ಶನಿವಾರ, ನವೆಂಬರ್ 21, 2015

PRESS NOTE OF 21/11/2015

Crime Key Report From   To   
Sl. No FIR No FIR Date Crime Group - Crime Head Stage of case
APMC Yard PS
1 Cr.No:0100/2015
(IPC 1860 U/s 376,420,323,504,506,448,34 )
21/11/2015 Under Investigation
RAPE - Known Person
Brief Facts :  ಈಗ್ಗೆ ಸುಮಾರು ಮೂರು ವರ್ಷಗಳಿಂದ ಆರೊಫಿಯು ಪಿರ್ಯಾದಿದಾರರನ್ನು ಪ್ರೀತಿಸುತ್ತಿದ್ದು ನಂತರ ಮದುವೆಯಾಗುತ್ತೇನೆ ಎಂದು ಹೇಳಿ ನಂಬಿಸಿ ದಿನಾಂಕ:02/10/2015 ರಂದು ರಾತ್ರಿ ಮಂತ್ರಾಲಯದಲ್ಲಿರುವ ರಾಘವೇಂದ್ರ ಲಾಡ್ಜ್ ರೂಂ ನಲ್ಲಿ ಪಿರ್ಯಾದಿದಾರರನ್ನು ಬಲತ್ಕಾರವಾಗಿ ಲೈಂಗಿಕ ಕ್ರೀಯೆ ನಡೆಸಿದ್ದು ನಂತರ ಮದುವೆಯಾಗುವುದಿಲ್ಲ ಅಂತಾ ಹೇಳಿದ್ದು ನಂತರ ದಿನಾಂಕ:19/11/2015 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಆರೋಪಿ-2 ಮತ್ತು 3 ರವರು ಪಿರ್ಯಾದಿದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ದೂರು.
Bellary Traffic PS
2 Cr.No:0180/2015
(IPC 1860 U/s 279,337 ; INDIAN MOTOR VEHICLES ACT, 1988 U/s 187 )
21/11/2015 Under Investigation
MOTOR VEHICLE ACCIDENTS NON-FATAL - Other Roads
Brief Facts :  ದಿನಾಂಕ: 18-11-2015 ರಂದು ಫಿರ್ಯಾಧಿದಾರರಾದ ಸಣ್ಣಪ್ಪ ತಂದೆ ಬಜಾರಪ್ಪ, ವಯಸ್ಸು: 50 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ: ಅಂಬೇಡ್ಕರ್ ನಗರ, ನಾಗಪ್ಪ ಕಟ್ಟೆ ಹತ್ತಿರ, ವಾರ್ಡ್ ನಂಬರ್: 22, ತಾಳೂರು ರಸ್ತೆ, ಬಳ್ಳಾರಿರವರು ತಮ್ಮ ಅಳಿಯ ಲಕ್ಷ್ಮಣನೊಂದಿಗೆ ತಮ್ಮ ಮನೆಯ ಹತ್ತಿರ ರೇಣುಕಾ ನಗರ 17ನೇ ಕ್ರಾಸ್ ಹತ್ತಿರ ತಾಳೂರು ರಸ್ತೆಯಲ್ಲಿ ರಾತ್ರಿ ಸುಮಾರು 7-20 ಗಂಟೆಯ ಸಮಯದಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದಾಗ ಅದೇ ಸಮಯದಲ್ಲಿ ತಾಳೂರು ರಸ್ತೆಯ ಕಡೆಯಿಂದ ಆಟೋ ನಂಬರ್: ಕೆಎ-34 ಬಿ-2175 ನೇದ್ದರ ಚಾಲಕನಾದ ಅಗಸರ ನಾಗರಾಜ, ವಾಸ : ಶ್ರೀಧರಗಡ್ಡೆ ಗ್ರಾಮ ಈತನು ಆಟೋವನ್ನು ದುಡುಕಿನಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಅದೇ ವೇಳೆಗೆ ರಸ್ತೆಯಲ್ಲಿ ಒಂದು ಹಂದಿ ಅಡ್ಡಬಂದಿದ್ದರಿಂದ ಆಟೋ ಚಾಲಕನು ಅದನ್ನು ತಪ್ಪಿಸಲು ಹೋಗಿ ಏಕಾಏಕಿ ಆಟೋದ ಬ್ರೇಕ್ ಹಾಕಿದ್ದರಿಂದ ಆಟೋರಿಕ್ಷಾ ಬಲಮಗ್ಗುಲಾಗಿ ಪಲ್ಟಿಯಾಗಿದ್ದರಿಂದ ಆಟೋದಲ್ಲಿದ್ದ ಶ್ರೀಮತಿ.ಗೌರಮ್ಮ, ಶ್ರೀಮತಿ.ಸುಮಾ, ಶ್ರೀಮತಿ.ನಾಗವೇಣಿ ಮತ್ತು ಶ್ರೀಮತಿ.ಈರಮ್ಮರವರು ರಸ್ತೆಯ ಮೇಲೆ ಬಿದ್ದಿದ್ದು, ಈ ಅಪಘಾತದಿಂದ ಶ್ರೀಮತಿಗೌರಮ್ಮರವರಿಗೆ ಬಲಭುಜಲ್ಲಿ ಮತ್ತು ನಡುವಿನಲ್ಲಿ ಒಳಪೆಟ್ಟಾಗಿರುತ್ತದೆಂದು, ಶ್ರೀಮತಿ.ಸುಮಾರವರಿಗೆ ಬಲಕಾಲಿನ ಪಾದದ ಮೇಲ್ಭಾಗದಲ್ಲಿ ರಕ್ತಗಾಯವಾಗಿರುತ್ತದೆಂದು, ಶ್ರೀಮತಿ.ನಾಗವೇಣಿರವರಿಗೆ ಎಡ ಕಪಾಳದಲ್ಲಿ ತೆರಚಿದ ಗಾಯವಾಗಿರುತ್ತದೆಂದು ಮತ್ತು ಶ್ರೀಮತಿ.ಈರಮ್ಮರವರಿಗೆ ಯಾವುದೇ ತರಹದ ಗಾಯಗಳು ಆಗಿರುವುದಿಲ್ಲವೆಂದು, ಅಪಘಾತ ಪಡಿಸಿದ ಆಟೋ ಚಾಲಕನಾದ ಅಗಸರ ನಾಗರಾಜ ಈತನ ವಿರುದ್ದ ಕಾನೂನು ರೀತ್ಯ ಕ್ರಮಜರುಗಿಸಲು ದೂರು ಇರುತ್ತದೆ.
Gudekote PS
3 Cr.No:0139/2015
(KARNATAKA MINOR MINERAL CONSISTENT RULE 1994 U/s 42,43 ; MMDR (MINES AND MINERALS REGULATION OF DEVELOPMENT) ACT 1957 U/s 4(1),4(1A),21 ; IPC 1860 U/s 379 )
21/11/2015 Under Investigation
KARNATAKA STATE LOCAL ACTS - Karnataka Minor Mineral Consistent 
Rule 1994
Brief Facts :  ದಿನಾಂಕ 21/11/2015 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಗುಡೇಕೋಟೆ ಠಾಣೆಯ ಸರಹದ್ದು ಯರ್ರೋಬಯ್ಯನಹಟ್ಟಿ ಗ್ರಾಮದ ಕ್ರಾಸ್ ಹತ್ತಿರದಿಂದ ಈ ಮೇಲ್ಕಂಡ ಆರೋಪಿತರು ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಿಗೆ ಪಡೆಯದೇ ಅನಾಧಿಕೃತವಾಗಿ ಮಾರಾಟ ಮಾಡುವ ಉದ್ದೇಶದಿಂದ ಬೆಲೆ ಅಂದಾಜು 5000/ ರೂ 6 ಟನ್ ತೂಕದ ಸಾದಾ ಮರಳನ್ನು KA 35/A 5076 ನೇದ್ದರ ಲಾರಿಯಲ್ಲಿ ಬೆಂಗಳೂರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಣಿಕೆ ಮಾಡುವಾಗ ನಮ್ಮ ಠಾಣೆಯ ಪಿ ಎಸ್ ಐ ರವರಿಗೆ ಬಂದ ಮಾಹಿತಿಯನ್ನು ಎ ಎಸ್ ಐ ನಾಗರಾಜ ರವರಿಗೆ ತಿಳಿಸಿ ದಾಳಿ ಮಾಡಲು ಸೂಚಿಸಿದ್ದರಿಂದ ಎ ಎಸ್ ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ಪಂಚನಾಮೆ ಮೂಲಕ ಜಪ್ತು ಮಾಡಿಕೊಂಡು ಬೆಳಿಗ್ಗೆ 07-45 ಗಂಟೆಗೆ ಹಿಂದಿರುಗಿ ಠಾಣೆಗೆ ಬಂದು ಮರಳು ಲೋಡ ಮಾಡಿದ ಲಾರಿ, ಲಾರಿ ಚಾಲಕ, ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ವಿಶೇಷ ವರದಿಯನ್ನು ನೀಡಿದ ಮೇರಿಗೆ ಈ ಪ್ರಕರಣ ದಾಖಲಿಸಿದೆ.
Kampli  PS
4 Cr.No:0152/2015
(IPC 1860 U/s 354(B),448 )
21/11/2015 Under Investigation
MOLESTATION - Other Places
Brief Facts :  ಈ ದಿನ ದಿನಾಂಕ 21/11/2015 ರಂದು ಮಧ್ಯ ರಾತ್ರಿ 01-00 ಗಂಟೆಗೆ ಶ್ರೀಮತಿ ಸುಧಾ@ಕವಿತ ಗಂಡ ಚೆನ್ನವೀರ ವಾ-ಸಣಾಪುರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸರಾಂಶವೆನೇಂದರೆ ನಿನ್ನೆ ದಿನ ದಿನಾಂಕ 20/11/2015 ರಂದು ರಾತ್ರಿ ತಾನು ತನ್ನ ಅತ್ತೆ, ಮಾವ ಊಟ ಮಾಡಿಕೊಂಡು, ಅತ್ತೆ & ಮಾವ ಇಬ್ಬರೂ ಮನೆಯ ವರಾಂಡದಲ್ಲಿ ಮಲಗಿಕೊಂಡಿದ್ದು ತಾನು ಮನೆಯ ಒಳೆಗೆ ಮಲಗಿಕೊಂಡಾಗ ನಿನ್ನೆ ದಿನ ದಿನ ರಾತ್ರಿ 11-00 ಗಂಟೆ ಸುಮಾರಿಗೆ ತನ್ನ ಊರಿನ ತಮ್ಮ ಜನಾಂಗದ ವಿನೋದ ಈತನು ತಮ್ಮ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಗವಾಕ್ಷಿಯಿಂದ ಇಳಿದು ತನಗೆ ಮೈ ಕೈ ಮುಟ್ಟಿ ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ ಅಂತ ಇದ್ದ ದೂರು ಮೇರೆಗೆ ಆರೋಪಿತನ ವಿರುದ್ದ ಪರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ