ್ತ ರವರು ಸಿಬ್ಬಂದಿಯವರಾದ ಎ.ಎಸ್.ಐ ರಾಜಕುಮಾರ್, ಪಿ.ಸಿ-109-325-90-839 ರವರನ್ನು ಕರೆದುಕೊಂಡು ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-331 ರಲ್ಲಿ ಚಾಲಕ ಎ.ಪಿ.ಸಿ-244 ರವರೊಂದಿಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಗುಗ್ಗರಹಟ್ಟಿಯ ಹತ್ತಿರ ಪೆಟ್ರೂಲಿಂಗ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 7-30 ಗಂಟೆಗೆ ಬೊಬ್ಬಕುಂಟ ಗ್ರಾಮದ ಕಡೆಯಿಂದ ಅಕ್ರಮವಾಗಿ ಮರಳನ್ನು ಟ್ರಾಕ್ಟರ್ ಟ್ರಾಲಿಗಳಲ್ಲಿ ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಿಗ್ಗೆ 8-10 ಗಂಟೆಗೆ ಬೊಬ್ಬಕುಂಟೆ ಗ್ರಾಮ ಕ್ರಾಸ್ ಹೋಗಿ ನಿಂತಿದ್ದಾಗ 1] ಟ್ರಾಕ್ಟರ್ ಇಂಜಿನ್ ನಂಬರ್ 923013125258 ಅಂತಾ ಇದ್ದು, ಟ್ರಾಲಿ ಚಾಸಿ ನಂಬರ್ ಬಿಎಫ್ಎ/45/2015 ಇರುತ್ತದೆ. ಇದರಲ್ಲಿ 2 ಮೆಟ್ರಿಕ್ ಟನ್ ಮರಳಿದ್ದು, ಸಿಕ್ಕಿಬಿದ್ದ ಇದರ ಚಾಲಕ ಮಹೇಶ್ ಇರುತ್ತಾರೆಂದು ಇದರ ಮಾಲೀಕ ರವಿ ವಾಸ: ಬಳ್ಳಾರಿ 2] ಟ್ರಾಕ್ಟರ್ ನಂಬರ್ ಎಪಿ-21-ಟಿಎಕ್ಸ್-3130 ಮತ್ತು ಟ್ರಾಲಿ ನಂಬರ್ ಎಪಿ-21-ಟಿಎಕ್ಸ್-3131, ಇದರಲ್ಲಿ ಎರಡು ಮೆಟ್ರಿಕ್ ಟನ್ ಮರಳು ಇದ್ದು, ಸಿಕ್ಕಿಬಿದ್ದ ಇದರ ಚಾಲಕ ರಾಜಶೇಖರ ಇದರ ಮಾಲೀಕರ ಹೆಸರು ಬೀಮ ವಾಸ: ಆಟೋನಗರ, ಬಳ್ಳಾರಿ ಇರುತ್ತಾರೆಂದು ಎರಡು ಟ್ರಾಕ್ಟರ್ ಗಳು, 4 ಮೆಟ್ರಿಕ್ ಟನ್ ಮರಳು, ಸ್ಯಾಂಪಲ್ ಮರಳನ್ನು ಜಪ್ತು ಮಾಡಿಕೊಂಡು, ಸಿಕ್ಕಿಬಿದ್ದ ಇಬ್ಬರು ಚಾಲಕರೊಂದಿಗೆ ಬಂದಿದ್ದಾಗಿ ಚಾಲಕರು/ಮಾಲೀಕರು ಇವರ ಮೇಲೆ ಕ್ರಮ ಜರುಗಿಸಲು ಕೋರಿದ ಮೇರೆಗೆ ಪ್ರಕರಣ ದಾಖಲುಮಾಡಿದೆ. | |||||||||||||||
Cowlbazar PS | ||||||||||||||||
2 | Cr.No:0344/2015 (IPC 1860 U/s 506,504,324 ) |
17/11/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ಫಿರ್ಯಾಧಿದಾರರು ಮತ್ತು ಆರೋಪಿತನಾದ ಕಿರಣ್ ಕುಮಾರ್ ಸೊನಿ ರವರು ಸೇರಿ ಗೋಲ್ಡ್ ಮತ್ತು ಸಿಲ್ವರ್ ಬೀಜಿನೆಸ್ ಮಾಡಿದ್ದು, ಸದರಿ ಬಿಜನೆಸ್ ನಲ್ಲಿ ಫಿರ್ಯಾಧಿಗೆ ಸಾಲ ಕೊಡಬೇಕಾಗಿದೆ ಎಂದು ಸಾಲವನ್ನು ಆರೋಪಿತನಿಗೆ ಕೇಳಿದ ದ್ವೇಷವನ್ನು ಇಟ್ಟುಕೊಂಡು ನಿನ್ನೆ ದಿನ ದಿನಾಂಕ: 16/11/2015 ರಂದು ರಾತ್ರಿ 9-40 ಗಂಟೆಗೆ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿದ ಕಿರಣ್ ಕುಮಾರ್ ಸೊನಿ ರವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿದೆ. | |||||||||||||||
Gudekote PS | ||||||||||||||||
3 | Cr.No:0137/2015 (IPC 1860 U/s 403,409,420 ) |
17/11/2015 | Under Investigation | |||||||||||||
CHEATING - CHEATING | ||||||||||||||||
Brief Facts : | ದಿನಾಂಕ: 06/03/2015 ರಿಂದ ದಿನಾಂಕ: 31/07/2015 ರ ಅವಧಿಯಲ್ಲಿ ಚಿರತಗುಂಡ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಆಪಾದಿತ ರವಿಕುಮಾರ್. ಎಸ್ (ಉದ್ಯೋಗಿ ಸಂಖ್ಯೆ: 674335) ರವರು ಕೃಷಿ ಮತ್ತು ಕೃಷಿಯೇತರ ಸಾಲ ನೀಡಿಕೆಯ ಉಳಿತಾಯ ಖಾತೆಗಳಿಂದ ಬ್ಯಾಂಕ್ ಗೆ | |||||||||||||||
ಬರಬೇಕಾದ ಕಮೀಷನ್ ಹಣವನ್ನು ಮತ್ತು ಗ್ರಾಹಕರ ಉಳಿತಾಯ ಖಾತೆಗಳಿಂದ ಅವರಿಗೆ ತಿಳಿಯದಂತೆ ಹಣವನ್ನು ಒಟ್ಟು ರೂ. 26450/- ಗಳು ನಗದು ಹಣವನ್ನು ಮೋಸದಿಂದ ತೆಗೆದುಕೊಂಡು ತನ್ನ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಹಾಗೂ ಅಪರಾಧಿಕ ಹಣ ದುರುಪಯೋಗ ಮಾಡಿ ಬ್ಯಾಂಕ್ ಗೆ ಮತ್ತು ಗ್ರಾಹಕರಿಗೆ ವಂಚನೆ ಮಾಡಿರುತ್ತಾರೆಂದು ವಿಷಯ ತಿಳಿದು ಬ್ಯಾಂಕ್ ಆಡಳಿತ ಮಂಡಳಿಯು ವಿಚಾರಣೆ ನಡೆಸಿದಾಗ ರವಿಕುಮಾರ್ ರವರು ತಮ್ಮ ತಪ್ಪನ್ನು ಒಪ್ಪಿಕೊಂಡು ಸದರಿ ಹಣವನ್ನು ಬ್ಯಾಂಕ್ ಗೆ ಮರುಪಾವತಿಸಿದ್ದರಿಂದ ಆಡಳಿತ ಮಂಡಳಿಯು ಅವರನ್ನು ಅಮಾನತ್ತಿನಲ್ಲಿಟ್ಟಿರುತ್ತದೆಂದು ಕಾರಣ ಆಪಾದಿತ ರವಿಕುಮಾರ್ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸುವಂತೆ ಪಿರ್ಯಾದಿ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಆದ ಶ್ರೀ. ವಿ.ಎಂ. ತಿಪ್ಪೇಸ್ವಾಮಿರವರು ಈ ದಿನ ದಿ: 17/11/2015 ರಂದು ಮಧ್ಯಾಹ್ನ 01-00 ಗಂಟೆಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತದೆ. | ||||||||||||||||
Kampli PS | ||||||||||||||||
4 | Cr.No:0150/2015 (KARNATAKA POLICE ACT, 1963 U/s 87 ) |
17/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 13/11/2015ರಂದು ರಾತ್ರಿ 9.15ಗಂಟೆಗೆ ಪಿ ಎಸ್ ಐ ರವರು ಠಾಣೆಯಲ್ಲಿದ್ದಾಗ ಕಂಪ್ಲಿ ಪಟ್ಟಣದ ಜೋಗಿ ಕಾಲುವೆಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ -ಬಾಹರ್ ಎಂಬ ನಸೀಬಿನ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನ ಬಂದ ಮೇರೆಗೆ ಪಿ ಎಸ್ ಐ ರವರು ಇಬ್ಬರು ಪಂಚರು & ಸಿಬ್ಬಂದಿ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲು 08ಜನ ಆರೋಪಿತರು ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿದ್ದನ್ನು ಕಂಡು ಸದ್ರಿ ಆರೋಪಿತರ ಮೇಲೆ ಧಾಳಿ ಮಾಡಿ ಹಿಡಿದು ಆರೋಪಿತರ ಕಡೆಯಿಂದ ಇಸ್ಪೀಟ್ ಜೂಜಾಟಕ್ಕೆ ಬಳಸಿದ ರೂ 2060/-ನಗದು ಹಣ, ಒಂದು ಪ್ಲಾಸ್ಟಿಕ್ ಚೀಲ, 52ಇಸ್ಪೀಟ್ ಎಲೆಗಳನ್ನು ಸ್ಥಳದ ಬಳಿಯ ವಿದ್ಯತ್ ದೀಪದ ಬೆಳಕಿನಲ್ಲಿ ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಠಾಣೆಗೆ ಬಂದು ಆರೋಪಿತರ ವಿರುದ್ದ ಕ್ರಮ ಜರುಗಿಸಲು ನೀಡಿದ ಜ್ಞಾಪನವನ್ನು ಪಡೆದು ಠಾಣಾ ಎನ್ ಸಿ ನಂ 23/2015 ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದು ಈ ದಿನ ಮಾನ್ಯ ನ್ಯಾಯಾಲಯದ ಅನುಮತಿ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಿದೆ | |||||||||||||||
5 | Cr.No:0151/2015 (KARNATAKA POLICE ACT, 1963 U/s 87 ) |
17/11/2015 | Under Investigation | |||||||||||||
KARNATAKA POLICE ACT 1963 - Street Gambling (87) | ||||||||||||||||
Brief Facts : | ದಿನಾಂಕ: 14/11/2015ರಂದು ಮಧ್ಯರಾತ್ರಿ 12.30ಗಂಟೆಗೆ ಸಿ ಪಿ ಐ ರವರು ತಮ್ಮ ಕಛೇರಿಯಲ್ಲಿದ್ದಾಗ ಕಂಪ್ಲಿ ಪಟ್ಟಣದ ಶಿಬಿರದಿನ್ನೆಯ ಹತ್ತಿರ ಆಂಜನೇಯ ಗುಡಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ -ಬಾಹರ್ ಎಂಬ ನಸೀಬಿನ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನ ಬಂದ ಮೇರೆಗೆ ಸಿ ಪಿ ಐ ರವರು ಇಬ್ಬರು ಪಂಚರು & ಸಿಬ್ಬಂದಿ ಸಂಗಡ ಮಾಹಿತಿಯಂತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲು 11ಜನ ಆರೋಪಿತರು ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿದ್ದನ್ನು ಕಂಡು ಸದ್ರಿ ಆರೋಪಿತರ ಮೇಲೆ ಧಾಳಿ ಮಾಡಿ ಹಿಡಿದು ಆರೋಪಿತರ ಕಡೆಯಿಂದ ಇಸ್ಪೀಟ್ ಜೂಜಾಟಕ್ಕೆ ಬಳಸಿದ ರೂ 5040/-ನಗದು ಹಣ, ಒಂದು ಪ್ಲಾಸ್ಟಿಕ್ ಚೀಲ, 52ಇಸ್ಪೀಟ್ ಎಲೆಗಳನ್ನು ಸ್ಥಳದ ಬಳಿಯ ವಿದ್ಯತ್ ದೀಪದ ಬೆಳಕಿನಲ್ಲಿ ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಠಾಣೆಗೆ ಬಂದು ಆರೋಪಿತರ ವಿರುದ್ದ ಕ್ರಮ ಜರುಗಿಸಲು ನೀಡಿದ ಜ್ಞಾಪನವನ್ನು ಪಡೆದು ಠಾಣಾ ಎನ್ ಸಿ ನಂ 24/2015 ಕಲಂ 87 ಕೆ ಪಿ ಯಾಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದು ಈ ದಿನ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರ.ವ ವರದಿಯನ್ನು ದಾಖಲಿಸಿದೆ. | |||||||||||||||
Kudligi PS | ||||||||||||||||
6 | Cr.No:0191/2015 (IPC 1860 U/s 279,337,338,304(A) ; INDIAN MOTOR VEHICLES ACT, 1988 U/s 183 ) |
17/11/2015 | Under Investigation | |||||||||||||
MOTOR VEHICLE ACCIDENTS FATAL - Other Roads | ||||||||||||||||
Brief Facts : | ದಿ.16/11/15 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಯಾರೋ ಕಳ್ಳರು ಸಂಡೂರಿಗೆ ಬಂದು, ಸಾಕು ಹಂದಿಗಳನ್ನು ಯಾವುದೋ ವಾಹನದಲ್ಲಿ ಹಾಕಿಕೊಂಡು, ಹೋಗುತ್ತಾರೆಂದು ವಿಷಯ ಗೊತ್ತಾಗಿದ್ದರಿಂದ ಕೂಡಲೇ 1] ಕುಮಾರಸ್ವಾಮಿ ತಂದೆ ಪರಸಪ್ಪ 30 ವರ್ಷ 2] ಹುಲುಗಪ್ಪ ತಂದೆ ಪರಸಪ್ಪ 35 ವರ್ಷ 3] ರಾಮಾಂಜನಿ ತಂದೆ ಸಣ್ಣ ಮಾರಪ್ಪ 30 ವರ್ಷ 4]ರಾಮಕೃಷ್ಣ ತಂದೆ ಹನುಮಂತಪ್ಪ 30 ವರ್ಷ 4] ವೀರೇಶ ತಂದೆ ಮಲ್ಲಪ್ಪ 30 ವರ್ಷ 5] ನಾಗರಾಜ ತಂದೆ ಗಿಡ್ಡಪ್ಪ 20 ವರ್ಷ 6] ನಾಗರಾಜ ತಂದೆ ಮಾರಪ್ಪ 25 ವರ್ಷ ಇಷ್ಟು ಜನರು ಕೆಎ22ಎ4292 ನೊಂದಣಿ ಸಂಖ್ಯೆಯ ಮಹೇಂದ್ರ ಮ್ಯಾಕ್ಸಿಕಾಬ್ ವಾಹನವನ್ನು ಅನುಕೂಲ ಮಾಡಿಕೊಂಡು, ಮೇಲ್ಕಂಡ ಕುಮಾರಸ್ವಾಮಿ ಈತನು ಚಾಲಕನಾಗಿದ್ದು, ಮಧ್ಯರಾತ್ರಿ 12-00 ಗಂಟೆ ಸುಮಾರಿಗೆ ಸಂಡೂರಿನಿಂದ ಅಂಕಮನಹಾಳ್ ಕಡೆ ಯಶವಂತನಗರ ಮುಖಾಂತರ ಹೋಗಿದ್ದು, ಈ ದಿನ ದಿ.17/11/15 ರ ರಾತ್ರಿ 1-30 ರ ಸುಮಾರಿಗೆ ಕುಮಾರಸ್ವಾಮಿಯು ಕೆಎ22ಎ4792 ನಂಬರ್ ನ ಮೇಲ್ಕಂಡ ವಾಹನವನ್ನು ಸಂಡೂರು ತಾಲ್ಲೂಕಿನ ಅಂಕಮನಹಾಳ್ ಸಮೀಪದ | |||||||||||||||
ಗ್ವಾನಾಳ್ ಹನುಮಂತಪ್ಪನ ಹೊಲದ ಹತ್ತಿರ ರಸ್ತೆ ತಿರುವಿನ ಸೇತುವೆ ಬಳಿ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ನಡೆಸಿ, ಥಾರ್ ರಸ್ತೆಯ ಎಡಬದಿ ಕಚ್ಚಾರಸ್ತೆಯ ತಗ್ಗಿನಲ್ಲಿ ಪಲ್ಟಿಯಾಗಿ ಬೀಳಿಸಿದ್ದರ ಪರಿಣಾಮ ಚಾಲಕ ಕುಮಾರಸ್ವಾಮಿಗೆ ಬಾರಿ ರಕ್ತಗಾಯಗಳಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ. ಹುಲುಗಪ್ಪನ ಎಡಗೈ ಮೂಳೆ ಮುರಿದಿದ್ದು, ಇತರೆ ಕಡೆ ರಕ್ತಗಾಯಗಳಾಗಿದ್ದು, ರಾಮಕೃಷ್ಣ, ವೀರೇಶ, ರಾಮಾಂಜನಿ, ನಾಗರಾಜ ತಂದೆ ಗಿಡ್ಡಪ್ಪ, ನಾಗರಾಜ ತಂದೆ ಮಾರೆಪ್ಪ ಇವರುಗಳಿಗೂ ಸಹ ರಕ್ತಗಾಯಗಳಾಗಿದ್ದು, ಗಾಯಾಳುಗಳೆನ್ನೆಲ್ಲಾ ಚಿಕಿತ್ಸೆ ಸಲುವಾಗಿ, ಬಳ್ಳಾರಿ ವಿಮ್ಸ್ ಗೆ ಕರೆದುಕೊಂಡು ಹೋಗುವಾಗ್ಗೆ ಕುಮಾರಸ್ವಾಮಿ ಈ ದಿನ ಬೆಳಗಿನ ಜಾವ 3-50 ಗಂಟೆ ಸುಮಾರಿಗೆ ಮಾರ್ಗ ಮಧ್ಯೆ ಸತ್ತಿರುತ್ತಾನೆ. ಕಾರಣ ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ, ಅಪಘಾತ ಉಂಟುಪಡಿಸಿದ ಮಹೇಂದ್ರ ಮ್ಯಾಕ್ಸಿಕ್ಯಾಬ್ ವಾಹನದ ಚಾಲಕ ಪರಸಪ್ಪನ ಮಗ ಮೃತ ಕುಮಾರಸ್ವಾಮಿ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನ ಸಾರಾಂಶವಿರುತ್ತದೆ. | ||||||||||||||||
Thoranagal PS | ||||||||||||||||
7 | Cr.No:0171/2015 (IPC 1860 U/s 420 ; INFORMATION TECHNOLOGY ACT 2008 U/s 66(C),66(D) ) |
17/11/2015 | Under Investigation | |||||||||||||
CYBER CRIME - Information Technology Act 2000, 2009 | ||||||||||||||||
Brief Facts : | ನಿವೇದನೆ:- ಈ ದಿನ ದಿನಾಂಕ: 17/11/2015 ರಂದು 3;00 ಪಿ.ಎಂಗೆ ಪಿರ್ಯಾದಿ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂದರೆಶ್ರೀನಿವಾಸ ಮೂರ್ತಿ ಆದ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ ನಾನು ಜಿಂದಾಲ್ ಕಾರ್ಖಾನೆಯಲ್ಲಿ ಇಂಜೀನಿಯರ್ ಆಗಿ ಕೆಲಸ ಮಾಡಿಕೊಂಡು ಬಂದಿರುತ್ತೇನೆ.ನನಗೆ 3 ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರುತ್ತೇನೆ. 1)ICICI ACCONT NO.007801525274 2) SBM ACCOUNT NO 0054017430864 3) HDFC ACCONT NO.50100114488248 ನೇದ್ದವುಗಳನ್ನು ಹೊಂದಿರುತ್ತೇನೆ.ನನ್ನ ಇ-ಮೇಲ್ murthy_srinivasa2559@yahoo.co in ನೇದ್ದಕ್ಕೆ ಮೇಲ್ ಸಂದೇಶ ಬಂದಿದ್ದು ಅದರಲ್ಲಿ ನನಗೆ 2.25 ಕೋಟಿ ಲಾಟರಿ ಹಣ ಬಂದಿರುತ್ತದೆ. ಮತ್ತು ಒಂದು ಬಿ.ಎಂ.ಡಬ್ಲೂ. ಕಾರನ್ನು ಬಹುಮಾನ ವಾಗಿ ಕೊಡಲಾಗುತ್ತದೆ. ಮೊದಲಿಗೆ 24,300 ರೂ.ಗಳನ್ನು ಕಟ್ಟ ಬೇಕು ನಂತರ ನಾವುಗಳು ನಿಮಗೆ ಹೇಳಿದ ರೀತಿಯಲ್ಲಿ ಹಣ ಹಾಕಬೇಕು ನಂತರ ನಿಮಗೆ ನಾವುಗಳು ತಿಳಿಸದ ಹಾಗೆ ಹಣ ಹಾಕಿದರೆ ನಿಮಗೆ 2.25 ಕೋಟಿ ಮತ್ತು ಒಂದು ಬಿ.ಎಂ.ಡಬ್ಲೂ. ಕಾರು ಬಹುಮಾನವಾಗಿ ಕೊಡುವುದಾಗಿ ತಿಳಿಸುತ್ತಾ ಬಂದಿದ್ದರಿಂದ ನಾನು ಈ ಕೆಳಕಂಡ ರೀತಿಯಲ್ಲಿ ಹಣವನ್ನು ಬ್ಯಾಂಕ್ ಮುಖಾಂತರ ಕಟ್ಟಿದ್ದರೂ ನನಗೆ ಯಾವದೇ ರೀತಿ ಹಣ ಮತ್ತು ಕಾರು ಕೊಡದೇ ಮೋಸ ಮಾಡಿರುತ್ತಾರೆ. ಸದ್ರಿ ರವರು ಬಾರ್ ವಿಲಿಯಂ ಮತ್ತು ಅಜೀತ್ ಬ್ಯಾನರ್ಜಿ ರವರ ಹೆಸರು ಹೇಳಿ ಅಂತರ್ಜಾಲ (ಅನ್ ಲೈನ್ ಮೂಖಾಂತರ) ನನಗೆ ಒಟ್ಟು 5,62,956=00 ರೂ.ಗಳನ್ನು ಮೋಸ ಮಾಡಿರುತ್ತಾರೆ.ಈ ಘಟನೆ ದಿ.10/9/2015 ರಿಂದ ಜರುಗಿದ್ದು ಅವರ ವಿರುದ್ದ ಕಾನೂರು ರೀತಿ ಕ್ರಮ ಜರುಗಿಸಲು ಕೋರಲಾಗಿದೆ. ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ನಂ ಮೊತ್ತ ದಿನಾಂಕ: 01 SBI (CASH DEPOSIT) 20267191434 24,300=00 10/9/2015 02 HDFC BANK 50100114488248 50,000=00 22/9/2015 03 HDFC BANK 50100114488248 50,000=00 28/9/2015 04 SBM 0054017430864 90,000=00 1/10/2015 05 SBM 0054017430864 18,656=00 9/10/2015 06 ICICI 007801525274 20,000=00 20/10/2015 07 ICICI 007801525274 1,60,000=00 21/10/2015 08 ICICI 007801525274 1,50,000=00 21/10/2015 TOTAL 5,62,956=00 |
|||||||||||||||
ಮಂಗಳವಾರ, ನವೆಂಬರ್ 17, 2015
PRESS NOTE OF 17/11/2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ